AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೈದರಾಬಾದ್​ನಲ್ಲಿ ಉದ್ಘಾಟನೆಯಾದ ಎರಡು ತೃತೀಯಲಿಂಗಿಗಳ ಕ್ಲಿನಿಕ್​ಗಳು; ಇಲ್ಲಿನ ಕೆಲಸಗಾರರೆಲ್ಲ ಅದೇ ಸಮುದಾಯಕ್ಕೆ ಸೇರಿದವರೇ !

ಎರಡು ಕ್ಲಿನಿಕ್​ಗಳು ಈಗಾಗಲೇ ಕಾರ್ಯನಿರ್ವಹಣೆ ಶುರು ಮಾಡಿವೆ. ಅದರಲ್ಲಿ ಮೊದಲನೇದು ನಾರಾಯಣಗುಡಾದಲ್ಲಿ ಜನವರಿಗೆ 29ರಂದು ಮತ್ತು ಎರಡನೇಯದು ಜೀಡಿಮೆಟ್ಲಾದಲ್ಲಿ, ಜುಲೈ 11ರಂದು ಉದ್ಘಾಟನೆಯಾಗಿದೆ.

ಹೈದರಾಬಾದ್​ನಲ್ಲಿ ಉದ್ಘಾಟನೆಯಾದ ಎರಡು ತೃತೀಯಲಿಂಗಿಗಳ ಕ್ಲಿನಿಕ್​ಗಳು; ಇಲ್ಲಿನ ಕೆಲಸಗಾರರೆಲ್ಲ ಅದೇ ಸಮುದಾಯಕ್ಕೆ ಸೇರಿದವರೇ !
ತೃತೀಯಲಿಂಗಿಗಳ ಕ್ಲಿನಿಕ್​
TV9 Web
| Edited By: |

Updated on: Jul 29, 2021 | 10:53 AM

Share

ಈಗೀಗ ತೃತೀಯಲಿಂಗಿ (Transgender)ಗಳನ್ನು ಭಾರತದಲ್ಲಿ ಸ್ವಲ್ಪಮಟ್ಟಿಗೆ ಒಪ್ಪಿಕೊಳ್ಳಲಾಗುತ್ತಿದೆ. ಹಾಗಾಗಿ ಒಂದೊಂದೇ ಕ್ಷೇತ್ರದಲ್ಲಿ ಅವರೂ ತಮ್ಮ ಚಾಪು ಮೂಡಿಸುತ್ತಿದ್ದಾರೆ. ಸುದ್ದಿ ನಿರೂಪಣೆ, ಕೊವಿಡ್​ 19 ನಿರ್ವಹಣಾ ಕೇಂದ್ರಕ್ಕೂ ತೃತೀಯಲಿಂಗಿಗಳು ಕಾಲಿಟ್ಟು, ಸಾಧನೆ ಮಾಡಿದ್ದಾರೆ. ಜನರೂ ಕೂಡ ಒಪ್ಪಿಕೊಂಡಿದ್ದಾರೆ. ಹಾಗೇ ಇದೀಗ ಹೈದರಾಬಾದ್(Hyderabad)​ನಲ್ಲಿ ಮೊದಲ ಬಾರಿಗೆ ಎರಡು ತೃತೀಯಲಿಂಗಿಗಳ ಕ್ಲಿನಿಕ್​ಗಳು ಸ್ಥಾಪಿತವಾಗಿವೆ. ವಿವಿಧ ಮೆಟ್ರೋ ನಗರಗಳಲ್ಲಿ ತೃತೀಯಲಿಂಗಿಗಳಿಗೆಂದೇ ಪ್ರತ್ಯೇಕವಾಗಿ ಕ್ಲಿನಿಕ್​ಗಳನ್ನು ತೆರೆಯಬೇಕು ಎಂಬ ಕೇಂದ್ರ ಸರ್ಕಾರದ ಯೋಜನೆಯ ಭಾಗವಾಗಿ ಹೈದರಾಬಾದ್​ನಲ್ಲಿ ಮೊದಲಬಾರಿಗೆ 2 ಕ್ಲಿನಿಕ್​ಗಳನ್ನು ಸ್ಥಾಪಿಸಲಾಗಿದ್ದು. ಉಳಿದ ಮೆಟ್ರೋ ನಗರಗಳಲ್ಲೂ ಶೀಘ್ರವೇ ಕ್ಲಿನಿಕ್​​ಗಳು ನಿರ್ಮಾಣ ಆಗಲಿವೆ.

ತೃತೀಯಲಿಂಗಿಗಳ ಪರ ಹೋರಾಟಗಾರ್ತಿಯಾದ ರಚನಾ ಮುದ್ರಾಬೊಯಿನಾ ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಹೈದರಾಬಾದ್ ನಗರದಲ್ಲಿ ತೃತೀಯಲಿಂಗಿಗಳಲ್ಲಿ ಎಚ್​ಐವಿ ಸೋಂಕು ಹರಡುವ ಪ್ರಮಾಣ ಹೆಚ್ಚಿರುವ ಕಾರಣ, ಇಲ್ಲಿಯೇ ಮೊದಲು ಕ್ಲಿನಿಕ್​ಗಳನ್ನು ತೆರೆಯಲಾಗಿದೆ ಎಂದು ತಿಳಿಸಿದ್ದಾರೆ. ರಾಷ್ಟ್ರೀಯವಾಗಿ ಎಚ್​ಐವಿ ಹರಡುವಿಕೆ ಪ್ರಮಾಣ ಸರಾಸರಿ ಶೇ.3.13ರಷ್ಟಿದ್ದು, ಹೈದರಾಬಾದ್​ನಲ್ಲಿ ಶೇ.6.47ರಷ್ಟಿದೆ. 2030ರ ಹೊತ್ತಿಗೆ ಏಡ್ಸ್​ನ್ನು ಸಂಪೂರ್ಣ ನಿರ್ಮೂಲನೆ ಮಾಡುವ ಮಹದುದ್ದೇಶದಿಂದ ರಾಷ್ಟ್ರೀಯ ಏಡ್ಸ್​ ನಿಯಂತ್ರಣ ಸಂಸ್ಥೆಯೊಂದಿಗೆ ಸಹಭಾಗಿತ್ವವನ್ನೂ ಹೊಂದಿದೆ. ಅದರಡಿಯಲ್ಲಿ ಹೈದರಾಬಾದ್​ನಲ್ಲಿ ಮೊದಲ ಎರಡು ಆಸ್ಪತ್ರೆಗಳು ನಿರ್ಮಾಣವಾಗಿದ್ದು, ಇಲ್ಲಿ ತೃತೀಯ ಲಿಂಗಿಗಳಿಗೆ ಆಂಟಿರೆಟ್ರೋವೈರಲ್ ಥೆರಪಿ (ART) ಚಿಕಿತ್ಸಾ ಸೇವೆಗಳೂ ಲಭ್ಯವಿರುತ್ತದೆ ಎಂದೂ ರಚನಾ ಹೇಳಿದ್ದಾರೆ. ಕೇವಲ ಇಷ್ಟೇ ಅಲ್ಲ, ತೃತೀಯಲಿಂಗಿ ಸಮುದಾಯದ ಒಟ್ಟಾರೆ ಯೋಗಕ್ಷೇಮ, ಸಾಮಾಜಿಕ-ಆರ್ಥಿಕ ಪರಿಸ್ಥಿತಿ ಸುಧಾರಣೆಗೂ ಈ ಕ್ಲಿನಿಕ್​ ಶ್ರಮಿಸಲಿದೆ ಎಂದಿದ್ದಾರೆ.

ಎರಡು ಕ್ಲಿನಿಕ್​ಗಳು ಈಗಾಗಲೇ ಕಾರ್ಯನಿರ್ವಹಣೆ ಶುರು ಮಾಡಿವೆ. ಅದರಲ್ಲಿ ಮೊದಲನೇದು ನಾರಾಯಣಗುಡಾದಲ್ಲಿ ಜನವರಿಗೆ 29ರಂದು ಮತ್ತು ಎರಡನೇಯದು ಜೀಡಿಮೆಟ್ಲಾದಲ್ಲಿ, ಜುಲೈ 11ರಂದು ಉದ್ಘಾಟನೆಯಾಗಿದೆ. ಈ ಕ್ಲಿನಿಕ್​ಗಳಲ್ಲಿ ವೈದ್ಯರು, ಕೌನ್ಸಿಲರ್​​ಗಳು, ಮನಃಶಾಸ್ತ್ರಜ್ಞರೆಲ್ಲ ತೃತೀಯಲಿಂಗಿ ಸಮುದಾಯದವರೇ ಆಗಿದ್ದು, ಹೆಮ್ಮೆಯ ಸಂಗತಿಯೇ ಆಗಿದೆ.

ಇದನ್ನೂ ಓದಿ: ನಿರೀಕ್ಷಿತ ಪ್ರಮಾಣದಲ್ಲಿ ನಡೆಯದ ಲಸಿಕೆ ಅಭಿಯಾನ; ಖಾಸಗಿ ಆಸ್ಪತ್ರೆಗಳ ಶೇ. 25 ರಷ್ಟು ಲಸಿಕೆ ಕೋಟಾ ತಗ್ಗಿಸುವ ಸಾಧ್ಯತೆ

Hyderabad Gets First Two Transgender Clinics

Follow Us
Web contact
Web contact

TV9 Kannada

Read More
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ