AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: 15 ಸಾವಿರ ಅಡಿ ಎತ್ತರದಲ್ಲಿ, ಹಿಮಾಚ್ಛಾದಿತ ಪ್ರದೇಶದಲ್ಲಿ ಧ್ವಜಾರೋಹಣ ಮಾಡಿ, ಸಂಭ್ರಮಿಸಿದ ಐಟಿಬಿಪಿ ಹಿಮವೀರರು !

Republic Day 2022: ಇವತ್ತು ಐಟಿಬಿಪಿಯ ಡೇರ್​ ಡೆವಿಲ್​ ಬೈಕರ್​ಗಳು ರಾಜಪಥ್​​ನಲ್ಲಿ ನಡೆಯಲಿರುವ ಪರೇಡ್​ನಲ್ಲಿ 10 ವಿವಿಧ ರೀತಿಯ ರಚನೆಗಳನ್ನು ಪ್ರದರ್ಶನ ಮಾಡಲಿದ್ದಾರೆ.

Video: 15 ಸಾವಿರ ಅಡಿ ಎತ್ತರದಲ್ಲಿ, ಹಿಮಾಚ್ಛಾದಿತ ಪ್ರದೇಶದಲ್ಲಿ ಧ್ವಜಾರೋಹಣ ಮಾಡಿ, ಸಂಭ್ರಮಿಸಿದ ಐಟಿಬಿಪಿ ಹಿಮವೀರರು !
ಲಡಾಖ್​ ಬಳಿ 15 ಸಾವಿರ ಅಡಿ ಎತ್ತರದಲ್ಲಿ ಧ್ವಜಾರೋಹಣ ಮಾಡಿದ ಐಟಿಬಿಪಿ
TV9 Web
| Updated By: Lakshmi Hegde|

Updated on:Jan 26, 2022 | 10:09 AM

Share

ಭಾರತ ಇಂದು 73ನೇ ಗಣರಾಜ್ಯೋತ್ಸವ ಆಚರಿಸುತ್ತಿದೆ. ಎಲ್ಲೆಡೆ ಧ್ವಜಾರೋಹಣ ನಡೆಸಲಾಗುತ್ತಿದೆ. ಅದರಲ್ಲಿ ತುಂಬ ಗಮನ ಸೆಳೆದಿದ್ದು, ಇಂಡೋ-ಟಿಬೆಟಿಯನ್​ ಬಾರ್ಡರ್ ಪೊಲೀಸ್​ (ITBP) ಪಡೆಯ ಸಿಬ್ಬಂದಿಯ ಧ್ವಜಾರೋಹಣ. ಇವರು ಲಡಾಖ್​ ಗಡಿಯಲ್ಲಿರುವ ಸುಮಾರು 15 ಸಾವಿರ ಅಡಿ ಎತ್ತರದ ಪ್ರದೇಶದಲ್ಲಿ, ಮೈನಸ್​ 35 ಡಿಗ್ರಿ ಸೆಲ್ಸಿಯಸ್​ ತಾಪಮಾನದಲ್ಲಿ  ಧ್ವಜಾರೋಹಣ ಮಾಡಿ, ಗಣರಾಜ್ಯೋತ್ಸವ ಆಚರಣೆ ಮಾಡಿದ್ದಾರೆ. ಹಿಮಾಚ್ಛಾದಿತ ಪ್ರದೇಶದಲ್ಲಿ, ಅಷ್ಟೇ ಬಿಳಿ ಬಣ್ಣದ ಸಮವಸ್ತ್ರ ಧರಿಸಿದ ಯೋಧರು, ಕೈಯಲ್ಲಿ ರಾಷ್ಟ್ರ ಧ್ವಜ ಹಿಡಿದು, ಭಾರತ್​ ಮಾತಾ ಕೀ ಜೈ ಎನ್ನುತ್ತ ಸಾಗಿದ್ದಾರೆ. ಈ ವಿಡಿಯೋವನ್ನು ಐಟಿಬಿಪಿ ಟ್ವಿಟರ್​ ಅಕೌಂಟ್​​ನಿಂದ ಶೇರ್​ ಮಾಡಲಾಗಿದೆ. ಅಂದಹಾಗೇ, ಯೋಧರು ಕೇವಲ ಲಡಾಖ್​​ನಲ್ಲಷ್ಟೇ ಅಲ್ಲ, ಹೀಗೆ ಭಾರತದ ಅತ್ಯಂತ ಎತ್ತರದ ಪ್ರದೇಶಗಳಲ್ಲಿ, ಹಿಮಾಚ್ಛಾದಿತ ಸ್ಥಳಗಳಲ್ಲಿ ಚಳಿಯ ಮಧ್ಯೆ ಗಣರಾಜ್ಯೋತ್ಸವ ಆಚರಣೆ ಮಾಡಿದ್ದಾರೆ. ಅಂದಹಾಗೇ, ಈ ಪ್ರದೇಶಗಳಲ್ಲಿ ದೇಶ ಕಾಯುವವರನ್ನು ಹಿಮವೀರರು ಎಂದೇ ಕರೆಯಲಾಗುತ್ತದೆ.

ಹಾಗೇ, ಉತ್ತರಾಖಂಡ್​ನ ಔಲಿ ಎಂಬಲ್ಲಿ ಕೂಡ ಮೈನಸ್​ 20 ಡಿಗ್ರಿ ಸೆಲ್ಸಿಯಸ್​ ತಾಪಮಾನದಲ್ಲಿ, 11 ಸಾವಿರ ಅಡಿ ಎತ್ತರದಲ್ಲಿ ಐಟಿಬಿಪಿ ಸೈನಿಕರು ಧ್ವಜಾರೋಹಣ ನಡೆಸಿದ್ದಾರೆ. ಇವರು ತ್ರಿವರ್ಣ ಧ್ವಜ ಎತ್ತಿ ಹಿಡಿದು ಅಲ್ಲೇ ಪಥ ಸಂಚಲನ ಮಾಡಿದ ವಿಡಿಯೋ ಕೂಡ ವೈರಲ್ ಆಗಿದೆ.

ಅಂದಹಾಗೆ, ಇವತ್ತು ಐಟಿಬಿಪಿಯ ಡೇರ್​ ಡೆವಿಲ್​ ಬೈಕರ್​ಗಳು ರಾಜಪಥ್​​ನಲ್ಲಿ ನಡೆಯಲಿರುವ ಪರೇಡ್​ನಲ್ಲಿ 10 ವಿವಿಧ ರೀತಿಯ ರಚನೆಗಳನ್ನು ಪ್ರದರ್ಶನ ಮಾಡಲಿದ್ದಾರೆ. ಇಷ್ಟು ವಿಧದ ಸಾಹಸ ರಚನೆಗಳನ್ನು ಐಟಿಬಿಪಿ ಸಿಬ್ಬಂದಿ ಪ್ರದರ್ಶಿಸುತ್ತಿರುವುದು ಇದೇ ಮೊದಲ ಬಾರಿ ಎನ್ನಲಾಗಿದೆ. 1962ರಲ್ಲಿ ಐಟಿಬಿಪಿ ರಚನೆಯಾಗಿದೆ.

ಇದನ್ನೂ ಓದಿ: Republic Day 2022: ಕರ್ನಾಟಕದ ಜನತೆಯನ್ನು ಉದ್ದೇಶಿಸಿ ರಾಜ್ಯಪಾಲ ಥಾವರ್​ ಚಂದ್ ಗೆಹ್ಲೋಟ್ ಭಾಷಣ

Published On - 9:56 am, Wed, 26 January 22

ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ