AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Delhi Chalo ಪರಿಣಾಮ ದೆಹಲಿ ವಾಸ ದುಬಾರಿ: ಸರಕು ಸಾಗಾಣಿಕೆ ಸ್ಥಗಿತ, ಅಗತ್ಯ ವಸ್ತು ಪೂರೈಕೆ ಕಷ್ಟ ಕಷ್ಟ

ಪಂಜಾಬ್ ರೈತರ ಪ್ರತಿಭಟನೆಯಿಂದ ದೆಹಲಿ-ಹರಿಯಾಣ ಗಡಿ ಬಂದ್ ಆಗಿರುವುದರಿಂದ ಅಗತ್ಯ ಸರಕು ಸೇವಾ ಲಾರಿಗಳು 100ಕಿಮೀ ದೂರದ ಬದಲಿ ಮಾರ್ಗ ಬಳಸಿ ದೆಹಲಿ ತಲುಪುತ್ತಿವೆ. ಸಾಗಾಣಿಕಾ ವೆಚ್ಚದ ಹೆಚ್ಚಳದಿಂದ ಹಣ್ಣು ತರಕಾರಿಗಳ ಬೆಲೆ ಗಗನಕ್ಕೇರುವ ಸಂಭವವಿದೆ.

Delhi Chalo ಪರಿಣಾಮ ದೆಹಲಿ ವಾಸ ದುಬಾರಿ: ಸರಕು ಸಾಗಾಣಿಕೆ ಸ್ಥಗಿತ, ಅಗತ್ಯ ವಸ್ತು ಪೂರೈಕೆ ಕಷ್ಟ ಕಷ್ಟ
ದೆಹಲಿ ಚಲೋದಲ್ಲಿ ಭಾಗವಹಿಸಿರುವ ಪಂಜಾಬಿ ರೈತ
guruganesh bhat
|

Updated on:Dec 07, 2020 | 4:29 PM

Share

ದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಹಣ್ಣು ಮತ್ತು ತರಕಾರಿಗಳ ಬೆಲೆ ಗಗನಕ್ಕೇರುವ ಸಾಧ್ಯತೆ ದಟ್ಟವಾಗಿದೆ. ಪಂಜಾಬ್ ರೈತರ ಪ್ರತಿಭಟನೆಯಿಂದ ದೆಹಲಿ-ಹರಿಯಾಣ ಗಡಿ ಬಂದ್ ಆಗಿರುವುದರಿಂದ ಅಗತ್ಯ ಸರಕು ಸೇವಾ ಲಾರಿಗಳು 100 ಕಿಮೀ ದೂರದ ಬದಲಿ ಮಾರ್ಗ ಬಳಸಿ ದೆಹಲಿ ತಲುಪುತ್ತಿವೆ. ಒಂದು ಅಂದಾಜಿನ ಪ್ರಕಾರ ಶೇ 15ರಿಂದ 25ರಷ್ಟು ಸಾಗಾಣಿಕಾ ವೆಚ್ಚ ಹೆಚ್ಚಳವಾಗಿದೆ. ಹೀಗಾಗಿ, ಹಣ್ಣು ತರಕಾರಿ, ದಿನಸಿಗಳ ಬೆಲೆ ಹೆಚ್ಚಳವಾಗಲಿದೆ.

ನಾಳೆ ದೆಹಲಿಯಲ್ಲಿ ಚಲಿಸುವುದಿಲ್ಲ ಲಾರಿಗಳು ಆಲ್ ಇಂಡಿಯಾ ಮೋಟಾರ್ ಟ್ರಾನ್ಸ್​ಪೋರ್ಟ್ ಅಸೋಸಿಯೇಷನ್ ನಾಳೆಯ ಬಂದ್​ಗೆ ಬೆಂಬಲ ಘೋಷಿಸಿದೆ. ಅಲ್ಲದೇ, ನಾಳೆ ಯಾವುದೇ ಸರಕು ಸೇವಾ ಲಾರಿಗಳು ಕಾರ್ಯನಿರ್ವಹಿಸುವುದಿಲ್ಲ ಎಂದು ತಿಳಿಸಿದೆ.

ದೆಹಲಿಯ ಮಾರುಕಟ್ಟೆಗಳಿಗೆ ಅಗತ್ಯ ವಸ್ತುಗಳ ಪೂರೈಕೆ ಈಗಾಗಲೇ ಅರ್ಧಕ್ಕರ್ಧ ಕುಸಿದಿದೆ. 9-10 ಟನ್ ಸಾಮರ್ಥ್ಯದ ವಾಹನಗಳಲ್ಲಿ ಸರಕು ಸಾಗಾಣಿಕೆಯನ್ನು ಸ್ಥಗಿತಗೊಳಿಸಲಾಗಿದೆ. ನಷ್ಟ ತಗ್ಗಿಸುವ ದೃಷ್ಟಿಯಿಂದ ದ್ರಾಕ್ಷಿ ಮತ್ತು ಟೊಮ್ಯಾಟೋ ಖರೀದಿಯನ್ನು ತಗ್ಗಿಸುವಂತೆ ವ್ಯಾಪಾರಿಗಳಿಗೆ ಹಿಂದೆಯೇ ಸಲಹೆ ನೀಡಲಾಗಿತ್ತು.

ಸಾಗಾಣಿಕಾ ವಾಹನಗಳ ಲಭ್ಯತೆಯೂ ಕಡಿಮೆಯಾಗಿದೆ. ಪಂಜಾಬ್​ನಿಂದ ಆಮದಾಗಬೇಕಿದ್ದ ಆಲೂಗಡ್ಡೆ ಮತ್ತು ಅವರೆಕಾಳಿನ ಸರಬರಾಜಿನಲ್ಲೂ ಅರ್ಧಕ್ಕರ್ಧ ವ್ಯತ್ಯಯ ಉಂಟಾಗಿದೆ. ಒಟ್ಟಿನಲ್ಲಿ ರಾಷ್ಟ್ರ ರಾಜಧಾನಿಯ ವಾಸಿಗರು ದೆಹಲಿ ಚಲೋ ಮುಗಿಯುವವರೆಗೂ ದುಬಾರಿಯ ದಿನಗಳನ್ನು ಅನುಭವಿಸುವುದು ಖಚಿತ.

Delhi Chalo ರೈತರಿಗೆ ದಿಲ್ಜಿತ್ ದೊಸಾಂಜ್ ಸಹಾಯ: 1 ಕೋಟಿ ದಾನ ನೀಡಿದ್ರೂ ಪ್ರಚಾರ ಬಯಸದ ನಟ

Published On - 1:19 pm, Mon, 7 December 20

Follow Us
guruganesh bhat
guruganesh bhat
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​