‘ಎಲ್ಲರಿಗೂ ನಮಸ್ಕಾರ’ ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದ ರಾಜನಾಥ್ ಸಿಂಗ್, 2020ರಲ್ಲಿ ಇಡೀ ವಿಶ್ವವೇ ಕೊರೊನಾದಿಂದ ಬಳಲುತ್ತಿತ್ತು. ಆರ್ಥಿಕ ಸಂಕಷ್ಟ ಎದುರಿಸುವ ಸ್ಥಿತಿಯೂ ನಿರ್ಮಾಣವಾಗಿತ್ತು. ಆದರೆ ಇದೀಗ ಚೇತರಿಕೆ ಕಾಣುತ್ತಿದೆ. ಏರ್ ಶೋದಲ್ಲಿ ₹ 203 ಕೋಟಿ ಮೊತ್ತದ ವಹಿವಾಟು ಆಗಿದೆ. ಏರ್ ಶೋಗಳಿಂದ ಭಾರತೀಯ ರಕ್ಷಣಾ ಸಾಮರ್ಥ್ಯ ಹೆಚ್ಚಳವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
5 ಲಕ್ಷಕ್ಕೂ ಹೆಚ್ಚು ಜನ ಏರ್ ಶೋ ವೀಕ್ಷಣೆ ಮಾಡಿದ್ದಾರೆ. 120 ಒಪ್ಪಂದಗಳಿಗೆ ಸಹಿ ಹಾಕಲಾಗಿದೆ ಎಂದು ಮಾಹಿತಿ ನೀಡಿದರು. ರಕ್ಷಣಾ ಇಲಾಖೆ ಮತ್ತು ಮೂರೂ ಸಶಸ್ತ್ರಪಡೆಗಳ ಹಿರಿಯ ಅಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು.
ಕನ್ನಡ ಸಾಹಿತ್ಯ ಸಮ್ಮೇಳನ ಮುಂದೂಡಿಕೆ, ಮಾರ್ಚ್ 9ರ ಬಳಿಕ ಹೊಸ ದಿನಾಂಕ ನಿಗದಿ: ಅರವಿಂದ ಲಿಂಬಾವಳಿ