Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವ ನಾಯಕರೊಂದಿಗಿನ ಸಭೆಗಳಲ್ಲಿ ಕೆನಡಾ-ಭಾರತ ವಿವಾದ ಬಗ್ಗೆ ಮಾತನಾಡಿದ ಜಸ್ಟಿನ್ ಟ್ರುಡೊ

Justin Trudeau: ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಮತ್ತು ಜೋರ್ಡಾನ್ ಕಿಂಗ್ ಕಿಂಗ್ ಅಬ್ದುಲ್ಲಾ II ಬಿನ್ ಅಲ್-ಹುಸೇನ್ ಅವರೊಂದಿಗಿನ ಸಭೆಗಳಲ್ಲಿ ಟ್ರುಡೊ ಅವರು ತಮ್ಮ ಯುಕೆ ಪ್ರಧಾನಿ ರಿಷಿ ಸುನಕ್ ಅವರನ್ನು ಭೇಟಿಯಾದ ಒಂದು ದಿನದ ನಂತರ ಭಾನುವಾರದಂದು ಭಾರತದೊಂದಿಗಿನ ವಿವಾದವನ್ನು ಚರ್ಚಿಸಿದರು. 10, ಡೌನಿಂಗ್ ಸ್ಟ್ರೀಟ್‌ನ ಹೇಳಿಕೆಯ ಪ್ರಕಾರ, ಭಾರತದೊಂದಿಗಿನ ವಿವಾದನ್ನು ಸಭೆಯಲ್ಲಿ ಪ್ರಸ್ತಾಪಿಸಲಾಯಿತು.

ವಿಶ್ವ ನಾಯಕರೊಂದಿಗಿನ ಸಭೆಗಳಲ್ಲಿ ಕೆನಡಾ-ಭಾರತ ವಿವಾದ ಬಗ್ಗೆ ಮಾತನಾಡಿದ ಜಸ್ಟಿನ್ ಟ್ರುಡೊ
ಜಸ್ಟಿನ್ ಟ್ರುಡೊ
Follow us
ರಶ್ಮಿ ಕಲ್ಲಕಟ್ಟ
|

Updated on: Oct 10, 2023 | 7:44 PM

ದೆಹಲಿ ಅಕ್ಟೋಬರ್ 10: ಖಲಿಸ್ತಾನಿ (Khalistani) ಉಗ್ರ ಹರ್ದೀಪ್ ಸಿಂಗ್ ನಿಜ್ಜಾರ್ (Hardeep Singh Nijjar) ಹತ್ಯೆಗೆ ಸಂಬಂಧಿಸಿದಂತೆ ಭಾರತದೊಂದಿಗೆ ರಾಜತಾಂತ್ರಿಕ ಬಿಕ್ಕಟ್ಟನ್ನು ಕಡಿಮೆ ಮಾಡಲು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ(Justin Trudeau) ಅವರಿಗೆ ಮನಸ್ಸಿಲ್ಲ ಎಂದು ತೋರುತ್ತದೆ. ಯಾಕೆಂದರೆ ಟ್ರುಡೊ ವಾರಾಂತ್ಯದಲ್ಲಿ ಅನೇಕ ವಿಶ್ವ ನಾಯಕರೊಂದಿಗಿನ ಸಭೆಗಳಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ

ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಮತ್ತು ಜೋರ್ಡಾನ್ ಕಿಂಗ್ ಕಿಂಗ್ ಅಬ್ದುಲ್ಲಾ II ಬಿನ್ ಅಲ್-ಹುಸೇನ್ ಅವರೊಂದಿಗಿನ ಸಭೆಗಳಲ್ಲಿ ಟ್ರುಡೊ ಅವರು ತಮ್ಮ ಯುಕೆ ಪ್ರಧಾನಿ ರಿಷಿ ಸುನಕ್ ಅವರನ್ನು ಭೇಟಿಯಾದ ಒಂದು ದಿನದ ನಂತರ ಭಾನುವಾರದಂದು ಭಾರತದೊಂದಿಗಿನ ವಿವಾದವನ್ನು ಚರ್ಚಿಸಿದರು. 10, ಡೌನಿಂಗ್ ಸ್ಟ್ರೀಟ್‌ನ ಹೇಳಿಕೆಯ ಪ್ರಕಾರ, ಭಾರತದೊಂದಿಗಿನ ವಿವಾದನ್ನು ಸಭೆಯಲ್ಲಿ ಪ್ರಸ್ತಾಪಿಸಲಾಯಿತು.

ಸಭೆಗಳಲ್ಲಿ ಟ್ರುಡೊ ಹೇಳಿದ್ದೇನು?

ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಕೆನಡಾ ಮತ್ತು ಭಾರತದ ನಡುವಿನ ಪರಿಸ್ಥಿತಿಯ ಬೆಳವಣಿಗೆಗಳನ್ನು ಹೇಳಿದ್ದಾರೆ. ಕಾನೂನಿನ ನಿಯಮ ಮತ್ತು ರಾಜತಾಂತ್ರಿಕ ಸಂಬಂಧಗಳ ವಿಯೆನ್ನಾ ಒಪ್ಪಂದವನ್ನು ಗೌರವಿಸುವ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು. ಟ್ರುಡೊ ಮತ್ತು ಕಿಂಗ್ ಅಬ್ದುಲ್ಲಾ II, ಕೆನಡಾ ಮತ್ತು ಜೋರ್ಡಾನ್ ನಡುವಿನ ನಿಕಟ ಸಂಬಂಧವನ್ನು ಒತ್ತಿಹೇಳಿದರು. ಪರಿಸ್ಥಿತಿ ವಿಕಸನಗೊಳ್ಳುತ್ತಿದ್ದಂತೆ ಸಂಪರ್ಕದಲ್ಲಿರಲು ಒಪ್ಪಿಕೊಂಡರು ಎಂದು ಟ್ರುಡೊ ಅವರ ಕಚೇರಿಯ ಹೇಳಿಕೆ ತಿಳಿಸಿದೆ.

ಯುಎಇ ಅಧ್ಯಕ್ಷರೊಂದಿಗಿನ ಟ್ರುಡೊ ಅವರ ಭೇಟಿಯ ಬಗ್ಗೆ ಇದೇ ರೀತಿಯ ಮಾಹಿತಿ ನೀಡಿದೆ. ಈ ವಾರದ ಆರಂಭದಲ್ಲಿ, ಅವರು ಸುನಕ್ ಅವರೊಂದಿಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದು, ಕೆನಡಾವು ಭಾರತೀಯ ನಗರಗಳಿಂದ ತನ್ನ ರಾಜತಾಂತ್ರಿಕರನ್ನು ಹೊರತೆಗೆದು ಮಲೇಷ್ಯಾ ಮತ್ತು ಸಿಂಗಾಪುರಕ್ಕೆ ಸ್ಥಳಾಂತರಿಸಿದ ನಂತರ ಭಾರತದೊಂದಿಗೆ ಗಲಭೆ ತಗ್ಗಿಸುವ ಪ್ರಾಮುಖ್ಯತೆಯನ್ನು ಚರ್ಚಿಸಿದರು.

ಭಾರತ-ಕೆನಡಾ ರಾಜತಾಂತ್ರಿಕ ಬಿಕ್ಕಟ್ಟು

ಭಾರತದ ರಾಜತಾಂತ್ರಿಕರಿಗೆ ಹಿಂಸಾಚಾರ ಮತ್ತು ಪ್ರಾಣ ಬೆದರಿಕೆಗಳನ್ನು ಪ್ರಚೋದಿಸುವ ಭಾರತ ವಿರೋಧಿ ಪ್ರಚಾರದಲ್ಲಿ ತೊಡಗಿರುವ ಖಲಿಸ್ತಾನಿ ಉಗ್ರಗಾಮಿಗಳ ಉಪಸ್ಥಿತಿಯ ಕುರಿತು ಭಾರತ ಮತ್ತು ಕೆನಡಾ ಜಗಳವಾಡುತ್ತಿವೆ. ಅಂತಹ ಅಂಶಗಳ ವಿರುದ್ಧ ಕಾರ್ಯನಿರ್ವಹಿಸಲು ಭಾರತವು ಒಟ್ಟಾವಾವನ್ನು ನಿರಂತರವಾಗಿ ಕೇಳಿಕೊಂಡಿದೆ ಆದರೆ ಟ್ರೂಡೊ ಆಡಳಿತವು ಖಲಿಸ್ತಾನಿ ಅಂಶಗಳ ವಿರುದ್ಧ ಯಾವುದೇ ನಿರ್ದಿಷ್ಟ ಕ್ರಮವನ್ನು ತೆಗೆದುಕೊಂಡಿಲ್ಲ.

ಇದನ್ನೂ ಓದಿ:  ರಾಜತಾಂತ್ರಿಕರನ್ನು ಭಾರತದಿಂದ ಸಿಂಗಾಪುರ, ಮಲೇಷ್ಯಾಕ್ಕೆ ಸ್ಥಳಾಂತರಿಸಿದ ಕೆನಡಾ: ವರದಿ

ಜೂನ್ 18 ರಂದು ಗುರುದ್ವಾರ ಪಾರ್ಕಿಂಗ್ ಸ್ಥಳದಲ್ಲಿ ಹರ್ದೀಪ್ ಸಿಂಗ್ ನಿಜ್ಜಾರ್ ಅವರನ್ನು ಗುಂಡಿಕ್ಕಿ ಹತ್ಯೆಗೈದ ಪ್ರಕರಣದಲ್ಲಿ ಭಾರತೀಯ ಸರ್ಕಾರದ ಏಜೆಂಟರು ಭಾಗಿಯಾಗಿದ್ದಾರೆ ಎಂದು ನಂಬಲು ನಂಬಲರ್ಹವಾದ ಪುರಾವೆಗಳಿವೆ ಎಂದು ಟ್ರುಡೊ ತನ್ನ ಸಂಸತ್ತಿನಲ್ಲಿ ಹೇಳಿಕೊಂಡ ನಂತರ ದೇಶಗಳ ನಡುವಿನ ಸಂಬಂಧಗಳು ಕಳೆದ ತಿಂಗಳು ಹದಗೆಟ್ಟಿವೆ. ಬ್ರಿಟಿಷ್ ಕೊಲಂಬಿಯಾದ ಸರ್ರೆ ನಗರದಲ್ಲಿ ಅಪರಿಚಿತ ಬಂದೂಕುಧಾರಿಗಳು ನಿಜ್ಜರ್‌ನನ್ನು ಗುಂಡಿಕ್ಕಿ ಕೊಂದರು. ಈ ವರ್ಷದ ಆರಂಭದಲ್ಲಿ ಆತನನ್ನು ಭಾರತ ವಾಂಟೆಡ್ ಭಯೋತ್ಪಾದಕ ಎಂದು ಘೋಷಿಸಿತ್ತು. ಕೆನಡಾದ ಪ್ರಧಾನ ಮಂತ್ರಿಯ ಆರೋಪಗಳನ್ನು ಭಾರತ “ಅಸಂಬದ್ಧ”ಎಂದು ತಳ್ಳಿ ಹಾಕಿದೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ