AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಘರ್ಷ ಪೀಡಿತ ಖಾರ್ಟೂಮ್​​ನಲ್ಲಿರುವ ರಾಯಭಾರ ಕಚೇರಿಗೆ ಹೋಗಬೇಡಿ: ಸುಡಾನ್​​ನಲ್ಲಿರುವ ಭಾರತೀಯರಿಗೆ ಕೇಂದ್ರ ಸಲಹೆ

Sudan Conflict: ನಾವು ಭಾರತೀಯರಿಗೆ ಹೇಗೆ ಸುರಕ್ಷಿತವಾಗಿರಬೇಕು ಎಂಬುದರ ಬಗ್ಗೆ ಸಲಹೆ ನೀಡುತ್ತೇವೆ. ಇಲ್ಲಿನ ಪರಿಸ್ಥಿತಿ ಉಲ್ಬಣವಾಗಲೂ ಬಹುದು. ರಾಯಭಾರ ಕಚೇರಿ ಕಾರ್ಯನಿರ್ವಹಿಸುತ್ತಿದೆ. ಆದರೆ ಆ ವಲಯದಲ್ಲಿ ಸಾಕಷ್ಟು ಕಾದಾಟಗಳು ನಡೆದಿದ್ದರಿಂದ ಅಲ್ಲಿಗೆ ನೇರವಾಗಿ ಹೋಗದಂತೆ ನಾವು ಜನರಿಗೆ ಹೇಳಿದ್ದೇವೆ. ಜನರು ಅಲ್ಲಿ ವಾಸಿಸುತ್ತಿಲ್ಲ

ಸಂಘರ್ಷ ಪೀಡಿತ ಖಾರ್ಟೂಮ್​​ನಲ್ಲಿರುವ ರಾಯಭಾರ ಕಚೇರಿಗೆ ಹೋಗಬೇಡಿ: ಸುಡಾನ್​​ನಲ್ಲಿರುವ ಭಾರತೀಯರಿಗೆ ಕೇಂದ್ರ ಸಲಹೆ
ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ
ರಶ್ಮಿ ಕಲ್ಲಕಟ್ಟ
ರಶ್ಮಿ ಕಲ್ಲಕಟ್ಟ|

Updated on:Apr 20, 2023 | 6:53 PM

Share

ಮುಖ್ಯಾಂಶಗಳು

  • ರಾಯಭಾರ ಕಚೇರಿ ತೆರೆದಿದೆ ಮತ್ತು ಕಾರ್ಯನಿರ್ವಹಿಸುತ್ತಿದೆ.
  • ಕಟ್ಟಡವು ಖಾರ್ಟೂಮ್‌ನ ವಿಮಾನ ನಿಲ್ದಾಣದ ಬಳಿ ಇರುವುದರಿಂದ ಯಾವುದೇ ಸಿಬ್ಬಂದಿ ಅಲ್ಲಿ ವಾಸಿಸುತ್ತಿಲ್ಲ
  • ರಾಯಭಾರ ಕಚೇರಿಯೊಳಗೆ ಯಾರೂ ಇಲ್ಲ. ರಾಯಭಾರ ಕಚೇರಿಯಲ್ಲಿ ಕೆಲಸ ಮಾಡುವವರು ನಗರದ ಮನೆಗಳಲ್ಲಿ ವಾಸಿಸುತ್ತಿದ್ದಾರೆ

ದೆಹಲಿ: ಸುಡಾನ್‌ನ (Sudan) ಸೇನಾ ಮುಖ್ಯಸ್ಥ ಅಬ್ದೆಲ್ ಫತ್ತಾಹ್ ಅಲ್-ಬುರ್ಹಾನ್ ಮತ್ತು ಆತನ ಉಪ ಮುಖ್ಯಸ್ಥ ಮೊಹಮದ್ ಹಮ್ದಾನ್ ಡಗಾಲೊ ಅವರಿಗೆ ನಿಷ್ಠರಾಗಿರುವ ಅರೆಸೈನಿಕ ಕ್ಷಿಪ್ರ ಬೆಂಬಲ ಪಡೆಗಳ ನಡುವೆ ಕಾದಾಟ ನಡೆಯುತ್ತಿರುವ ದೇಶದ ರಾಜಧಾನಿ ಖಾರ್ಟೂಮ್‌ನಲ್ಲಿರುವ(Khartoum) ಭಾರತೀಯ ರಾಯಭಾರ ಕಚೇರಿಗೆ (Indian embassy )ಹೋಗದಂತೆ ಸುಡಾನ್‌ನಲ್ಲಿ ಸಿಲುಕಿರುವ ಭಾರತೀಯರಿಗೆ ಕೇಂದ್ರ ಸರ್ಕಾರ ಹೇಳಿದೆ. ರಾಯಭಾರ ಕಚೇರಿ ತೆರೆದಿದೆ ಮತ್ತು ಕಾರ್ಯನಿರ್ವಹಿಸುತ್ತಿದೆ, ಆದರೆ ಕಟ್ಟಡವು ಖಾರ್ಟೂಮ್‌ನ ವಿಮಾನ ನಿಲ್ದಾಣದ ಬಳಿ ಇರುವುದರಿಂದ ಯಾವುದೇ ಸಿಬ್ಬಂದಿ ಅಲ್ಲಿ ವಾಸಿಸುತ್ತಿಲ್ಲ. ಇದು ಸುಡಾನ್ ಸೇನೆ ಮತ್ತು ಆರ್‌ಎಸ್‌ಎಫ್ ನಡುವೆ ತೀವ್ರ ಯುದ್ಧಗಳನ್ನು ಕಂಡಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಇಂದು ಸುದ್ದಿಗಾರರಿಗೆ ತಿಳಿಸಿದರು.

ನಾವು ಭಾರತೀಯರಿಗೆ ಹೇಗೆ ಸುರಕ್ಷಿತವಾಗಿರಬೇಕು ಎಂಬುದರ ಬಗ್ಗೆ ಸಲಹೆ ನೀಡುತ್ತೇವೆ. ಅಲ್ಲಿನ ಪರಿಸ್ಥಿತಿ ಉಲ್ಬಣವಾಗಲೂ ಬಹುದು. ರಾಯಭಾರ ಕಚೇರಿ ಕಾರ್ಯನಿರ್ವಹಿಸುತ್ತಿದೆ. ಆದರೆ ಆ ವಲಯದಲ್ಲಿ ಸಾಕಷ್ಟು ಕಾದಾಟಗಳು ನಡೆದಿದ್ದರಿಂದ ಅಲ್ಲಿಗೆ ನೇರವಾಗಿ ಹೋಗದಂತೆ ನಾವು ಜನರಿಗೆ ಹೇಳಿದ್ದೇವೆ. ಜನರು ಅಲ್ಲಿ ವಾಸಿಸುತ್ತಿಲ್ಲ. ರಾಯಭಾರ ಕಚೇರಿಯೊಳಗೆ ಯಾರೂ ಇಲ್ಲ. ರಾಯಭಾರ ಕಚೇರಿಯಲ್ಲಿ ಕೆಲಸ ಮಾಡುವವರು ನಗರದ ಮನೆಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಬಾಗ್ಚಿ ಹೇಳಿದ್ದಾರೆ.

ಶನಿವಾರ ನಡೆದ ಕಾದಾಟದಲ್ಲಿ ಸುಮಾರು 300 ಜನರು ಸಾವನ್ನಪ್ಪಿದ್ದಾರೆ. ಐದು ಮಿಲಿಯನ್ ಜನರು ವಾಸಿಸುವ ಖಾರ್ಟೂಮ್‌ನಲ್ಲಿ ಕೆಲವು ಭೀಕರ ಯುದ್ಧಗಳು ನಡೆದಿವೆ. ಅವರಲ್ಲಿ ಹೆಚ್ಚಿನವರು ವಿದ್ಯುತ್, ಆಹಾರ ಮತ್ತು ನೀರು ಇಲ್ಲದೆ ತಮ್ಮ ಮನೆಗಳಲ್ಲಿ ಬಂಧಿಯತಾಗಿದ್ದಾರೆ ಸುದ್ದಿ ಸಂಸ್ಥೆ ಎಎಫ್ ಪಿ ವರದಿ ಮಾಡಿದೆ.

ಸುಡಾನ್​​ನಲ್ಲಿ ಎಷ್ಟು ಮಂದಿ ಇದ್ದಾರೆ ಎಂಬುದು ನಮಗೆ ಲೆಕ್ಕವಿದೆ. ಭದ್ರತಾ ಸಮಸ್ಯೆಯಿಂದಾಗಿ ಅಲ್ಲಿ ಎಷ್ಟು ಮಂದಿ ಇದ್ದಾರೆ, ಅವರು ಎಲ್ಲಿ ವಾಸಿಸುತ್ತಿದ್ದಾರೆ ಎಂಬುದನ್ನು ನಾವು ಬಹಿರಂಗ ಪಡಿಸಲು ಬಯಸುವುದಿಲ್ಲ. ಸಾಮಾಜಿಕ ಮಾಧ್ಯಮದಲ್ಲಿನ ಪೋಸ್ಟ್ ಗಳನ್ನು ನೋಡಿದ ನಂತರ ನಾವು ಕೆಲವು ಭಾರತೀಯರನ್ನು ಸಂಪರ್ಕಿಸಿದ್ದೇವೆ. ಅಲ್ಲಿನ ಪರಿಸ್ಥಿತಿ ಮೇಲೆ ನಾವು ನಿಗಾ ಇರಿಸಿದ್ದೇವೆ ಎಂದಿದ್ದಾರೆ ಬಾಗ್ಚಿ.

ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಅಧಿಕೃತ ಭೇಟಿಗಾಗಿ ದಕ್ಷಿಣ ಅಮೆರಿಕಕ್ಕೆ ತೆರಳಿದ್ದು, ಸುಡಾನ್ ಪರಿಸ್ಥಿತಿ ಬಗ್ಗೆ ಅಪ್ಡೇಟ್ ನೀಡುತ್ತಾರೆ ಎಂದು ವಕ್ತಾರರು ಹೇಳಿದ್ದಾರೆ.  ನಿನ್ನೆ ಕದನ ವಿರಾಮದ ನಂತರ ಸುಡಾನ್‌ನಲ್ಲಿ ಹಿಂಸಾಚಾರವು ಏಳನೇ ದಿನಕ್ಕೆ ಕಾಲಿಟ್ಟಿದೆ. ಇಲ್ಲಿ ಗುಂಡಿನ ಚಕಮಕಿಗಳು ಕೇಳಿಬಂದವು. ಸೇನೆಯಂತೆಯೇ ತನ್ನ ಪಡೆಗಳು ಬುಧವಾರ 24 ಗಂಟೆಗಳ ಕಾಲ ಸಂಪೂರ್ಣ ಕದನ ವಿರಾಮಕ್ಕೆ ಸಂಪೂರ್ಣವಾಗಿ ಬದ್ಧವಾಗಿರುತ್ತವೆ ಎಂದು ಆರ್‌ಎಸ್‌ಎಫ್ ಹೇಳಿತ್ತು.

ಇದನ್ನೂ ಓದಿಆರಾಧ್ಯ ಬಚ್ಚನ್ ಬಗ್ಗೆ ತಪ್ಪು ಮಾಹಿತಿ ಪ್ರಕಟಿಸಿದ ಯುಟ್ಯೂಬ್ ಚಾನೆಲ್​​​ಗೆ ನಿರ್ಬಂಧ; ವಿಡಿಯೊ ತೆಗೆದು ಹಾಕಲು ಗೂಗಲ್​​ಗೆ ನಿರ್ದೇಶಿಸಿದ ದೆಹಲಿ ಹೈಕೋರ್ಟ್

ಆದರೆ ಖಾರ್ಟೂಮ್‌ನಲ್ಲಿ ನಿಗದಿತ ಸಮಯದಿಂದ ಮತ್ತು ರಾತ್ರಿಯವರೆಗೆ ಗುಂಡಿನ ಚಕಮಕಿ ನಿಲ್ಲಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.ಹಲವು ದಿನಗಳಲ್ಲಿ ಎರಡನೇ ಬಾರಿಗೆ ಪ್ರಾರಂಭವಾದ ಕೆಲವೇ ನಿಮಿಷಗಳಲ್ಲಿ ಮತ್ತೊಂದು ಕದನ ವಿರಾಮವನ್ನು ಉಲ್ಲಂಘಿಸಲಾಗಿದೆ ಎಂದು ಎಎಫ್‌ಪಿ ವರದಿ ಮಾಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:06 pm, Thu, 20 April 23

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ