Used Cot: ಹಾಸಿಗೆ ಇದ್ದಷ್ಟು ಕಾಲು ಚಾಚುವುದು ಬಿಟ್ಟು, ಮಾವ ಸೆಕೆಂಡ್​ ಹ್ಯಾಂಡ್ ಮಂಚ ಕೊಟ್ರು ಅಂತಾ ಕೊನೆ ಕ್ಷಣದಲ್ಲಿ ಮದುವೆಗೆ ನಿರಾಕರಿಸಿದ ವರ!

ಪ್ರತಿಯೊಬ್ಬರ ಜೀವನದಲ್ಲಿ ಮದುವೆ ಬಹಳ ಮುಖ್ಯ. ಮದುವೆಯನ್ನು ಸಾಧ್ಯವಾದಷ್ಟು ಅದ್ಧೂರಿಯಾಗಿ ತಮ್ಮ ಕೈಗೆಟುಕುವಂತೆ, ತಮ್ಮ ಅಂತಸ್ತಿಗೆ ಅನುಗುಣವಾಗಿ ಮದುವೆ ಮಾಡುತ್ತಾರೆ. ಆದರೆ... ಹಾಸಿಗೆ ಇದ್ದಷ್ಟು ಕಾಲು ಚಾಚುವುದು ಬಿಟ್ಟು ಮಾವ ಸೆಕೆಂಡ್​ ಹ್ಯಾಂಡ್ ಮಂಚ ಕೊಟ್ಟರು ಅಂತಾ ಕೊನೆ ಕ್ಷಣದಲ್ಲಿ ಮದುವೆಯಾಗಲು ನಿರಾಕರಿಸಿದ ವರ

Used Cot: ಹಾಸಿಗೆ ಇದ್ದಷ್ಟು ಕಾಲು ಚಾಚುವುದು ಬಿಟ್ಟು, ಮಾವ ಸೆಕೆಂಡ್​ ಹ್ಯಾಂಡ್ ಮಂಚ ಕೊಟ್ರು ಅಂತಾ ಕೊನೆ ಕ್ಷಣದಲ್ಲಿ ಮದುವೆಗೆ ನಿರಾಕರಿಸಿದ ವರ!
ಹಾಸಿಗೆ ಇದ್ದಷ್ಟು ಕಾಲು ಚಾಚುವುದು ಬಿಟ್ಟು...
Follow us
| Updated By: ಸಾಧು ಶ್ರೀನಾಥ್​

Updated on:Feb 20, 2023 | 11:30 AM

ಪ್ರತಿಯೊಬ್ಬರ ಜೀವನದಲ್ಲಿ ಮದುವೆ ಬಹಳ ಮುಖ್ಯ. ಮದುವೆಯನ್ನು ಸಾಧ್ಯವಾದಷ್ಟು ಅದ್ಧೂರಿಯಾಗಿ ಆಚರಿಸಲು ಬಯಸುತ್ತಾರೆ. ತಮ್ಮ ಕೈಗೆಟುಕುವಂತೆ, ತಮ್ಮ ಅಂತಸ್ತಿಗೆ ಅನುಗುಣವಾಗಿ ಮದುವೆ ಮಾಡುತ್ತಾರೆ. ಇನ್ನು ವಧು-ವರರ (Bride -Bridegroom) ಬಂಧುಗಳಿಗೂ ಮದುವೆಯೆಂದರೆ (Bridegroom) ಒಂದು ಸಂಭ್ರಮ. ಮದುವೆ ಸಮಾರಂಭಗಳನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಅಂತಹುದರಲ್ಲಿ ತುಂಬಾ ಸಂತೋಷದ ಮದುವೆ ಇದ್ದಕ್ಕಿದ್ದಂತೆ ನಿಂತರೆ ಏನಾಗುತ್ತದೆ? ಇತ್ತೀಚೆಗಷ್ಟೇ ಹೈದರಾಬಾದಿನಲ್ಲಿ (Hyderabad) ಇಂತಹ ಘಟನೆ ನಡೆದಿದೆ.

ಮದುವೆ ವಿಫಲಗೊಂಡು, ಅನಿರೀಕ್ಷಿತವಾಗಿ ಕೊನೆಗೊಳ್ಳಲು ಕೆಲವೊಮ್ಮೆ ಚಿತ್ರ ವಿಚಿತ್ರ ಕಾರಣಗಳು ಸನ್ನಿವೇಶಗಳು ಸೃಷ್ಟಿಯಾಗಿಬಿಡುತ್ತವೆ. ಹೈದರಾಬಾದ್ ನ ಹಳೆಯ ಏರಿಯಾದಲ್ಲಿಯೂ ವರಮಹಾಶಯನೊಬ್ಬ ಹೀಗೆಯೇ ವಿಚಿತ್ರ ಕಾರಣಕ್ಕೆ ಮದುವೆಯಾಗಲು ನಿರಾಕರಿಸಿದ್ದಾನೆ. ವಿವರಕ್ಕೆ ಹೋದರೆ… ಹೈದರಾಬಾದ್‌ನ ಚಂದ್ರಯ್ಯನಗುಟ್ಟದ ಬಳಿ ಮೊಹಮ್ಮದ್ ಜಕ್ರಿಯಾ ಎಂಬ ವ್ಯಕ್ತಿ ಭಾನುವಾರ ವಿವಾಹವಾದರು. ಆದರೆ ಮದುವೆಯ ಸಮಯ ಸಮೀಪಿಸುತ್ತಿರುವಾಗ, ವಧುವಿನ ಸಂಬಂಧಿಕರು ತನಗೆ ಸೆಕೆಂಡ್ ಹ್ಯಾಂಡ್ ಮಂಚ, ಹಾಸಿಗೆಯನ್ನು (Used Bed Cot) ಕೊಟ್ಟಿದ್ದಾರೆ ಎಂದು ತಿಳಿದು, ಜಕ್ರಿಯಾ ಮದುವೆಯಾಗಲು ನಿರಾಕರಿಸಿದರು.

ಹಾಸಿಗೆ ಇದ್ದಷ್ಟು ಕಾಲು ಚಾಚದೆ, ಮಾವ ಸೆಕೆಂಡ್​ ಹ್ಯಾಂಡ್ ಮಂಚ ಕೊಟ್ಟರು ಅಂತಾ ರೊಳ್ಳೆ ತೆಗೆದಿರುವ ವರಮಹಾಶಯನ ಬಗ್ಗೆ ವಧು ಹೇಳಿದ್ದೇನು?

ಇದೀಗ ಯುವತಿಯ ತಂದೆ ಚಂದ್ರಯ್ಯನಗುಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕೂಡಲೇ ಮಧ್ಯ ಪ್ರವೇಶಿಸಿದ ಪೊಲೀಸರು ಜಕ್ರಿನ್ ಅವರನ್ನು ಮದುವೆಯಾಗುವಂತೆ ಮನವೊಲಿಸಿದರು. ಕೊನೆಗೂ ಶಾಂತವಾದ ಯುವಕ ಮದುವೆಯಾಗಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾನೆ. ಆದರೆ ಇಲ್ಲಿ ಮತ್ತೊಂದು ಟ್ವಿಸ್ಟ್ ಇದೆ. ಇಂತಹ ಸಣ್ಣ ಕಾರಣಕ್ಕೆ ಮದುವೆಯಾಗಲು ನಿರಾಕರಿಸಿದ ವ್ಯಕ್ತಿಯನ್ನು ಮದುವೆಯಾಗುವುದರಲ್ಲಿ ಅರ್ಥವಿಲ್ಲ ಎಂದು ಈಗ ವಧು ನಿರ್ಧರಿಸಿದ್ದಾಳೆ. ಇದರೊಂದಿಗೆ ಈ ಮದುವೆಯ ಕಥೆ ಮತ್ತೊಂದು ತಿರುವು ಪಡೆದುಕೊಂಡಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:23 am, Mon, 20 February 23

ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?