AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುಎಸ್​​ನಲ್ಲಿ ಕೇರಳದ ಯುವತಿಯ ಹತ್ಯೆ; ಮನೆಯಲ್ಲಿ ಮಲಗಿದ್ದವಳ ದೇಹಕ್ಕೆ ಸೀಲಿಂಗ್​ ತೂರಿಕೊಂಡು ಬಂದು ಹೊಕ್ಕಿತು ಬುಲೆಟ್​

ಹತ್ಯೆ ನಡೆಯಲು ಕಾರಣವೇನು? ಹತ್ಯೆ ಮಾಡಿದವರು ಯಾರೆಂದು ಇನ್ನೂ ತಿಳಿದುಬಂದಿಲ್ಲ. ಮ್ಯಾಂಟ್ಗೋಮೆರಿ ಪೊಲೀಸರು ಈಗಾಗಲೇ ತನಿಖಯನ್ನು ಪ್ರಾರಂಭಿಸಿದ್ದಾರೆ.

ಯುಎಸ್​​ನಲ್ಲಿ ಕೇರಳದ ಯುವತಿಯ ಹತ್ಯೆ; ಮನೆಯಲ್ಲಿ ಮಲಗಿದ್ದವಳ ದೇಹಕ್ಕೆ ಸೀಲಿಂಗ್​ ತೂರಿಕೊಂಡು ಬಂದು ಹೊಕ್ಕಿತು ಬುಲೆಟ್​
ಮೃತ ಯುವತಿ
TV9 Web
| Edited By: |

Updated on: Nov 30, 2021 | 1:03 PM

Share

ಯುನೈಟೆಡ್​ ಸ್ಟೇಟ್ಸ್​​ನಲ್ಲಿದ್ದ ಕೇರಳದ 19 ವರ್ಷದ ಯುವತಿಯ ಹತ್ಯೆಯಾಗಿದೆ. ಯುಎಸ್​ನ ಅಲಬಾಮಾ ರಾಜಧಾನಿ ಮ್ಯಾಂಟ್ಗೋಮೆರಿಯಲ್ಲಿ ಈ ಯುವತಿ ವಾಸವಾಗಿದ್ದರು. ಮೃತ ಯುವತಿಯನ್ನು ಮರಿಯಾಮ್​ ಸುಸಾನ್​ ಮ್ಯಾಥ್ಯೂ ಎಂದು ಗುರುತಿಸಲಾಗಿದೆ. ಈಕೆ ತಮ್ಮ ಮನೆಯೊಳಗೆ ಮಲಗಿದ್ದರು. ಈ ವೇಳೆ ಬುಲೆಟ್​ ಮೇಲಿನ ಮಹಡಿಯ ಸೀಲಿಂಗ್​​ ಬೇಧಿಸಿ​, ತೂರಿಕೊಂಡು ಬಂದು ಇವರ ದೇಹವನ್ನು ಹೊಕ್ಕಿದೆ.  ಸುಸಾನ್​ ಮೂಲತಃ ಕೇರಳದ ತಿರುವಲ್ಲಾದವರು. ಇಲ್ಲಿನ ನಿರಣಂ ಸಮೀಪದ ಎಡಪ್ಪಲ್ಲಿ ಪರಂಬಿಲ್​ ಮನೆಯ ಬೋಬನ್​ ಮ್ಯಾಥ್ಯೂ ಮತ್ತು ಬಿನ್ಸಿ ದಂಪತಿಯ ಪುತ್ರಿಯಾಗಿದ್ದು, ಬಸಿಲ್ ಮತ್ತು ಬಿಮಲ್​ ಎಂಬ ಇಬ್ಬರು ಸೋದರರೂ ಇದ್ದಾರೆ. 

ಹತ್ಯೆ ನಡೆಯಲು ಕಾರಣವೇನು? ಹತ್ಯೆ ಮಾಡಿದವರು ಯಾರೆಂದು ಇನ್ನೂ ತಿಳಿದುಬಂದಿಲ್ಲ. ಮ್ಯಾಂಟ್ಗೋಮೆರಿ ಪೊಲೀಸರು ಈಗಾಗಲೇ ತನಿಖಯನ್ನು ಪ್ರಾರಂಭಿಸಿದ್ದಾರೆ. ಸೌತ್​ವೆಸ್ಟ್ ಅಮೆರಿಕದ ಮಲಂಕರಾ ಆರ್ಥಡೆಕ್ಸ್​ ಚರ್ಚ್​​ ಡಯಾಸಿಸ್​ನ ಫಾದರ್​  ಜಾನ್ಸನ್​ ಪಾಪಚ್ಚನ್​ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದು, ಮರಿಯಮ್ ಸುಸಾನ್ ಮ್ಯಾಥ್ಯೂ ಅವರು ತಮ್ಮ ಮನೆಯಲ್ಲಿ ಮಲಗಿದ್ದರು. ಈ ವೇಳೆ ಆಕೆಯ ಮನೆಯ ಮೇಲಿನ ಮಹಡಿಯಲ್ಲಿ ವಾಸವಾಗಿದ್ದವರು ಗುಂಡು ಹಾರಿಸಿದ್ದಾರೆ. ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು  ಹೇಳಿದ್ದಾರೆ.  ಸದ್ಯ ಸುಸಾನ್ ಮೃತದೇಹವನ್ನು ಕೇರಳದ ಆಕೆಯ ಹುಟ್ಟೂರಿಗೆ ತಿರಲು ಸಿದ್ಧತೆ ನಡೆಯುತ್ತಿದೆ. ಕಾನೂನು ಪ್ರಕ್ರಿಯೆಗಳನ್ನು ನಡೆಸಲಾಗುತ್ತಿದೆ ಎಂದು ಹೇಳಲಾಗಿದೆ.

ಕಳೆದ ಏಳು ದಿನಗಳಲ್ಲಿ ಮ್ಯಾಂಟ್ಗೊಮೇರಿಯಲ್ಲಿ ನಡೆದ ಎರಡನೇ ಶೂಟೌಟ್​ ಪ್ರಕರಣ ಇದಾಗಿದೆ. ಕೆಲವು ದಿನಗಳ ಹಿಂದೆ ಇಲ್ಲಿ ಥ್ಯಾಂಕ್ಸ್​ಗಿವಿಂಗ್​ ಹಾಲಿಡೇ ಆಚರಣೆ ಸಮಾರಂಭ ನಡೆದಿತ್ತು. ಈ ವೇಳೆ ಯುವಕನೊಬ್ಬನಿಗೆ ಗುಂಡು ಹೊಡೆದು ಕೊಲ್ಲಲಾಗಿತ್ತು.

ಇದನ್ನೂ ಓದಿ: ಕರ್ನಾಟಕದಲ್ಲಿ ಸದ್ಯಕ್ಕೆ ಲಾಕ್​ಡೌನ್ ಇಲ್ಲ; ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟತೆ

ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ