AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Amritpal Singh: 5 ವಾಹನಗಳನ್ನು ಬದಲಿಸಿ ಬಂದೂಕು ತೋರಿಸಿ ಬೈಕ್ ಕದ್ದು ಪರಾರಿಯಾದ ಖಲಿಸ್ತಾನಿ ನಾಯಕ ಅಮೃತಪಾಲ್ ಸಿಂಗ್ ಪತ್ತೆಗೆ ಬಲೆ ಬೀಸಿದ ಪೊಲೀಸ್

ಬಂಧನದಿಂದ ತಪ್ಪಿಸಲು ಜಲಂಧರ್‌ನ ಶಾಕೋಟ್ ಪ್ರದೇಶದಲ್ಲಿ ಮಾರುತಿ ಬ್ರೀಜಾದಲ್ಲಿ ಪರಾರಿಯಾಗುವ ಮೊದಲು ಅಮೃತಪಾಲ್ ಸಿಂಗ್ ಮರ್ಸಿಡಿಸ್ ಎಸ್‌ಯುವಿಯೊಳಗೆ ಕಾಣಿಸಿಕೊಂಡಿದ್ದಾನೆ.

Amritpal Singh: 5 ವಾಹನಗಳನ್ನು ಬದಲಿಸಿ ಬಂದೂಕು ತೋರಿಸಿ ಬೈಕ್ ಕದ್ದು ಪರಾರಿಯಾದ ಖಲಿಸ್ತಾನಿ ನಾಯಕ ಅಮೃತಪಾಲ್ ಸಿಂಗ್ ಪತ್ತೆಗೆ ಬಲೆ ಬೀಸಿದ ಪೊಲೀಸ್
ಅಮೃತಪಾಲ್ ಸಿಂಗ್
ರಶ್ಮಿ ಕಲ್ಲಕಟ್ಟ
|

Updated on: Mar 23, 2023 | 1:11 PM

Share

ಜಲಂಧರ್: ಖಲಿಸ್ತಾನಿ ನಾಯಕ (Khalistani leader) ಅಮೃತಪಾಲ್ ಸಿಂಗ್ (Amritpal Singh)ಬಂಧನದಿಂದ ಪಾರಾಗಲು 12 ಗಂಟೆಗಳಲ್ಲಿ ಐದು ವಾಹನಗಳನ್ನು ಬದಲಾಯಿಸಿರುವುದಾಗಿ ಪೊಲೀಸರು ಪಂಜಾಬ್‌ನಾದ್ಯಂತ (Punjab) ಆತನ ಹುಡುಕಾಟವು 6 ನೇ ದಿನಕ್ಕೆ ಕಾಲಿಟ್ಟಿದೆ. ಅಮೃತಪಾಲ್ ಸಿಂಗ್ ನ ಸಹಾಯಕರಲ್ಲಿ ಒಬ್ಬನ ಬಿಡುಗಡೆಗಾಗಿ ಆತನ ಬೆಂಬಲಿಗರು ಆತನ ಕತ್ತಿ ಮತ್ತು ಬಂದೂಕುಗಳೊಂದಿಗೆ ಪೊಲೀಸ್ ಠಾಣೆಗೆ ನುಗ್ಗಿದ ಕೆಲವೇ ವಾರಗಳಲ್ಲಿ ಸಿಂಗ್ ನ್ನು ಬಂಧಿಸಲು ಪಂಜಾಬ್ ಪೊಲೀಸರು ಬೃಹತ್ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ. ಬಂಧನದಿಂದ  ತಪ್ಪಿಸಲು  ಜಲಂಧರ್‌ನ ಶಾಕೋಟ್ ಪ್ರದೇಶದಲ್ಲಿ ಮಾರುತಿ ಬ್ರೀಜಾದಲ್ಲಿ ಪರಾರಿಯಾಗುವ ಮೊದಲು ಸಿಂಗ್ ಮರ್ಸಿಡಿಸ್ ಎಸ್‌ಯುವಿಯೊಳಗೆ ಕಾಣಿಸಿಕೊಂಡನು. ಎನ್‌ಡಿಟಿವಿಗೆ ಲಭ್ಯವಾದ ಸಿಸಿಟಿವಿ ಫೂಟೇಜ್‌ನಲ್ಲಿ ಆತ ನಿಲುವಂಗಿಯ ಬದಲಿಗೆ ಶರ್ಟ್‌ನಲ್ಲಿ ಕಾಣಿಸಿಕೊಂಡಿದ್ದರಿಂದ ಆತ ಕಾರಿನಲ್ಲಿ ಬಟ್ಟೆಗಳನ್ನು ಬದಲಾಯಿಸಿದ್ದಾನೆ.

ನಂತರ ನಂಗಲ್ ಅಂಬಿಯಾನ್‌ನಲ್ಲಿ ಮತ್ತೊಂದು ಬದಲಾವಣೆ ನಡೆಯಿತು. ಅಲ್ಲಿ ಅಮೃತಪಾಲ್ ಸಿಂಗ್ ಪಪ್ಪಲ್ ಪ್ರೀತ್ ಎಂದು ಗುರುತಿಸಲ್ಪಟ್ಟ ತನ್ನ ಸಹಾಯಕರಲ್ಲಿ ಒಬ್ಬರೊಂದಿಗೆ ಬಜಾಜ್ ಪ್ಲಾಟಿನಾ ಮೋಟಾರ್‌ಸೈಕಲ್‌ನಲ್ಲಿ ಬಂದಿದ್ದಾನೆ.ಬೈಕ್‌ನಲ್ಲಿ ಇಂಧನ ಖಾಲಿಯಾದಾಗ ಸಹಚರರೊಂದಿಗೆ ದಾರಾಪುರದಲ್ಲಿ ಡೀಸೆಲ್ ಚಾಲಿತ ತ್ರಿಚಕ್ರ ವಾಹನದಲ್ಲಿ ಸಂಚರಿಸಿದ್ದಾನೆ.ನಂತರ, ಜನಪ್ರಿಯ ವಿಡಿಯೊ ಗೇಮ್ ಗ್ರ್ಯಾಂಡ್ ಥೆಫ್ಟ್ ಆಟೋದಲ್ಲಿರುವ ದೃಶ್ಯದಂತೆ ಅಮೃತಪಾಲ್ ಸಿಂಗ್ ಮತ್ತು ಪಪ್ಪಲ್ ಪ್ರೀತ್ ಬಂದೂಕು ತೋರಿಸಿ ಮೋಟಾರ್ ಸೈಕಲ್ ಅನ್ನು ಕದ್ದಿದ್ದಾರೆ. ಮಾರ್ಚ್ 18 ರಂದು ಸಂಜೆ 6:46 ರಿಂದ ಲೂಧಿಯಾನಾದ ಶೇಖುಪುರದಲ್ಲಿ ಇಬ್ಬರು ವ್ಯಕ್ತಿಗಳು ಕದ್ದ ಬೈಕ್‌ನಲ್ಲಿ ಪರಾರಿಯಾಗುತ್ತಿರುವುದನ್ನು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ಮೋದಿ ಉಪನಾಮ ಟೀಕೆ, ರಾಹುಲ್ ಗಾಂಧಿ ದೋಷಿ ಎಂದು ಸೂರತ್ ನ್ಯಾಯಾಲಯದಿಂದ ಮಹತ್ವದ ತೀರ್ಪು ಪ್ರಕಟ

ಖಲಿಸ್ತಾನಿ ನಾಯಕ ಪರಾರಿಯಾಗಲು ಬಳಸಿದ್ದ ಮರ್ಸಿಡಿಸ್ ಎಸ್‌ಯುವಿ, ಮಾರುತಿ ಬ್ರೆಜ್ಜಾ ಮತ್ತು ಬಜಾಜ್ ಪ್ಲಾಟಿನಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಅಮೃತಪಾಲ್ ಸಿಂಗ್ ಅವರ ಚಿಕ್ಕಪ್ಪ ಸೇರಿದಂತೆ 120 ಕ್ಕೂ ಹೆಚ್ಚು ಜನರನ್ನು ಶನಿವಾರದಿಂದ ಬಂಧಿಸಲಾಗಿದೆ. “ವಾರಿಸ್ ಪಂಜಾಬ್ ದೇ” ನ ಹಲವಾರು ಸದಸ್ಯರನ್ನು ಕಟ್ಟುನಿಟ್ಟಾದ ರಾಷ್ಟ್ರೀಯ ಭದ್ರತಾ ಕಾಯಿದೆ (NSA) ಅಡಿಯಲ್ಲಿ ವಶಕ್ಕೆ ತೆಗೆದುಕೊಂಡಿದ್ದುತ್ತು ಅಸ್ಸಾಂನ ದಿಬ್ರುಗಢ ಸೆಂಟ್ರಲ್ ಜೈಲಿನಲ್ಲಿ ಬಂಧಿಸಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ