Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪ್ಪ ಮಾಧವರಾವ್​ ಸಿಂಧಿಯಾ ನಿಭಾಯಿಸಿದ್ದ ನಾಗರಿಕ ವಿಮಾನಯಾನ ಖಾತೆಯನ್ನೇ ಪಡೆದ ಜ್ಯೋತಿರಾದಿತ್ಯ ಸಿಂಧಿಯಾ; ಅಂದು ಅವರು ವಿಫಲರಾಗಿದ್ದರು..

ಮಾಧವರಾವ್​ ಮೂಲತಃ ಜನಸಂಘ (ಈಗಿನ ಬಿಜೆಪಿ..ಸ್ಥಾಪನೆಯಾಗುವಾಗ ಜನಸಂಗ ಎಂಬ ಹೆಸರಿತ್ತು)ದ ನಾಯಕ. ಆದರೆ ನಂತರ ಇಂದಿರಾ ಗಾಂಧಿ ಆಡಳಿತವಿದ್ದಾಗಲೇ ಕಾಂಗ್ರೆಸ್ ಸೇರ್ಪಡೆಯಾದರು.

ಅಪ್ಪ ಮಾಧವರಾವ್​ ಸಿಂಧಿಯಾ ನಿಭಾಯಿಸಿದ್ದ ನಾಗರಿಕ ವಿಮಾನಯಾನ ಖಾತೆಯನ್ನೇ ಪಡೆದ ಜ್ಯೋತಿರಾದಿತ್ಯ ಸಿಂಧಿಯಾ; ಅಂದು ಅವರು ವಿಫಲರಾಗಿದ್ದರು..
ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಮಾಧವರಾವ್​ ಸಿಂಧಿಯಾ
Follow us
TV9 Web
| Updated By: Lakshmi Hegde

Updated on:Jul 08, 2021 | 11:34 AM

ಕೊರೊನಾ ಸಾಂಕ್ರಾಮಿಕದ ಪ್ರಾರಂಭದ ಹೊತ್ತಲ್ಲೇ ಮಧ್ಯಪ್ರದೇಶದವನ್ನು ಬಿಜೆಪಿ ಮಡಿಲಿಗೆ ಹಾಕಿಕೊಟ್ಟ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಪ್ರಧಾನಿ ಮೋದಿ ಭರ್ಜರಿ ಗಿಫ್ಟ್​ ಕೊಟ್ಟಿದ್ದಾರೆ. ಅಂತೂ ಕೇಂದ್ರ ಸಂಪುಟ ವಿಸ್ತರಣೆ ಹೊತ್ತಲ್ಲಿ ಕ್ಯಾಬಿನೆಟ್​ ದರ್ಜೆಯ ಮಂತ್ರಿಗಿರಿ ಅವರ ಪಾಲಿಗೆ ದೊರೆತಿದೆ. ಖಾತೆ ಹಂಚಿಕೆಯನ್ನೂ ಮಾಡಲಾಗಿದ್ದು, ನಾಗರಿಕ ವಿಮಾನಯಾನ ಇಲಾಖೆಯ ಜವಾಬ್ದಾರಿ ಜ್ಯೋತಿರಾದಿತ್ಯ ಸಿಂಧಿಯಾರವರ ಹೆಗಲಿಗೇರಿದೆ.

ಇಷ್ಟುದಿನ ಹರ್ದೀಪ್​ ಸಿಂಗ್​ ಪುರಿ ಕೈಯಲ್ಲಿದ್ದ ಸಿವಿಲ್​ ಏವಿಯೇಶನ್​ ಇಲಾಖೆ ಜ್ಯೋತಿರಾದಿತ್ಯ ಸಿಂಧಿಯಾರಿಗೆ ನೀಡಲಾಗಿದೆ. ಆದರೆ ಇದರಲ್ಲೊಂದು ವಿಶೇಷತೆ ಇದೆ. ಅದೇನೆಂದರೆ ಸರಿಯಾಗಿ 30ವರ್ಷಗಳ ಹಿಂದೆ, ಪಿ.ವಿ.ನರಸಿಂಹ ರಾವ್​ ಪ್ರಧಾನಮಂತ್ರಿಯಾಗಿದ್ದಾಗ ಈ ನಾಗರಿಕ ವಿಮಾನಯಾನ ಖಾತೆ ಸಚಿವರಾಗಿ ಜ್ಯೋತಿರಾದಿತ್ಯ ಸಿಂಧಿಯಾ ತಂದೆ ಮಾಧವರಾವ್​ ಸಿಂಧಿಯಾ ನೇಮಕರಾಗಿದ್ದರು. ಇವರು 1991ರಿಂದ 1993ರವರೆಗೆ ನಾಗರಿಕ ವಿಮಾನಯಾನ ಮತ್ತು ಪ್ರವಾಸೋದ್ಯಮ ಇಲಾಖೆಗಳ ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸಿದ್ದನ್ನು ಖಂಡಿತ ಇಲ್ಲಿ ನೆನಪಿಸಿಕೊಳ್ಳಲೇಬೇಕು.

ತಂದೆ-ಮಗನ ನಡುವಿನ ಸಾಮ್ಯತೆ ಮಾಧವರಾವ್​ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ನಡುವೆ ಹಲವು ಸಾಮ್ಯತೆಗಳು ಗೋಚರಿಸುತ್ತವೆ. ಇವರಿಬ್ಬರೂ ನಾಗರಿಕ ವಿಮಾನಯಾನ ಸಚಿವರಾಗುವುದಕ್ಕೂ ಮೊದಲು ಕೇಂದ್ರ ಮಂತ್ರಿಗಳಾಗಿ ಬೇರೆ ಬೇರೆ ಇಲಾಖೆಯನ್ನು ನಿಭಾಯಿಸಿದ್ದರು. ಮಾಧವರಾವ್​ ಅವರು ಪಿ.ವಿ.ನರಸಿಂಹರಾವ್ ಸರ್ಕಾರದಲ್ಲಿ ಸಿವಿಲ್​ ಏವಿಯೇಶನ್​ ಸಚಿವರಾಗುವುದಕ್ಕೂ ಮೊದಲು ರಾಜೀವ್​ ಗಾಂಧಿ ಪ್ರಧಾನಿಯಾಗಿದ್ದಾಗ ಕೇಂದ್ರ ರೈಲ್ವೆ ಸಚಿವರಾಗಿದ್ದರು. ಹಾಗೇ ಜ್ಯೋತಿರಾದಿತ್ಯ ಸಿಂಧಿಯಾ ಮನಮೋಹನ್​ ಸಿಂಗ್​ ಪ್ರಧಾನಿಯಾಗಿದ್ದಾಗ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.

ನಾವಿಲ್ಲಿ ಮತ್ತೊಂದು ಮಹತ್ವದ ಅಂಶವನ್ನು ಪರಿಗಣಿಸಬಹುದು. ಮಾಧವರಾವ್​ ಮೂಲತಃ ಜನಸಂಘ (ಈಗಿನ ಬಿಜೆಪಿ..ಸ್ಥಾಪನೆಯಾಗುವಾಗ ಜನಸಂಘ ಎಂಬ ಹೆಸರಿತ್ತು)ದ ನಾಯಕ. ಆದರೆ ನಂತರ ಇಂದಿರಾ ಗಾಂಧಿ ಆಡಳಿತವಿದ್ದಾಗಲೇ ಕಾಂಗ್ರೆಸ್ ಸೇರ್ಪಡೆಯಾದರು. ಹಾಗೇ, ಕಾಂಗ್ರೆಸ್​ನಲ್ಲಿಯೇ ಇದ್ದ ಜ್ಯೋತಿರಾದಿತ್ಯ ಸಿಂಧಿಯಾ ಗಾಂಧಿ ಕುಟುಂಬದ ಆಡಳಿತ, ನಿರ್ಲಕ್ಷ್ಯ ಮನೋಭಾವದಿಂದ ಬೇಸರಗೊಂಡು ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಇನ್ನು ಮಾಧವರಾವ್ ಸಿಂಧಿಯಾ​ ಅವರು ನಾಗರಿಕ ವಿಮಾನಯಾನ ಖಾತೆಯ ಜವಾಬ್ದಾರಿ ಹೊತ್ತ ಬಳಿಕ ಅದನ್ನು ನಿರ್ವಹಿಸಲು ಕಷ್ಟವಾಯಿತು. ರೈಲ್ವೆ ಸಚಿವರಾಗಿ ತುಂಬ ಹೆಸರುಗಳಿಸಿದ್ದ ಅವರಿಗೆ ವಿಮಾನಯಾನ ಖಾತೆ ಅಷ್ಟು ಒಗ್ಗಿರಲಿಲ್ಲ. ಕೊನೆಗೂ ಒಂದು ವಿಮಾನ ಅಪಘಾತದ ಸಂದರ್ಭದಲ್ಲಿ ಅವರು ರಾಜೀನಾಮೆ ಕೊಡಲೇಬೇಕಾಯಿತು. ಇದೀಗ ಜ್ಯೋತಿರಾದಿತ್ಯ ಸಿಂಧಿಯಾ ನಾಗರಿಕ ವಿಮಾನಯಾನ ಇಲಾಖೆ ಹೊಣೆ ಹೊತ್ತಿದ್ದಾರೆ. ಇವರಿಗೂ ಇದು ಸುಲಭದಲ್ಲಿ ಇಲ್ಲ. ಈ ಕ್ಷೇತ್ರ ತುಂಬ ತೊಂದರೆಯಲ್ಲಿದೆ. ಇದಕ್ಕೆ ಮುಖ್ಯ ಕಾರಣ ಕೊರೊನಾ ಸಾಂಕ್ರಾಮಿಕ. ಅಂದು ಮಾಧವರಾವ್​​ ಸಿಂಧಿಯಾ ಈ ಖಾತೆ ನಿಭಾಯಿಸಲು ವಿಫಲರಾದರು..ಆದರೆ ಪುತ್ರ ಜ್ಯೋತಿರಾದಿತ್ಯ ಸಿಂಧಿಯಾ ಪೂರ್ಣಗೊಳಿಸಲಿ..

ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಎರಡು ಹೆಬ್ಬಾವು ಸೆರೆ; ಒಂದು ಕುರಿ ಮರಿ ತಿಂದು ಮಲಗಿತ್ತು, ಮತ್ತೊಂದು ಬೇಟೆಗೆ ಸಿದ್ಧವಾಗಿತ್ತು

Jyotiraditya Scindia heads Civil Aviation ministry his father Madhavrao held

Published On - 11:20 am, Thu, 8 July 21

ತಾನೊಬ್ಬನೇ ಸಮಾಜದ ಪ್ರತಿನಿಧಿ ಅಂತ ಹೇಳೋದನ್ನ ಯತ್ನಾಳ್ ನಿಲ್ಲಿಸಬೇಕು: ಶಾಸಕ
ತಾನೊಬ್ಬನೇ ಸಮಾಜದ ಪ್ರತಿನಿಧಿ ಅಂತ ಹೇಳೋದನ್ನ ಯತ್ನಾಳ್ ನಿಲ್ಲಿಸಬೇಕು: ಶಾಸಕ
ಗಂಭೀರವಾಗಿ ಗಾಯಗೊಂಡಿರುವ ಪತಿ ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲು
ಗಂಭೀರವಾಗಿ ಗಾಯಗೊಂಡಿರುವ ಪತಿ ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲು
ಉತ್ತರ ಕರ್ನಾಟಕದಲ್ಲಿ ನೀರು ಪೋಲಾಗಲು ಬಿಡೋದು ಕ್ರಿಮಿನಲ್ ಅಪರಾಧ
ಉತ್ತರ ಕರ್ನಾಟಕದಲ್ಲಿ ನೀರು ಪೋಲಾಗಲು ಬಿಡೋದು ಕ್ರಿಮಿನಲ್ ಅಪರಾಧ
ಅಣ್ಣಮ್ಮ ದೇವಾಲಯಕ್ಕೆ ಭೇಟಿ ನೀಡಿದ್ದೇಕೆ ವಿಜಯಲಕ್ಷ್ಮಿ, ಇಲ್ಲಿದೆ ಮಾಹಿತಿ
ಅಣ್ಣಮ್ಮ ದೇವಾಲಯಕ್ಕೆ ಭೇಟಿ ನೀಡಿದ್ದೇಕೆ ವಿಜಯಲಕ್ಷ್ಮಿ, ಇಲ್ಲಿದೆ ಮಾಹಿತಿ
ಗುತ್ತಿಗೆದಾರರು ಈ ಸರ್ಕಾರವನ್ನೂ ಅಧಿಕಾರದಿಂದ ಕೆಳಗಿಳಿಸಲಿದ್ದಾರೆ: ಸೋಮಣ್ಣ
ಗುತ್ತಿಗೆದಾರರು ಈ ಸರ್ಕಾರವನ್ನೂ ಅಧಿಕಾರದಿಂದ ಕೆಳಗಿಳಿಸಲಿದ್ದಾರೆ: ಸೋಮಣ್ಣ
ಪುಣ್ಯಸ್ನಾನ ಮಾಡಿ ಸಂಗಮ ತೀರದಲ್ಲೇ ಬಟ್ಟೆ ಬಿಸಾಡಿ ಹೋಗುತ್ತಿರುವ ಜನ
ಪುಣ್ಯಸ್ನಾನ ಮಾಡಿ ಸಂಗಮ ತೀರದಲ್ಲೇ ಬಟ್ಟೆ ಬಿಸಾಡಿ ಹೋಗುತ್ತಿರುವ ಜನ
ಎಲೆಕೋಸು ಬೆಲೆ ದಿಢೀರ್​​ ಕುಸಿತ: ಕುರಿಗಳನ್ನ ಬಿಟ್ಟು ಬೆಳೆ ನಾಶ ಪಡಿಸಿದ ರೈತ
ಎಲೆಕೋಸು ಬೆಲೆ ದಿಢೀರ್​​ ಕುಸಿತ: ಕುರಿಗಳನ್ನ ಬಿಟ್ಟು ಬೆಳೆ ನಾಶ ಪಡಿಸಿದ ರೈತ
ಸಂಸದರಾಗಿ 50ನೇ ಬಾರಿಗೆ ವಾರಾಣಸಿಗೆ ಪ್ರಧಾನಿ ಮೋದಿ ಭೇಟಿ
ಸಂಸದರಾಗಿ 50ನೇ ಬಾರಿಗೆ ವಾರಾಣಸಿಗೆ ಪ್ರಧಾನಿ ಮೋದಿ ಭೇಟಿ
ಅಂಬೇಡ್ಕರ್ ಎರಡು ಬಾರಿ ಚುನಾವಣೆಯಲ್ಲಿ ಸೋಲುವಂತೆ ಮಾಡಿದ್ದು ನೆಹರೂ: ಕಾರಜೋಳ
ಅಂಬೇಡ್ಕರ್ ಎರಡು ಬಾರಿ ಚುನಾವಣೆಯಲ್ಲಿ ಸೋಲುವಂತೆ ಮಾಡಿದ್ದು ನೆಹರೂ: ಕಾರಜೋಳ
ಕರಡಿಗಳಲ್ಲಿ ಮಾನವರ ಮೇಲೆ ಹಲ್ಲೆ ಮಾಡುವ ಪ್ರವೃತ್ತಿ, ಕೆಲವೊಮ್ಮೆ ಮಾರಣಾಂತಿಕ
ಕರಡಿಗಳಲ್ಲಿ ಮಾನವರ ಮೇಲೆ ಹಲ್ಲೆ ಮಾಡುವ ಪ್ರವೃತ್ತಿ, ಕೆಲವೊಮ್ಮೆ ಮಾರಣಾಂತಿಕ