AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಡ ಬಾಂಬ್ ಸ್ಫೋಟ: ತಪ್ಪೇ ಮಾಡದ ಗೋಮಾತೆಗೇಕೆ ಶಿಕ್ಷೆ?

ಹೈದರಾಬಾದ್: ನಾಡ ಬಾಂಬ್ ಸ್ಫೋಟಗೊಂಡು ಹಸು ಮೃತಪಟ್ಟಿರುವ ಘಟನೆ ಆಂಧ್ರ ಪ್ರದೇಶದ ತಿರುಪತಿ ಮಂಡಲಂನ ಚಂದಮಾಮ‌ಪಲ್ಲಿಯಲ್ಲಿ ನಡೆದಿದೆ. ಕಾಡು‌ ಹಂದಿಗಳಿಗಾಗಿ ಬೇಟೆಗಾರರು ಇಟ್ಟಿದ್ದ ನಾಡ ಬಾಂಬ್ ಸ್ಫೋಟದಿಂದ ತೀವ್ರ ಗಾಯಗೊಳಗಾಗಿದ್ದ ಹಸು ಸಾವನ್ನಪ್ಪಿದೆ. ಮೇಯಲೆಂದು ಹೊರ ಹೋಗಿದ್ದ ಹಸು ನಾಡ ಬಾಂಬ್ ಸ್ಪರ್ಶಿಸಿದೆ. ಈ ವೇಳೆ ಬಾಂಬ್ ಸ್ಫೋಟಗೊಂಡು ಹಸುವಿನ ಬಾಯಿ ಛಿದ್ರ ಛಿದ್ರವಾಗಿದೆ. ಬಾಂಬ್ ಸ್ಫೋಟದಿಂದ ಹಸುವಿನ ದವಡೆ, ನಾಲಿಗೆ, ಮುಂಖವೆಲ್ಲ ಛಿದ್ರಗೊಂಡಿತ್ತು. ಹೀಗಾಗಿ ಪಶು ವೈದ್ಯರು ಹಸುವಿಗೆ ಚಿಕಿತ್ಸೆ ಅಸಾಧ್ಯವೆಂದಿದ್ದರು. ತೀವ್ರ ನೋವಿನಿಂದ ರಕ್ತದ […]

ನಾಡ ಬಾಂಬ್ ಸ್ಫೋಟ: ತಪ್ಪೇ ಮಾಡದ ಗೋಮಾತೆಗೇಕೆ ಶಿಕ್ಷೆ?
ಆಯೇಷಾ ಬಾನು
|

Updated on: Oct 07, 2020 | 10:46 AM

Share

ಹೈದರಾಬಾದ್: ನಾಡ ಬಾಂಬ್ ಸ್ಫೋಟಗೊಂಡು ಹಸು ಮೃತಪಟ್ಟಿರುವ ಘಟನೆ ಆಂಧ್ರ ಪ್ರದೇಶದ ತಿರುಪತಿ ಮಂಡಲಂನ ಚಂದಮಾಮ‌ಪಲ್ಲಿಯಲ್ಲಿ ನಡೆದಿದೆ.

ಕಾಡು‌ ಹಂದಿಗಳಿಗಾಗಿ ಬೇಟೆಗಾರರು ಇಟ್ಟಿದ್ದ ನಾಡ ಬಾಂಬ್ ಸ್ಫೋಟದಿಂದ ತೀವ್ರ ಗಾಯಗೊಳಗಾಗಿದ್ದ ಹಸು ಸಾವನ್ನಪ್ಪಿದೆ. ಮೇಯಲೆಂದು ಹೊರ ಹೋಗಿದ್ದ ಹಸು ನಾಡ ಬಾಂಬ್ ಸ್ಪರ್ಶಿಸಿದೆ. ಈ ವೇಳೆ ಬಾಂಬ್ ಸ್ಫೋಟಗೊಂಡು ಹಸುವಿನ ಬಾಯಿ ಛಿದ್ರ ಛಿದ್ರವಾಗಿದೆ. ಬಾಂಬ್ ಸ್ಫೋಟದಿಂದ ಹಸುವಿನ ದವಡೆ, ನಾಲಿಗೆ, ಮುಂಖವೆಲ್ಲ ಛಿದ್ರಗೊಂಡಿತ್ತು. ಹೀಗಾಗಿ ಪಶು ವೈದ್ಯರು ಹಸುವಿಗೆ ಚಿಕಿತ್ಸೆ ಅಸಾಧ್ಯವೆಂದಿದ್ದರು. ತೀವ್ರ ನೋವಿನಿಂದ ರಕ್ತದ ಮಡುವಿನಲ್ಲಿ‌ ಬಿದ್ದು 4ಗಂಟೆಗಳ ಕಾಲ ಒದ್ದಾಡಿ, ಮೃತ್ಯುವಿನೊಂದಿಗೆ ಹೋರಾಡಿ ಕೊನೆಗೆ ಪ್ರಾಣ ಬಿಟ್ಟಿದೆ.

ಕಳೆದ‌ 2ತಿಂಗಳಲ್ಲಿ‌ ಇದೇ ರೀತಿ‌ ಬಾಂಬ್ ಸ್ಫೋಟಕ್ಕೆ ಸುಮಾರು 6ಹಸುಗಳು ಮೃತಪಟ್ಟಿವೆ. ತಿರುಪತಿ‌ ಬಳಿಯ ವೇದುರುಕುಪ್ಪಂ, ಪೆದ ಪಂಜನಿ, ಶಾಂತಿಪುರಂ ಮಂಡಲಗಳಲ್ಲಿ ಬೇಟೆಗಾರರ ನಾಡ ಬಾಂಬ್​ಗಳಿಗೆ ಪದೇ ಪದೇ ಮೂಕ ಜೀವಗಳು ಬಲಿಯಾಗುತ್ತಿವೆ. ಮಾಡದ ತಪ್ಪಿಗೆ ನರಕವನ್ನನುಭವಿಸಿ ಸಾಯುವಂತ ಪರಿಸ್ಥಿತಿಯನ್ನು ಗೋಮಾತೆ ಅನುಭವಿಸುತ್ತಿದ್ದಾಳೆ. ಇನ್ನು ಮುಂದಾದರೂ ಬೇಟೆಗಾರರು ಈ ರೀತಿ ಕ್ರಮಗಳನ್ನು ಅನುಸರಿಸುವುದನ್ನು, ನಾಡ ಬಾಂಬ್​ಗಳ ಉಪಯೋಗವನ್ನು ಬಿಡಬೇಕು. ಕೇರಳದಲ್ಲೂ ಇದೇ ರೀತಿ ಗರ್ಭಿಣಿ ಆನೆ ಬಲಿಯಾಗಿತ್ತು.

ಸುಂಟರಗಾಳಿಗೆ ಕುಸಿದ ಪೆಂಡಾಲ್​​: ಸಚಿವ ಸತೀಶ್​ ಜಾರಕಿಹೊಳಿ ಪಾರು
ಸುಂಟರಗಾಳಿಗೆ ಕುಸಿದ ಪೆಂಡಾಲ್​​: ಸಚಿವ ಸತೀಶ್​ ಜಾರಕಿಹೊಳಿ ಪಾರು
ವೆನೆಜುವೆಲಾ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿ; ತುರ್ತು ಪರಿಸ್ಥಿತಿ ಘೋಷಣೆ
ವೆನೆಜುವೆಲಾ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿ; ತುರ್ತು ಪರಿಸ್ಥಿತಿ ಘೋಷಣೆ
ಬಳ್ಳಾರಿ ಗಲಭೆ: ರೆಡ್ಡಿ, ಶ್ರೀರಾಮುಲುಗೆ ಫೋನ್​ ಮಾಡಿ ಧೈರ್ಯ ಹೇಳಿದ ದೇವೇಗೌಡ
ಬಳ್ಳಾರಿ ಗಲಭೆ: ರೆಡ್ಡಿ, ಶ್ರೀರಾಮುಲುಗೆ ಫೋನ್​ ಮಾಡಿ ಧೈರ್ಯ ಹೇಳಿದ ದೇವೇಗೌಡ
ಬೇಜವಾಬ್ದಾರಿ, ಅಹಂಕಾರ, ಪಕ್ಷಪಾತ: ಗಿಲ್ಲಿ ವಿರುದ್ಧ ದೂರಿನ ಸರಮಾಲೆ
ಬೇಜವಾಬ್ದಾರಿ, ಅಹಂಕಾರ, ಪಕ್ಷಪಾತ: ಗಿಲ್ಲಿ ವಿರುದ್ಧ ದೂರಿನ ಸರಮಾಲೆ
4ನೇ ಶತಕ.. ದೇಶಿ ಅಂಗಳದಲ್ಲಿ ಕನ್ನಡಿಗನ ಪಾರುಪತ್ಯ; ವಿಡಿಯೋ
4ನೇ ಶತಕ.. ದೇಶಿ ಅಂಗಳದಲ್ಲಿ ಕನ್ನಡಿಗನ ಪಾರುಪತ್ಯ; ವಿಡಿಯೋ
ಗಾಂಜಾ ಪೆಡ್ಲರ್ ಜತೆ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ: ಜನಾರ್ದನ ರೆಡ್ಡಿ ಆರೋಪ
ಗಾಂಜಾ ಪೆಡ್ಲರ್ ಜತೆ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ: ಜನಾರ್ದನ ರೆಡ್ಡಿ ಆರೋಪ
ಬಳ್ಳಾರಿ ಗಲಭೆ: ಸಸ್ಪೆಂಡ್ ಬೆನ್ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ರಾ ಪವನ್?
ಬಳ್ಳಾರಿ ಗಲಭೆ: ಸಸ್ಪೆಂಡ್ ಬೆನ್ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ರಾ ಪವನ್?
ಟೈರ್ ಸ್ಪೋಟಗೊಂಡು ಮನೆಯ ಆವರಣಕ್ಕೆ ಹಾರಿ ಬಂದು ಬಿದ್ದ ಕಾರು
ಟೈರ್ ಸ್ಪೋಟಗೊಂಡು ಮನೆಯ ಆವರಣಕ್ಕೆ ಹಾರಿ ಬಂದು ಬಿದ್ದ ಕಾರು
ಗವಿ ಮಠದ ಜಾತ್ರೆಗೆ ರೆಡಿಯಾಗ್ತಿದೆ 10 ಲಕ್ಷ ರೂ. ವೆಚ್ಚದಲ್ಲಿ ಮೈಸೂರ್ ಪಾಕ್
ಗವಿ ಮಠದ ಜಾತ್ರೆಗೆ ರೆಡಿಯಾಗ್ತಿದೆ 10 ಲಕ್ಷ ರೂ. ವೆಚ್ಚದಲ್ಲಿ ಮೈಸೂರ್ ಪಾಕ್
ರಾಯಚೂರು: ಗೃಹಲಕ್ಷ್ಮಿ ಹಣದಲ್ಲಿ ಫ್ರಿಡ್ಜ್ ಖರೀದಿಸಿದ ಮಹಿಳೆ
ರಾಯಚೂರು: ಗೃಹಲಕ್ಷ್ಮಿ ಹಣದಲ್ಲಿ ಫ್ರಿಡ್ಜ್ ಖರೀದಿಸಿದ ಮಹಿಳೆ