AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೀನುಗಾರನ ಹತ್ಯೆ ಮಾಡಿದ ಪಾಕ್​ ನೌಕಾಪಡೆ ವಿರುದ್ಧ ಭಾರತ ಸರ್ಕಾರ ಕೆಂಡಾಮಂಡಲ; ಹಿರಿಯ ರಾಜತಾಂತ್ರಿಕನಿಗೆ ಖಡಕ್​ ಎಚ್ಚರಿಕೆ​

ಗುಜರಾತ್​​ನ ದ್ವಾರಕಾದ ಬಳಿ ಮೀನುಗಾರಿಕೆಗೆ ಜಲ್​ಪರಿ ಎಂಬ ದೋಣಿಯಲ್ಲಿ ತೆರಳಿದ್ದ ಭಾರತೀಯ ಮೀನುಗಾರರ ಮೇಲೆ ಪಾಕಿಸ್ತಾನ ನೌಕಾಪಡೆ ದಾಳಿ ನಡೆಸಿತ್ತು. ಈ ದೋಣಿಯಲ್ಲಿ ಏಳು ಮೀನುಗಾರರು ಇದ್ದು, ಅದರಲ್ಲೊಬ್ಬ ಮೃತಪಟ್ಟಿದ್ದ.

ಮೀನುಗಾರನ ಹತ್ಯೆ ಮಾಡಿದ ಪಾಕ್​ ನೌಕಾಪಡೆ ವಿರುದ್ಧ ಭಾರತ ಸರ್ಕಾರ ಕೆಂಡಾಮಂಡಲ; ಹಿರಿಯ ರಾಜತಾಂತ್ರಿಕನಿಗೆ ಖಡಕ್​ ಎಚ್ಚರಿಕೆ​
ಸಾಂಕೇತಿಕ ಚಿತ್ರ
TV9 Web
| Updated By: Lakshmi Hegde|

Updated on: Nov 08, 2021 | 10:45 PM

Share

ಗುಜರಾತ್​​ನ ಕರಾವಳಿ ತೀರದಲ್ಲಿ ಭಾರತೀಯ ಮೀನುಗಾರನೊಬ್ಬನನ್ನು ನಿನ್ನೆ ಪಾಕಿಸ್ತಾನ ನೌಕಾಪಡೆ ಹತ್ಯೆ ಮಾಡಿದೆ. ಗುಜರಾತ್​​ನ ದ್ವಾರಕಾದ ಓಖಾ ಪಟ್ಟಣದ ಬಳಿ ಘಟನೆ ನಡೆದಿತ್ತು. ಜಲ್​ಪರಿ ಎಂಬ ಹೆಸರಿನ ಬೋಟ್​ ಮೇಲೆ ಪಾಕಿಸ್ತಾನ ನೇವಿ ಗುಂಡಿನ ದಾಳಿ ನಡೆಸಿದ ಪರಿಣಾಮ ಭಾರತೀಯ ಮೀನುಗಾರನೊಬ್ಬ ಹತನಾಗಿದ್ದ. ಈ ಹತ್ಯೆಯನ್ನು ಭಾರತ ತೀವ್ರವಾಗಿ ಖಂಡಿಸಿದೆ. ಇಂದು ಭಾರತದಲ್ಲಿರುವ ಪಾಕಿಸ್ತಾನದ ಹೈ ಕಮೀಷನ್​​ನ ಹಿರಿಯ ರಾಯಭಾರಿಯನ್ನು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕರೆಸಿತ್ತು. ಅಲ್ಲದೆ ಘಟನೆಯ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಮುಗ್ಧ ಮೀನುಗಾರರ ಮೇಲೆ ದಾಳಿ ನಡೆಸಿದ್ಯಾಕೆಂದು ಕಟುವಾಗಿ ಪ್ರಶ್ನಿಸಿದೆ ಎಂದು ಸರ್ಕಾರದ ಮೂಲಗಳಿಂದ ಮಾಹಿತಿ ಸಿಕ್ಕಿದೆ.

ಪಾಕಿಸ್ತಾನ ಭಾರತದ ಮೀನುಗಾರಿಕಾ ಬೋಟ್​ ಮೇಲೆ ಗುಂಡಿನ ದಾಳಿ ನಡೆಸಿದ್ದು ನಿಜಕ್ಕೂ ಶೋಚನೀಯ. ಇದರಿಂದಾಗಿ ಒಬ್ಬ ಮೀನುಗಾರನ ಪ್ರಾಣವೇ ಹೋಗಿದೆ. ಹೀಗೆ ಅನಗತ್ಯವಾಗಿ ಗುಂಡಿನ ದಾಳಿ ಮಾಡುವ ಮೂಲಕ ಪಾಕಿಸ್ತಾನ ಎಲ್ಲ ಅಂತಾರಾಷ್ಟ್ರೀಯ ನಿಯಮಗಳು ಮತ್ತು ದ್ವಿಪಕ್ಷೀಯ ಒಪ್ಪಂದಗಳನ್ನೂ ಮೀರಿದೆ ಎಂದು ಕೇಂದ್ರ ಸರ್ಕಾರ ಕಿಡಿ ಕಾರಿದೆ ಎನ್ನಲಾಗಿದೆ.  ಹಾಗೇ, ಇಂಥ ಅಪ್ರಚೋದಿತ ಗುಂಡಿನ ದಾಳಿಯನ್ನು ನಡೆಸದಂತೆ ಪಾಕಿಸ್ತಾನ ಸರ್ಕಾರ ತನ್ನ ಸೇನಾ ಪಡೆಗಳಿಗೆ ಸೂಚನೆ ನೀಡಬೇಕು ಎಂದು ಕೂಡ ಆಗ್ರಹಿಸಿದೆ.

ದ್ವಾರಕಾದ ಬಳಿ ಮೀನುಗಾರಿಕೆಗೆ ಜಲ್​ಪರಿ ಎಂಬ ದೋಣಿಯಲ್ಲಿ ತೆರಳಿದ್ದ ಭಾರತೀಯ ಮೀನುಗಾರರ ಮೇಲೆ ಪಾಕಿಸ್ತಾನ ನೌಕಾಪಡೆ ದಾಳಿ ನಡೆಸಿತ್ತು. ಈ ದೋಣಿಯಲ್ಲಿ ಏಳು ಮೀನುಗಾರರು ಇದ್ದು, ಅದರಲ್ಲೊಬ್ಬ ಮೃತಪಟ್ಟಿದ್ದ. ಇನ್ನುಳಿದ ಆರೂ ಮಂದಿಯನ್ನು ಪಾಕಿಸ್ತಾನಿ ಪಡೆಗಳು ಬಂಧಿಸಿದ್ದು ಎಂದೂ ಕೂಡ ಕೆಲವು ಮಾಧ್ಯಮಗಳು ವರದಿ ಮಾಡಿದ್ದವು.  ಇನ್ನು ಘಟನೆಗೆ ಸಂಬಂಧಪಟ್ಟಂತೆ ಪಾಕಿಸ್ತಾನದ ನೌಕಾಪಡೆಯ 10 ಸಿಬ್ಬಂದಿ ವಿರುದ್ಧ ಪೋರ್​ಬಂದರ್​ ನೇವಿ ಪೊಲೀಸರು ಎಫ್​​ಐಆರ್​ ದಾಖಲು ಮಾಡಿದ್ದಾರೆ.

ಇದನ್ನೂ ಓದಿ: Virat Kohli: ನಿರಾಸೆಯೊಂದಿಗೆ ನಾಯಕತ್ವ ತ್ಯಜಿಸಿದ ವಿರಾಟ್ ಕೊಹ್ಲಿ

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್