Gaganyaan: ಅಕ್ಟೋಬರ್ 21ಕ್ಕೆ ಗಗನಯಾನ ಮಿಷನ್‌ ಸಿಬ್ಬಂದಿ ಮಾಡ್ಯೂಲ್‌ನ ಮೊದಲ ಹಾರಾಟ ಪರೀಕ್ಷೆ: ಇಸ್ರೋ

ಸಿಬ್ಬಂದಿ ಎಸ್ಕೇಪ್​​ ಸಿಸ್ಟಂ​​ನ ಕಾರ್ಯಕ್ಷಮತೆಯನ್ನು ಪರೀಕ್ಷೆ ಮಾಡಲು ಅಕ್ಟೋಬರ್​​ 21ರಂದು ಶ್ರೀಹರಿಕೋಟಾ ಬಾಹ್ಯಾಕಾಶ ಕೇಂದ್ರದಿಂದ ಬೆಳಿಗ್ಗೆ 7ರಿಂದ 9ವರೆಗೆ ಪರೀಕ್ಷಾ ವಾಹಕದ ಉಡಾವಣೆ ಮಾಡುವ ಮೂಲಕ ಗಗನ್​​ಯಾನ ಮಾನವ ರಹಿತ ಹಾರಾಟ ಪರೀಕ್ಷೆಯನ್ನು ನಡೆಸಲಿದೆ ಎಂದು ಇಸ್ರೋ ಹೇಳಿದೆ. ಗಗನ್​​ಯಾನ್​​​ ಮಿಷನ್​​​​ನ ಹಾರಾಟಕ್ಕೂ ಮುನ್ನ ಟಿವಿ-ಡಿ 1 ಪರೀಕ್ಷಾ ಹಾರಾಟ ನಡೆಸಲಿದೆ.

Gaganyaan: ಅಕ್ಟೋಬರ್ 21ಕ್ಕೆ ಗಗನಯಾನ ಮಿಷನ್‌ ಸಿಬ್ಬಂದಿ ಮಾಡ್ಯೂಲ್‌ನ ಮೊದಲ ಹಾರಾಟ ಪರೀಕ್ಷೆ: ಇಸ್ರೋ
ಸಾಂದರ್ಭಿಕ ಚಿತ್ರ

Updated on: Oct 17, 2023 | 10:48 AM

ಇಸ್ರೋದ ಕನಸಿನ ಕೂಸು ಆಗಿರುವ ಗಗನ್​​ಯಾನ್ (Gaganyaan) ​​​ ಮಿಷನ್ ಹಾರಟಕ್ಕೆ ಸಕಲ ಸಿದ್ಧತೆಗಳನ್ನು ಇಸ್ರೋ ನಡೆಸಿದೆ. ಅನೇಕ ಪರೀಕ್ಷೆಗಳನ್ನು ಭಾರತೀಯ ವಿಜ್ಞಾನ ಸಂಸ್ಥೆ ಇಸ್ರೋ ಮಾಡುತ್ತಿದೆ. ಇದೀಗ ಗಗನ್​​ಯಾನ್ ಮಿಷನ್​​ ಪರೀಕ್ಷೆಯ ಮುಂದುವರಿದ ಭಾಗವಾಗಿ  ಸಿಬ್ಬಂದಿ ಎಸ್ಕೇಪ್​​ ಸಿಸ್ಟಂ​​ನ ಕಾರ್ಯಕ್ಷಮತೆಯನ್ನು ಪರೀಕ್ಷೆ ಮಾಡಲು ಅಕ್ಟೋಬರ್​​ 21ರಂದು ಶ್ರೀಹರಿಕೋಟಾ ಬಾಹ್ಯಾಕಾಶ ಕೇಂದ್ರದಿಂದ ಬೆಳಿಗ್ಗೆ 7ರಿಂದ 9ವರೆಗೆ ಪರೀಕ್ಷಾ ವಾಹಕದ ಉಡಾವಣೆ ಮಾಡುವ ಮೂಲಕ ಗಗನ್​​ಯಾನ ಮಾನವ ರಹಿತ ಹಾರಾಟ ಪರೀಕ್ಷೆಯನ್ನು ನಡೆಸಲಿದೆ ಎಂದು ಇಸ್ರೋ ಹೇಳಿದೆ. ಈ ಬಗ್ಗೆ ಇಸ್ರೋ ಎಕ್ಸ್​​​ನಲ್ಲಿ (ಈ ಹಿಂದಿನ ಟ್ವಿಟರ್​​) ಹಂಚಿಕೊಂಡಿದೆ. ಶ್ರೀಹರಿಕೋಟಾದಲ್ಲಿ ಗಗನ್​​ಯಾನ್​​​ ಮಿಷನ್​​​​ನ ಹಾರಾಟಕ್ಕೂ ಮುನ್ನ ಟಿವಿ-ಡಿ 1 ಪರೀಕ್ಷಾ ಹಾರಾಟ ಅಕ್ಟೋಬರ್​​ 21, 2023 ಬೆಳಿಗ್ಗೆ 7ರಿಂದ 9ವರೆಗೆ ಶ್ರೀಹರಿಕೋಟಾ ಬಾಹ್ಯಾಕಾಶ ಕೇಂದ್ರದಲ್ಲಿ ನಡೆಯಲಿದೆ ಎಂದು ಎಕ್ಸ್​​​ನಲ್ಲಿ ಹಂಚಿಕೊಂಡಿದ್ದಾರೆ.

ಅಕ್ಟೋಬರ್ 21ರಂದು ಟಿವಿ-ಡಿ 1 ಪರೀಕ್ಷಾ ಹಾರಾಟದ ನಂತರ ಗಗನ್‌ಯಾನ್ ಕಾರ್ಯಕ್ರಮದಡಿಯಲ್ಲಿ ಇನ್ನೂ ಮೂರು ಪರೀಕ್ಷಾ ವಾಹನ ಕಾರ್ಯಾಚರಣೆಗಳನ್ನು ಪ್ರಾರಂಭಿಸಲಾಗುವುದು ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಶನಿವಾರ ಸುದ್ದಿಗಾರರಿಗೆ ತಿಳಿಸಿದರು. ಇನ್ನು ಗಗನ್​​ಯಾನದಲ್ಲಿ 400 ಕಿ.ಮೀವರೆಗೆ ಮಾನವರನ್ನು ಕಳುಹಿಸಲಾಗುವುದು ಅಲ್ಲಿಂದ ಅವರನ್ನು ಸುರಕ್ಷಿತವಾಗಿ ಗಗನ್​​ಯಾನ ಮಿಷನ್​​ನಿಂದ ಸಮುದ್ರ ಇರುವ ಪ್ರದೇಶದಲ್ಲಿ ಇಳಿಸಲಾಗುವುದು ಎಂದು ಹೇಳಿದೆ.

ಇದನ್ನೂ ಓದಿ: 2024ರಲ್ಲಿ ಮಾನವ ಸಹಿತ ಬಾಹ್ಯಾಕಾಶ ಯಾತ್ರೆ ‘ಗಗನಯಾನ್’; ಕೇಂದ್ರ

ಈ ಟೆಸ್ಟ್ ವೆಹಿಕಲ್ ಡೆವಲಪ್‌ಮೆಂಟ್ ಫ್ಲೈಟ್ (TV-D1) (ಪರೀಕ್ಷಾ ವಾಹನ ಅಭಿವೃದ್ಧಿ ವಿಮಾನ) ಗಗನ​​​ಯಾನ ಸಮಯದಲ್ಲಿ ಭಾರತೀಯ ಗಗನಯಾತ್ರಿಗಳನ್ನು ಹೊತ್ತೊಯ್ಯುವ ಸಿಬ್ಬಂದಿ ಮಾಡ್ಯೂಲ್ (CM)ನ್ನು ಪರೀಕ್ಷಿಸುವ ಪ್ರಮುಖ ಹಂತವಾಗಿರುತ್ತದೆ ಎಂದು ಇಸ್ರೋ ಹೇಳಿದೆ. TV-D1 ಪರೀಕ್ಷಾ ಹಾರಾಟವು ಮಾನವರಹಿತ ಸಿಬ್ಬಂದಿ ಮಾಡ್ಯೂಲ್​​ನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಸಹಾಯ ಮಾಡುತ್ತದೆ. ಜತೆಗೆ ಮತ್ತೆ ಮರಳಿ ಭೂಮಿಗೆ ತರಲು ಹಾಗೂ ಈಗಾಗಲೇ ನಿಗದಿಪಡಿಸಿರುವಂತೆ ಬಂಗಾಳ ಕೊಲ್ಲಿಯಲ್ಲಿ ಇವುಗಳನ್ನು ಇಳಿಸುತ್ತದೆ ಎಂದು ಇಸ್ರೋ ಹೇಳಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Akshay Pallamajalu

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Follow Us