ಜ್ವರದಿಂದ ನರಳಿದ್ದ ಮಗಳನ್ನೇ ಹತ್ಯೆಗೈದ ಪಾಪಿ ತಂದೆ!

ಹೈದರಾಬಾದ್: ಅಪ್ಪ.. ಈ ಮಾತಿನಲ್ಲೇ ಒಂದು ಶಕ್ತಿ ಇದೆ. ತಂದೆ ಅನ್ನೋ ಬಲ ಬೆನ್ನ ಹಿಂದಿದ್ರೆ ಆನೆಬಲ. ಅತ್ತಾಗ ಕಣ್ಣೀರೊರೆಸೋ. ಸೋತಾಗ ಕೈ ಹಿಡಿಯೋ. ಪರಿತಪಿಸಿದಾಗ ಪ್ರೀತಿಸೋ ದೇವ್ರು. ಹೆಣ್ಣು ಮಕ್ಕಳ ಪಾಲಿಗೆ ಹೀರೋ ಆಗಿರೋ ತಂದೆ ಇಲ್ಲಿ ಮಗಳ ಪಾಲಿಗೆ ವಿಲನ್ ಆಗಿದ್ದಾನೆ. ಮಗಳನ್ನ ಕತ್ತು ಹಿಸುಕಿ ಕೊಂದ ಕ್ರೂರಿ ತಂದೆ! ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆ ಸದಾಶಿವ ಪೇಟ್ ಗ್ರಾಮದ ನಿವಾಸಿ ರೇಣುಕಾ ಬೇರೆ ಊರೊಂದರಲ್ಲಿ ಹಾಸ್ಟೆಲ್​​​ನಲ್ಲಿ ಇದ್ದುಕೊಂಡೆ ಸ್ಕೂಲ್​ಗೆ ಹೋಗ್ತಿದ್ಲು. ಕೆಲ ದಿನಗಳ ಹಿಂದಷ್ಟೇ […]

ಜ್ವರದಿಂದ ನರಳಿದ್ದ ಮಗಳನ್ನೇ ಹತ್ಯೆಗೈದ ಪಾಪಿ ತಂದೆ!
ಸಾಧು ಶ್ರೀನಾಥ್​

Updated on: Feb 17, 2020 | 7:39 AM

ಹೈದರಾಬಾದ್: ಅಪ್ಪ.. ಈ ಮಾತಿನಲ್ಲೇ ಒಂದು ಶಕ್ತಿ ಇದೆ. ತಂದೆ ಅನ್ನೋ ಬಲ ಬೆನ್ನ ಹಿಂದಿದ್ರೆ ಆನೆಬಲ. ಅತ್ತಾಗ ಕಣ್ಣೀರೊರೆಸೋ. ಸೋತಾಗ ಕೈ ಹಿಡಿಯೋ. ಪರಿತಪಿಸಿದಾಗ ಪ್ರೀತಿಸೋ ದೇವ್ರು. ಹೆಣ್ಣು ಮಕ್ಕಳ ಪಾಲಿಗೆ ಹೀರೋ ಆಗಿರೋ ತಂದೆ ಇಲ್ಲಿ ಮಗಳ ಪಾಲಿಗೆ ವಿಲನ್ ಆಗಿದ್ದಾನೆ.

ಮಗಳನ್ನ ಕತ್ತು ಹಿಸುಕಿ ಕೊಂದ ಕ್ರೂರಿ ತಂದೆ!
ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆ ಸದಾಶಿವ ಪೇಟ್ ಗ್ರಾಮದ ನಿವಾಸಿ ರೇಣುಕಾ ಬೇರೆ ಊರೊಂದರಲ್ಲಿ ಹಾಸ್ಟೆಲ್​​​ನಲ್ಲಿ ಇದ್ದುಕೊಂಡೆ ಸ್ಕೂಲ್​ಗೆ ಹೋಗ್ತಿದ್ಲು. ಕೆಲ ದಿನಗಳ ಹಿಂದಷ್ಟೇ ಮಗಳು ರೇಣುಕಾಳನ್ನ ರವಿ ನಾಯ್ಕ ಊರಿಗೆ ಕರ್ಕೊಂಡು ಬಂದಿದ್ದ. ಆದ್ರೆ, ಆಕೆಗೆ ಜ್ವರ ಏನೋ ಬಂದಿತ್ತಂತೆ. ಇದ್ರಿಂದ ರೊಚ್ಚಿಗೆದ್ದ ಕ್ರೂರಿ ತಂದೆ ಆಕೆಯನ್ನ ಕತ್ತು ಹಿಸುಕಿ ಕೊಂದು ಹಾಕಿದ್ದಾನೆ.

ಇನ್ನೊಂದು ಶಾಕಿಂಗ್ ವಿಚಾರ ಅಂದ್ರೆ, ಅನಾರೋಗ್ಯಕ್ಕೆ ತುತ್ತಾಗಿದ್ದ ಮಗಳು ರೇಣುಕಾಗೆ ಚಿಕಿತ್ಸೆ ಕೊಡಿಸೋಕೆ ರವಿ ನಾಯ್ಕನ ಬಳಿ ದುಡ್ಡಿರ್ಲಿಲ್ವಂತೆ. ಕಳೆದ ವರ್ಷ ಇದೇ ರೀತಿ ಆಕೆಗೆ ಜ್ವರ ಬಂದಾಗ 20 ಸಾವಿರ ರೂಪಾಯಿ ಖರ್ಚು ಮಾಡಿದ್ನಂತೆ. ಆದ್ರೆ ಹಣ ಖರ್ಚು ಮಾಡೋಕೆ ಆಗದೆ ಮಗಳನ್ನ ಕತ್ತು ಹಿಸುಕು ಕೊಂದಿದ್ದಾನೆ. ಬಳಿಕ ಮಗಳ ರೇಣುಕಾ ಅನಾರೋಗ್ಯದಿಂದ ಸತ್ತಿರೋದಾಗಿ ಸುಳ್ಳು ಸುದ್ದಿ ಹಬ್ಬಿಸಿದ್ದಾನೆ. ತರಾತುರಿಯಲ್ಲಿ ಅಂತ್ಯಕ್ರಿಯೆ ಮಾಡೋಕೆ ಹೊರಟಾಗ ಕ್ರೂರಿ ತಂದೆಯ ಅಸಲಿ ಮುಖವಾಡ ಬಯಲಾಗಿದೆ.

ಒಟ್ನಲ್ಲಿ ಕೆಲವರು ಮಕ್ಕಳಿಲ್ಲ ಅನ್ನೋ ಕೊರೊಗಿನಲ್ಲಿ ಕರಗಿ ಹೋಗ್ತಿದ್ದಾರೆ. ಆದ್ರೆ, ಮುದ್ದಾದ ಮಗಳಿಗೆ ಚಿಕಿತ್ಸೆ ಕೊಡಿಸೋದು ಬಿಟ್ಟು ಆಕೆಯನ್ನ ತಂದೆಯೇ ಕೊಲೆ ಮಾಡಿರೋದು ಎಲ್ಲರನ್ನ ಬೆಚ್ಚಿ ಬೀಳಿಸಿದೆ.

Published On - 7:38 am, Mon, 17 February 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us