AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಪತ್ತೆಯಾಗಿದ್ದ ಬಾಲಕಿ 15 ವರ್ಷಗಳ ಬಳಿಕ ಪತ್ತೆಯಾಗಿದ್ದೇಗೆ?

ಹೈದರಾಬಾದ್: 15 ವರ್ಷಗಳ ಹಿಂದೆ ಕುಟುಂಬವನ್ನ ತೊರೆದಿದ್ದಳು. ನಾನೂ ಶಾಲೆಗೆ ಬರ್ತೀನಿ ಅಂತಾ ಅಣ್ಣನ ಬೆನ್ನುಹತ್ತಿ ಬಂದ ಆಕೆ ತನಗೇ ಅರಿವಿಲ್ಲದಂತೆ ದೂರದ ಊರು ಸೇರಿದ್ದಳು. ಹೀಗೆ ಸುಮಾರು ಒಂದೂವರೆ ದಶಕಗಳ ನಂತರ ಆಕೆಯ ಕನಸು ನನಸಾಗಿದೆ. ಆಕೆಗಾಗಿ ಕಾದು ಕುಳಿತಿದ್ದ ಕುಟುಂಬಕ್ಕೆ ಸಿಹಿ ಸುದ್ದಿ ಸಿಕ್ಕಿದೆ. ಶಾಲೆಗೆ ಹೋಗ್ತೀನಿ ಅಂತಾ ಅಣ್ಣನ ಬೆನ್ನತ್ತಿದ್ದಳು ಬಾಲೆ! ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ ಚೀಪುರಪಲ್ಲಿಯ ಯುವತಿ ಸುಮಾರು 15 ವರ್ಷಗಳ ಹಿಂದೆ ತನ್ನ ಅಣ್ಣ ಶಾಲೆಗೆ ಹೋಗುವಾಗ, ತಾನೂ ಸ್ಕೂಲಿಗೆ […]

ನಾಪತ್ತೆಯಾಗಿದ್ದ ಬಾಲಕಿ 15 ವರ್ಷಗಳ ಬಳಿಕ ಪತ್ತೆಯಾಗಿದ್ದೇಗೆ?
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Dec 08, 2019 | 1:40 PM

Share

ಹೈದರಾಬಾದ್: 15 ವರ್ಷಗಳ ಹಿಂದೆ ಕುಟುಂಬವನ್ನ ತೊರೆದಿದ್ದಳು. ನಾನೂ ಶಾಲೆಗೆ ಬರ್ತೀನಿ ಅಂತಾ ಅಣ್ಣನ ಬೆನ್ನುಹತ್ತಿ ಬಂದ ಆಕೆ ತನಗೇ ಅರಿವಿಲ್ಲದಂತೆ ದೂರದ ಊರು ಸೇರಿದ್ದಳು. ಹೀಗೆ ಸುಮಾರು ಒಂದೂವರೆ ದಶಕಗಳ ನಂತರ ಆಕೆಯ ಕನಸು ನನಸಾಗಿದೆ. ಆಕೆಗಾಗಿ ಕಾದು ಕುಳಿತಿದ್ದ ಕುಟುಂಬಕ್ಕೆ ಸಿಹಿ ಸುದ್ದಿ ಸಿಕ್ಕಿದೆ.

ಶಾಲೆಗೆ ಹೋಗ್ತೀನಿ ಅಂತಾ ಅಣ್ಣನ ಬೆನ್ನತ್ತಿದ್ದಳು ಬಾಲೆ! ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ ಚೀಪುರಪಲ್ಲಿಯ ಯುವತಿ ಸುಮಾರು 15 ವರ್ಷಗಳ ಹಿಂದೆ ತನ್ನ ಅಣ್ಣ ಶಾಲೆಗೆ ಹೋಗುವಾಗ, ತಾನೂ ಸ್ಕೂಲಿಗೆ ಹೋಗ್ತೀನಿ ಅಂತಾ ಬೆನ್ನತ್ತಿ ಹೋಗಿದ್ದಳು. ಆದ್ರೆ ದುರಾದೃಷ್ಟವಶಾತ್ ಅಲ್ಲಿ ನಡೆದಿದ್ದೇ ಬೇರೆ. ತನ್ನ ಹಿಂದೆ ಬರುತ್ತಿದ್ದ ತಂಗಿಗೆ, ಶಾಲೆಯಲ್ಲಿ ಸೇರಿಸಿಕೊಳ್ಳೋದಿಲ್ಲ ಅಂತಾ ಹೇಳಿದ್ದ ಅಣ್ಣ ಮನೆಗೆ ಹೋಗಲು ಹೇಳಿದ್ದ.

ಆಗ ಸುಮಾರು 3 ವರ್ಷದವಳಾಗಿದ್ದ ಈ ಭವಾನಿ ಮನೆಗೆ ಹಿಂತಿರುಗಲೇ ಇಲ್ಲ. ಕಡೆಗೆ ಹೈದರಾಬಾದ್​ಗೆ ತಲುಪಿದ್ದ ಬಾಲಕಿಯನ್ನ, ಜಡಿ ಮಳೆಯಲ್ಲಿ ಅಲ್ಲಿನ ಸ್ಥಳೀಯರೊಬ್ಬರು ರಕ್ಷಿಸಿದ್ದರು. ಆದ್ರೆ ಆಕೆಯ ಬಾಳಲ್ಲಿ ಕೆಲ ತಿಂಗಳ ಹಿಂದೆ ಬಹುದೊಡ್ಡ ತಿರುವೊಂದು ಸಿಕ್ಕಿತ್ತು.

ಮನೆಗೆಲಸಕ್ಕೆ ಸೇರಿದಾಗ ಸತ್ಯ ರಿವೀಲ್! ಕೆಲ ತಿಂಗಳ ಹಿಂದೆ ವಿಜಯವಾಡದಲ್ಲಿ ಕೆಲಸಕ್ಕೆ ಸೇರಿದ್ದ ಯುವತಿಗೆ ಮನೆ ಮಾಲೀಕ ಐಡಿ ಕಾರ್ಡ್ ತರಲು ಕೇಳಿದ್ದರು. ಯುವತಿ ಅಪ್ರಾಪ್ತಳಾಗಿದ್ದರೆ ತೊಂದರೆ ಎಂಬ ಕಾರಣಕ್ಕೆ, ಐಡಿ ಕಾರ್ಡ್ ಕೇಳಿದ್ದರಂತೆ. ಈ ವೇಳೆ ಯುವತಿ ತನ್ನ ಬಾಳಲ್ಲಿ ನಡೆದಿದ್ದ ಘಟನೆಯನ್ನ ಬಿಡಿಸಿಟ್ಟಿದ್ದಾಳೆ. ವಿಷಯ ತಿಳಿದ ಮನೆ ಮಾಲೀಕ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಜಾಲಾಡಿದ್ದಾರೆ.

ಕಡೆಗೆ ಯುವತಿಯ ಅಣ್ಣನ ಸಂಪರ್ಕ ಸಿಕ್ಕಿದ್ದು, ಕಡೆಗೂ ಭವಾನಿ ಕುಟುಂಬ ಸೇರಿದ್ದಾಳೆ. ಒಟ್ನಲ್ಲಿ ದಾರಿ ಗೊತ್ತಾಗದೆ ಮನೆಯವರಿಂದ ದೂರವಾಗಿದ್ದ ಯುವತಿ, ಕಡೆಗೂ 15 ವರ್ಷಗಳ ನಂತರ ತನ್ನ ಕುಟುಂಬ ಸೇರಿದ್ದಾಳೆ. ಊರಿನ ಮಗಳು ಮರಳಿದ್ದಕ್ಕೆ ಗ್ರಾಮದ ಜನರು ಖುಷ್ ಆಗಿದ್ದು, ಆಂಧ್ರ-ತೆಲಂಗಾಣದಲ್ಲಿ ಈ ಘಟನೆ ಸಾಕಷ್ಟು ಸದ್ದು ಮಾಡ್ತಿದೆ.

Published On - 1:40 pm, Sun, 8 December 19

Follow Us
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ
ವಿಧಾನ ಪರಿಷತ್ ಕದನದಲ್ಲಿ ಜೆಡಿಎಸ್​ಗೆ ಡಬಲ್ ಟೆನ್ಷನ್!
ವಿಧಾನ ಪರಿಷತ್ ಕದನದಲ್ಲಿ ಜೆಡಿಎಸ್​ಗೆ ಡಬಲ್ ಟೆನ್ಷನ್!
ಕೆಆರ್​ಎಸ್ ಜಲಮಟ್ಟ 81 ಅಡಿಗೆ ಕುಸಿತ, ತಮಿಳುನಾಡಿಗೆ ನೀರು ಬಿಡುಗಡೆ ಸವಾಲು
ಕೆಆರ್​ಎಸ್ ಜಲಮಟ್ಟ 81 ಅಡಿಗೆ ಕುಸಿತ, ತಮಿಳುನಾಡಿಗೆ ನೀರು ಬಿಡುಗಡೆ ಸವಾಲು
ಒಮಾನ್​ನಲ್ಲಿ ಟ್ಯಾಂಕರ್ ದಾಳಿ, ಅಮೆರಿಕ ರಾಜತಾಂತ್ರಿಕರಿಗೆ ಭಾರತ ಸಮನ್ಸ್
ಒಮಾನ್​ನಲ್ಲಿ ಟ್ಯಾಂಕರ್ ದಾಳಿ, ಅಮೆರಿಕ ರಾಜತಾಂತ್ರಿಕರಿಗೆ ಭಾರತ ಸಮನ್ಸ್
ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು ಇನ್ನು ಈ ಎಲ್ಲ ದಾಖಲೆ ಕಡ್ಡಾಯ
ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು ಇನ್ನು ಈ ಎಲ್ಲ ದಾಖಲೆ ಕಡ್ಡಾಯ
ಬ್ಯಾಂಕ್​ಗೆ ಬೀಗ ಹಾಕಿ ರಾತ್ರಿಯಿಡೀ ಗ್ರಾಹಕರ ಪ್ರತಿಭಟನೆ!
ಬ್ಯಾಂಕ್​ಗೆ ಬೀಗ ಹಾಕಿ ರಾತ್ರಿಯಿಡೀ ಗ್ರಾಹಕರ ಪ್ರತಿಭಟನೆ!