AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಡ ಬಾಂಬ್ ಸ್ಫೋಟ: ತಪ್ಪೇ ಮಾಡದ ಗೋಮಾತೆಗೇಕೆ ಶಿಕ್ಷೆ?

ಹೈದರಾಬಾದ್: ನಾಡ ಬಾಂಬ್ ಸ್ಫೋಟಗೊಂಡು ಹಸು ಮೃತಪಟ್ಟಿರುವ ಘಟನೆ ಆಂಧ್ರ ಪ್ರದೇಶದ ತಿರುಪತಿ ಮಂಡಲಂನ ಚಂದಮಾಮ‌ಪಲ್ಲಿಯಲ್ಲಿ ನಡೆದಿದೆ. ಕಾಡು‌ ಹಂದಿಗಳಿಗಾಗಿ ಬೇಟೆಗಾರರು ಇಟ್ಟಿದ್ದ ನಾಡ ಬಾಂಬ್ ಸ್ಫೋಟದಿಂದ ತೀವ್ರ ಗಾಯಗೊಳಗಾಗಿದ್ದ ಹಸು ಸಾವನ್ನಪ್ಪಿದೆ. ಮೇಯಲೆಂದು ಹೊರ ಹೋಗಿದ್ದ ಹಸು ನಾಡ ಬಾಂಬ್ ಸ್ಪರ್ಶಿಸಿದೆ. ಈ ವೇಳೆ ಬಾಂಬ್ ಸ್ಫೋಟಗೊಂಡು ಹಸುವಿನ ಬಾಯಿ ಛಿದ್ರ ಛಿದ್ರವಾಗಿದೆ. ಬಾಂಬ್ ಸ್ಫೋಟದಿಂದ ಹಸುವಿನ ದವಡೆ, ನಾಲಿಗೆ, ಮುಂಖವೆಲ್ಲ ಛಿದ್ರಗೊಂಡಿತ್ತು. ಹೀಗಾಗಿ ಪಶು ವೈದ್ಯರು ಹಸುವಿಗೆ ಚಿಕಿತ್ಸೆ ಅಸಾಧ್ಯವೆಂದಿದ್ದರು. ತೀವ್ರ ನೋವಿನಿಂದ ರಕ್ತದ […]

ನಾಡ ಬಾಂಬ್ ಸ್ಫೋಟ: ತಪ್ಪೇ ಮಾಡದ ಗೋಮಾತೆಗೇಕೆ ಶಿಕ್ಷೆ?
ಆಯೇಷಾ ಬಾನು
|

Updated on: Oct 07, 2020 | 10:46 AM

Share

ಹೈದರಾಬಾದ್: ನಾಡ ಬಾಂಬ್ ಸ್ಫೋಟಗೊಂಡು ಹಸು ಮೃತಪಟ್ಟಿರುವ ಘಟನೆ ಆಂಧ್ರ ಪ್ರದೇಶದ ತಿರುಪತಿ ಮಂಡಲಂನ ಚಂದಮಾಮ‌ಪಲ್ಲಿಯಲ್ಲಿ ನಡೆದಿದೆ.

ಕಾಡು‌ ಹಂದಿಗಳಿಗಾಗಿ ಬೇಟೆಗಾರರು ಇಟ್ಟಿದ್ದ ನಾಡ ಬಾಂಬ್ ಸ್ಫೋಟದಿಂದ ತೀವ್ರ ಗಾಯಗೊಳಗಾಗಿದ್ದ ಹಸು ಸಾವನ್ನಪ್ಪಿದೆ. ಮೇಯಲೆಂದು ಹೊರ ಹೋಗಿದ್ದ ಹಸು ನಾಡ ಬಾಂಬ್ ಸ್ಪರ್ಶಿಸಿದೆ. ಈ ವೇಳೆ ಬಾಂಬ್ ಸ್ಫೋಟಗೊಂಡು ಹಸುವಿನ ಬಾಯಿ ಛಿದ್ರ ಛಿದ್ರವಾಗಿದೆ. ಬಾಂಬ್ ಸ್ಫೋಟದಿಂದ ಹಸುವಿನ ದವಡೆ, ನಾಲಿಗೆ, ಮುಂಖವೆಲ್ಲ ಛಿದ್ರಗೊಂಡಿತ್ತು. ಹೀಗಾಗಿ ಪಶು ವೈದ್ಯರು ಹಸುವಿಗೆ ಚಿಕಿತ್ಸೆ ಅಸಾಧ್ಯವೆಂದಿದ್ದರು. ತೀವ್ರ ನೋವಿನಿಂದ ರಕ್ತದ ಮಡುವಿನಲ್ಲಿ‌ ಬಿದ್ದು 4ಗಂಟೆಗಳ ಕಾಲ ಒದ್ದಾಡಿ, ಮೃತ್ಯುವಿನೊಂದಿಗೆ ಹೋರಾಡಿ ಕೊನೆಗೆ ಪ್ರಾಣ ಬಿಟ್ಟಿದೆ.

ಕಳೆದ‌ 2ತಿಂಗಳಲ್ಲಿ‌ ಇದೇ ರೀತಿ‌ ಬಾಂಬ್ ಸ್ಫೋಟಕ್ಕೆ ಸುಮಾರು 6ಹಸುಗಳು ಮೃತಪಟ್ಟಿವೆ. ತಿರುಪತಿ‌ ಬಳಿಯ ವೇದುರುಕುಪ್ಪಂ, ಪೆದ ಪಂಜನಿ, ಶಾಂತಿಪುರಂ ಮಂಡಲಗಳಲ್ಲಿ ಬೇಟೆಗಾರರ ನಾಡ ಬಾಂಬ್​ಗಳಿಗೆ ಪದೇ ಪದೇ ಮೂಕ ಜೀವಗಳು ಬಲಿಯಾಗುತ್ತಿವೆ. ಮಾಡದ ತಪ್ಪಿಗೆ ನರಕವನ್ನನುಭವಿಸಿ ಸಾಯುವಂತ ಪರಿಸ್ಥಿತಿಯನ್ನು ಗೋಮಾತೆ ಅನುಭವಿಸುತ್ತಿದ್ದಾಳೆ. ಇನ್ನು ಮುಂದಾದರೂ ಬೇಟೆಗಾರರು ಈ ರೀತಿ ಕ್ರಮಗಳನ್ನು ಅನುಸರಿಸುವುದನ್ನು, ನಾಡ ಬಾಂಬ್​ಗಳ ಉಪಯೋಗವನ್ನು ಬಿಡಬೇಕು. ಕೇರಳದಲ್ಲೂ ಇದೇ ರೀತಿ ಗರ್ಭಿಣಿ ಆನೆ ಬಲಿಯಾಗಿತ್ತು.

Follow Us
ರೇಷ್ಮೆ ಸೀರೆ ಉಟ್ಟು ಬಂದ ನೋರಾ ಫತೇಹಿ, ಹೇಳಿದ್ದೇನು? ವಿಡಿಯೋ ನೋಡಿ
ರೇಷ್ಮೆ ಸೀರೆ ಉಟ್ಟು ಬಂದ ನೋರಾ ಫತೇಹಿ, ಹೇಳಿದ್ದೇನು? ವಿಡಿಯೋ ನೋಡಿ
ನೋರಾ ಫತೇಹಿ ಬಗ್ಗೆ ನಟಿ ರಕ್ಷಿತಾ ಮಾತು: ವಿಡಿಯೋ ನೋಡಿ
ನೋರಾ ಫತೇಹಿ ಬಗ್ಗೆ ನಟಿ ರಕ್ಷಿತಾ ಮಾತು: ವಿಡಿಯೋ ನೋಡಿ
ಮುನಿಸು ಮರೆತು ಲೋಕ ಅದಾಲತ್​​ನಲ್ಲಿ ಮತ್ತೆ ಒಂದಾದ ಮೂರು ಜೋಡಿಗಳು
ಮುನಿಸು ಮರೆತು ಲೋಕ ಅದಾಲತ್​​ನಲ್ಲಿ ಮತ್ತೆ ಒಂದಾದ ಮೂರು ಜೋಡಿಗಳು
ಬಿರು ಬೇಸಿಗೆಯಲ್ಲೂ ಆಲಿಕಲ್ಲು ಮಳೆ: ಧಾರವಾಡ ಮಂದಿಗೆ ತಂಪೆರೆದ ವರುಣ
ಬಿರು ಬೇಸಿಗೆಯಲ್ಲೂ ಆಲಿಕಲ್ಲು ಮಳೆ: ಧಾರವಾಡ ಮಂದಿಗೆ ತಂಪೆರೆದ ವರುಣ
ನೆಲಮಂಗಲದಲ್ಲಿ 6 ನವಿಲು ಸಾವು: ವಿಷ ಪ್ರಾಶನಮಾಡಿ ಕೊಂದಿರುವ ಶಂಕೆ
ನೆಲಮಂಗಲದಲ್ಲಿ 6 ನವಿಲು ಸಾವು: ವಿಷ ಪ್ರಾಶನಮಾಡಿ ಕೊಂದಿರುವ ಶಂಕೆ
ತಮ್ಮ ಕ್ಷೇತ್ರದ ಜಾತ್ರೆಗೆ ಸಿಎಂ ಒಂದು ಲೋಡ್ ಸಿಲಿಂಡರ್ ಕೊಡಿಸಿದ್ರಾ ?
ತಮ್ಮ ಕ್ಷೇತ್ರದ ಜಾತ್ರೆಗೆ ಸಿಎಂ ಒಂದು ಲೋಡ್ ಸಿಲಿಂಡರ್ ಕೊಡಿಸಿದ್ರಾ ?
ಹೊಸ ಜೆರ್ಸಿ ಪ್ರೋಮೋದಲ್ಲಿ ಆರ್​ಸಿಬಿಯನ್ನು ಗೇಲಿ ಮಾಡಿದ ಕೆಕೆಆರ್
ಹೊಸ ಜೆರ್ಸಿ ಪ್ರೋಮೋದಲ್ಲಿ ಆರ್​ಸಿಬಿಯನ್ನು ಗೇಲಿ ಮಾಡಿದ ಕೆಕೆಆರ್
ಅಪಾರ್ಟ್​ಮೆಂಟ್ ಲಿಫ್ಟ್​ ಗೇಟಿನೊಳಗೆ ಸಿಲುಕಿತು ಮಗುವಿನ ಕೈ
ಅಪಾರ್ಟ್​ಮೆಂಟ್ ಲಿಫ್ಟ್​ ಗೇಟಿನೊಳಗೆ ಸಿಲುಕಿತು ಮಗುವಿನ ಕೈ
ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ
ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ
ತಂದೆಯ ಅಂತ್ಯಸಂಸ್ಕಾರ ನೆರವೇರಿಸಿ ಲಿಂಗಸಮಾನತೆಯ ಸಂದೇಶ ಸಾರಿದ ಸಹೋದರಿಯರು
ತಂದೆಯ ಅಂತ್ಯಸಂಸ್ಕಾರ ನೆರವೇರಿಸಿ ಲಿಂಗಸಮಾನತೆಯ ಸಂದೇಶ ಸಾರಿದ ಸಹೋದರಿಯರು