AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

80ವರ್ಷ ಹಳೆಯ ಬಂಗಲೆಯನ್ನು ಖರೀದಿಸಿದ ಡಿ-ಮಾರ್ಟ್​ ಸಂಸ್ಥಾಪಕ ರಾಧಾಕೃಷ್ಣನ್​ ದಮಾನಿ; ಇದರ ಬೆಲೆ ಬರೋಬ್ಬರಿ 1001 ಕೋಟಿ ರೂಪಾಯಿ

D-Mart: ರಾಧಾಕೃಷ್ಣನ್​ ದಮಾನಿ ಅವರಿಗೆ ಈಗ 67 ವರ್ಷ. ಭಾರತದ ಶ್ರೀಮಂತರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ... ಹೂಡಿಕೆದಾರರು. ಮುಂಬೈ ಯೂನಿವರ್ಸಿಟಿಯಲ್ಲಿ ಕಾಮರ್ಸ್​ ಅಭ್ಯಾಸ ಮಾಡಿದ್ದಾರೆ. ಆದರೆ ಒಂದೇ ವರ್ಷ ಓದಿ, ಅರ್ಧಕ್ಕೇ ಬಿಟ್ಟರು.

80ವರ್ಷ ಹಳೆಯ ಬಂಗಲೆಯನ್ನು ಖರೀದಿಸಿದ ಡಿ-ಮಾರ್ಟ್​ ಸಂಸ್ಥಾಪಕ ರಾಧಾಕೃಷ್ಣನ್​ ದಮಾನಿ; ಇದರ ಬೆಲೆ ಬರೋಬ್ಬರಿ 1001 ಕೋಟಿ ರೂಪಾಯಿ
ರಾಧಾಕೃಷ್ಣನ್​ ದಮಾನಿ
Lakshmi Hegde
|

Updated on: Apr 04, 2021 | 12:06 PM

Share

ಮುಂಬೈ: ಡಿ-ಮಾರ್ಟ್ ಸಂಸ್ಥಾಪಕ ರಾಧಾಕೃಷ್ಣನ್​ ದಮಾನಿ ದಕ್ಷಿಣ ಮುಂಬೈನ ನಾರಾಯಣ್​ ಧಾಬೋಲ್ಕರ್​ ರಸ್ತೆಯಲ್ಲಿ ಬಂಗಲೆಯೊಂದನ್ನು ಖರೀದಿಸಿದ್ದಾರೆ. ಅದರಲ್ಲೇನು ವಿಶೇಷ ಎಂದು ಕೇಳಬೇಡಿ.. ಇದರ ಬೆಲೆ ಕೇಳಿದರೆ ಖಂಡಿತ ನೀವೂ ಹುಬ್ಬೇರಿಸುತ್ತೀರಿ. ಟೋನಿ ಮಲ್​ಬಾರ್​ ಹಿಲ್ಸ್​​ನಲ್ಲಿ 1.5 ಎಕರೆ ಜಾಗದಲ್ಲಿ ಇರುವ ಮಧು ಕುಂಜ್​ ಎಂಬ ಹೆಸರಿನ ಈ ಬಂಗಲೆಯ ಬೆಲೆ ಬರೋಬ್ಬರಿ 1001 ಕೋಟಿ ರೂಪಾಯಿ !

ಬಂಗಲೆ ಅಂದಾಜು 80 ವರ್ಷ ಹಳೆಯದಿರಬಹುದು. ಆರ್ಟ್​ ಡೆಕೋ ಶೈಲಿಯಲ್ಲಿ ನಿರ್ಮಿಸಲಾಗಿದ್ದು, ನೆಲ ಮತ್ತು ಒಂದು ಅಂತಸ್ತಿದೆ. ನಮ್ಮ ಪರಂಪರೆಯ ವೈಶಿಷ್ಟ್ಯಗಳನ್ನು ಬಿಂಬಿಸುತ್ತಿದೆ ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ. ರಾಧಾಕೃಷ್ಣನ್​ ದಮಾನಿ ಮತ್ತು ಅವರ ಸೋದರ ಗೋಪಿಕೃಷ್ಣನ್​ ದಮಾನಿ ಸೇರಿ ಮಾರ್ಚ್​ 31ರಂದು ಬಂಗಲೆಯನ್ನು ಖರೀದಿಸಿದ್ದು, ನೋಂದಣಿಯ ಸಂದರ್ಭದಲ್ಲಿ 30 ಕೋಟಿ ರೂಪಾಯಿ ಸ್ಟಾಂಪ್​ ಡ್ಯೂಟಿ ಪಾವತಿಸಿದ್ದಾರೆ ಎಂದು ರಿಯಲ್​ ಎಸ್ಟೇಟ್ ಮಾರುಕಟ್ಟೆ ಮೂಲಗಳು ತಿಳಿಸಿವೆ.

19ನೇ ಶತಮಾನದ ಉದ್ಯಮಿಗೆ ಸೇರಿದ ಬಂಗಲೆ ಈಗ ರಾಧಾಕೃಷ್ಣನ್​ ದಮಾನಿ ಖರೀದಿಸಿರುವ ಈ ಬಂಗಲೆ 19ನೇ ಶತಮಾನದ, ಮುಂಬೈನ ಖ್ಯಾತ ಉದ್ಯಮಿ ಪ್ರೇಮ್​ಚಂದ್​ ರಾಯ್​ಚಂದ್​ ಅವರಿಗೆ ಸೇರಿದ್ದು. ಇವರನ್ನು ಕಾಟನ್ ಕಿಂಗ್​ ಎಂದೇ ಕರೆಯಲಾಗುತ್ತಿತ್ತು. ಪ್ರೇಮ್​ಚಂದ್​ ಅವರ ಪೂರ್ವಜರು ಕಟ್ಟಿಸಿದ್ದ ಮನೆಯಾಗಿತ್ತು ಎಂದು ಸ್ಥಳೀಯರು, ಆ ಬಂಗಲೆಯ ಬಗ್ಗೆ ಗೊತ್ತಿದ್ದವರು ತಿಳಿಸಿದ್ದಾರೆ. ಈ ಬಂಗಲೆ, ದಕ್ಷಿಣ ಮುಂಬೈನ ದುಬಾರಿ ವಸತಿ ಪ್ರದೇಶ ಎನಿಸಿಕೊಂಡಿರುವ ನಾರಾಯಣ ಧಾಬೋಲ್ಕರ್​ ರಸ್ತೆಯ ಮೂಲೆಯಲ್ಲಿ ಇದೆ. ಇಲ್ಲಿನ ಅಪಾರ್ಟ್​ಮೆಂಟ್​ಗಳಲ್ಲೇ, ಚದರ್​ ಅಡಿಗೆ 70 ಸಾವಿರದಿಂದ 80 ಸಾವಿರ ರೂ.ವರೆಗೆ ದರ ನಿಗದಿ ಮಾಡಿವೆ. ಈ ಆಸುಪಾಸಿನ ಹಲವು ವಿಐಪಿಗಳ ಬಂಗಲೆಗಳೂ ಇವೆ.

ರಾಧಾಕೃಷ್ಣನ್​ ದಮಾನಿ ಯಾರು? ರಾಧಾಕೃಷ್ಣನ್​ ದಮಾನಿ ಅವರಿಗೆ ಈಗ 67 ವರ್ಷ. ಭಾರತದ ಶ್ರೀಮಂತರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ… ಹೂಡಿಕೆದಾರರು. ಮುಂಬೈ ಯೂನಿವರ್ಸಿಟಿಯಲ್ಲಿ ಕಾಮರ್ಸ್​ ಅಭ್ಯಾಸ ಮಾಡಿದ್ದಾರೆ. ಆದರೆ ಒಂದೇ ವರ್ಷ ಓದಿ, ಅರ್ಧಕ್ಕೇ ಬಿಟ್ಟರು. 2001ರಲ್ಲಿ ಡಿ-ಮಾರ್ಟ್​ ರಿಟೇಲ್​ ಕಂಪನಿಯನ್ನು ಸ್ಥಾಪಿಸಿದ್ದಾರೆ. ಇದರ ಪ್ರಧಾನ ಕಚೇರಿ ಮುಂಬೈನಲ್ಲಿದ್ದು, ದೇಶಾದ್ಯಂತ ಮಾರ್ಟ್​ಗಳಿವೆ. ಜನರ ನಂಬಿಕೆಯನ್ನೂ ಗಳಿಸಿದ ಕಂಪನಿ ಇದು. ಈ ಹಿಂದೆ ಒಂದೇ ಕೋಣೆಯ ಅಪಾರ್ಟ್​ಮೆಂಟ್​ನಲ್ಲಿ ವಾಸವಾಗಿದ್ದ ರಾಧಾಕೃಷ್ಣನ್​ ದಮಾನಿ ಇದೀಗ ಬರೋಬ್ಬರಿ 1001 ಕೋಟಿ ರೂಪಾಯಿ ಮೌಲ್ಯದ ಬಂಗಲೆಯನ್ನೇ ಖರೀದಿಸಿದ್ದಾರೆ.

ಇದನ್ನೂ ಓದಿ: ಕೆ.ಮಂಜು ಯಾರು ಎಂದೇ ನನಗೆ ಗೊತ್ತಿಲ್ಲ; ಸಚಿವ ಡಾ.ಕೆ.ಸುಧಾಕರ್​ ತಿರುಗೇಟು

ಚಹಲ್-ಧನಶ್ರೀ ಮದುವೆ ಮೂವಿ ರಿಲೀಸ್: ಸಖತ್​ ಸ್ಟೆಪ್ಸ್​ ಹಾಕಿದ ಕ್ರಿಕೆಟಿಗರು, ಕಾಮಿಡಿ ಮೂಡ್​ನಲ್ಲಿ ಚಹಲ್.. ವಿಡಿಯೋ ನೋಡಿ

Follow Us
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ಗ್ಯಾರಂಟಿ ಯೋಜನೆಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ:ಸಿಎಂ ಕೊಟ್ಟ ಸೂಚನೆಗಳೇನು?
ಗ್ಯಾರಂಟಿ ಯೋಜನೆಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ:ಸಿಎಂ ಕೊಟ್ಟ ಸೂಚನೆಗಳೇನು?
ಬಹು ನಿರೀಕ್ಷಿತ ‘ಕರಾವಳಿ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
ಬಹು ನಿರೀಕ್ಷಿತ ‘ಕರಾವಳಿ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಬಿಗ್​​ ಅಪ್ಡೇಟ್​ ಕೊಟ್ಟ ರೇವಣ್ಣ
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಬಿಗ್​​ ಅಪ್ಡೇಟ್​ ಕೊಟ್ಟ ರೇವಣ್ಣ
‘ಬಲರಾಮನ ದಿನಗಳು’ ಸಿನಿಮಾ ಬಗ್ಗೆ ಗೆಳೆಯರಾದ ವಿಜಯ್-ಬುಜ್ಜಿ ಮಾತು
‘ಬಲರಾಮನ ದಿನಗಳು’ ಸಿನಿಮಾ ಬಗ್ಗೆ ಗೆಳೆಯರಾದ ವಿಜಯ್-ಬುಜ್ಜಿ ಮಾತು
ಶಿಕ್ಷಕನ ಸಾವು: ಐವರು ಶಿಕ್ಷಕರು ಶಾಲೆಗೆ ಬರುವುದು ಬೇಡವೆಂದ ಗ್ರಾಮಸ್ಥರು
ಶಿಕ್ಷಕನ ಸಾವು: ಐವರು ಶಿಕ್ಷಕರು ಶಾಲೆಗೆ ಬರುವುದು ಬೇಡವೆಂದ ಗ್ರಾಮಸ್ಥರು
ಕೊಚ್ಚಿಹೋದ ದುಧಿಯಾ ಸೇತುವೆ; ಡಾರ್ಜಿಲಿಂಗ್-ಸಿಲಿಗುರಿ ಸಂಪರ್ಕ ಸಂಪೂರ್ಣ ಕಡಿತ
ಕೊಚ್ಚಿಹೋದ ದುಧಿಯಾ ಸೇತುವೆ; ಡಾರ್ಜಿಲಿಂಗ್-ಸಿಲಿಗುರಿ ಸಂಪರ್ಕ ಸಂಪೂರ್ಣ ಕಡಿತ