AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಡ ಬಾಂಬ್ ಸ್ಫೋಟ: ತಪ್ಪೇ ಮಾಡದ ಗೋಮಾತೆಗೇಕೆ ಶಿಕ್ಷೆ?

ಹೈದರಾಬಾದ್: ನಾಡ ಬಾಂಬ್ ಸ್ಫೋಟಗೊಂಡು ಹಸು ಮೃತಪಟ್ಟಿರುವ ಘಟನೆ ಆಂಧ್ರ ಪ್ರದೇಶದ ತಿರುಪತಿ ಮಂಡಲಂನ ಚಂದಮಾಮ‌ಪಲ್ಲಿಯಲ್ಲಿ ನಡೆದಿದೆ. ಕಾಡು‌ ಹಂದಿಗಳಿಗಾಗಿ ಬೇಟೆಗಾರರು ಇಟ್ಟಿದ್ದ ನಾಡ ಬಾಂಬ್ ಸ್ಫೋಟದಿಂದ ತೀವ್ರ ಗಾಯಗೊಳಗಾಗಿದ್ದ ಹಸು ಸಾವನ್ನಪ್ಪಿದೆ. ಮೇಯಲೆಂದು ಹೊರ ಹೋಗಿದ್ದ ಹಸು ನಾಡ ಬಾಂಬ್ ಸ್ಪರ್ಶಿಸಿದೆ. ಈ ವೇಳೆ ಬಾಂಬ್ ಸ್ಫೋಟಗೊಂಡು ಹಸುವಿನ ಬಾಯಿ ಛಿದ್ರ ಛಿದ್ರವಾಗಿದೆ. ಬಾಂಬ್ ಸ್ಫೋಟದಿಂದ ಹಸುವಿನ ದವಡೆ, ನಾಲಿಗೆ, ಮುಂಖವೆಲ್ಲ ಛಿದ್ರಗೊಂಡಿತ್ತು. ಹೀಗಾಗಿ ಪಶು ವೈದ್ಯರು ಹಸುವಿಗೆ ಚಿಕಿತ್ಸೆ ಅಸಾಧ್ಯವೆಂದಿದ್ದರು. ತೀವ್ರ ನೋವಿನಿಂದ ರಕ್ತದ […]

ನಾಡ ಬಾಂಬ್ ಸ್ಫೋಟ: ತಪ್ಪೇ ಮಾಡದ ಗೋಮಾತೆಗೇಕೆ ಶಿಕ್ಷೆ?
ಆಯೇಷಾ ಬಾನು
ಆಯೇಷಾ ಬಾನು|

Updated on: Oct 07, 2020 | 10:46 AM

Share

ಹೈದರಾಬಾದ್: ನಾಡ ಬಾಂಬ್ ಸ್ಫೋಟಗೊಂಡು ಹಸು ಮೃತಪಟ್ಟಿರುವ ಘಟನೆ ಆಂಧ್ರ ಪ್ರದೇಶದ ತಿರುಪತಿ ಮಂಡಲಂನ ಚಂದಮಾಮ‌ಪಲ್ಲಿಯಲ್ಲಿ ನಡೆದಿದೆ.

ಕಾಡು‌ ಹಂದಿಗಳಿಗಾಗಿ ಬೇಟೆಗಾರರು ಇಟ್ಟಿದ್ದ ನಾಡ ಬಾಂಬ್ ಸ್ಫೋಟದಿಂದ ತೀವ್ರ ಗಾಯಗೊಳಗಾಗಿದ್ದ ಹಸು ಸಾವನ್ನಪ್ಪಿದೆ. ಮೇಯಲೆಂದು ಹೊರ ಹೋಗಿದ್ದ ಹಸು ನಾಡ ಬಾಂಬ್ ಸ್ಪರ್ಶಿಸಿದೆ. ಈ ವೇಳೆ ಬಾಂಬ್ ಸ್ಫೋಟಗೊಂಡು ಹಸುವಿನ ಬಾಯಿ ಛಿದ್ರ ಛಿದ್ರವಾಗಿದೆ. ಬಾಂಬ್ ಸ್ಫೋಟದಿಂದ ಹಸುವಿನ ದವಡೆ, ನಾಲಿಗೆ, ಮುಂಖವೆಲ್ಲ ಛಿದ್ರಗೊಂಡಿತ್ತು. ಹೀಗಾಗಿ ಪಶು ವೈದ್ಯರು ಹಸುವಿಗೆ ಚಿಕಿತ್ಸೆ ಅಸಾಧ್ಯವೆಂದಿದ್ದರು. ತೀವ್ರ ನೋವಿನಿಂದ ರಕ್ತದ ಮಡುವಿನಲ್ಲಿ‌ ಬಿದ್ದು 4ಗಂಟೆಗಳ ಕಾಲ ಒದ್ದಾಡಿ, ಮೃತ್ಯುವಿನೊಂದಿಗೆ ಹೋರಾಡಿ ಕೊನೆಗೆ ಪ್ರಾಣ ಬಿಟ್ಟಿದೆ.

ಕಳೆದ‌ 2ತಿಂಗಳಲ್ಲಿ‌ ಇದೇ ರೀತಿ‌ ಬಾಂಬ್ ಸ್ಫೋಟಕ್ಕೆ ಸುಮಾರು 6ಹಸುಗಳು ಮೃತಪಟ್ಟಿವೆ. ತಿರುಪತಿ‌ ಬಳಿಯ ವೇದುರುಕುಪ್ಪಂ, ಪೆದ ಪಂಜನಿ, ಶಾಂತಿಪುರಂ ಮಂಡಲಗಳಲ್ಲಿ ಬೇಟೆಗಾರರ ನಾಡ ಬಾಂಬ್​ಗಳಿಗೆ ಪದೇ ಪದೇ ಮೂಕ ಜೀವಗಳು ಬಲಿಯಾಗುತ್ತಿವೆ. ಮಾಡದ ತಪ್ಪಿಗೆ ನರಕವನ್ನನುಭವಿಸಿ ಸಾಯುವಂತ ಪರಿಸ್ಥಿತಿಯನ್ನು ಗೋಮಾತೆ ಅನುಭವಿಸುತ್ತಿದ್ದಾಳೆ. ಇನ್ನು ಮುಂದಾದರೂ ಬೇಟೆಗಾರರು ಈ ರೀತಿ ಕ್ರಮಗಳನ್ನು ಅನುಸರಿಸುವುದನ್ನು, ನಾಡ ಬಾಂಬ್​ಗಳ ಉಪಯೋಗವನ್ನು ಬಿಡಬೇಕು. ಕೇರಳದಲ್ಲೂ ಇದೇ ರೀತಿ ಗರ್ಭಿಣಿ ಆನೆ ಬಲಿಯಾಗಿತ್ತು.

Follow Us
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್