AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

#Rafale Happy Landing ಅಂತೂ ಭಾರತಕ್ಕೆ ಬಂದೇ ಬಿಟ್ಟ ರಫೇಲ್​ ರಣಧೀರ!

ದೆಹಲಿ: ದೇಶದ ರಕ್ಷಣಾ ವ್ಯವಸ್ಥೆಗೆ ಮತ್ತಷ್ಟು ಬಲ ನೀಡುವ ಅತ್ಯಾಧುನಿಕ ರಫೇಲ್​ ಯುದ್ಧ ವಿಮಾನ ಭಾರತಕ್ಕೆ ಬಂದೇಬಟ್ಟಿತು. ಫ್ರಾನ್ಸ್​ನ ಮೆರಿಜ್ಞಾಕ್​ ವಾಯುನೆಲೆಯಿಂದ ಹೊರಟ ಮೊದಲ ಐದು ರಫೇಲ್​ ವಿಮಾನಗಳು UAE ದೇಶದ ಅಲ್​-ಧಫ್ರಾ ವಾಯುನೆಲೆಗೆ ಬಂದಿದ್ದವು. ಇದೀಗ ಅಲ್ಲಿಂದ ಟೇಕ್​ ಆಫ್​ ಆಗಿ ಭಾರತದ ಅಂಬಾಲಾ ವಾಯುನೆಲೆಗೆ ಬಂದಿಳಿದಿವೆ. ಎರಡು ಗಂಟೆಗೆ ಲ್ಯಾಂಡ್​ ಆಗಬೇಕಿದ್ದ ತಂಡ ಸ್ವಲ್ಪ ತಡವಾಗಿ ಆಗಮಿಸಿತು. ಆದರೆ, Late ಆಗಿ ಬಂದ್ರೂ Latest ಆಗಿ ಬಂದಿಳಿದರು! ವಾಯುಪಡೆ ಮುಖ್ಯಸ್ಥ RKS ಭದೌರಿಯರವರು ಖುದ್ದು […]

#Rafale Happy Landing ಅಂತೂ ಭಾರತಕ್ಕೆ ಬಂದೇ ಬಿಟ್ಟ ರಫೇಲ್​ ರಣಧೀರ!
KUSHAL V
| Edited By: |

Updated on:Jul 30, 2020 | 9:50 PM

Share

ದೆಹಲಿ: ದೇಶದ ರಕ್ಷಣಾ ವ್ಯವಸ್ಥೆಗೆ ಮತ್ತಷ್ಟು ಬಲ ನೀಡುವ ಅತ್ಯಾಧುನಿಕ ರಫೇಲ್​ ಯುದ್ಧ ವಿಮಾನ ಭಾರತಕ್ಕೆ ಬಂದೇಬಟ್ಟಿತು. ಫ್ರಾನ್ಸ್​ನ ಮೆರಿಜ್ಞಾಕ್​ ವಾಯುನೆಲೆಯಿಂದ ಹೊರಟ ಮೊದಲ ಐದು ರಫೇಲ್​ ವಿಮಾನಗಳು UAE ದೇಶದ ಅಲ್​-ಧಫ್ರಾ ವಾಯುನೆಲೆಗೆ ಬಂದಿದ್ದವು. ಇದೀಗ ಅಲ್ಲಿಂದ ಟೇಕ್​ ಆಫ್​ ಆಗಿ ಭಾರತದ ಅಂಬಾಲಾ ವಾಯುನೆಲೆಗೆ ಬಂದಿಳಿದಿವೆ. ಎರಡು ಗಂಟೆಗೆ ಲ್ಯಾಂಡ್​ ಆಗಬೇಕಿದ್ದ ತಂಡ ಸ್ವಲ್ಪ ತಡವಾಗಿ ಆಗಮಿಸಿತು. ಆದರೆ, Late ಆಗಿ ಬಂದ್ರೂ Latest ಆಗಿ ಬಂದಿಳಿದರು!

ವಾಯುಪಡೆ ಮುಖ್ಯಸ್ಥ RKS ಭದೌರಿಯರವರು ಖುದ್ದು ಅಂಬಾಲಾ ವಾಯುನೆಲೆಗೆ ಬಂದಿದ್ದು ಮೊದಲ ಐದು ವಿಮಾನಗಳ ತಂಡವನ್ನ ಬರಮಾಡಿಕೊಂಡರು. ಜೊತೆಗೆ, ಲ್ಯಾಂಡ್​ ಆದ ಐದೂ ರಣಧೀರರಿಗೆ ವಾಟರ್​ ಕ್ಯಾನನ್​ಗಳ ಮೂಲಕ ಗೌರವಾರ್ಥ ಸಲ್ಯೂಟ್​ ನೀಡಿ ವೆಲ್ಕಂ ಮಾಡಲಾಯಿತು.

ಇದಕ್ಕೂ ಮುಂಚೆ UAEನಿಂದ ಟೇಕ್​ ಆಫ್​ ಆದ ವಿಮಾನದ ತಂಡದ ಜೊತೆ INS ಕೋಲ್ಕತ್ತಾ ಮೊದಲು ಸಂಪರ್ಕ ಸಾಧಿಸಿತು.

ಆಧುನಿಕ ತಂತ್ರಜ್ಞಾನ ಹೊಂದಿರುವ ಫ್ರಾನ್ಸ್​ ಮೂಲದ ರಫೇಲ್​ ಯುದ್ಧ ವಿಮಾನ ವಿವಿಧ ಬಗೆಯ ಕ್ಷಿಪಣಿ ಮತ್ತು ಶಸ್ತ್ರಾಸ್ತ್ರಗಳನ್ನ ಹೊತ್ತೊಯ್ಯಬಲ್ಲ ಸಾಮರ್ಥ್ಯವನ್ನ ಹೊಂದಿದೆ. ಕಳೆದ ಕೆಲವು ವರ್ಷಗಳಿಂದ ರಫೇಲ್ ವಿಮಾನ ಖರೀದಿ ಒಪ್ಪಂದವು ಭಾರಿ ವಿವಾದಕ್ಕೆ ಒಳಗೊಂಡಿತ್ತು. ಯುದ್ಧ ವಿಮಾನದ ಖರೀದಿಯ ಮೊತ್ತ ಹಾಗೂ ಅದರ ನಿರ್ಮಾಣ ಸಂಬಂಧಿಸಿ ರಾಜಕೀಯ ಪಕ್ಷಗಳ ನಡುವೆ ಸಾಕಷ್ಟು ಚರ್ಚೆ ಕೂಡ ಆಗಿತ್ತು.

ಜೊತೆಗೆ, ಇದರ ಖರೀದಿಯ ಪ್ರಕರಣವು ಸುಪ್ರೀಮ್​ ಕೋರ್ಟ್​ ಮೆಟ್ಟೆಲೇರಿತು. ಈ ನಡುವೆ ಮಾಜಿ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಅವರಿಗ ಈ ಸಂಬಂಧದಲ್ಲಿ ಕೋರ್ಟ್​ ಛೀಮಾರಿ ಸಹ ಹಾಕಿತ್ತು.

ಅಂತಿಮವಾಗಿ, ರಫೇಲ್​ ಖರೀದಿಗೆ ಗ್ರೀನ್​ ಸಿಗ್ನಲ್​ ದೊರೆತು ಇದೀಗ ಮೊದಲು ಐದು ವಿಮಾನಗಳು ಭಾರತಕ್ಕೆ ಬಂದಿಳಿದದೆ. ಗಡಿಯಲ್ಲಿ ಕಾಲ್ಕೆರೆದು ಜಗಳಕ್ಕೆ ಸಜ್ಜಾಗಿರುವ ಚೀನಾ ಮತ್ತು ಪಾಕಿಸ್ತಾನವನ್ನ ಬಗ್ಗುಬಡೆಡಿಯಲು ಬಂದೇ ಬಿಟ್ಟ ನಮ್ಮ ಈ ಅಗ್ನಿ ಜ್ವಾಲೆ.

Published On - 3:20 pm, Wed, 29 July 20

Follow Us
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ