AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Indian Railways: ಭಾರತೀಯ ರೈಲ್ವೇಯಿಂದ ಅತಿ ಕಡಿಮೆ ದರಕ್ಕೆ ತಿರುಪತಿ ದರ್ಶನ

Tirupati Balaji Darshan | Indian Railways: ಭಾರತೀಯ ರೈಲ್ವೇ ಬಾಲಾಜಿ ದರ್ಶನಕ್ಕೆ ನೀಡಿದ ವಿಶೇಷ ಕೊಡುಗೆ ಸೀಮಿತ ಅವಧಿಗೆ ಮಾತ್ರ ಲಭ್ಯವಿದ್ದು, ಎಪ್ರಿಲ್ 10, ಎಪ್ರಿಲ್ 17, ಎಪ್ರಿಲ್ 24, ಮೇ 1, ಮೇ 8, ಮೇ 15, ಮೇ 25 ಮತ್ತು ಮೇ 29ರಂದು ಮಾತ್ರ ಬಳಸಬಹುದಾಗಿದೆ.

Indian Railways: ಭಾರತೀಯ ರೈಲ್ವೇಯಿಂದ ಅತಿ ಕಡಿಮೆ ದರಕ್ಕೆ ತಿರುಪತಿ ದರ್ಶನ
ತಿರುಪತಿ ದೇವಾಲಯ
Follow us
guruganesh bhat
|

Updated on:Feb 12, 2021 | 6:11 PM

ದೆಹಲಿ: ಕೊರೊನಾ ಹೆದರಿಕೆಯಿಂದ ಎಲ್ಲಿಗೂ ಹೋಗದೇ, ಆರು ತಿಂಗಳು ಮನೆಯಲ್ಲೇ ಕುಳಿತಿದ್ದವರು ಈಗ ನಿಧಾನವಾಗಿ ಕೆಲಸಕ್ಕೂ ತೆರಳಲು ಆರಂಭಿಸಿಯಾಯಿತು. ಈಗ ಸಂಕಟ ಬಂದಾಗ ಕಾಯುವ ವೆಂಕಟರಮಣನ ದರ್ಶನ ಮಾಡುವ ಸಮಯ. ಹೀಗಾಗಿಯೇ ಭಾರತೀಯ ರೈಲ್ವೇ ತಿರುಪತಿ ತಿಮ್ಮಪ್ಪನ ದರ್ಶನಾರ್ಥಿಗಳಿಗೆ ಕಡಿಮೆ ದರದ ವಿಶೇಷ ಕೊಡುಗೆಯೊಂದನ್ನು ಘೋಷಿಸಿದೆ. ಏಳು ಬೆಟ್ಟದ ಒಡೆಯ ವೆಂಟೇಶ್ವರನಿಗೆ ಕೈಮುಗಿದು ‘ನಿನ್ನೇ ನಂಬಿ ಬಂದಿಹೆನು..ಕಾಪಾಡೋ ತಿಮ್ಮಪ್ಪಾ’ ಎಂದು ಮೊರೆಯಿಡುವ ಭಕ್ತಾದಿಗಳಿಗೆ IRCTC ಹಲವು ಬಗೆಯ ವಿಶೇಷ ಪ್ಯಾಕೇಜ್​ಗಳನ್ನು ಘೋಷಿಸಿದೆ. (Indian Railways Balaji Darshan offer to visit Tirupati in cheap rates with family details here)

ಎಷ್ಟು ಕಡಿಮೆ ಗೊತ್ತಾ? ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿರುವ ಪರಮ ಪಾವನ ಕ್ಷೇತ್ರ ತಿರುಪತಿಗೆ ನೀವು ಏಕಾಂಗಿಯಾಗಿ ತೆರಳಬಯಸುವಿರಿ ಎಂದರೆ ಕೇವಲ ₹ 16,000ಕ್ಕೆ IRCTC ನಿಮಗೆ ತಿರುಪತಿ ದರ್ಶನ ಮಾಡಿಸಲಿದೆ. ಇಬ್ಬರು ಒಟ್ಟಿಗೆ ದರ್ಶನ ಮಾಡಬಯಸುವುದಾದರೆ ₹ 14,200 ಪಾವತಿಸಿದರೆ ಆಯಿತು. ಮೂವರ ಜತೆ ತಿರುಪತಿ ಯಾತ್ರೆ ಮಾಡುವುದಿದ್ದರೆ IRCTC ಇನ್ನೂ ವಿಶೇಷ ಕೊಡುಗೆ ಘೋಷಿಸಿದೆ. ಕೇವಲ ₹14,100 ಪಾವತಿಸುವ ಮೂಲಕ ನೀವು ಮೂವರ ಜತೆ ತಿಮ್ಮಪ್ಪನ ದರ್ಶನ ಮಾಡಬಹುದು. ನಿಮ್ಮ ಜತೆಗೆ 5ರಿಂದ 11 ವರ್ಷದೊಳಗಿನ ಪ್ರತಿ ಮಕ್ಕಳಿಗೆ ನೀವು ಪಾವತಿಸಬೇಕಿರುವುದು ₹12,900 ಮಾತ್ರ.

ಯಾವಾಗೆಲ್ಲಾ ಇದೆ ಈ ಕೊಡುಗೆ? ಈ ವಿಶೇಷ ಕೊಡುಗೆ ಸೀಮಿತ ಅವಧಿಗೆ ಮಾತ್ರ ಲಭ್ಯ. ಏಪ್ರಿಲ್ 10, ಏಪ್ರಿಲ್ 17, ಏಪ್ರಿಲ್ 24, ಮೇ 1, ಮೇ 8, ಮೇ 15, ಮೇ 25 ಮತ್ತು ಮೇ 29ರಂದು ಮಾತ್ರ ಈ ಕೊಡುಗೆ ಲಭ್ಯವಿದೆ. ನೆನಪಿಡಿ, ಐಆರ್​ಸಿಟಿಸಿ ವೆಬ್​ಸೈಟ್​ನ ಮೂಲಕ packageCode=WMA17 ಎಂಬ ಕೋಡ್​ ಬಳಸಿ ಮಾತ್ರ ಈ ಕೊಡುಗೆಯನ್ನು ಬಳಸಬಹುದು. (Indian Railways offer to visit Tirupati in cheap rates with family here is the check date details here)

ಇದನ್ನೂ ಓದಿ: ತಿರುಪತಿಯ ರಥಸಪ್ತಮಿ ವಿಶೇಷ ದರ್ಶನಕ್ಕೆ 300 ರೂಪಾಯಿ ಟಿಕೆಟ್​: ಇದನ್ನು ಕೊಳ್ಳಲು ಹೀಗೆ ಮಾಡಿ

Published On - 1:51 pm, Fri, 12 February 21

ಉಗ್ರರ ದಾಳಿ ನಡುವೆಯೂ ಕಾಶ್ಮೀರದಲ್ಲಿ ನಿಲ್ಲದ ಪ್ರವಾಸಿಗರ ಭೇಟಿ
ಉಗ್ರರ ದಾಳಿ ನಡುವೆಯೂ ಕಾಶ್ಮೀರದಲ್ಲಿ ನಿಲ್ಲದ ಪ್ರವಾಸಿಗರ ಭೇಟಿ
ನಟ ಶ್ರೀಮುರಳಿ ಕಂಠದಲ್ಲಿ ‘ನೀಡು ಶಿವ ನೀಡದಿರು ಶಿವ..’ ಹಾಡು ಕೇಳಿ..
ನಟ ಶ್ರೀಮುರಳಿ ಕಂಠದಲ್ಲಿ ‘ನೀಡು ಶಿವ ನೀಡದಿರು ಶಿವ..’ ಹಾಡು ಕೇಳಿ..
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಬೇಕು: ಸಿಎಂ
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಬೇಕು: ಸಿಎಂ
ನನ್ನ ಆಯುಷ್ಯವನ್ನೂ ದೇವರು ನಮ್ಮ ಸೈನಿಕರಿಗೆ ನೀಡಲಿ: ಪಲ್ಲವಿ ರಾವ್
ನನ್ನ ಆಯುಷ್ಯವನ್ನೂ ದೇವರು ನಮ್ಮ ಸೈನಿಕರಿಗೆ ನೀಡಲಿ: ಪಲ್ಲವಿ ರಾವ್
ಬಾಗಲಕೋಟೆ: NWKRTC ಬಸ್​ ಚಾಲಕ, ಕಂಡಕ್ಟರ್​ ಮೇಲೆ ಕಟ್ಟಿಗೆಯಿಂದ ಹಲ್ಲೆ​
ಬಾಗಲಕೋಟೆ: NWKRTC ಬಸ್​ ಚಾಲಕ, ಕಂಡಕ್ಟರ್​ ಮೇಲೆ ಕಟ್ಟಿಗೆಯಿಂದ ಹಲ್ಲೆ​
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ