AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಂಡನಿಗೆ ಬಿರಿಯಾನಿಯಲ್ಲಿ ನಿದ್ರೆ ಮಾತ್ರೆ ಹಾಕಿ ನಿದ್ದೆ ಮಾಡಿಸಿದಳು, ಬಳಿಕ ಪ್ರಿಯನಿಗೆ ಕರೆ ಮಾಡಿ ಕರೆಯಿಸಿಕೊಂಡಳು.. ಆಮೇಲೆ !?

ಅಷ್ಟೇ ಸಾಲದು ಅಂತಾ ಇಬ್ಬರೂ ಸೇರಿಕೊಂಡು ಕೋಟರಾಜುವಿನ ಕುತ್ತಿಗೆಗೆ ನೈಲಾನ್​ ಹಗ್ಗದಿಂದ ನೇಣು ಬಿಗಿದು ಕೊಲೆ ಮಾಡಲು ಯತ್ನಿಸಿದ್ದಾರೆ.

ಗಂಡನಿಗೆ ಬಿರಿಯಾನಿಯಲ್ಲಿ ನಿದ್ರೆ ಮಾತ್ರೆ ಹಾಕಿ ನಿದ್ದೆ ಮಾಡಿಸಿದಳು, ಬಳಿಕ ಪ್ರಿಯನಿಗೆ ಕರೆ ಮಾಡಿ ಕರೆಯಿಸಿಕೊಂಡಳು.. ಆಮೇಲೆ !?
ಗಂಡನಿಗೆ ಬಿರಿಯಾನಿಯಲ್ಲಿ ನಿದ್ರೆ ಮಾತ್ರೆ ಹಾಕಿ ನಿದ್ದೆ ಮಾಡಿಸಿದಳು, ಬಳಿಕ ಪ್ರಿಯನಿಗೆ ಕರೆ ಮಾಡಿ ಕರೆಯಿಸಿಕೊಂಡಳು..
ಸಾಧು ಶ್ರೀನಾಥ್​
|

Updated on:Jul 07, 2023 | 2:15 PM

Share

ವಿವಾಹೇತರ ಸಂಬಂಧಗಳ ಭ್ರಮೆಯಲ್ಲಿ ಸಿಲುಕುವ ಕೆಲವರು ಎಂಥಹುದ್ದೇ ಅಪರಾಧವೆಸಗಲು ಹಿಂಜರಿಯುವುದಿಲ್ಲ. ಸ್ವಂತ ಮಕ್ಕಳ ಭವಿಷ್ಯದ ಬಗ್ಗೆಯೂ ಅವರು ಕಾಳಜಿ ವಹಿಸುವುದಿಲ್ಲ. ವೇದಮಂತ್ರಗಳ ಸಾಕ್ಷಿಯಾಗಿ ಸಪ್ತಪದಿ ತುಳಿದ ಮೇಲೂ… ಪರದೇಶಿಗಳ ಮೋಹದಲ್ಲಿ ಸಂಗಾತಿಗಳನ್ನೇ ಕೊಲ್ಲಲೂ ಹಿಂಜರಿಯುವುದಿಲ್ಲ. ಇತ್ತೀಚೆಗಷ್ಟೇ ವಿಜಯನಗರದಲ್ಲಿ ಇಂತಹದ್ದೇ ಘಟನೆ ಬೆಳಕಿಗೆ ಬಂದಿದೆ.

ಸ್ಥಳೀಯ ಕುಮ್ಮರಿಬೀದಿಯಲ್ಲಿ ವಾಸವಾಗಿರುವ ಕೋಟರಾಜು ಅವರಿಗೆ ಪತ್ನಿ (Wife) ಶ್ರೀದೇವಿ ಮತ್ತು ಮಕ್ಕಳಿದ್ದಾರೆ. ಅವರೆಲ್ಲರೂ ಎಂದಿನಂತೆ ಬುಧವಾರ ರಾತ್ರಿ ಮಲಗಲು ಸಿದ್ಧತೆ ನಡೆಸಿದ್ದಾರೆ. ಮಲಗುವ ಮುನ್ನ ಹೆಂಡತಿ ಪ್ರೀತಿಯಿಂದ ಗಂಡನಿಗೆ (Husband) ಮಟನ್ ಬಿರಿಯಾನಿ (Mutton Biryani) ಮಾಡಿಕೊಟ್ಟಿದ್ದಾಳೆ. ಇಲ್ಲಿ ಕಹಾನಿ ಮೆ ಟ್ವಿಸ್ಟ್ ಏನೆಂದರೆ ಆ ಬಿರಿಯಾನಿಯಲ್ಲಿ ನಿದ್ದೆ ಮಾತ್ರೆಗಳನ್ನು ಹಾಕಲಾಗಿತ್ತು. ಪತಿ ನಿದ್ರೆಗೆ ಜಾರಿದ ಬಳಿಕ ಹಲವು ವರ್ಷಗಳಿಂದ ವಿವಾಹೇತರ ಸಂಬಂಧ ಹೊಂದಿದ್ದ ಗೆಳೆಯ ಗಂಧವರವು ರಘು ಎಂಬಾತನಿಗೆ ಪತ್ನಿ ಶ್ರೀದೇವಿ ಕರೆ ಮಾಡಿದ್ದಾಳೆ. ಅಲ್ಲಿಗೆ ಪ್ರಿಯತಮನೊಂದಿಗೆ ಸೇರಿಕೊಂಡು ಪತಿಯನ್ನು ಕೊಲ್ಲಲು ಪತ್ನಿ ಶ್ರೀದೇವಿ ಸ್ಪಷ್ಟ ಸ್ಕೆಚ್ ಹಾಕಿದ್ದಳು ಎಂದು ಪ್ರಕರಣದ ಸ್ಥೂಲ ಚಿತ್ರಣವನ್ನು ಪೊಲೀಸರು ಬಿಡಿಸಿದ್ದಾರೆ.

ಅಷ್ಟೇ ಸಾಲದು ಅಂತಾ ಇಬ್ಬರೂ ಸೇರಿಕೊಂಡು ಕೋಟರಾಜುವಿನ ಕುತ್ತಿಗೆಗೆ ನೈಲಾನ್​ ಹಗ್ಗದಿಂದ ನೇಣು ಬಿಗಿದು ಕೊಲೆ ಮಾಡಲು ಯತ್ನಿಸಿದ್ದಾರೆ. ಎಚ್ಚರಗೊಂಡ ಗಂಡ ಜೋರಾಗಿ ಕಿರುಚಿದ್ದಾರೆ. ಆಗ ಅವರಿಬ್ಬರೂ ಓಡಿಹೋಗಿದ್ದಾರೆ. ಕೂಡಲೇ ಕೋಟರಾಜು ಟೂ ಟೌನ್ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾರೆ. ಬೊಗ್ಗುಲದಿಬ್ಬದ ಕೇತ ಶ್ರೀನು ಎಂಬಾತ ಕೂಡ ಅವರಿಗೆ ಸಹಾಯ ಮಾಡಿರುವುದಾಗಿ ತಿಳಿದುಬಂದಿದೆ. ಆತನನ್ನೂ ಪೊಲೀಸರು ರಿಮಾಂಡ್ ಗೆ ತೆಗೆದುಕೊಂಡಿದ್ದಾರೆ.

Published On - 2:14 pm, Fri, 7 July 23

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ