AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿಗ್ರಿ ಮುಗಿದು 2ವರ್ಷಗಳಾದರೂ ಸಿಗದ ಉದ್ಯೋಗ; ಕಾಲೇಜು ಸಮೀಪವೇ ಚಹಾ ಮಾರುತ್ತಿರುವ ಯುವತಿ

ಪ್ರಿಯಾಂಕಾ ಗುಪ್ತಾರ ಈ ಕ್ರಮಕ್ಕೆ ಅನೇಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇವರ ಫೋಟೋ ಸಖತ್ ವೈರಲ್ ಆಗುತ್ತಿದೆ. ಆದರೆ ಕೆಲವರು ಇದನ್ನೇ ಇಟ್ಟುಕೊಂಡು ಸರ್ಕಾರಗಳನ್ನು ದೂಷಿಸುತ್ತಿದ್ದಾರೆ.

ಡಿಗ್ರಿ ಮುಗಿದು 2ವರ್ಷಗಳಾದರೂ ಸಿಗದ ಉದ್ಯೋಗ; ಕಾಲೇಜು ಸಮೀಪವೇ ಚಹಾ ಮಾರುತ್ತಿರುವ ಯುವತಿ
ಚಹಾ ಅಂಗಡಿ ಇಟ್ಟ ಯುವತಿ
TV9 Web
| Updated By: Lakshmi Hegde|

Updated on:Apr 19, 2022 | 8:24 PM

Share

ಪಾಟ್ನಾ: ಚಾಯ್​ವಾಲಾಗಳು ತುಂಬ ಜನರಿದ್ದಾರೆ. ಆದರೆ ಚಾಯ್​ವಾಲಿಗಳ ಸಂಖ್ಯೆ ತುಸು ಕಡಿಮೆ. ಅದರಲ್ಲೂ ಪದವೀಧರರಾಗಿ ಟೀ ಅಂಗಡಿ ಇಡುವ ಹುಡುಗಿಯರ ಸಂಖ್ಯೆಯಂತೂ ಖಂಡಿತ ವಿರಳ. ಆದರೆ ಪ್ರಿಯಾಂಕಾ ಗುಪ್ತಾ ವಿಭಿನ್ನ ಮತ್ತು ಸದ್ಯದ ಮಟ್ಟಿಗೆ ಸುದ್ದಿಯಲ್ಲಿದ್ದಾರೆ. ಇವರು ಅರ್ಥಶಾಸ್ತ್ರದಲ್ಲಿ ಪದವೀಧರರು. 2019ರಲ್ಲಿ ತಮ್ಮ ಪದವಿ ಮುಗಿಸಿದ್ದಾರೆ. ಆದರೆ ಎರಡು ವರ್ಷಗಳಾದರೂ ಎಲ್ಲಿಯೂ ಉದ್ಯೋಗ ಸಿಗದೆ ಇದ್ದಾಗ, ಸ್ವಲ್ಪವೂ ಧೃತಿಗೆಡದೆ ಪಾಟ್ನಾದ ಮಹಿಳಾ ಕಾಲೇಜೊಂದರ ಸಮೀಪವೇ ಚಹಾ ಅಂಗಡಿ ತೆರೆದಿದ್ದಾರೆ. ಈ ಬಗ್ಗೆ ಎಎನ್​ಐ ಮಾಧ್ಯಮದ ಜತೆ ಮಾತನಾಡಿದ ಅವರು, ಎಂಬಿಎ ಚಾಯ್​ವಾಲಾ ಎಂದೇ ಖ್ಯಾತರಾದ ಪ್ರಫುಲ್​ ಬಿಲ್ಲೋರೆ  ಕತೆಯಿಂದ ಸ್ಫೂರ್ತಿಗೊಂಡು ನಾನೂ ಈ ಕೆಲಸಕ್ಕೆ ಕೈ ಹಾಕಿದೆ ಎಂದಿದ್ದಾರೆ. ((ಪ್ರಫುಲ್​ ಬಿಲ್ಲೋರೆ ಎಂಬುವರು ಅಹ್ಮದಾಬಾದ್​ನವರು. ಇವರು ತಮ್ಮ ಎಂಬಿಎ ಕೋರ್ಸ್​ಬಿಟ್ಟು 2017ರಲ್ಲಿ ಚಹಾ ವ್ಯಾಪಾರ ಶುರು ಮಾಡಿಕೊಂಡಿದ್ದರು. ಅವರೀಗ ವಾರ್ಷಿಕ 4 ಕೋಟಿ ರೂಪಾಯಿ ವಹಿವಾಟು ನಡೆಸುತ್ತಾರೆ).

ಪ್ರಿಯಾಂಕಾ ಗುಪ್ತಾಗೆ ಇನ್ನೂ 24ವರ್ಷ. ಆಕೆ ಮಹಿಳಾ ಕಾಲೇಜು ಬಳಿ ಚಹಾ ಮಾರಾಟ ಮಾಡುತ್ತಿರುವ ಹಲವು ಫೋಟೋಗಳೂ ವೈರಲ್ ಆಗಿವೆ. ಅದೆಷ್ಟೋ ಜನರು ಚಾಯ್​​ವಾಲಾಗಳಿದ್ದಾರೆ. ಹಾಗೇ, ಚಾಯ್​ವಾಲಿ ಯಾಕೆ ಇರಬಾರದು ಎಂದು ಪ್ರಶ್ನಿಸುವ ಪ್ರಿಯಾಂಕಾ ಗುಪ್ತಾ ತಮ್ಮ ಅಂಗಡಿಯಲ್ಲಿ ಕುಲ್ಹಾದ್​ ಟೀಯಿಂದ ಹಿಡಿದು ಪಾನ್​ ಚಾಯ್​​ವರೆಗೆ ವಿವಿಧ ರೀತಿಯ ಟೀ ತಯಾರಿಸುತ್ತಿದ್ದಾರೆ. ಹಾಗೇ, ಕೆಲವು ರೀತಿಯ ಬಿಸ್ಕಟ್​, ಕುಕ್ಕೀಸ್​ಗಳನ್ನೂ ಇಟ್ಟುಕೊಂಡಿದ್ದು, ಚಹಾ ಪ್ರಿಯರಿಗೆ ಇನ್ನಷ್ಟು ಅನುಕೂಲವಾಗಿದೆ. ಇಲ್ಲಿ  ಸಾಮಾನ್ಯ ಚಹಾ ಒಂದು ಕಪ್​​ಗೆ 15ರೂಪಾಯಿ ಆಗಿದ್ದರೆ, ಉಳಿದ ಟೀಗಳೆಲ್ಲ 20ರೂಪಾಯಿ. ಹಾಗೇ, ತನ್ನದು ಆತ್ಮ ನಿರ್ಭರ ಭಾರತ್​​ ಅಭಿಯಾನದೆಡೆಗಿನ ಉಪಕ್ರಮ ಎಂದೂ ರೇಟ್​ ಕಾರ್ಡ್​​ನಲ್ಲಿ ಬರೆದುಕೊಂಡಿದ್ದಾರೆ.

ಪ್ರಿಯಾಂಕಾ ಗುಪ್ತಾರ ಈ ಕ್ರಮಕ್ಕೆ ಅನೇಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇವರ ಫೋಟೋ ಸಖತ್ ವೈರಲ್ ಆಗುತ್ತಿದೆ. ಆದರೆ ಕೆಲವರು ಇದನ್ನೇ ಇಟ್ಟುಕೊಂಡು ಸರ್ಕಾರಗಳನ್ನು ದೂಷಿಸುತ್ತಿದ್ದಾರೆ. ಬಿಹಾರದಲ್ಲಿ ವಿದ್ಯಾವಂತರಿಗೆ ಉದ್ಯೋಗ ಸಿಗುತ್ತಿಲ್ಲ, ನಿರುದ್ಯೋಗ ಸಮಸ್ಯೆ ಇದೆ ಎಂಬುದಕ್ಕೆ ಇದೇ ಸಾಕ್ಷಿ ಎಂದೂ ಹೇಳುತ್ತಿದ್ದಾರೆ.  ಇನ್ನೂ ಕೆಲವರು, ಒಂದು ಚಹಾಕ್ಕೆ 15ರೂಪಾಯಿಯಾ ಎಂದು ಉದ್ಘಾರ ತೆಗೆದಿದ್ದಾರೆ.

ಇದನ್ನೂ ಓದಿ: ದೇಶದಲ್ಲಿ ತಾಂಡವಾಡುತ್ತಿರುವ ಭ್ರಷ್ಟಾಚಾರ ತಡೆಯುವ ಪ್ರಯತ್ನ ಪ್ರಧಾನಿ ಮೋದಿ ಯಾಕೆ ಮಾಡುತ್ತಿಲ್ಲ? ದಿಂಗಾಲೇಶ್ವರ ಸ್ವಾಮೀಜಿ

Published On - 7:44 pm, Tue, 19 April 22

ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!