ರಾಜಕೀಯ ಸಂಘರ್ಷಕ್ಕೆ ಕಾರಣವಾದ ಸಂದೇಶ್‌ಖಾಲಿ, ನ್ಯಾಯಕ್ಕಾಗಿ ಮಹಿಳೆಯರ ಹೋರಾಟ; ಏನಿದು ಪ್ರಕರಣ?

|

Updated on: Apr 22, 2024 | 11:43 AM

ಪಶ್ಚಿಮ ಬಂಗಾಳದ ಉತ್ತರ 24-ಪರಗಣ ಜಿಲ್ಲೆಯ ಸಂದೇಶ್​​ಖಾಲಿ ಗ್ರಾಮ ಬಿಜೆಪಿ-ಟಿಎಂಸಿ ರಾಜಕೀಯದ ಕೇಂದ್ರವಾಗಿದೆ. ಟಿಎಂಸಿ ಪ್ರಭಾವಿ ನಾಯಕ ಶೇಖ್ ಶಾಜಹಾನ್ ನಿವಾಸದ ಮೇಲೆ ಇಡಿ ದಾಳಿ ನಡೆಸಲು ಬಂದಾಗ ಆತನ ಸಹಚರರು ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿ ಓಡಿಸಿದ್ದರು. ಶಾಜಹಾನ್ ಅಲ್ಲಿನ ಜನರಿಂದ ಭೂಕಬಳಿಕೆ ಮಾಡಿದ್ದಾನೆ, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ಆರೋಪ ಕೇಳಿಬಂದಾಗಿನಿಂದ ಸಂದೇಶ್​​ಖಾಲಿಯಲ್ಲಿ ಪ್ರತಿಭಟನೆ, ದಂಗೆ ನಡೆದಿದೆ. ಇಲ್ಲಿ ನಡೆದಿದ್ದು ಏನು? ಇಲ್ಲಿದೆ ವರದಿ.

ರಾಜಕೀಯ ಸಂಘರ್ಷಕ್ಕೆ ಕಾರಣವಾದ ಸಂದೇಶ್‌ಖಾಲಿ, ನ್ಯಾಯಕ್ಕಾಗಿ ಮಹಿಳೆಯರ ಹೋರಾಟ; ಏನಿದು ಪ್ರಕರಣ?
ಸಂದೇಶ್​​ಖಾಲಿಯಲ್ಲಿ ಪ್ರತಿಭಟನೆ
Follow us on

ಕಳೆದ ಮೂರು ತಿಂಗಳಿನಿಂದ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಸಂದೇಶ್‌ಖಾಲಿ ಎಂಬ ಗ್ರಾಮ ಸುದ್ದಿಯಲ್ಲಿದೆ. ಇಲ್ಲಿನ ಸ್ಥಳೀಯ ಟಿಎಂಸಿ ನಾಯಕ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ವಿರುದ್ಧ ಹಲವಾರು ಮಹಿಳೆಯರು ಆರೋಪ ಮಾಡಿದ್ದಾರೆ. ಈ ಸುದ್ದಿ ಹೊರಬರುತ್ತಿದ್ದಂತೆ ಬಂಗಾಳ ಸರ್ಕಾರದ ವಿರುದ್ಧ ಆಕ್ರೋಶ ಭುಗಿಲೆದ್ದಿತ್ತು. ಆರೋಪಿಯನ್ನು ಟಿಎಂಸಿ ಕಾಪಾಡುತ್ತಿದೆ ಎಂದು ಆರೋಪಿಸಿ ಪಶ್ಚಿಮ ಬಂಗಾಳದ ಬಿಜೆಪಿ ಘಟಕ ಪ್ರತಿಭಟನೆಗೆ ಮುಂದಾಯಿತು. ಆದರೆ ಪೊಲೀಸರು ಅವರನ್ನು ಸಂದೇಶ್‌ಖಾಲಿಗೆ ತಲುಪದಂತೆ ತಡೆದರು. ರಾಜಕೀಯ ಚರ್ಚೆ, ವಾಗ್ದಾಳಿ, ಆರೋಪ, ಪ್ರತ್ಯಾರೋಪಗಳ ನಡುವೆಯೇ ಪ್ರಕರಣ ನ್ಯಾಯಾಲಯಕ್ಕೆ ತಲುಪಿತ್ತು. ಏಪ್ರಿಲ್ 4ರಂದು ಇದರ ವಿಚಾರಣೆ ನಡೆಸಿದ ಕಲ್ಕತ್ತಾ ಹೈಕೋರ್ಟ್, ಪಶ್ಚಿಮ ಬಂಗಾಳ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ರಾಜಕೀಯ ಬಿರುಗಾಳಿಗೆ ಕಾರಣವಾದ ಸಂದೇಶ್‌ಖಾಲಿಯಲ್ಲಿ ನಡೆದಿದ್ದೇನು? ಇಲ್ಲಿವರೆಗಿನ ಬೆಳವಣಿಗೆ ಬಗ್ಗೆ ಇಲ್ಲಿದೆ ವಿಸ್ತೃತ ವರದಿ ಇಲ್ಲಿದೆ. ಶುರುವಾಗಿದ್ದು ಇಲ್ಲಿಂದ ಬಹುಕೋಟಿ ಪಡಿತರ ವಿತರಣಾ ಹಗರಣದಲ್ಲಿ ಟಿಎಂಸಿಯ ಪ್ರಬಲ ನಾಯಕ ಶಾಜಹಾನ್ ಶೇಖ್ ನಿವಾಸದ ಮೇಲೆ ಜನವರಿ5 ರಂದು ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿತ್ತು. ಈ ಪ್ರದೇಶದಲ್ಲಿ ಶಾಜಹಾನ್‌ನ ಸಹಚರರು ಇಡಿ ಅಧಿಕಾರಿಗಳನ್ನು ಅವರ ಮನೆಗೆ ಪ್ರವೇಶಿಸುವುದನ್ನು ತಡೆಯುವುದಲ್ಲದೆ, ಕೇಂದ್ರ ತನಿಖಾ ಸಂಸ್ಥೆಯ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದರು. ನಗರದಿಂದ 74 ಕಿಮೀ ದೂರದಲ್ಲಿರುವ ಹಳ್ಳಿಯಿಂದ ತಪ್ಪಿಸಿಕೊಂಡು ಇಡಿ ಅಧಿಕಾರಿಗಳು ಓಡಿ ಹೋಗಿದ್ದರು. ಜಿಲ್ಲೆಯ ಬಸಿರ್‌ಹತ್ ಉಪವಿಭಾಗದ ಸಂದೇಶ್‌ಖಾಲಿಯಲ್ಲಿ ಪ್ರಭಾವಿ, ಜಿಲ್ಲಾ ಪರಿಷತ್ ಸದಸ್ಯರೂ ಆಗಿರುವ ಶಾಜಹಾನ್ ಅಂದಿನಿಂದ ತಲೆಮರೆಸಿಕೊಂಡಿದ್ದರು. ಇಡಿ ಘಟನೆಯ ನಂತರ, ಸ್ಥಳೀಯ ಮಹಿಳೆಯರು ಆರೋಪದೊಂದಿಗೆ ಮುಂದೆ ಬಂದರು. ಅದೇನೆಂದರೆ ಶಾಜಹಾನ್ ಮತ್ತು...

ಪೂರ್ಣ ಸುದ್ದಿಯನ್ನು ಓದಲು Tv9 ಆ್ಯಪ್ ಡೌನ್​ಲೋಡ್ ಮಾಡಿ

ಎಕ್ಸ್​ಕ್ಲೂಸಿವ್ ಸುದ್ದಿಗಳ ಅನ್​ಲಿಮಿಟೆಡ್ ಆಕ್ಸೆಸ್ Tv9 ಆ್ಯಪ್​ನಲ್ಲಿ ಮುಂದುವರೆಯಿರಿ