AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಿಳೆಯರು ನೋಡಲೇಬೇಕಾದ ವಿಡಿಯೋ ಇದು! ಅಬ್ಬಾ ಆ ಖದೀಮರಿಬ್ಬರು ಮಹಿಳೆಯ ಕೊರಳಿಂದ ಚಿನ್ನದ ಸರ ದೋಚಿದ್ದು ಹೇಗೆ ಗೊತ್ತಾ?

chain snatching: ಅಗಾಗಲೇ ಓಡಿಹೋಗಲು ಸಿದ್ಧವಿರುವ ವ್ಯಕ್ತಿಯ ಬೈಕ್‌ ಏರಿ ಇಬ್ಬರೂ ಅಲ್ಲಿಂದ ಪರಾರಿಯಾಗುತ್ತಾರೆ. ಇದರಿಂದ ಅಸಲಿಗೆ ನಡೆದಿದ್ದು ಏನು ಎಂಬುದೂ ಮಹಿಳೆಗೆ ತಕ್ಷಣಕ್ಕೆ ಗೊತ್ತಾಗದೆ, ದಿಗ್ಭ್ರಾಂತಿಗೆ ಗುರಿಯಾದರು.

ಮಹಿಳೆಯರು ನೋಡಲೇಬೇಕಾದ ವಿಡಿಯೋ ಇದು! ಅಬ್ಬಾ ಆ ಖದೀಮರಿಬ್ಬರು ಮಹಿಳೆಯ ಕೊರಳಿಂದ ಚಿನ್ನದ ಸರ ದೋಚಿದ್ದು ಹೇಗೆ ಗೊತ್ತಾ?
ಮಹಿಳೆಯರು ನೋಡಲೇಬೇಕಾದ ವಿಡಿಯೋ ಇಲ್ಲಿದೆ!
TV9 Web
| Edited By: ಸಾಧು ಶ್ರೀನಾಥ್​|

Updated on: Apr 20, 2023 | 6:14 PM

Share

ಪೊಲೀಸರು ಏನೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದರೂ ಕಳ್ಳರು ದಿನೇ ದಿನೆ ತಮ್ಮ ಕೈಚಳ ತೋರುವುದನ್ನು ಹೆಚ್ಚು ಮಾಡುತ್ತಿದ್ದಾರೆ. ಈ ಹಿಂದೆ ಬೆಳ್ಳಂಬೆಳಗ್ಗೆ ರಂಗೋಲಿ ಬಿಡಿಸುವಾಗ ಮಹಿಳೆಯರ (woman) ಕತ್ತಿಗೆ ಕೈಹಾಕಿ ಚಿನ್ನದ ಸರವನ್ನು ನಿರ್ಲಜ್ಜರಾಗಿ ಎಗರಿಸುತ್ತಿದ್ದರು. ಅತವಾ ರಾತ್ರಿ ವೇಳೆಗಳಲ್ಲಿ ನಿರ್ಜನ ಪ್ರದೇಶಗಳನ್ನು ಗುರುತು ಮಾಡಿಕೊಂಡು ದರೋಡೆ, ಕಳ್ಳತನಕ್ಕೆ ಇಳಿಯುತ್ತಿದ್ದರು. ಆದರೆ ಈಗ ಅದಕ್ಕೆ ಸಮಯ ಸಂದರ್ಭ ಅಂತೇನೂ ಇಲ್ಲ. ಯಾವಾಗಂದರೆ ಆವಾಗ, ಜನರ ಮಧ್ಯೆಯೇ ಸರ ಎಗರಿಸಿ, ಕ್ಷಣಾರ್ಧದಲ್ಲಿ ಪರಾರಿಯಾಗುತ್ತಿದ್ದಾರೆ. ಕೊರಳಲ್ಲಿ ಆಭರಣ ಧರಿಸಿದ ಮಹಿಳೆಯರು ಕಾಣಿಸಿಕೊಂಡರೆ ಸಾಕು ಕ್ಷಣಗಳಲ್ಲಿ ಅದನ್ನು ಎಳೆದುಕೊಂಡು ಹೋಗುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ನೆರೆಯ ಆಂದ್ರದಲ್ಲೂ ಚೈನ್‌ ಸ್ನಾಚರ್‌ಗಳು (chain snatching) ವಿಜೃಂಭಿಸತೊಡಗಿದ್ದಾರೆ. ಇತ್ತೀಚಿಗೆ ಇಂತಹದ್ದೇ ಒಂದು ಘಟನೆ ಆಂಧ್ರಪ್ರದೇಶದ ಅನಂಪುರದಲ್ಲಿ ನಡೆದಿದೆ (CCTV).

ವಿವರಗಳಲ್ಲಿ ಹೀಗಿವೆ… ಅನಂತಪುರ (anantapur) ನಗರದಲ್ಲಿ ಮಾರೆಕ್ಕ ಎಂಬ ಮಹಿಳೆಯೊಬ್ಬರು ಗುರುವಾರ ಬೆಳಗ್ಗೆ ಮನೆಯ ಮುಂದೆ ಪೊರಕೆ ಹಿಡಿದು ಮನೆ ಮುಂದೆ ಸ್ವಚ್ಛಗೊಳಿಸುತ್ತಿದ್ದರು. ಸರಿಯಾಗಿ ಅದೇ ಸಮಯದಲ್ಲಿ ಪಲ್ಸರ್ ಬೈಕ್‌ನಲ್ಲಿ ಇಬ್ಬರು ವ್ಯಕ್ತಿಗಳು ಬಂದು ಆ ಮನೆಯ ಮುಂದೆ ನಿಂತರು. ನಂತರ ಅವರಿಬ್ಬರಲ್ಲಿ ಒಬ್ಬ ಮಾರೆಕ್ಕ ಹತ್ತಿರ ಬಂದು ಯಾವುದೋ ಅಡ್ರಸ್‌ ಕೇಳುತ್ತಿರುವಂತೆ ನಟಿಸಿದನು.

Also Read:

Used Cot: ಹಾಸಿಗೆ ಇದ್ದಷ್ಟು ಕಾಲು ಚಾಚುವುದು ಬಿಟ್ಟು, ಮಾವ ಸೆಕೆಂಡ್​ ಹ್ಯಾಂಡ್ ಮಂಚ ಕೊಟ್ರು ಅಂತಾ ಕೊನೆ ಕ್ಷಣದಲ್ಲಿ ಮದುವೆಗೆ ನಿರಾಕರಿಸಿದ ವರ!

ಇದನ್ನು ನಿಜವೆ ಎಂದು ನಂಬಿದ ಮಹಿಳೆ ಆತನು ಕೇಳಿದ ವಿಳಾಸದ ಬಗ್ಗೆ ಮಾಹಿತಿ ನೀಡತೊಡಗಿದಳು. ಈ ಮಧ್ಯೆ ಆ ಕಡೆ ಈ ಕಡೆ ನೋಡಿದ ಕಳ್ಳರಿಬ್ಬರೂ ತಮ್ಮ ಗುರಿ ಸಾಧನೆಗಾಗಿ ಸಿದ್ಧವಾಗುತ್ತಾರೆ. ಒಬ್ಬ ಬೈಕನ್ನು ಸ್ಟಾರ್ಟ್​ ಮಾಡಿಟ್ಟುಕೊಂಡು ತಾನು ಸಾಗಬೇಕಾದ ದಿಕ್ಕಿನಲ್ಲಿ ತಿರುಗಿಸಿಟ್ಟುಕೊಂಡಿದ್ದರೆ ಮತ್ತೊಬ್ಬ ಸೀದಾ ಮಹಿಳೆಯ ಕುತ್ತಿಗೆಗೆ ಕೈಹಾಕಿ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗುತ್ತಾನೆ.

ಈಗಾಗಲೇ ಓಡಿಹೋಗಲು ಸಿದ್ಧವಿರುವ ವ್ಯಕ್ತಿಯ ಬೈಕ್‌ ಏರಿ ಇಬ್ಬರೂ ಅಲ್ಲಿಂದ ಪರಾರಿಯಾಗುತ್ತಾರೆ. ಇದು ಕೇವಲ ಕೆಲವೇ ಕ್ಷಣಗಳಲ್ಲಿಯೇ ನಡೆದಿದೆ. ಇದರಿಂದ ಅಸಲಿಗೆ ನಡೆದಿದ್ದು ಏನು ಎಂಬುದೂ ಮಹಿಳೆಗೆ ತಕ್ಷಣಕ್ಕೆ ಗೊತ್ತಾಗದೆ, ದಿಗ್ಭ್ರಾಂತಿಗೆ ಗುರಿಯಾದರು. ಸಾವರಿಸಿಕೊಂಡ ಮಹಿಳೆ ಅಲ್ಲಿದ್ದವರಿಗೆ ಏನಾಯಿತು ಎಂದು ಹೇಳುತ್ತಾಳೆ. ಆದರೆ ಆ ವೇಳೆಗೆ ದರೋಡೆಕೋರರಿಬ್ಬರೂ ನಾಪತ್ತೆಯಾಗಿರುತ್ತಾರೆ. ಇದೆಲ್ಲಾ ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್‌ ಆಗಿದೆ. ಇದರ ಫುಟೇಜ್‌ ಆಧಾರದ ಮೇಲೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ