AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಘಾತಕಾರಿಯಾಗಿ-ವ್ಯಾಪಕವಾಗಿ-ಕ್ಷಿಪ್ರವಾಗಿ ಹರಡುತ್ತಿರುವ ಕೊರೊನಾ ಎರಡನೆಯ ತಳಿಗೆ ಇದು ರಾಮಬಾಣ ಅನ್ನುತ್ತಾರೆ ಸಂಶೋಧಕರು!

ಮಹಾರಾಷ್ಟ್ರ,ಪಂಜಾಬ್ ಮತ್ತು ದೆಹಲಿ ಭಾಗಗಳಲ್ಲಿ ಈ ಡಬಲ್ ಮ್ಯೂಟೆಂಟ್ ತಳಿ ಜನರನ್ನು ಕಾಡತೊಡಗಿದೆ. ಇನ್ನು, ಕೊವಿಶೀಲ್ಡ್​ ಲಸಿಕೆಯು ಆಕ್ಸ್​ಫರ್ಡ್​-ಆಸ್ಟ್ರಾಜೆನಿಕಾ ಕೊವಿಡ್​ 19 ವ್ಯಾಕ್ಸಿನ್​ ಆಗಿದೆ. ಈ ಲಸಿಕೆಯನ್ನು ಸೆರಂ ಇನ್ಸ್​ಟಿಟ್ಯೂಟ್​ ಆಫ್​ ಇಂಡಿಯಾ ಕಂಪನಿಯು (SII) ತಯಾರಿಸಿದೆ.

ಆಘಾತಕಾರಿಯಾಗಿ-ವ್ಯಾಪಕವಾಗಿ-ಕ್ಷಿಪ್ರವಾಗಿ ಹರಡುತ್ತಿರುವ ಕೊರೊನಾ ಎರಡನೆಯ ತಳಿಗೆ ಇದು ರಾಮಬಾಣ ಅನ್ನುತ್ತಾರೆ ಸಂಶೋಧಕರು!
ಆಘಾತಕಾರಿಯಾಗಿ-ವ್ಯಾಪಕವಾಗಿ-ಕ್ಷಿಪ್ರವಾಗಿ ಹರಡುತ್ತಿರುವ ಕೊರೊನಾ ಎರಡನೆಯ ತಳಿಗೆ ಇದು ರಾಮಬಾಣ ಅನ್ನುತ್ತಾರೆ ಸಂಶೋಧಕರು!
Follow us
ಸಾಧು ಶ್ರೀನಾಥ್​
|

Updated on: Apr 23, 2021 | 2:53 PM

ನೋಯ್ಡಾ: ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ವೈದ್ಯ ಲೋಕ ಮತ್ತು ವಿಜ್ಞಾನ ಸಂಶೋಧಕರು ಹಗಲೂ ರಾತ್ರಿ ಹೆಣಗಾಡುತ್ತಿದ್ದಾರೆ. ಹೇಗಾದರೂ ಮಾಡಿ ಈ ಮಹಾಮಾರಿಯನ್ನು ಕಟ್ಟಿಹಾಕಲು ಸರ್ವಪ್ರಯತ್ನ ಮಾಡುತ್ತಿದ್ದಾರೆ. ಈ ಪ್ರಯತ್ನದಲ್ಲಿರುವಾಗಲೇ ಮಹಾಮಾರಿ ಬೇರೆ ಬೇರೆ ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಈ ಮಧ್ಯೆ ಕೊರೊನಾ ವೈರಸ್​ನ ಡಬಲ್​ ಮ್ಯುಟೆಂಟ್​ ತಳಿಯೊಂದು (B.1.617 variant) ಧುತ್ತನೆ ಜನರನ್ನು ಕಾಡತೊಡಗಿದೆ. ಆದರೆ ಇದರ ವಿರುದ್ಧ ಸಮರ್ಥವಾಗಿ ಹೋರಾಡಲು ಕೊವಿಶೀಲ್ಡ್​ ಲಸಿಕೆಯು ಅತ್ಯಂತ ಪ್ರಯೋಜನಕಾರಿಯಾಗಿದೆ ಎಂದು ಸೆಂಟರ್​ ಫಾರ್​ ಸೆಲ್ಯುಲಾರ್​ ಅಂಡ್​ ಮಾಲಿಕ್ಯುಲಾರ್​ ಬಯಾಲಜಿ ನಿರ್ದೇಶಕ (CCMB, Director) ರಾಕೇಶ್​ ಮಿಶ್ರಾ ತಿಳಿಸಿದ್ದಾರೆ.

ಕೊರೊನಾ ವೈರಸ್​ನ ಡಬಲ್​ ಮ್ಯುಟೆಂಟ್​ ತಳಿಯ (double mutant strain) ವಿರುದ್ಧ ಹೋರಾಡಲು ಕೊವಿಶೀಲ್ಡ್​ ಲಸಿಕೆಯು ರಕ್ಷಣೆ ನೀಡುತ್ತದೆ ಎಂಬುದು ಪ್ರಾಥಮಿಕ ಫಲಿತಾಂಶಗಳಿಂದ ತಿಳಿದುಬಂದಿದೆ. ಕೌನ್ಸಿಲ್ ಫಾರ್ ಸೈಂಟಿಫಿಕ್ ಇಂಡಸ್ಟ್ರಿಯಲ್ ರೀಸರ್ಚ್​ ಇನ್ಸ್​ಟಿಟ್ಯೂಟ್​ ಅಂಗಸಂಸ್ಥೆಯಾದ CCMB ಈ ಅಧ್ಯಯನವನ್ನು ಕೈಗೊಂಡಿತ್ತು ಎಂದು ನಿರ್ದೇಶಕ ರಾಕೇಶ್​ ಮಿಶ್ರಾ ಹೇಳಿದ್ದಾರೆ.

ಇದು ಆರಂಭಿಕ ಅಧ್ಯಯನ ಆದರೂ ಇದರ ಫಲಿತಾಂಶವು ಉತ್ತೇಜನಕಾರಿಯಾಗಿದೆ. ಇನ್​ವಿಟ್ರೋ ನಾಳದಲ್ಲಿ ಕೈಗೊಂಡಿದ್ದ ಅಧ್ಯಯನದ ಪ್ರಕಾರ ಕೊವಲೆಸೆಂಟ್ ಸೆರಾ (ಮೊದಲ ಸೋಂಕು) ಮತ್ತು ಕೊವಿಶೀಲ್ಡ್​ ಲಸಿಕೆಯು ಪ್ರಯೋಗಿಸಿದ ಸೆರಾ ಎರಡೂ B.1.617 variant ಕೊರೊನಾ ಅವತಾರಿಯ ವಿರುದ್ಧ ಸಂರಕ್ಷಣೆ ನೀಡುತ್ತದೆ ಎಂದು ನಿರ್ದೇಶಕ ರಾಕೇಶ್​ ಮಿಶ್ರಾ ಟ್ವೀಟ್​ ಮಾಡಿ ತಿಳಿಸಿದ್ದಾರೆ. ಆಘಾತಕಾರಿ ಅಂದರೆ ಈ ಹೊಸ B.1.617 ಡಬಲ್ ಮ್ಯೂಟೆಂಟ್ ತಳಿಯು ಸೋಂಕು ಹರಡುವ ಪ್ರಮಾಣವನ್ನು ಹೆಚ್ಚಿಸುತ್ತದೆ. ಮತ್ತೂ ಆತಂಕಕಾರಿ ಅಂದ್ರೆ ಇದು ಯಾವುದೇ ವ್ಯಾಕ್ಸಿನ್​ನಿಂದ ದಕ್ಕಬಹುದಾದ ರಕ್ಷಣೆಯನ್ನು ಸುಲಭವಾಗಿ ನೀಗಿಕೊಂಡು, ವ್ಯಾಪಕವಾಗಿ/ಕ್ಷಿಪ್ರವಾಗಿ ಹರಡುತ್ತಿದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.

B.1.617 ತಳಿಯು E484Q ಮತ್ತು L452R ಎಂಬ ಎರಡು ಪ್ರತ್ಯೇಕ ಸೋಂಕು ತಳಿಗಳ ಸಂಯೋಜನೆಯಿಂದ ಉದ್ಭವಗೊಂಡ ಅವತಾರಿಯಾಗಿದೆ. ಹಾಗಾಗಿಯೇ ಇದನ್ನು ಡಬಲ್ ಮ್ಯೂಟೆಂಟ್ ತಳಿ ಎಂದು ಹೆಸರಿಸಲಾಗಿದೆ. ಮಹಾರಾಷ್ಟ್ರ,ಪಂಜಾಬ್ ಮತ್ತು ದೆಹಲಿ ಭಾಗಗಳಲ್ಲಿ ಈ ಡಬಲ್ ಮ್ಯೂಟೆಂಟ್ ತಳಿ ಜನರನ್ನು ಕಾಡತೊಡಗಿದೆ. ಇನ್ನು, ಕೊವಿಶೀಲ್ಡ್​ ಲಸಿಕೆಯು ಆಕ್ಸ್​ಫರ್ಡ್​-ಆಸ್ಟ್ರಾಜೆನಿಕಾ ಕೊವಿಡ್​ 19 ವ್ಯಾಕ್ಸಿನ್​ ಆಗಿದೆ. ಈ ಲಸಿಕೆಯನ್ನು ಸೆರಂ ಇನ್ಸ್​ಟಿಟ್ಯೂಟ್​ ಆಫ್​ ಇಂಡಿಯಾ ಕಂಪನಿಯು (SII) ತಯಾರಿಸಿದೆ.

ಇದನ್ನೂ ಓದಿ: ಕೊರೊನಾ ದೃಢಪಟ್ಟರೆ ಆತಂಕ ಪಡಬೇಡಿ, ಜನರು ಪ್ರಾಣಾಯಾಮ ಮಾಡಬೇಕು -ಡಾ. ಕೆ.ಸುಧಾಕರ್ 

ಈ ತಪ್ಪು ತಿದ್ದಿಕೊಳ್ಳದಿದ್ದರೇ ದಕ್ಷಿಣ ಕನ್ನಡಕ್ಕೆ ಅನಾಹುತ: ದೈವರಾಧಕ ಎಚ್ಚರ
ಈ ತಪ್ಪು ತಿದ್ದಿಕೊಳ್ಳದಿದ್ದರೇ ದಕ್ಷಿಣ ಕನ್ನಡಕ್ಕೆ ಅನಾಹುತ: ದೈವರಾಧಕ ಎಚ್ಚರ
ಕೆಲವರು ಚಿಲ್ಲರೆ ಹೇಳಿಕೆ ಕೊಡುತ್ತಿದ್ದಾರೆ: ಮತ್ತೆ ಗುಡುಗಿದ ಡಿಕೆಶಿ
ಕೆಲವರು ಚಿಲ್ಲರೆ ಹೇಳಿಕೆ ಕೊಡುತ್ತಿದ್ದಾರೆ: ಮತ್ತೆ ಗುಡುಗಿದ ಡಿಕೆಶಿ
VIDEO: ರನೌಟ್​ ಮಾಡುವ ಮುನ್ನ ಆಟಗಾರರ ಭರ್ಜರಿ ಡ್ಯಾನ್ಸ್
VIDEO: ರನೌಟ್​ ಮಾಡುವ ಮುನ್ನ ಆಟಗಾರರ ಭರ್ಜರಿ ಡ್ಯಾನ್ಸ್
ಮತ್ತೋರ್ವ ಶಂಕಿತ ಉಗ್ರ ಫಾರೂಕ್ ಅಹ್ಮದ್ ತಡ್ವಾನ ಮನೆ ಧ್ವಂಸ
ಮತ್ತೋರ್ವ ಶಂಕಿತ ಉಗ್ರ ಫಾರೂಕ್ ಅಹ್ಮದ್ ತಡ್ವಾನ ಮನೆ ಧ್ವಂಸ
Weekly Horoscope: ಏಪ್ರಿಲ್ 28 ರಿಂದ ಮೇ 4 ರವರೆಗಿನ ವಾರ ಭವಿಷ್ಯ
Weekly Horoscope: ಏಪ್ರಿಲ್ 28 ರಿಂದ ಮೇ 4 ರವರೆಗಿನ ವಾರ ಭವಿಷ್ಯ
Daily Devotional: ಉಪವಾಸವಿದ್ದಾಗ ಹಗಲು ಹೊತ್ತಿನಲ್ಲಿ ಮಲಗಬಹುದಾ?
Daily Devotional: ಉಪವಾಸವಿದ್ದಾಗ ಹಗಲು ಹೊತ್ತಿನಲ್ಲಿ ಮಲಗಬಹುದಾ?
ಅಕ್ಷಯ ಅಮಾವಾಸ್ಯೆ: ಈ ದಿನದಂದು ಯಾವೆಲ್ಲಾ ರಾಶಿಗಳಿಗೆ ಶುಭ, ಅಶುಭ ತಿಳಿಯಿರಿ
ಅಕ್ಷಯ ಅಮಾವಾಸ್ಯೆ: ಈ ದಿನದಂದು ಯಾವೆಲ್ಲಾ ರಾಶಿಗಳಿಗೆ ಶುಭ, ಅಶುಭ ತಿಳಿಯಿರಿ
ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ