AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ರಹ್ಮೋಸ್ ‘ಸರ್​ಫೇಸ್ ಟು ಸರ್​ಫೇಸ್’ ಕ್ಷಿಪಣಿ ಪ್ರಯೋಗ ಯಶಸ್ವಿ

ದೆಹಲಿ:ಕಾಶ್ಮೀರದ ಗಡಿಯಲ್ಲಿ ದಿನೇ ದಿನೆ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದೆ. ಪಾಪಿ ಪಾಕಿಸ್ತಾನ ಕಾಲುಕೆರೆದು ಜಗಳ ಮಾಡೋದಕ್ಕೆ ಮುಂದಾಗ್ತಿದೆ. ಈ ಮಧ್ಯೆ ಭಾರತ ಸೇನಾ ಬಲ ಹೆಚ್ಚಿಕೊಳ್ಳುವುದರತ್ತ ಗಮನಹರಿಸುತ್ತಿದ್ದು, ನಿನ್ನೆ ಕೂಡ ಅಂತಹದ್ದೇ ಮಹತ್ವದ ಕಾರ್ಯದಲ್ಲಿ ಹೆಮ್ಮೆಯ ವಾಯುಪಡೆ ಯಶಸ್ವಿಯಾಗಿದೆ. ಈ ಯಶಸ್ಸು ಭೀಮಬಲ ತಂದಿದೆ. ಭಾರತ ಬಲಿಷ್ಠವಾಗುತ್ತಿದೆ. ತನ್ನ ವಿರುದ್ಧ ಯುದ್ಧಕ್ಕೆ ಕಾದು ನಿಂತಿರುವ ಪಾಪಿ ಪಾಕ್​ಗೆ ಬಿಸಿಮುಟ್ಟಿಸಲು ಸದಾ ಸನ್ನದ್ಧವಾಗಿರುವ ಭಾರತ, ಇದೀಗ ಮತ್ತೊಂದು ಯಶಸ್ಸನ್ನ ಮುಡಿಗೇರಿಸಿಕೊಂಡಿದೆ. ವಿಶ್ವದ ಕೆಲವೇ ಕೆಲವು ಬಲಿಷ್ಠ ರಾಷ್ಟ್ರಗಳ ಬಳಿ […]

ಬ್ರಹ್ಮೋಸ್ ‘ಸರ್​ಫೇಸ್ ಟು ಸರ್​ಫೇಸ್’ ಕ್ಷಿಪಣಿ ಪ್ರಯೋಗ ಯಶಸ್ವಿ
ಸಾಧು ಶ್ರೀನಾಥ್​
|

Updated on: Oct 23, 2019 | 7:15 AM

Share

ದೆಹಲಿ:ಕಾಶ್ಮೀರದ ಗಡಿಯಲ್ಲಿ ದಿನೇ ದಿನೆ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದೆ. ಪಾಪಿ ಪಾಕಿಸ್ತಾನ ಕಾಲುಕೆರೆದು ಜಗಳ ಮಾಡೋದಕ್ಕೆ ಮುಂದಾಗ್ತಿದೆ. ಈ ಮಧ್ಯೆ ಭಾರತ ಸೇನಾ ಬಲ ಹೆಚ್ಚಿಕೊಳ್ಳುವುದರತ್ತ ಗಮನಹರಿಸುತ್ತಿದ್ದು, ನಿನ್ನೆ ಕೂಡ ಅಂತಹದ್ದೇ ಮಹತ್ವದ ಕಾರ್ಯದಲ್ಲಿ ಹೆಮ್ಮೆಯ ವಾಯುಪಡೆ ಯಶಸ್ವಿಯಾಗಿದೆ. ಈ ಯಶಸ್ಸು ಭೀಮಬಲ ತಂದಿದೆ.

ಭಾರತ ಬಲಿಷ್ಠವಾಗುತ್ತಿದೆ. ತನ್ನ ವಿರುದ್ಧ ಯುದ್ಧಕ್ಕೆ ಕಾದು ನಿಂತಿರುವ ಪಾಪಿ ಪಾಕ್​ಗೆ ಬಿಸಿಮುಟ್ಟಿಸಲು ಸದಾ ಸನ್ನದ್ಧವಾಗಿರುವ ಭಾರತ, ಇದೀಗ ಮತ್ತೊಂದು ಯಶಸ್ಸನ್ನ ಮುಡಿಗೇರಿಸಿಕೊಂಡಿದೆ. ವಿಶ್ವದ ಕೆಲವೇ ಕೆಲವು ಬಲಿಷ್ಠ ರಾಷ್ಟ್ರಗಳ ಬಳಿ ಇರುವ ತಾಕತ್ತು ಭಾರತಕ್ಕೂ ಲಭಿಸಿದೆ. ಅಂದಹಾಗೆ ‘ಸರ್​ಫೇಸ್ ಟು ಸರ್​ಫೇಸ್’ ಮಿಸೈಲ್ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ.

300 ಕಿ.ಮೀ. ದೂರದಲ್ಲಿದ್ದರೂ ವೈರಿಪಡೆ ಉಡೀಸ್..! ನಿನ್ನೆ ಬ್ರಹ್ಮೋಸ್​ನ ಮತ್ತೊಂದು ಕ್ಷಿಪಣಿಯನ್ನ ಭಾರತ ಪ್ರಯೋಗ ನಡೆಸಿದೆ. ಪಾಕಿಸ್ತಾನದ ಜೊತೆಗೆ ಚೀನಾಗೂ ಟಾಂಗ್ ಕೊಡಲು ಅಂಡಮಾನ್ ದ್ವೀಪ ಸಮೂಹದಲ್ಲಿ ಈ ಪರೀಕ್ಷೆ ನಡೆದಿದೆ. ‘ಸರ್​ಫೇಸ್ ಟು ಸರ್​ಫೇಸ್’ ಸಾಮರ್ಥ್ಯದ ಹೊಸ ಬ್ರಹ್ಮೋಸ್ ಮಿಸೈಲ್ ವೈರಿ ಪಡೆಯ ಹುಟ್ಟಡಗಿಸಬಹುದು. ಇದರ ವ್ಯಾಪ್ತಿ ಕೂಡ ಗಮನ ಸೆಳೆಯುವಂತಹದ್ದು. ಸುಮಾರು 300 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಅಡಗಿರುವ ವೈರಿಪಡೆಯ ಹೆಡೆಮುರಿ ಕಟ್ಟಿ, ಗೆಲುವಿನ ನಗೆಬೀರುವ ತಾಕತ್ತು ಹೊಸ ಕ್ಷಿಪಣಿಗಿದೆ.

ವೈರಿಗಳ ಮೇಲೆ ದಾಳಿ ನಡೆಸುವುದು ಸುಲಭ..! ಈ ಕ್ಷಿಪಣಿಯನ್ನ ಲಾಂಚ್ ಮಾಡೋದು ಕೂಡ ತುಂಬಾ ಸುಲಭವಾಗಿದೆ. ರಷ್ಯಾ ಸಹಭಾಗಿತ್ವದಲ್ಲಿ ಬ್ರಹ್ಮೋಸ್ ಕ್ಷಿಪಣಿಯನ್ನ ಭಾರತ ತಯಾರಿಸುತ್ತಿದೆ. ಸಬ್​ಮರೀನ್, ಹಡಗು, ಏರ್​ಕ್ರಾಫ್ಟ್​ಗಳು ಸೇರಿದಂತೆ ನೆಲದ ಮೇಲಿಂದ ಕೂಡ ಈ ಕ್ಷಿಪಣಿಯನ್ನ ಉಡಾಯಿಸೋದು ಸುಲಭ. ಆ ಮೂಲಕ ದೇಶದ ರಕ್ಷಣೆಗೆ ಈ ಕ್ಷಿಪಣಿಗಳು ಮಹತ್ವದ ಕೊಡುಗೆ ನೀಡುವಂತಿವೆ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ