AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

434 ಕೋಟಿ ರೂ.ಗಳ ನಕಲಿ GST ಸರಕು ರಸೀದಿ ಹಗರಣ ಬಯಲಿಗೆ

ನಾಗಪುರ್‌: ಹರಿಯೋ ನದಿಗೆ ಸಾವಿರ ದಾರಿ ಅಂತಾರೆ ಹಾಗೇನೆ ಕಳ್ಳತನ ಮಾಡಬೇಕು ಅನ್ನೋರಿಗೂ ಕೂಡಾ ಸಾವಿರಾರು ದಾರಿ ಅಂತಾ ಕಾಣುತ್ತೆ. ಯಾಕಂದ್ರೆ ಕಳ್ಳತನದಲ್ಲಿ ತೆರಿಗೆ ತಪ್ಪಿಸೋಕ್ಕಂತಾನೆ ಜಿಎಸ್‌ಟಿ ಅನ್ನೋ ಏಕ ಮುಖ ಟ್ಯಾಕ್ಸ್‌ ಸಿಸ್ಟಮ್‌ ಅನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಆದ್ರೂ ಕೆಲವರು ಸರ್ಕಾರಕ್ಕೆ ಟೊಪಿ ಹಾಕಲು ಹೊಸ ಹೊಸ ಮಾರ್ಗ ಹುಡುಕುತ್ತಲೇ ಇದ್ದಾರೆ. ಆದ್ರೆ ಜಿಎಸ್‌ಟಿ ಇಂಟಲಿಜೆನ್ಸ್‌ ವಿಭಾಗ ಈಗ ಇಂಥ ಕಳ್ಳಮಾರ್ಗವೊಂದನ್ನು ಬಯಲು ಮಾಡಿದೆ. ನಾಗಪುರ ವಿಭಾಗದ ಜಿಎಸ್‌ಟಿ ಅಧಿಕಾರಿಗಳು ದೇಶದಲ್ಲಿ ಸುಳ್ಳು […]

434 ಕೋಟಿ ರೂ.ಗಳ ನಕಲಿ GST ಸರಕು ರಸೀದಿ ಹಗರಣ ಬಯಲಿಗೆ
Guru
|

Updated on: Aug 20, 2020 | 9:43 PM

Share

ನಾಗಪುರ್‌: ಹರಿಯೋ ನದಿಗೆ ಸಾವಿರ ದಾರಿ ಅಂತಾರೆ ಹಾಗೇನೆ ಕಳ್ಳತನ ಮಾಡಬೇಕು ಅನ್ನೋರಿಗೂ ಕೂಡಾ ಸಾವಿರಾರು ದಾರಿ ಅಂತಾ ಕಾಣುತ್ತೆ. ಯಾಕಂದ್ರೆ ಕಳ್ಳತನದಲ್ಲಿ ತೆರಿಗೆ ತಪ್ಪಿಸೋಕ್ಕಂತಾನೆ ಜಿಎಸ್‌ಟಿ ಅನ್ನೋ ಏಕ ಮುಖ ಟ್ಯಾಕ್ಸ್‌ ಸಿಸ್ಟಮ್‌ ಅನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಆದ್ರೂ ಕೆಲವರು ಸರ್ಕಾರಕ್ಕೆ ಟೊಪಿ ಹಾಕಲು ಹೊಸ ಹೊಸ ಮಾರ್ಗ ಹುಡುಕುತ್ತಲೇ ಇದ್ದಾರೆ. ಆದ್ರೆ ಜಿಎಸ್‌ಟಿ ಇಂಟಲಿಜೆನ್ಸ್‌ ವಿಭಾಗ ಈಗ ಇಂಥ ಕಳ್ಳಮಾರ್ಗವೊಂದನ್ನು ಬಯಲು ಮಾಡಿದೆ.

ನಾಗಪುರ ವಿಭಾಗದ ಜಿಎಸ್‌ಟಿ ಅಧಿಕಾರಿಗಳು ದೇಶದಲ್ಲಿ ಸುಳ್ಳು ಬಿಸಿನೆಸ್‌ ವ್ಯವಹಾರದ 434 ಕೋಟಿ ರೂ.ಗಳ ಹಗರಣವೊಂದನ್ನು ಪತ್ತೆ ಹಚ್ಚಿದ್ದಾರೆ. ಈ ಹಗರಣ ತಮಿಳುನಾಡಿನಿಂದ ಹಿಡಿದು ದೆಹಲಿ ವರೆಗೆ ಹಬ್ಬಿದ್ದು, ಸುಮಾರು 23 ಕಂಪನಿಗಳು ಇದರಲ್ಲಿ ಭಾಗಿಯಾಗಿವೆ ಎಂದು ಜಿಎಸ್‌ಟಿ ಇಂಟಲಿಜೆನ್ಸ್‌ ವಿಭಾಗ ಹೇಳಿದೆ.

ಈ ಹಗರಣದಲ್ಲಿ ಯಾವುದೇ ವ್ಯವಹಾರಿಕ ವಹಿವಾಟು ಆಗದಿದ್ದರೂ, ಕೇವಲ ದಾಖಲೆಯಲ್ಲಿ ವ್ಯವಹಾರ ಆಗಿದೆಯೆಂಬ ಸರಕು ರಸೀದಿಗಳನ್ನು ಸೃಷ್ಟಿಸಲಾಗುತ್ತೆ. ಹೀಗೆ ನಕಲಿ ವ್ಯವಹಾರದ ಸರಕು ರಸೀದಿಗಳನ್ನು ಸೃಷ್ಟಿಸಿ ಆ ರಸೀದಿಗಳಿಂದ ವಾಮ ಮಾರ್ಗವಾಗಿ ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ ಅನ್ನು ಪಡೆಯಲಾಗುತ್ತೆ. ಅಷ್ಟೇ ಅಲ್ಲ ಈ ರಸೀದಿಗಳ ಆಧಾರದಲ್ಲಿಯೇ ಜಿಎಸ್‌ಟಿ ರಜಿಸ್ಟರ್‌ ನಂಬರ್‌ ಅನ್ನು ಪಡೆಯಲಾಗುತ್ತಿತ್ತು ಎಂದು ತಿಳಿದು ಬಂದಿದೆ.

ಹೀಗೆ ನಕಲಿ ದಾಖಲೆ ಸೃಷ್ಟಿಸಿ ನೀಡಿದ ಸರಕು ರಸೀದಿ ವ್ಯವಹಾರದಲ್ಲಿ ಸುಮಾರು 434 ಕೋಟಿ ರೂ.ಗಳ ವಹಿವಾಟು ನಡೆದಿದೆಯೆಂದು ಜಿಎಸ್‌ಟಿ ಅಧಿಕಾರಿಗಳು ಹೇಳಿದ್ದಾರೆ. ಹೀಗೆ ಪಡೆದ ನಕಲಿ ರಸೀದಿಗಳಿಂದ ಟ್ಯಾಕ್ಸ್‌ ಕಳ್ಳರು ಸುಮಾರು 78.13 ಕೋಟಿ ರೂ.ಗಳ ತೆರಿಗೆ ಲಾಭವನ್ನು ವಾಮಮಾರ್ಗವಾಗಿ ಪಡೆದಿದ್ದಾರೆ.

ಈ ರಸೀದಿ ಹಗರಣ ಬಹುತೇಕ ಕಬ್ಬಿಣ, ವೈರ್‌, ಸ್ಟೀಲ್‌, ಪ್ಲಾಸ್ಟಿಕ್‌ ಉತ್ಪನ್ನಗಳ ಹೆಸರಿನಲ್ಲಿ ನಡೆದಿದೆ. ದೆಹಲಿ, ಸೋನಾಪೇಟ್‌, ಜಲಂದರ್‌ ಹಾಗೂ ನಾಗಪುರಗಳಲ್ಲಿ ನಡೆಸಿದ ದಾಳಿಯಲ್ಲಿ ಈ ಹಗರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಲು ತನಿಖೆ ನಡೆಸುತ್ತಿದ್ದಾರೆ.

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ