AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಲ್ಲಿಗೆ ಬಂದವರು ಯಾರು? ನಾವ್ಯಾರನ್ನೂ ಕಳಿಸಿಲ್ಲ: ದೆಹಲಿ ಶಾಸಕಿಗೆ ಕೇರಳ ಶಿಕ್ಷಣ ಸಚಿವರ ಪ್ರಶ್ನೆ, ಅಷ್ಟಕ್ಕೂ ಆಗಿದ್ದೇನು?

ಶನಿವಾರ ಆಪ್​ ಶಾಸಕಿ ಅತಿಶಿ ತಮ್ಮ ಟ್ವಿಟರ್​​ನಲ್ಲಿ ಒಂದಷ್ಟು ಜನರ ಫೋಟೋವನ್ನು ಹಂಚಿಕೊಂಡಿದ್ದರು. ಕೇರಳದ ಶಿಕ್ಷಣ ಕ್ಷೇತ್ರದ ಒಂದಷ್ಟು ಅಧಿಕಾರಿಗಳು ದೆಹಲಿಗೆ ಭೇಟಿಕೊಟ್ಟಿದ್ದರು ಎಂದು ಹೇಳಿದ್ದರು.

ಅಲ್ಲಿಗೆ ಬಂದವರು ಯಾರು? ನಾವ್ಯಾರನ್ನೂ ಕಳಿಸಿಲ್ಲ: ದೆಹಲಿ ಶಾಸಕಿಗೆ ಕೇರಳ ಶಿಕ್ಷಣ ಸಚಿವರ ಪ್ರಶ್ನೆ, ಅಷ್ಟಕ್ಕೂ ಆಗಿದ್ದೇನು?
ಕೇರಳ ಶಿಕ್ಷಣ ಸಚಿವ ವಾಸುದೇವನ್​ ಮತ್ತು ಆಪ್ ಶಾಸಕಿ ಅತಿಶಿ
TV9 Web
| Updated By: Lakshmi Hegde|

Updated on:Apr 25, 2022 | 11:45 AM

Share

ದೆಹಲಿಯಲ್ಲಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಗೊಳಿಸಿದ ರೀತಿಯಲ್ಲೇ ಕೇರಳದಲ್ಲೂ ಶಾಲೆಗಳನ್ನು ಉನ್ನತೀಕರಿಸಲು ಅಲ್ಲಿನ ಸರ್ಕಾರ ನಿರ್ಧರಿಸಿದೆ. ಹೀಗಾಗಿ ದೆಹಲಿ ಮಾದರಿ ಶಾಲೆಗಳ ಬಗ್ಗೆ ತಿಳಿಯಲು, ಯಾವೆಲ್ಲ ಯೋಜನೆಗಳನ್ನು ದೆಹಲಿ ಸರ್ಕಾರ ಅನುಷ್ಠಾನ ಮಾಡಿದೆ ಎಂಬುದನ್ನು ಅರಿಯಲು, ಕೇರಳ ಶಿಕ್ಷಣ ಇಲಾಖೆ ಕೆಲವರನ್ನು ಇಲ್ಲಿಗೆ ಕಳಿಸಿದೆ ಎಂದು ಆಮ್ ಆದ್ಮಿ ಪಕ್ಷದ ನಾಯಕಿ ಅತಿಶಿ ಮರ್ಲೇನಾ ಹೇಳಿದ್ದರು. ಅತಿಶಿಯವರ ಈ ಹೇಳಿಕೆಗೆ ಕೇರಳದ ಶಿಕ್ಷಣ ಮತ್ತು ಕಾರ್ಮಿಕ ಇಲಾಖೆ ಸಚಿವ ವಾಸುದೇವನ್​​ ಶಿವನಕುಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. ಟ್ವೀಟ್ ಮಾಡಿದ ವಾಸುದೇವನ್​, ದೆಹಲಿ ಮಾದರಿ ಶಾಲೆಗಳ ಬಗ್ಗೆ ತಿಳಿದುಕೊಂಡು ಬನ್ನಿ ಎಂದು ಕೇರಳ ಶಿಕ್ಷಣ ಇಲಾಖೆ ಯಾರನ್ನೂ ಕಳಿಸಿಲ್ಲ. ಹಾಗೇ, ಕೇರಳ ಮಾದರಿ ಕಲಿಕೆಯ ಬಗ್ಗೆ ತಿಳಿಯಲು ಕಳೆದ ತಿಂಗಳು ದೆಹಲಿಯಿಂದ ಇಲ್ಲಿಗೆ ಬಂದಿದ್ದ ಅಧಿಕಾರಿಗಳಿಗೆ ಎಲ್ಲ ರೀತಿಯ ನೆರವನ್ನೂ ನೀಡಲಾಯಿತು. ಆದರೆ ದೆಹಲಿಯಲ್ಲಿ ಆಪ್​ ಶಾಸಕಾರದ ಅತಿಶಿ ಕೇರಳದ ಯಾವ ಅಧಿಕಾರಿಗಳಿಗೆ ಸ್ವಾಗತ ಕೋರಿ, ದೆಹಲಿ ಮಾದರಿ ಶಾಲೆಗಳ ಬಗ್ಗೆ ತಿಳಿಸಿದರು ಎಂಬುದು ಅರ್ಥವಾಗುತ್ತಿಲ್ಲ ಎಂದು ವಾಸುದೇವನ್​ ಹೇಳಿಕೊಂಡಿದ್ದಾರೆ.

ಫೋಟೋ ಹಂಚಿಕೊಂಡಿದ್ದ ಅತಿಶಿ 

ಶನಿವಾರ ಆಪ್​ ಶಾಸಕಿ ಅತಿಶಿ ತಮ್ಮ ಟ್ವಿಟರ್​​ನಲ್ಲಿ ಒಂದಷ್ಟು ಜನರ ಫೋಟೋವನ್ನು ಹಂಚಿಕೊಂಡಿದ್ದರು. ಕೇರಳದ ಶಿಕ್ಷಣ ಕ್ಷೇತ್ರದ ಒಂದಷ್ಟು ಅಧಿಕಾರಿಗಳು ದೆಹಲಿಗೆ ಭೇಟಿಕೊಟ್ಟಿದ್ದರು. ಅವರು ಇಲ್ಲಿನ ಶಿಕ್ಷಣ ಮಾದರಿಯನ್ನು ಅರ್ಥ ಮಾಡಿಕೊಂಡು, ವಾಪಸ್ ಹೋಗಿ ಕೇರಳದಲ್ಲಿ ಅದನ್ನು ಜಾರಿಗೆ ತರಲು ಉತ್ಸುಕರಾಗಿದ್ದಾರೆ. ಹೀಗೆ ಬಂದವರಿಗೆ ಕಲ್ಕಾಜಿ ಶಾಲೆಯಲ್ಲಿ ಆತಿಥ್ಯ ವಹಿಸಲಾಯಿತು. ಅರವಿಂದ್ ಕೇಜ್ರಿವಾಲ್ ಅವರು ಶಿಕ್ಷಣ ಕ್ಷೇತ್ರದಲ್ಲಿ ಜಾರಿಗೆ ತಂದು, ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಮಾಡಿದ ಕ್ರಮಗಳ ಬಗ್ಗೆ ಅವರಿಗೆ ವಿವರಿಸಲಾಯಿತು ಎಂದು ಹೇಳಿದ್ದರು. ಆದರೆ ಕೇರಳದ ಶಿಕ್ಷಣ ಸಚಿವರು ಈಗ ತಾವ್ಯಾರನ್ನೂ ಕಳಿಸೇ ಇಲ್ಲ ಎನ್ನುತ್ತಿದ್ದಾರೆ.

ಹೀಗೆ ಕೇರಳದಿಂದ ಬಂದವರಲ್ಲಿ ಅಲ್ಲಿನ ಸಿಬಿಎಸ್​ಇ ಸ್ಕೂಲ್​ ಮ್ಯಾನೇಜ್​ಮೆಂಟ್​​ ಅಸೋಸಿಯೇಶನ್​​ನ ಪ್ರಾದೇಶಿಕ ಕಾರ್ಯದರ್ಶಿ ವಿಕ್ಟರ್​ ಟಿ.ಐ. ಕೂಡ ಇದ್ದರು. ಅವರು ಅತಿಶಿಯವರಿಗೆ ಮೊದಲೇ ಪತ್ರ ಬರೆದು, ತಮ್ಮ ಶಾಲೆಗಳಲ್ಲೂ ದೆಹಲಿ ಮಾದರಿ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೆ ತರಲು ಇಚ್ಛಿಸುತ್ತಿರುವುದಾಗಿ ಹೇಳಿದ್ದಾರೆ ಎಂದು ದೆಹಲಿ ಸರ್ಕಾರದ ಮೂಲಗಳು ತಿಳಿಸಿದ್ದಾಗಿ ಇಂಡಿಯನ್​ ಎಕ್ಸ್​ಪ್ರೆಸ್ ವರದಿ ಮಾಡಿತ್ತು. ಹಾಗೇ, ದೆಹಲಿಗೆ ಭೇಟಿ ಕೊಟ್ಟವರಿಗೆ ಅತಿಶಿಯವರೇ ಖುದ್ದಾಗಿ ನಿಂತು, ದೆಹಲಿ ಸರ್ಕಾರಿ ಶಾಲೆಗಳ ಕಲಿಕೆ ವ್ಯವಸ್ಥೆ, ಶಾಲಾ ಶಿಕ್ಷಕರ ಕೌಶಲ ವೃದ್ಧಿಗೆ ತೆಗೆದುಕೊಂಡಿರುವ ತರಬೇತಿ ಕ್ರಮಗಳ ಬಗ್ಗೆ ವಿವರಿಸಿದ್ದರು ಎಂದೂ ಹೇಳಲಾಗಿದೆ.

ಇದನ್ನೂ ಓದಿ: ‘ಆಚಾರ್ಯ’ ತಂಡದಿಂದ ನಟಿ ಕಾಜಲ್​ಗೆ ಅವಮಾನ; ಫ್ಯಾನ್ಸ್​ ಮನದಲ್ಲಿ ಮೂಡಿದೆ ದೊಡ್ಡ ಅನುಮಾನ

Published On - 11:44 am, Mon, 25 April 22

ಕೃಷ್ಣರಾಜ ಒಡೆಯರ್-ಸಿದ್ದರಾಮಯ್ಯ ಇಬ್ಬರೂ ಸಾಮಾಜಿಕ ಹರಿಕಾರರು: ಸಚಿವ
ಕೃಷ್ಣರಾಜ ಒಡೆಯರ್-ಸಿದ್ದರಾಮಯ್ಯ ಇಬ್ಬರೂ ಸಾಮಾಜಿಕ ಹರಿಕಾರರು: ಸಚಿವ
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ
ನಮ್ಮ ನಿರ್ಮಾಣದ ಎರಡು ಸಿನಿಮಾಗಳ ಶೂಟಿಂಗ್ ನಡೆಯುತ್ತಿದೆ: ಹೆಬ್ಬಾಳ್ಕರ್
ನಮ್ಮ ನಿರ್ಮಾಣದ ಎರಡು ಸಿನಿಮಾಗಳ ಶೂಟಿಂಗ್ ನಡೆಯುತ್ತಿದೆ: ಹೆಬ್ಬಾಳ್ಕರ್
ಮೈಸೂರು ಮಹಾರಾಜರಿಗಿಂತಲೂ ಸಿದ್ದರಾಮಯ್ಯ ಹೆಚ್ಚು:ತಂದೆಗೆ ಮಗ ಬಹುಪರಾಕ್
ಮೈಸೂರು ಮಹಾರಾಜರಿಗಿಂತಲೂ ಸಿದ್ದರಾಮಯ್ಯ ಹೆಚ್ಚು:ತಂದೆಗೆ ಮಗ ಬಹುಪರಾಕ್