AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿ ಚಲೋ ಹಿನ್ನೆಲೆ.. ಚಳಿಗೆ ದೆಹಲಿ ಗಢಗಢ, ಆದ್ರೆ ಅವಡುಗಚ್ಚಿ ಅಚಲವಾಗಿ ಕುಳಿತ ಪಂಜಾಬ್ ರೈತರು!

ವಾಡಿಕೆಗಿಂತ ಹೆಚ್ಚು ಚಳಿ ದೆಹಲಿಯನ್ನು ಗಡಗಡ ನಡುಗಿಸುತ್ತಿದೆ. ಆದರೆ, ಪಂಜಾಬ್ ರೈತರು ಪ್ರತಿಭಟನೆಯ ಕಾವಿನಲ್ಲಿ ರಸ್ತೆ ಬದಿಯಲ್ಲೇ ಎಂಟು ದಿನ ಕಳೆದಿದ್ದಾರೆ. ಚಳಿಗೂ ಹೆದರದ ರೈತರ ಊಟ, ವಸತಿ ಎಲ್ಲವೂ ರಸ್ತೆಗಳ ಪಕ್ಕದಲ್ಲೇ ನಡೆಯುತ್ತಿವೆ.

ದೆಹಲಿ ಚಲೋ ಹಿನ್ನೆಲೆ.. ಚಳಿಗೆ ದೆಹಲಿ ಗಢಗಢ, ಆದ್ರೆ ಅವಡುಗಚ್ಚಿ ಅಚಲವಾಗಿ ಕುಳಿತ ಪಂಜಾಬ್ ರೈತರು!
ರಸ್ತೆ ಪಕ್ಕದ ಡೇರೆಯಲ್ಲಿ ಅಡಿಗೆ ತಯಾರಿಸುತ್ತಿರುವ ಪಂಜಾಬ್ ರೈತ
guruganesh bhat
|

Updated on:Dec 05, 2020 | 11:20 AM

Share

ದೆಹಲಿ: ಪ್ರತಿ ಬಾರಿಗಿಂತ ಹೆಚ್ಚು ಚಳಿ ಕಂಡ ದೆಹಲಿ ಗಢಗಢ ನಡುಗುತ್ತಿದೆ. ಪಂಜಾಬ್ ರೈತರು ಪ್ರತಿಭಟನೆಯ ಕಾವಿನಲ್ಲಿ ಎಂಟು ದಿನದಿಂದ ರಸ್ತೆ ಬದಿಯಲ್ಲೇ ಕಳೆಯುತ್ತಿದ್ದಾರೆ. ಚಳಿಗೂ ಹೆದರದ ರೈತರ ಊಟ, ವಸತಿ ಎಲ್ಲವೂ ರಸ್ತೆಗಳ ಪಕ್ಕದಲ್ಲೇ ನಡೆಯುತ್ತಿವೆ.

ಕಳೆದ ವರ್ಷಕ್ಕಿಂತ ಈ ಸಲ ದೆಹಲಿಯಲ್ಲಿ ಚಳಿ ಹೆಚ್ಚಿರಲಿದೆ ಎಂದು ವರದಿಗಳು ತಿಳಿಸಿದ್ದವು. ಆದರೂ ಲೆಕ್ಕಿಸದ ರೈತರು ರಾಷ್ಟ್ರ ರಾಜಧಾನಿಗೆ ಮುತ್ತಿಗೆ ಹಾಕಿದರು. ನವೆಂಬರ್ ಅಂತ್ಯದ ವೇಳೆಗೆ ದಾಖಲಾದ 7.5 ಡಿಗ್ರಿ ಸೆಲ್ಸಿಯಸ್, 14 ವರ್ಷಗಳಲ್ಲಿ ಅತಿ ಕಡಿಮೆ ಉಷ್ಣಾಂಶವಾಗಿತ್ತು. ಈ ದಾಖಲೆಯ ಚಳಿಯನ್ನೂ ಮೀರಿ ದೆಹಲಿ ಹರ್ಯಾಣ ಗಡಿಯಲ್ಲಿ ರೈತರ ಪ್ರತಿಭಟನೆ ಸಾಗುತ್ತಲೇ ಇದೆ.

ಇನ್ನೂ ಹೆಚ್ಚಲಿದೆ ಚಳಿ.. ಮುಂದಿನ ಕೆಲ ದಿನಗಳಲ್ಲಿ ಉಷ್ಣಾಂಶ ಇನ್ನಷ್ಟು ಕುಸಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕನಿಷ್ಠ ಉಷ್ಣಾಂಶ 4.5 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಕಡಿಮೆಯಾಗಲಿದೆ. ಅಲ್ಲಿಯವರೆಗೂ ರೈತರ ಪ್ರತಿಭಟನೆ ಮುಂದುವರೆದರೆ ಪರಿಸ್ಥಿತಿ ಇನ್ನಷ್ಟು ವಿಕೋಪಕ್ಕೆ ಹೋಗಲಿದೆ.

ಇಡೀ ಸಮುದಾಯದವರು ಆಹಾರ ತಯಾರಿಕೆಯಲ್ಲಿ ಭಾಗವಹಿಸುತ್ತಿದ್ದಾರೆ

ಆಹಾರ ತಯಾರಿ ಎಲ್ಲಿ? ಪಂಜಾಬ್ ರೈತರು ಎಲ್ಲಿ ಉಳಿದಿದ್ದಾರೆ? ಹೇಗೆ ಆಹಾರ ತಯಾರಿಸುತ್ತಾರೆ? ಎಂಬ ಪ್ರಶ್ನೆಗಳು ಯಾರನ್ನಾದರೂ ಕಾಡದಿರದು. ಕೇಂದ್ರದ ಯಾವ ಪಟ್ಟಿಗೂ ಬಗ್ಗದ ರೈತರು ಅಗತ್ಯ ವಸ್ತುಗಳೊಂದಿಗೇ ದೆಹಲಿ ಪ್ರವೇಶಿಸಿದ್ದಾರೆ. ರಸ್ತೆ ಪಕ್ಕವೇ ಚಿಕ್ಕ ಚಿಕ್ಕ ಟೆಂಟ್​ಗಳನ್ನು ಹೂಡಿರುವ ರೈತರು ಅಲ್ಲೇ ಆಹಾರ ತಯಾರಿಸುತ್ತಿದ್ದಾರೆ. 20 ಜನರು ಕೂರಬಹುದಾದ 700 ಟ್ರಾಲಿಗಳು ರಾಜಧಾನಿ ಪ್ರವೇಶಿಸಿವೆ.

ರಸ್ತೆ ಪಕ್ಕವೇ ಊಟ.. ರಸ್ತೆ ಪಕ್ಕವೇ ವಸತಿ ರೈತರು 5,000 ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್, ತರಕಾರಿಗಳು. ಗ್ಯಾಸ್ ಸ್ಟೋವ್, ಹಾಸಿಗೆ ಮುಂತಾದ ವಸ್ತುಗಳನ್ನು ಹೊತ್ತೇ ದೆಹಲಿ ಪ್ರವೇಶಿಸಿದ್ದಾರೆ. ಬೆಂಬಲ ನೀಡಿರುವ ಕೆಲವು ಸಂಘಟನೆಗಳು ದಿನಸಿ ಸಾಮಾಗ್ರಿಗಳನ್ನು ಪೂರೈಸುತ್ತಿವೆ. ಆದರೆ ‘ಆರು ತಿಂಗಳಿಗೆ ಅಗತ್ಯವಿರುವ ದಿನಸಿ ಸಾಮಾಗ್ರಿಗಳ ಜೊತೆ ಪ್ರತಿಭಟನೆಗೆ ಆಗಮಿಸಿದ್ದೇವೆ’ ಎಂದು ಸ್ವತಃ ರೈತರೇ ಹೇಳಿಕೆ ನೀಡಿದ್ದಾರೆ. ರಾತ್ರಿಯ ವೇಳೆ ಸಾಂಪ್ರದಾಯಿಕ ಹಾಡುಗಳನ್ನು ಹಾಡುವ ಮೂಲಕ ಮನೋಧೈರ್ಯವನ್ನೂ ಹೆಚ್ಚಿಸಿಕೊಳ್ಳುತ್ತಿದ್ದಾರೆ.

ಜಾನಪದ ಹಾಡು ಹಾಡುತ್ತಿರುವ ಪ್ರತಿಭಟನಾಕಾರ ರೈತ

ಬೆಂಬಲ ನೀಡಲು ಟ್ರ್ಯಾಕ್ಟರಲ್ಲಿ ಆಗಮಿಸಿದ ಮದುಮಗ! ರೈತರಿಗೆ ಬೆಂಬಲ ನೀಡಲು ಐಷಾರಾಮಿ ಕಾರನ್ನು ತ್ಯಜಿಸಿದ ಮದುಮಗನೊಬ್ಬ ಟ್ರ್ಯಾಕ್ಟರ್ ಏರಿ ಮದುವೆ ಮಂಟಪಕ್ಕೆ ಆಗಮಿಸಿದ್ದಾನೆ. ದೆಹಲಿ ಚಲೋಗೆ ಬೆಂಬಲ ನೀಡಲು ಟ್ರ್ಯಾಕ್ಟರ್ ಏರಿದ್ದಾಗಿ ತಿಳಿಸಿದ್ದಾನೆ.

ಟ್ರ್ಯಾಕ್ಟರ್​ನಲ್ಲಿ ಮದುವೆ ಸಭಾಂಗಣಕ್ಕೆ ಬಂದಿಳಿದ ಮದುಮಗ

ಮದುಮಗನಿಂದ ರೈತರಿಗೆ ಬೆಂಬಲ

Published On - 3:53 pm, Fri, 4 December 20

Follow Us
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ