AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Google ನಿಂದ ಭಾರತದಲ್ಲಿ ಮತ್ತೂ ಒಂದು ಬೃಹತ್​ ಹೂಡಿಕೆ, ಎಲ್ಲಿ?

ಭಾರತದಲ್ಲಿ ಬರೋಬ್ಬರಿ 75,000 ಸಾವಿರ ಕೋಟಿ ಹೂಡಲು ಮುಂದಾಗಿರುವ ಡಿಜಿಟಲ್​ ಲೋಕದ ದಿಗ್ಗಜ ಗೂಗಲ್ ಇದೀಗ ಮತ್ತೂ ಒಂದು ಬೃಹತ್​ ಹೂಡಿಕೆಗೆ ಮುಂದಾಗಿದೆ. ಹೌದು, ಉನ್ನತ ಮೂಲಗಳ ಪ್ರಕಾರ ಗೂಗಲ್ ಇದೀಗ ಮುಕೇಶ್​ ಅಂಬಾನಿ ಒಡೆತನದ ರಿಲಯನ್ಸ್​ ಡಿಜಿಟಲ್​ ಕಂಪನಿಯಲ್ಲಿ ಬರೋಬ್ಬರಿ 4 ಬಿಲಿಯನ್​ ಡಾಲರ್ ( 30,000 ಕೋ.ಟಿ ರೂ)​ ಹೂಡಿಕೆ ಮಾಡಲು ಮುಂದಾಗಿದೆ. ಆದರೆ, ಈ ಬಗ್ಗೆ ಗೂಗಲ್​ ಹಾಗೂ ರಿಲಯನ್ಸ್ ಸಂಸ್ಥೆ ಪ್ರತಿಕ್ರಿಯೆ ನೀಡಲು ನಿರಾಕರಿಸಿವೆ. ಆದ್ರೆ ಮೂಲಗಳ ಪ್ರಕಾರ ಉಭಯ ಕಂಪನಿಗಳೂ […]

Google ನಿಂದ ಭಾರತದಲ್ಲಿ ಮತ್ತೂ ಒಂದು ಬೃಹತ್​ ಹೂಡಿಕೆ, ಎಲ್ಲಿ?
ಪ್ರಾತಿನಿಧಿಕ ಚಿತ್ರ
KUSHAL V
|

Updated on:Jul 14, 2020 | 5:48 PM

Share

ಭಾರತದಲ್ಲಿ ಬರೋಬ್ಬರಿ 75,000 ಸಾವಿರ ಕೋಟಿ ಹೂಡಲು ಮುಂದಾಗಿರುವ ಡಿಜಿಟಲ್​ ಲೋಕದ ದಿಗ್ಗಜ ಗೂಗಲ್ ಇದೀಗ ಮತ್ತೂ ಒಂದು ಬೃಹತ್​ ಹೂಡಿಕೆಗೆ ಮುಂದಾಗಿದೆ.

ಹೌದು, ಉನ್ನತ ಮೂಲಗಳ ಪ್ರಕಾರ ಗೂಗಲ್ ಇದೀಗ ಮುಕೇಶ್​ ಅಂಬಾನಿ ಒಡೆತನದ ರಿಲಯನ್ಸ್​ ಡಿಜಿಟಲ್​ ಕಂಪನಿಯಲ್ಲಿ ಬರೋಬ್ಬರಿ 4 ಬಿಲಿಯನ್​ ಡಾಲರ್ ( 30,000 ಕೋ.ಟಿ ರೂ)​ ಹೂಡಿಕೆ ಮಾಡಲು ಮುಂದಾಗಿದೆ. ಆದರೆ, ಈ ಬಗ್ಗೆ ಗೂಗಲ್​ ಹಾಗೂ ರಿಲಯನ್ಸ್ ಸಂಸ್ಥೆ ಪ್ರತಿಕ್ರಿಯೆ ನೀಡಲು ನಿರಾಕರಿಸಿವೆ. ಆದ್ರೆ ಮೂಲಗಳ ಪ್ರಕಾರ ಉಭಯ ಕಂಪನಿಗಳೂ ಈ ಹೂಡಿಕೆ ವಿಚಾರವಾಗಿ ಬಹುತೇಕ ಕೊನೆಯ ಘಟ್ಟದಲ್ಲಿವೆ ಎಂದು ತಿಳಿಸಿದ್ದಾರೆ.

ಈಗಾಗಲೇ ಫೇಸ್​ಬುಕ್​ ಸೇರಿದಂತೆ ಇನ್ನೂ ಕೆಲ ವಿದೇಶಿ ಕಂಪನಿಗಳು ರಿಲಯನ್ಸ್ ಸಂಸ್ಥೆಯಲ್ಲಿ ಸರಿಸುಮಾರು 15.64 ಬಿಲಿಯನ್​ ಡಾಲರ್​ನಷ್ಟು ಹೂಡಿಕೆ ಮಾಡಿ ಪಾಲು ಪಡೆದಿವೆ. ಇದೀಗ ಡಿಜಿಟಲ್​ ದಿಗ್ಗಜ ಗೂಗಲ್​ ಸಹ ಹೂಡಿಕೆಗೆ ಮುಂದಾಗಿರೋದು ಎಲ್ಲರ ಕುತೂಹಲವನ್ನ ಮತ್ತಷ್ಟು ಕೆರಳಿಸಿದೆ. ಕೊರೊನಾ ಆರ್ಥಿಕ ಸಂಕಷ್ಟ ಕಾಲದಲ್ಲಿ ಇದು ಭಾರತ ಆರ್ಥಿಕತೆಗೆ ನೆರವಾಗಲಿದೆ ಎಂದು ಆಶಿಸಲಾಗಿದೆ.

ಭಾರತದಲ್ಲಿ ಒಟ್ಟು 1 ಲಕ್ಷ ಕೋಟಿ ರೂ ಹೂಡಿಕೆ, ಜೈ ಹೋ ಸುಂದರ್​ ಪಿಚೈ! ಅಂದ್ರೆ, ಕೊರೊನಾದಂತಹ ಸಂಕಷ್ಟ ಕಾಲದಲ್ಲಿ.. ನಿನ್ನೆಯ 75 ಸಾವಿರ ಕೋಟಿ ರೂ ಮತ್ತು ಈಗಿನ 30  ಸಾವಿರ ಕೋಟಿ ಅಂದ್ರೆ 1 ಲಕ್ಷ ಕೋಟಿ ರೂಪಾಯಿಯನ್ನು ಗೂಗಲ್ ಕಂಪನಿ ಭಾರತದಲ್ಲಿ ಹೂಡಿಕೆ ಮಾಡಲಿದೆ. ತನ್ಮೂಲಕ ಗೂಗಲ್ ಸಿಇಒ, ಚೆನ್ನೈ ಮೂಲದ ಸುಂದರ್ ಪಿಚೈ ದೇಶ ಪ್ರೇಮ ತೋರಿರುವುದು ಭಾರೀ ಪ್ರಶಂಸೆಗೆ ಗುರಿಯಾಗಿದೆ.

Published On - 5:33 pm, Tue, 14 July 20

Follow Us
ರೌಡಿಶೀಟರ್ ಬರ್ತ್‌ಡೇ ಪಾರ್ಟಿಯಲ್ಲಿ ಬಿಜೆಪಿ ಶಾಸಕ ಭಾಗಿ
ರೌಡಿಶೀಟರ್ ಬರ್ತ್‌ಡೇ ಪಾರ್ಟಿಯಲ್ಲಿ ಬಿಜೆಪಿ ಶಾಸಕ ಭಾಗಿ
ಲಿಂಗನಮಕ್ಕಿ ಡ್ಯಾಮ್ ಹಿನ್ನೀರು ಇಳಿಕೆ: ನಿಂತಿದ್ದ ಲಾಂಚ್ ಮತ್ತೆ ಶುರು
ಲಿಂಗನಮಕ್ಕಿ ಡ್ಯಾಮ್ ಹಿನ್ನೀರು ಇಳಿಕೆ: ನಿಂತಿದ್ದ ಲಾಂಚ್ ಮತ್ತೆ ಶುರು
ಪೈಪ್ ಲೈನ್ ಕಾಮಗಾರಿ: ಗುಂಡಿಗೆ ಸಿಲುಕಿದ BMTC ಬಸ್, ಸಂಚಾರಕ್ಕೆ ಅಡ್ಡಿ
ಪೈಪ್ ಲೈನ್ ಕಾಮಗಾರಿ: ಗುಂಡಿಗೆ ಸಿಲುಕಿದ BMTC ಬಸ್, ಸಂಚಾರಕ್ಕೆ ಅಡ್ಡಿ
ಒಮೈದಿಯಾ ಏರ್​ಪೋರ್ಟ್​ ಮೇಲೆ ಅಮೆರಿಕ ಬಾಂಬ್ ದಾಳಿ
ಒಮೈದಿಯಾ ಏರ್​ಪೋರ್ಟ್​ ಮೇಲೆ ಅಮೆರಿಕ ಬಾಂಬ್ ದಾಳಿ
Dudhsagar Falls: ಹಾಲಿನ ಕಡಲಿನಂತೆ ಹರಿಯುತ್ತಿದೆ ದೂದ್‌ ಸಾಗರ್​!
Dudhsagar Falls: ಹಾಲಿನ ಕಡಲಿನಂತೆ ಹರಿಯುತ್ತಿದೆ ದೂದ್‌ ಸಾಗರ್​!
ಸ್ಕೂಟಿಯಲ್ಲಿ ಗಾಂಜಾ ಮಾರಲು ಬಂದು ಪೊಲೀಸರ ಕೈಗೆ ಸಿಕ್ಕಿಬಿದ್ದ ಮಹಿಳೆ
ಸ್ಕೂಟಿಯಲ್ಲಿ ಗಾಂಜಾ ಮಾರಲು ಬಂದು ಪೊಲೀಸರ ಕೈಗೆ ಸಿಕ್ಕಿಬಿದ್ದ ಮಹಿಳೆ
ಮಿಥುನ ರಾಶಿಯಲ್ಲಿ ಸೂರ್ಯ, ಚಂದ್ರ ಸಂಚಾರ: ಇಂದಿನ ರಾಶಿ ಭವಿಷ್ಯ ಹೇಗಿದೆ ನೋಡಿ
ಮಿಥುನ ರಾಶಿಯಲ್ಲಿ ಸೂರ್ಯ, ಚಂದ್ರ ಸಂಚಾರ: ಇಂದಿನ ರಾಶಿ ಭವಿಷ್ಯ ಹೇಗಿದೆ ನೋಡಿ
ಎಸ್ ಜಾನಕಿ ಅವರೊಟ್ಟಿಗಿನ ಅನುಬಂಧ ನೆನೆದ ಹಿರಿಯ ನಟ ಶ್ರೀನಾಥ್
ಎಸ್ ಜಾನಕಿ ಅವರೊಟ್ಟಿಗಿನ ಅನುಬಂಧ ನೆನೆದ ಹಿರಿಯ ನಟ ಶ್ರೀನಾಥ್
ಬೆಳೆ ಹಾನಿ ಪರಿಹಾರದ ಬಗ್ಗೆ ಸರ್ಕಾರ ನಿರ್ಧಾರ ಮಾಡುತ್ತದೆ: ಸತೀಶ್ ಜಾರಕಿಹೊಳಿ
ಬೆಳೆ ಹಾನಿ ಪರಿಹಾರದ ಬಗ್ಗೆ ಸರ್ಕಾರ ನಿರ್ಧಾರ ಮಾಡುತ್ತದೆ: ಸತೀಶ್ ಜಾರಕಿಹೊಳಿ
ಹೊಳೆ ದಾಟೋಕೆ ದೊಣ್ಣೆ‌ನಾಯಕನ ಅಪ್ಪಣೆ ಬೇಕೆ: ಖರ್ಗೆಗೆ ಜೋಶಿ ತಿರುಗೇಟು
ಹೊಳೆ ದಾಟೋಕೆ ದೊಣ್ಣೆ‌ನಾಯಕನ ಅಪ್ಪಣೆ ಬೇಕೆ: ಖರ್ಗೆಗೆ ಜೋಶಿ ತಿರುಗೇಟು