ರಾಮಾಯಣ ಧಾರಾವಾಹಿಯಲ್ಲಿ ರಾಮನ ಪಾತ್ರ ನಿರ್ವಹಿಸಿದ್ದ ನಟ ಅರುಣ್ ಗೋವಿಲ್ ಬಿಜೆಪಿಗೆ ಸೇರ್ಪಡೆ

Arun Govil Joins BJP: ಜನಪ್ರಿಯ ಧಾರಾವಾಹಿ ರಾಮಾಯಣದಲ್ಲಿ ರಾಮನ ಪಾತ್ರ ನಿರ್ವಹಿಸಿದ್ದ ನಟ ಅರುಣ್ ಗೋವಿಲ್ ಗುರುವಾರ ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ರಾಮಾಯಣ ಧಾರಾವಾಹಿಯಲ್ಲಿ ರಾಮನ ಪಾತ್ರ ನಿರ್ವಹಿಸಿದ್ದ ನಟ ಅರುಣ್ ಗೋವಿಲ್ ಬಿಜೆಪಿಗೆ ಸೇರ್ಪಡೆ
ಬಿಜೆಪಿ ಸೇರಿದ ಅರುಣ್ ಗೋವಿಲ್

Updated on: Mar 18, 2021 | 6:17 PM

ನವದೆಹಲಿ: 80ರ ದಶಕದಲ್ಲಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ರಾಮಾಯಣದಲ್ಲಿ ರಾಮನ ಪಾತ್ರ ನಿರ್ವಹಿಸಿದ್ದ ನಟ ಅರುಣ್ ಗೋವಿಲ್ ಗುರುವಾರ ಬಿಜೆಪಿ ಸೇರಿದ್ದಾರೆ. ದೆಹಲಿಯಲ್ಲಿರುವ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಗೋವಿಲ್ ಬಿಜೆಪಿಗೆ ಸೇರ್ಪಡೆಯಾದರು. ತಮಿಳುನಾಡು, ಕೇರಳ, ಅಸ್ಸಾಂ, ಪಶ್ಚಿಮ ಬಂಗಾಳ, ಪುದುಚೇರಿಯಲ್ಲಿ ವಿಧಾನಸಭೆ ಚುನಾವಣೆಗೆ ಸಿದ್ಧತೆ ನಡೆಯುತ್ತಿರುವ ಹೊತ್ತಲ್ಲಿಯೇ ಗೋವಿಲ್ ಬಿಜೆಪಿ ಪಕ್ಷಕ್ಕೆ ಸೇರಿದ್ದಾರೆ.

ಮೀರತ್​ನ ಕಂಟೋನ್​ಮೆಂಟ್ ನಗರದಲ್ಲಿ ಹುಟ್ಟಿ ಬೆಳೆದ ವಾಟರ್​ವರ್ಕ್ಸ್ ಎಂಜಿನಿಯರ್ ಮಗವಾದ ಗೋವಿಲ್, ಶರಣ್ ಪುರ್ ಮತ್ತು ಶಹಜಾನ್ ಪುರ ನಲ್ಲಿರುವ ಶಾಲೆಯಲ್ಲಿ ಶಿಕ್ಷಣ ಪೂರೈಸಿದ್ದಾರೆೆ. ಮೀರತ್ ನಲ್ಲಿ ಬಿಎಸ್ಸಿ ಪದವಿಗೆ ಸೇರಿದ್ದ ಅವರು ಮಥುರಾದಲ್ಲಿ ಪದವಿ ಶಿಕ್ಷಣ ಪೂರ್ಣಗೊಳಿಸಿದ್ದರು .

1977ರಲ್ಲಿ ಬಜ್ರಾತಿಯಾ ಅವರ ರಾಜಶ್ರೀ ಪ್ರೊಡಕ್ಷನ್ ನಿರ್ಮಿಸಿದ ‘ಪಹೇಲಿ’ ಎಂಬ ಸಿನಿಮಾದಲ್ಲಿ ಯಶಸ್ಸು ಗಳಿಸಿದ ನಂತರ ರಾಮಾಯಣದಲ್ಲಿ ಅವರಿಗೆ ರಾಮನ ಪಾತ್ರ ಮಾಡಲು ಅವಕಾಶ ಲಭಿಸಿತ್ತು. ವರದಿಗಳ ಪ್ರಕಾರ ರಾಮಾಯಣ ಧಾರಾವಾಹಿಯ ವೀಕ್ಷಕರ ಸಂಖ್ಯೆ ಆ ಕಾಲದಲ್ಲಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸ್ಥಾನಗಿಟ್ಟಿಸಿಕೊಂಡಿತ್ತು. 2003ರವರೆಗೆ ಜಗತ್ತಿನಲ್ಲಿ ಅತೀ ಹೆಚ್ಚು ಮಂದಿ ವೀಕ್ಷಿಸಿ ಪೌರಾಣಿಕ ಕಥೆ ಆಧರಿತ ಧಾರಾವಾಹಿಯಾಗಿದೆ ರಾಮಾಯಣ.


ರಾಮಾಯಣ ಧಾರಾವಾಹಿಯ ನಂತರ ಪೌರಾಣಿಕ ಕಥೆ ಗಳನ್ನು ಆಧರಿಸಿದ ಧಾರವಾಹಿಗಳಾದ ಲವ್ ಕುಶ್ , ಹರಿಶ್ಚಂದ್ರ , ವಿಶ್ವಾಮಿತ್ರ , ಬುದ್ಧ ಮೊದಲಾದವುಗಳಲ್ಲಿ ನಟಿಸಿದ್ದಾರೆ. ಭೋಜ್ ಪುರಿ, ಬ್ರಜ್ ಭಾಷಾ, ಒಡಿಯಾ ಹಾಗೂ ತೆಲುಗು ಸಿನಿಮಾಗಳಲ್ಲಿಯೂ ಇವರು ನಟಿಸಿದ್ದಾರೆ.

 ಇದನ್ನೂ ಓದಿ: ಅಸ್ಸಾಂ ರಾಜಕಾರಣದಲ್ಲಿ ಅಭಿವೃದ್ಧಿ ಮಾತ್ರವಲ್ಲ, ಅಸ್ಮಿತೆಯೂ ನಿರ್ಣಾಯಕ ಪಾತ್ರ ವಹಿಸುತ್ತೆ: ಬಿಜೆಪಿ ನಾಯಕ ಹಿಮಂತ ಬಿಸ್ವ ಶರ್ಮಾ

Published On - 6:14 pm, Thu, 18 March 21