ಇಂದಿನ ಸಭೆಯಲ್ಲೂ ಮೂಡಲಿಲ್ಲ ಒಮ್ಮತ: 19 ರಂದು 10 ನೇ ಸುತ್ತಿನ ಸಭೆ

ಊಟದ ವಿರಾಮದವರೆಗೆ ರೈತ ನಾಯಕರ ಜತೆಗಿನ ಮಾತುಕತೆಯಲ್ಲಿ ಯಾವುದೇ ಒಮ್ಮತಕ್ಕೆ ಬರಲಾಗಿಲ್ಲ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದರು.

ಇಂದಿನ ಸಭೆಯಲ್ಲೂ ಮೂಡಲಿಲ್ಲ ಒಮ್ಮತ: 19 ರಂದು 10 ನೇ ಸುತ್ತಿನ ಸಭೆ
ನೆಲ ಮೇಲೆ ಕುಳಿತು ಊಟ ಮಾಡಿದ ರೈತ ನಾಯಕರು

Updated on: Jan 15, 2021 | 5:08 PM

ದೆಹಲಿ: ರೈತ ನಾಯಕರ ಜತೆಗಿನ 9 ನೇ ಸುತ್ತಿನ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್​ರ ಸಭೆ ಮುಕ್ತಾಯವಾಗಿದ್ದು, ಇಂದಿನ ಸಭೆಯಲ್ಲಿ ಯಾವುದೇ ಒಮ್ಮತ ಹೊರಬಿದ್ದಿಲ್ಲ. ಜನವರಿ 19 ರಂದು 10 ನೇ ಸುತ್ತಿನ ಸಭೆ ನಡಸಲು ತೀರ್ಮಾನಿಸಲಾಗಿದೆ.

ಊಟದ ವಿರಾಮದವರೆಗೆ ರೈತ ನಾಯಕರ ಜತೆಗಿನ ಮಾತುಕತೆಯಲ್ಲಿ ಯಾವುದೇ ಒಮ್ಮತ ಮೂಡಿಲ್ಲ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದರು.

ಕಾಂಗ್ರೆಸ್ ಕಾರ್ಯಕರ್ತರು ದೆಹಲಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಈ ವೇಳೆ, ಪೊಲೀಸರು ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು. ಪಂಜಾಬ್​ನಲ್ಲೂ ನಡೆದ ಪ್ರತಿಭಟನೆಯಲ್ಲಿ ರಾಜ ಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪೊಲೀಸರು ಜಲ ಫಿರಂಗಿ ಹಾರಿಸಿ ತಡೆಗಟ್ಟಲು ಯತ್ನಿಸಿದರು.

Delhi Chalo ಕೃಷಿ ಕಾಯ್ದೆಗಳಿಗೆ ತಾತ್ಕಾಲಿಕ ತಡೆ ನೀಡಿ ಸಮಿತಿ ನೇಮಿಸಿದ ಸುಪ್ರೀಂ ಕೋರ್ಟ್; ಸಮಿತಿ ಸದಸ್ಯರ ಹಿನ್ನೆಲೆ ಏನು?