ಭಾರತದೊಂದಿಗೆ ರಾಜತಾಂತ್ರಿಕ ವಿವಾದ: ಜಿ20 ಸಂಸತ್ ಸ್ಪೀಕರ್‌ಗಳ ಶೃಂಗಸಭೆಯಲ್ಲಿ ಭಾಗವಹಿಸಲ್ಲ ಕೆನಡಾ

G20 Parliament Speakers' Summit: P20 ಶೃಂಗಸಭೆಯು ಅಕ್ಟೋಬರ್ 13-14 ರಂದು ನವದೆಹಲಿಯ ಯಶೋಭೂಮಿಯಲ್ಲಿರುವ ಇಂಡಿಯಾ ಇಂಟರ್ನ್ಯಾಷನಲ್ ಕನ್ವೆನ್ಷನ್ ಮತ್ತು ಎಕ್ಸ್ಪೋ ಸೆಂಟರ್ನಲ್ಲಿ ನಡೆಯಲಿದೆ. ಭಾರತದ ಸಂಸತ್  G20 ಪ್ರೆಸಿಡೆನ್ಸಿಯ ವಿಶಾಲ ಚೌಕಟ್ಟಿನ ಅಡಿಯಲ್ಲಿ ಶೃಂಗಸಭೆಯನ್ನು ಆಯೋಜಿಸುತ್ತಿದೆ.

ಭಾರತದೊಂದಿಗೆ ರಾಜತಾಂತ್ರಿಕ ವಿವಾದ: ಜಿ20 ಸಂಸತ್ ಸ್ಪೀಕರ್‌ಗಳ ಶೃಂಗಸಭೆಯಲ್ಲಿ ಭಾಗವಹಿಸಲ್ಲ ಕೆನಡಾ
ಜಿ20 ಸಂಸತ್ ಸ್ಪೀಕರ್‌ಗಳ ಶೃಂಗಸಭೆ

Updated on: Oct 12, 2023 | 7:23 PM

ದೆಹಲಿ ಅಕ್ಟೋಬರ್ 12: ಜಿ20 ರಾಷ್ಟ್ರಗಳ ಸಂಸತ್ ಸ್ಪೀಕರ್​​ಗಳ ಶೃಂಗಸಭೆಯಿಂದ (G20 Parliament Speakers’ Summit) ಹೊರಗುಳಿಯಲು ಕೆನಡಾದ ಸೆನೆಟ್‌ನ ಸ್ಪೀಕರ್ ನಿರ್ಧರಿಸಿದ್ದಾರೆ. ಜೂನ್‌ನಲ್ಲಿ ಸರ್ರೆಯಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ (Hardeep Singh Nijjar) ಹತ್ಯೆಗೆ ಭಾರತ ಸರ್ಕಾರದ ಏಜೆಂಟರ “ಸಂಭಾವ್ಯ ಲಿಂಕ್” ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ (Justin Trudeau) ಆರೋಪಿಸಿದ ನಂತರ ಭಾರತ ಮತ್ತು ಕೆನಡಾ ನಡುವಿನ ಸಂಬಂಧಗಳು ಹದಗೆಟ್ಟ ನಂತರ ಈ ಬೆಳವಣಿಗೆ ನೆಡೆದಿದೆ.

ಇಂದು (ಗುರುವಾರ) ಕೆನಡಾದ ಸೆನೆಟ್‌ನ ಸ್ಪೀಕರ್ ರೇಮಂಡೆ ಗಗ್ನೆ ಅವರು ಜಿ20 ರಾಷ್ಟ್ರಗಳ ಪಿ20 ಸಭೆಗೆ ಹಾಜರಾಗದಿರಲು ನಿರ್ಧರಿಸಿದ್ದಾರೆ. P20 ಸಭೆಯಲ್ಲಿ ಕೆನಡಾದಿಂದ ಯಾರೂ ಭಾಗವಹಿಸುವುದಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ದೃಢಪಡಿಸಿದೆ.
ನಾವು ಎಲ್ಲಾ ನಾಯಕರು ಮತ್ತು ಎಲ್ಲಾ ದೇಶಗಳನ್ನು ಭಾಗವಹಿಸಲು ಆಹ್ವಾನಿಸಿದ್ದೇವೆ. P20 ಶೃಂಗಸಭೆಗೆ ಹಾಜರಾಗಿರುವ ಬಗ್ಗೆ ಕೆನಡಾದವರಲ್ಲೇ ಕೇಳಲು ನಿಮ್ಮನ್ನು ವಿನಂತಿಸುತ್ತೇನೆ ಎಂದ ವಿದೇಶಾಂಗ ಸಚಿವಾಲಯ ಹೇಳಿದೆ.

P20 ಶೃಂಗಸಭೆಯು ಅಕ್ಟೋಬರ್ 13-14 ರಂದು ನವದೆಹಲಿಯ ಯಶೋಭೂಮಿಯಲ್ಲಿರುವ ಇಂಡಿಯಾ ಇಂಟರ್ನ್ಯಾಷನಲ್ ಕನ್ವೆನ್ಷನ್ ಮತ್ತು ಎಕ್ಸ್ಪೋ ಸೆಂಟರ್ನಲ್ಲಿ ನಡೆಯಲಿದೆ. ಭಾರತದ ಸಂಸತ್  G20 ಪ್ರೆಸಿಡೆನ್ಸಿಯ ವಿಶಾಲ ಚೌಕಟ್ಟಿನ ಅಡಿಯಲ್ಲಿ ಶೃಂಗಸಭೆಯನ್ನು ಆಯೋಜಿಸುತ್ತಿದೆ.

ಇದನ್ನೂ ಓದಿ: ಭಾರತದಲ್ಲಿ ಖಲಿಸ್ತಾನಿ ಭಯೋತ್ಪಾದಕರಿಗೆ ಆಶ್ರಯ ನೀಡಿರುವ ಆರೋಪ ಹೊತ್ತಿದ್ದ ಸಿಖ್ ವ್ಯಕ್ತಿಗೆ ಕೆನಡಾ ಬುಲಾವ್ 

ಭಾರತ-ಕೆನಡಾ ರಾಜತಾಂತ್ರಿಕ ಬಿಕ್ಕಟ್ಟು

ಕಳೆದ ತಿಂಗಳು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಗೆ ಭಾರತ ಸರ್ಕಾರದ ಏಜೆಂಟರು “ಸಂಭಾವ್ಯ ಸಂಬಂಧ” ಹೊಂದಿದ್ದಾರೆ ಎಂಬುದಕ್ಕೆ ಕೆನಡಾದ ಭದ್ರತಾ ಏಜೆನ್ಸಿಗಳು “ವಿಶ್ವಾಸಾರ್ಹ ಪುರಾವೆಗಳು” ಎಂದು ಆರೋಪಿಸಿದ ನಂತರ ಉಭಯ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಗಲಾಟೆ ಪ್ರಾರಂಭವಾಯಿತು.

ಜೂನ್‌ನಲ್ಲಿ ಸರ್ರೆಯಲ್ಲಿ ಇಬ್ಬರು ಅಪರಿಚಿತ ದುಷ್ಕರ್ಮಿಗಳಿಂದ ಗುರುದ್ವಾರದ ಹೊರಗೆ ಗುಂಡಿಕ್ಕಿ ಕೊಲ್ಲಲ್ಪಟ್ಟ ಹರ್ದೀಪ್ ಸಿಂಗ್ ನಿಜ್ಜಾರ್, ಖಲಿಸ್ತಾನ್ ಟೈಗರ್ ಫೋರ್ಸ್ (ಕೆಟಿಎಫ್) ಮುಖ್ಯಸ್ಥನಾಗಿದ್ದ. ಭಾರತ  ಕೆನಡಾ ಆರೋಪಗಳನ್ನು ನಿರಾಕರಿಸಿದ್ದು ಅದೆಲ್ಲ “ಅಸಂಬದ್ಧ” ಮತ್ತು “ಪ್ರಚೋದಿತ” ಎಂದು ಹೇಳಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ