AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇರಳದಲ್ಲಿ ಜಿಯೋ ನೆಟ್​ವರ್ಕ್​ ನಿಷೇಧವಾಗಲಿದೆಯಾ? ವೈರಲ್ ಪೋಸ್ಟ್​ ಹಿಂದಿನ ಸತ್ಯವೇನು?

ಈ ಬಗ್ಗೆ ಕೇರಳ ರಾಜ್ಯ ಐಟಿ ಕಾರ್ಯದರ್ಶಿ ಮೊಹಮ್ಮದ್​ ವೈ ಸಫಿರುಲ್ಲಾ ಅವರನ್ನು ಸಂಪರ್ಕಿಸಿದಾಗ ಇನ್ನೂ ಸ್ಪಷ್ಟವಾದ ಮಾಹಿತಿ ಲಭ್ಯವಾಗಿದೆ. ರಾಜ್ಯ ಸರ್ಕಾರ ಯಾವುದೇ ಟೆಲಿಕಾಂ ನೆಟ್​ವರ್ಕ್​ನ್ನೂ ನಿಷೇಧಿಸುತ್ತಿಲ್ಲ. ಎಲ್ಲ ನೆಟ್​ವರ್ಕ್​ಗಳ ಸೇವೆಯೂ ಹಾಗೇ ಇರಲಿದೆ ಎಂದಿದ್ದಾರೆ.

ಕೇರಳದಲ್ಲಿ ಜಿಯೋ ನೆಟ್​ವರ್ಕ್​ ನಿಷೇಧವಾಗಲಿದೆಯಾ? ವೈರಲ್ ಪೋಸ್ಟ್​ ಹಿಂದಿನ ಸತ್ಯವೇನು?
ಜಿಯೋ 888 ರೂ. ಪ್ಲ್ಯಾನ್: ಜಿಯೋ ಪ್ರಿಪೇಯ್ಡ್ ಬಳಕೆದಾರರಿಗೆ 888 ರೂ. ಪ್ರಿಪೇಯ್ಡ್ ರೀಚಾರ್ಜ್ ಆಯ್ಕೆ ನೀಡಿದ್ದು, ಇದರ ವಾಲಿಡಿಟಿ 84 ದಿನಗಳು. ಈ ಪ್ಲ್ಯಾನ್​ನಲ್ಲೂ ಅನಿಯಮಿತ ಕರೆ ಹಾಗೂ ಪ್ರತಿ ದಿನ 2GB ಡೇಟಾ ಸಿಗಲಿದೆ. ಇನ್ನು ಬೋನಸ್ ಆಗಿ 5 ಜಿಬಿ 4 ಜಿ ಡೇಟಾವನ್ನು ಕೂಡ ನೀಡಲಿದೆ. ಅದರೊಂದಿಗೆ ಒಂದು ವರ್ಷದ ಡಿಸ್ನಿ+ ಹಾಟ್‌ಸ್ಟಾರ್ ಉಚಿತ ಚಂದಾದಾರಿಕೆ, ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋನ್ಯೂಸ್, ಜಿಯೋ ಸೆಕ್ಯುರಿಟಿ ಮತ್ತು ಜಿಯೋಕ್ಲೌಡ್ ಪ್ರವೇಶ ಪಡೆಯಬಹುದು.
Lakshmi Hegde
| Edited By: |

Updated on: Jan 02, 2021 | 7:33 PM

Share

ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ಕೇರಳ ಸರ್ಕಾರ ಬೆಂಬಲ ನೀಡಿದೆ. ಅದರ ಭಾಗವಾಗಿ ಡಿ.31ರಂದು ವಿಧಾನಸಭೆಯಲ್ಲಿ, ಕೇಂದ್ರದ 3 ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸಿದೆ. ಆದರೆ ಇದರ ಹೊರತಾಗಿ ಒಂದು ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ.

ಕೇರಳ ಸರ್ಕಾರ 2021ರಿಂದ ರಾಜ್ಯದಲ್ಲಿ ಜಿಯೋ ನೆಟ್​ವರ್ಕ್​ನ್ನು ನಿಷೇಧಿಸುತ್ತದೆ ಎಂಬುದು ವೈರಲ್ ಪೋಸ್ಟ್ ಸಾರಾಂಶ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಂಬಾನಿಗೆ ತಕ್ಕ ಉತ್ತರ ನೀಡುವ ಸಲುವಾಗಿ, ಕೇರಳ ಸರ್ಕಾರ 2021ರಿಂದ ಜಿಯೋ ನೆಟ್​ವರ್ಕ್​ನ್ನು ರಾಜ್ಯದಲ್ಲಿ ನಿಷೇಧಿಸಲಿದೆ. ಹಾಗೇ ಕೇರಳ ಫೈಬರ್​ ನೆಟ್​ ಎಂಬ ಹೊಸ ನೆಟ್ವರ್ಕ್​ನ್ನು ಪರಿಚಯಿಸಲಿದೆ. ಹಾಗೇ, ಜಿಯೋ ಫೋನ್​ನ ಅರ್ಧ ಬೆಲೆಗೆ ಕೇರಳ ಫೈಬರ್ ನೆಟ್​ನ ಫೋನ್​ಗಳು ಸಿಗಲಿವೆ ಎಂಬ ಅರ್ಥವನ್ನೊಳಗೊಂಡ ಹಿಂದಿ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ.

ಇದು ಪಕ್ಕಾ ಫೇಕ್​ ಸುದ್ದಿ ಆದರೆ ಈ ಸುದ್ದಿಯಲ್ಲಿ ಸತ್ಯವಿಲ್ಲ ಎಂಬುದು ಇಂಡಿಯಾ ಟುಡೆ ಆ್ಯಂಟಿ ಫೇಕ್​ ನ್ಯೂಸ್​ ವಾರ್​ ರೂಮ್​ನ ಫ್ಯಾಕ್ಟ್​ಚೆಕ್​​ನಲ್ಲಿ ತಿಳಿದುಬಂದಿದೆ. ಜಿಯೋವನ್ನು ನಿಷೇಧಿಸುವ ಬಗ್ಗೆಯಾಗಲಿ, ಸ್ವಂತ ನೆಟ್​ವರ್ಕ್​ ನೀಡುವ ಬಗ್ಗೆಯಾಗಲೀ ಸರ್ಕಾರ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ.. ನಿರ್ಣಯವನ್ನೂ ಅಂಗೀಕಾರ ಮಾಡಿಲ್ಲ ಎಂಬುದು ಸ್ಪಷ್ಟವಾಗಿದೆ.

ಕೇರಳ ಸರ್ಕಾರ ಜಿಯೋ ನಿಷೇಧಿಸುವ ಬಗ್ಗೆ ಸ್ಥಳೀಯ ಮಾಧ್ಯಮಗಳೂ ವರದಿ ಪ್ರಕಟಿಸಿಲ್ಲ. ಇನ್ನು ಸರ್ಕಾರ ತನ್ನ ಸ್ವಾಮ್ಯದ ಕೇರಳ ಫೈಬರ್​ ಆಪ್ಟಿಕ್​ ನೆಟ್​ವರ್ಕ್ (KFON) ಮೂಲಕ, ಸರ್ಕಾರಿ ಸಂಸ್ಥೆಗಳಿಗೆ ಮತ್ತು ಬಡತನ ರೇಖೆಗಿಂತ ಕೆಳಗೆ ಇರುವ 2ದಶಲಕ್ಷ ಕುಟುಂಬಗಳಿಗೆ ಉಚಿತ ಇಂಟರ್​ನೆಟ್​ ಒದಗಿಸಲು ಯೋಜನೆ ರೂಪಿಸಿದೆ ಎಂದು ನವೆಂಬರ್​ 2ರಂದು ಮಿಂಟ್ ಪ್ರಕಟಿಸಿದೆ. ಆದರೆ ಯಾವುದೇ ಖಾಸಗಿ ನೆಟ್​ವರ್ಕ್​ ನಿಷೇಧದ ಬಗ್ಗೆ ಎಲ್ಲಿಯೂ ವರದಿಯಾಗಿಲ್ಲ ಎಂದು ಇಂಡಿಯಾ ಟುಡೆ ಸ್ಪಷ್ಟಪಡಿಸಿದೆ.

ಐಟಿ ಕಾರ್ಯದರ್ಶಿ ಹೇಳಿದ್ದೇನು? ಈ ಬಗ್ಗೆ ಕೇರಳ ರಾಜ್ಯ ಐಟಿ ಕಾರ್ಯದರ್ಶಿ ಮೊಹಮ್ಮದ್​ ವೈ ಸಫಿರುಲ್ಲಾ ಅವರನ್ನು ಸಂಪರ್ಕಿಸಿದಾಗ ಇನ್ನೂ ಸ್ಪಷ್ಟವಾದ ಮಾಹಿತಿ ಲಭ್ಯವಾಗಿದೆ. ರಾಜ್ಯ ಸರ್ಕಾರ ಯಾವುದೇ ಟೆಲಿಕಾಂ ನೆಟ್​ವರ್ಕ್​ನ್ನೂ ನಿಷೇಧಿಸುತ್ತಿಲ್ಲ. ಎಲ್ಲ ನೆಟ್​ವರ್ಕ್​ಗಳ ಸೇವೆಯೂ ಹಾಗೇ ಇರಲಿದೆ. KFON ಯೋಜನೆಯನ್ನು ರಾಜ್ಯದಲ್ಲಿ ಅತಿ ವೇಗದ ನೆಟ್​ವರ್ಕ್​ ಒದಗಿಸುವ ಸಲುವಾಗಿ ಜಾರಿಗೊಳಿಸಲಾಗಿದೆ. ಇದು ಖಾಸಗಿ ನೆಟ್​ವರ್ಕ್​ಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ತಿಳಿಸಿದ್ದಾರೆ.

ಒಂದಲ್ಲಾ, ಎರಡಲ್ಲಾ, ₹3,269 ಕೋಟಿ ಹಗರಣ: ಎಸ್​ಬಿಐನಿಂದ ದೂರು ದಾಖಲು

Follow Us
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ