AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಡ ಬಾಂಬ್ ಸ್ಫೋಟ: ತಪ್ಪೇ ಮಾಡದ ಗೋಮಾತೆಗೇಕೆ ಶಿಕ್ಷೆ?

ಹೈದರಾಬಾದ್: ನಾಡ ಬಾಂಬ್ ಸ್ಫೋಟಗೊಂಡು ಹಸು ಮೃತಪಟ್ಟಿರುವ ಘಟನೆ ಆಂಧ್ರ ಪ್ರದೇಶದ ತಿರುಪತಿ ಮಂಡಲಂನ ಚಂದಮಾಮ‌ಪಲ್ಲಿಯಲ್ಲಿ ನಡೆದಿದೆ. ಕಾಡು‌ ಹಂದಿಗಳಿಗಾಗಿ ಬೇಟೆಗಾರರು ಇಟ್ಟಿದ್ದ ನಾಡ ಬಾಂಬ್ ಸ್ಫೋಟದಿಂದ ತೀವ್ರ ಗಾಯಗೊಳಗಾಗಿದ್ದ ಹಸು ಸಾವನ್ನಪ್ಪಿದೆ. ಮೇಯಲೆಂದು ಹೊರ ಹೋಗಿದ್ದ ಹಸು ನಾಡ ಬಾಂಬ್ ಸ್ಪರ್ಶಿಸಿದೆ. ಈ ವೇಳೆ ಬಾಂಬ್ ಸ್ಫೋಟಗೊಂಡು ಹಸುವಿನ ಬಾಯಿ ಛಿದ್ರ ಛಿದ್ರವಾಗಿದೆ. ಬಾಂಬ್ ಸ್ಫೋಟದಿಂದ ಹಸುವಿನ ದವಡೆ, ನಾಲಿಗೆ, ಮುಂಖವೆಲ್ಲ ಛಿದ್ರಗೊಂಡಿತ್ತು. ಹೀಗಾಗಿ ಪಶು ವೈದ್ಯರು ಹಸುವಿಗೆ ಚಿಕಿತ್ಸೆ ಅಸಾಧ್ಯವೆಂದಿದ್ದರು. ತೀವ್ರ ನೋವಿನಿಂದ ರಕ್ತದ […]

ನಾಡ ಬಾಂಬ್ ಸ್ಫೋಟ: ತಪ್ಪೇ ಮಾಡದ ಗೋಮಾತೆಗೇಕೆ ಶಿಕ್ಷೆ?
ಆಯೇಷಾ ಬಾನು
|

Updated on: Oct 07, 2020 | 10:46 AM

Share

ಹೈದರಾಬಾದ್: ನಾಡ ಬಾಂಬ್ ಸ್ಫೋಟಗೊಂಡು ಹಸು ಮೃತಪಟ್ಟಿರುವ ಘಟನೆ ಆಂಧ್ರ ಪ್ರದೇಶದ ತಿರುಪತಿ ಮಂಡಲಂನ ಚಂದಮಾಮ‌ಪಲ್ಲಿಯಲ್ಲಿ ನಡೆದಿದೆ.

ಕಾಡು‌ ಹಂದಿಗಳಿಗಾಗಿ ಬೇಟೆಗಾರರು ಇಟ್ಟಿದ್ದ ನಾಡ ಬಾಂಬ್ ಸ್ಫೋಟದಿಂದ ತೀವ್ರ ಗಾಯಗೊಳಗಾಗಿದ್ದ ಹಸು ಸಾವನ್ನಪ್ಪಿದೆ. ಮೇಯಲೆಂದು ಹೊರ ಹೋಗಿದ್ದ ಹಸು ನಾಡ ಬಾಂಬ್ ಸ್ಪರ್ಶಿಸಿದೆ. ಈ ವೇಳೆ ಬಾಂಬ್ ಸ್ಫೋಟಗೊಂಡು ಹಸುವಿನ ಬಾಯಿ ಛಿದ್ರ ಛಿದ್ರವಾಗಿದೆ. ಬಾಂಬ್ ಸ್ಫೋಟದಿಂದ ಹಸುವಿನ ದವಡೆ, ನಾಲಿಗೆ, ಮುಂಖವೆಲ್ಲ ಛಿದ್ರಗೊಂಡಿತ್ತು. ಹೀಗಾಗಿ ಪಶು ವೈದ್ಯರು ಹಸುವಿಗೆ ಚಿಕಿತ್ಸೆ ಅಸಾಧ್ಯವೆಂದಿದ್ದರು. ತೀವ್ರ ನೋವಿನಿಂದ ರಕ್ತದ ಮಡುವಿನಲ್ಲಿ‌ ಬಿದ್ದು 4ಗಂಟೆಗಳ ಕಾಲ ಒದ್ದಾಡಿ, ಮೃತ್ಯುವಿನೊಂದಿಗೆ ಹೋರಾಡಿ ಕೊನೆಗೆ ಪ್ರಾಣ ಬಿಟ್ಟಿದೆ.

ಕಳೆದ‌ 2ತಿಂಗಳಲ್ಲಿ‌ ಇದೇ ರೀತಿ‌ ಬಾಂಬ್ ಸ್ಫೋಟಕ್ಕೆ ಸುಮಾರು 6ಹಸುಗಳು ಮೃತಪಟ್ಟಿವೆ. ತಿರುಪತಿ‌ ಬಳಿಯ ವೇದುರುಕುಪ್ಪಂ, ಪೆದ ಪಂಜನಿ, ಶಾಂತಿಪುರಂ ಮಂಡಲಗಳಲ್ಲಿ ಬೇಟೆಗಾರರ ನಾಡ ಬಾಂಬ್​ಗಳಿಗೆ ಪದೇ ಪದೇ ಮೂಕ ಜೀವಗಳು ಬಲಿಯಾಗುತ್ತಿವೆ. ಮಾಡದ ತಪ್ಪಿಗೆ ನರಕವನ್ನನುಭವಿಸಿ ಸಾಯುವಂತ ಪರಿಸ್ಥಿತಿಯನ್ನು ಗೋಮಾತೆ ಅನುಭವಿಸುತ್ತಿದ್ದಾಳೆ. ಇನ್ನು ಮುಂದಾದರೂ ಬೇಟೆಗಾರರು ಈ ರೀತಿ ಕ್ರಮಗಳನ್ನು ಅನುಸರಿಸುವುದನ್ನು, ನಾಡ ಬಾಂಬ್​ಗಳ ಉಪಯೋಗವನ್ನು ಬಿಡಬೇಕು. ಕೇರಳದಲ್ಲೂ ಇದೇ ರೀತಿ ಗರ್ಭಿಣಿ ಆನೆ ಬಲಿಯಾಗಿತ್ತು.

ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?