AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಪತ್ತೆಯಾಗಿದ್ದ ಬಾಲಕಿ 15 ವರ್ಷಗಳ ಬಳಿಕ ಪತ್ತೆಯಾಗಿದ್ದೇಗೆ?

ಹೈದರಾಬಾದ್: 15 ವರ್ಷಗಳ ಹಿಂದೆ ಕುಟುಂಬವನ್ನ ತೊರೆದಿದ್ದಳು. ನಾನೂ ಶಾಲೆಗೆ ಬರ್ತೀನಿ ಅಂತಾ ಅಣ್ಣನ ಬೆನ್ನುಹತ್ತಿ ಬಂದ ಆಕೆ ತನಗೇ ಅರಿವಿಲ್ಲದಂತೆ ದೂರದ ಊರು ಸೇರಿದ್ದಳು. ಹೀಗೆ ಸುಮಾರು ಒಂದೂವರೆ ದಶಕಗಳ ನಂತರ ಆಕೆಯ ಕನಸು ನನಸಾಗಿದೆ. ಆಕೆಗಾಗಿ ಕಾದು ಕುಳಿತಿದ್ದ ಕುಟುಂಬಕ್ಕೆ ಸಿಹಿ ಸುದ್ದಿ ಸಿಕ್ಕಿದೆ. ಶಾಲೆಗೆ ಹೋಗ್ತೀನಿ ಅಂತಾ ಅಣ್ಣನ ಬೆನ್ನತ್ತಿದ್ದಳು ಬಾಲೆ! ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ ಚೀಪುರಪಲ್ಲಿಯ ಯುವತಿ ಸುಮಾರು 15 ವರ್ಷಗಳ ಹಿಂದೆ ತನ್ನ ಅಣ್ಣ ಶಾಲೆಗೆ ಹೋಗುವಾಗ, ತಾನೂ ಸ್ಕೂಲಿಗೆ […]

ನಾಪತ್ತೆಯಾಗಿದ್ದ ಬಾಲಕಿ 15 ವರ್ಷಗಳ ಬಳಿಕ ಪತ್ತೆಯಾಗಿದ್ದೇಗೆ?
ಸಾಧು ಶ್ರೀನಾಥ್​
|

Updated on:Dec 08, 2019 | 1:40 PM

Share

ಹೈದರಾಬಾದ್: 15 ವರ್ಷಗಳ ಹಿಂದೆ ಕುಟುಂಬವನ್ನ ತೊರೆದಿದ್ದಳು. ನಾನೂ ಶಾಲೆಗೆ ಬರ್ತೀನಿ ಅಂತಾ ಅಣ್ಣನ ಬೆನ್ನುಹತ್ತಿ ಬಂದ ಆಕೆ ತನಗೇ ಅರಿವಿಲ್ಲದಂತೆ ದೂರದ ಊರು ಸೇರಿದ್ದಳು. ಹೀಗೆ ಸುಮಾರು ಒಂದೂವರೆ ದಶಕಗಳ ನಂತರ ಆಕೆಯ ಕನಸು ನನಸಾಗಿದೆ. ಆಕೆಗಾಗಿ ಕಾದು ಕುಳಿತಿದ್ದ ಕುಟುಂಬಕ್ಕೆ ಸಿಹಿ ಸುದ್ದಿ ಸಿಕ್ಕಿದೆ.

ಶಾಲೆಗೆ ಹೋಗ್ತೀನಿ ಅಂತಾ ಅಣ್ಣನ ಬೆನ್ನತ್ತಿದ್ದಳು ಬಾಲೆ! ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ ಚೀಪುರಪಲ್ಲಿಯ ಯುವತಿ ಸುಮಾರು 15 ವರ್ಷಗಳ ಹಿಂದೆ ತನ್ನ ಅಣ್ಣ ಶಾಲೆಗೆ ಹೋಗುವಾಗ, ತಾನೂ ಸ್ಕೂಲಿಗೆ ಹೋಗ್ತೀನಿ ಅಂತಾ ಬೆನ್ನತ್ತಿ ಹೋಗಿದ್ದಳು. ಆದ್ರೆ ದುರಾದೃಷ್ಟವಶಾತ್ ಅಲ್ಲಿ ನಡೆದಿದ್ದೇ ಬೇರೆ. ತನ್ನ ಹಿಂದೆ ಬರುತ್ತಿದ್ದ ತಂಗಿಗೆ, ಶಾಲೆಯಲ್ಲಿ ಸೇರಿಸಿಕೊಳ್ಳೋದಿಲ್ಲ ಅಂತಾ ಹೇಳಿದ್ದ ಅಣ್ಣ ಮನೆಗೆ ಹೋಗಲು ಹೇಳಿದ್ದ.

ಆಗ ಸುಮಾರು 3 ವರ್ಷದವಳಾಗಿದ್ದ ಈ ಭವಾನಿ ಮನೆಗೆ ಹಿಂತಿರುಗಲೇ ಇಲ್ಲ. ಕಡೆಗೆ ಹೈದರಾಬಾದ್​ಗೆ ತಲುಪಿದ್ದ ಬಾಲಕಿಯನ್ನ, ಜಡಿ ಮಳೆಯಲ್ಲಿ ಅಲ್ಲಿನ ಸ್ಥಳೀಯರೊಬ್ಬರು ರಕ್ಷಿಸಿದ್ದರು. ಆದ್ರೆ ಆಕೆಯ ಬಾಳಲ್ಲಿ ಕೆಲ ತಿಂಗಳ ಹಿಂದೆ ಬಹುದೊಡ್ಡ ತಿರುವೊಂದು ಸಿಕ್ಕಿತ್ತು.

ಮನೆಗೆಲಸಕ್ಕೆ ಸೇರಿದಾಗ ಸತ್ಯ ರಿವೀಲ್! ಕೆಲ ತಿಂಗಳ ಹಿಂದೆ ವಿಜಯವಾಡದಲ್ಲಿ ಕೆಲಸಕ್ಕೆ ಸೇರಿದ್ದ ಯುವತಿಗೆ ಮನೆ ಮಾಲೀಕ ಐಡಿ ಕಾರ್ಡ್ ತರಲು ಕೇಳಿದ್ದರು. ಯುವತಿ ಅಪ್ರಾಪ್ತಳಾಗಿದ್ದರೆ ತೊಂದರೆ ಎಂಬ ಕಾರಣಕ್ಕೆ, ಐಡಿ ಕಾರ್ಡ್ ಕೇಳಿದ್ದರಂತೆ. ಈ ವೇಳೆ ಯುವತಿ ತನ್ನ ಬಾಳಲ್ಲಿ ನಡೆದಿದ್ದ ಘಟನೆಯನ್ನ ಬಿಡಿಸಿಟ್ಟಿದ್ದಾಳೆ. ವಿಷಯ ತಿಳಿದ ಮನೆ ಮಾಲೀಕ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಜಾಲಾಡಿದ್ದಾರೆ.

ಕಡೆಗೆ ಯುವತಿಯ ಅಣ್ಣನ ಸಂಪರ್ಕ ಸಿಕ್ಕಿದ್ದು, ಕಡೆಗೂ ಭವಾನಿ ಕುಟುಂಬ ಸೇರಿದ್ದಾಳೆ. ಒಟ್ನಲ್ಲಿ ದಾರಿ ಗೊತ್ತಾಗದೆ ಮನೆಯವರಿಂದ ದೂರವಾಗಿದ್ದ ಯುವತಿ, ಕಡೆಗೂ 15 ವರ್ಷಗಳ ನಂತರ ತನ್ನ ಕುಟುಂಬ ಸೇರಿದ್ದಾಳೆ. ಊರಿನ ಮಗಳು ಮರಳಿದ್ದಕ್ಕೆ ಗ್ರಾಮದ ಜನರು ಖುಷ್ ಆಗಿದ್ದು, ಆಂಧ್ರ-ತೆಲಂಗಾಣದಲ್ಲಿ ಈ ಘಟನೆ ಸಾಕಷ್ಟು ಸದ್ದು ಮಾಡ್ತಿದೆ.

Published On - 1:40 pm, Sun, 8 December 19

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More
ಐಪಿಎಲ್‌ನಲ್ಲಿ ಇತಿಹಾಸ ನಿರ್ಮಿಸಿದ ಸಾಯಿ ಸುದರ್ಶನ್
ಐಪಿಎಲ್‌ನಲ್ಲಿ ಇತಿಹಾಸ ನಿರ್ಮಿಸಿದ ಸಾಯಿ ಸುದರ್ಶನ್
ಓಡಿಹೋಗುತ್ತಾಳೆಂದು ಹೆಂಡತಿಯನ್ನು ಕಟ್ಟಿಹಾಕಿದ ಗಂಡ!
ಓಡಿಹೋಗುತ್ತಾಳೆಂದು ಹೆಂಡತಿಯನ್ನು ಕಟ್ಟಿಹಾಕಿದ ಗಂಡ!
ಬುಡಸಮೇತ ರಸ್ತೆ ಮೇಲೆ ಉರುಳಿಬಿದ್ದ ಬೃಹತ್​ ಮರ: ಶಂಕರಮಠ ರಸ್ತೆ ಬಂದ್!
ಬುಡಸಮೇತ ರಸ್ತೆ ಮೇಲೆ ಉರುಳಿಬಿದ್ದ ಬೃಹತ್​ ಮರ: ಶಂಕರಮಠ ರಸ್ತೆ ಬಂದ್!
ಶುಭ್​ಮನ್ ಗಿಲ್ ಸುನಾಮಿಗೆ ಸೃಷ್ಟಿಯಾದ ದಾಖಲೆಗಳಿವು
ಶುಭ್​ಮನ್ ಗಿಲ್ ಸುನಾಮಿಗೆ ಸೃಷ್ಟಿಯಾದ ದಾಖಲೆಗಳಿವು
ಬೆಂಗಳೂರಿನಲ್ಲಿ ಆಲಿಕಲ್ಲು ಮಳೆ ಆರ್ಭಟ: ಹತ್ತಾರು ಅವಾಂತರ; ಮರಗಳು ಧರೆಗೆ!
ಬೆಂಗಳೂರಿನಲ್ಲಿ ಆಲಿಕಲ್ಲು ಮಳೆ ಆರ್ಭಟ: ಹತ್ತಾರು ಅವಾಂತರ; ಮರಗಳು ಧರೆಗೆ!
‘ಡ್ರ್ಯಾಗನ್’ ಟೀಸರ್: ಚಿತ್ರಮಂದಿರದಲ್ಲಿ ಸಂಭ್ರಮಿಸಿದ ಪ್ರಶಾಂತ್ ನೀಲ್ ಪತ್ನಿ
‘ಡ್ರ್ಯಾಗನ್’ ಟೀಸರ್: ಚಿತ್ರಮಂದಿರದಲ್ಲಿ ಸಂಭ್ರಮಿಸಿದ ಪ್ರಶಾಂತ್ ನೀಲ್ ಪತ್ನಿ
‘ಧುರಂಧರ್’ ಸಿನಿಮಾಕ್ಕೆ ಎದುರಾಗಿರುವ ಕಾನೂನು ಸಂಕಷ್ಟ ಏನು: ವಿಡಿಯೋ
‘ಧುರಂಧರ್’ ಸಿನಿಮಾಕ್ಕೆ ಎದುರಾಗಿರುವ ಕಾನೂನು ಸಂಕಷ್ಟ ಏನು: ವಿಡಿಯೋ
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ