AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿವಾಹ ವಿಚ್ಛೇದನ ಪಡೆದ ಪತಿಯ ಕುಟುಂಬದ ಸದಸ್ಯನನ್ನು ಹೆಗಲಲ್ಲಿ ಹೊತ್ತು ನಡೆದ ಮಹಿಳೆ, ಅನ್ಯ ಪುರುಷನೊಂದಿಗಿನ ಸಂಬಂಧಕ್ಕೆ ಈ ಶಿಕ್ಷೆ!

Madhya Pradesh: ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ಅನ್ಯ ಪುರುಷನ ಜತೆ ಸಂಬಂಧ ಹೊಂದಿದ್ದಕ್ಕಾಗಿ ಮಾಜಿ ಪತಿಯ ಕುಟುಂಬದ ಸದಸ್ಯರೊಬ್ಬರನ್ನು ಹೆಗಲಲ್ಲಿ ಹೊತ್ತು ನಡೆಯುವಂತೆ ಮಹಿಳೆಗೆ ಶಿಕ್ಷೆ ನೀಡಲಾಗಿದೆ .

ವಿವಾಹ ವಿಚ್ಛೇದನ ಪಡೆದ ಪತಿಯ ಕುಟುಂಬದ ಸದಸ್ಯನನ್ನು ಹೆಗಲಲ್ಲಿ ಹೊತ್ತು ನಡೆದ ಮಹಿಳೆ, ಅನ್ಯ ಪುರುಷನೊಂದಿಗಿನ ಸಂಬಂಧಕ್ಕೆ ಈ ಶಿಕ್ಷೆ!
ಬಾಲಕನನ್ನು ಹೆಗಲಲ್ಲಿ ಹೊತ್ತು ನಡೆದ ಮಹಿಳೆ
ರಶ್ಮಿ ಕಲ್ಲಕಟ್ಟ
|

Updated on:Feb 16, 2021 | 11:58 AM

Share

ಭೋಪಾಲ್: ಮಧ್ಯ ಪ್ರದೇಶದ ಗುನಾ ಜಿಲ್ಲೆಯಲ್ಲಿ ವಿವಾಹ ವಿಚ್ಛೇದನ ಪಡೆದಿರುವ ಬುಡಕಟ್ಟು ಸಮುದಾಯದ ಮಹಿಳೆಯೊಬ್ಬರು ಅನ್ಯ ಪುರುಷನೊಂದಿಗೆ ಸಂಬಂಧ ಹೊಂದಿದ್ದಕ್ಕಾಗಿ ಆಕೆಯ ಮಾಜಿ ಪತಿಯ ಕುಟುಂಬದ ಸದಸ್ಯರೊಬ್ಬರನ್ನು ಹೆಗಲಲ್ಲಿ ಹೊತ್ತು ನಡೆಯುವ ಶಿಕ್ಷೆ ನೀಡಲಾಗಿದೆ.

ಮಾಜಿ ಪತಿಯ ಕುಟುಂಬದ ಸದಸ್ಯನಾದ ಬಾಲಕನೊಬ್ಬನನ್ನು ಹೆಗಲಲ್ಲಿ ಹೊತ್ತು ಈ ಮಹಿಳೆ  3 ಕಿಮೀ ನಡೆದಿದ್ದು, ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.  ಆಕೆಯ ಜತೆ ಗ್ರಾಮದ ಜನರು ಬೆತ್ತ ಮತ್ತು ಕ್ರಿಕೆಟ್ ಬ್ಯಾಟ್ ಹಿಡಿದು ನಡೆಯುತ್ತಿರುವ ದೃಶ್ಯ ವಿಡಿಯೊದಲ್ಲಿದೆ. ಕೆಲವರು ಆಕೆಯನ್ನು ಲೇವಡಿ ಮಾಡಿ ನಗುತ್ತಿರುವ ದನಿಯೂ ವಿಡಿಯೊ ಕೇಳಿಸುತ್ತಿದೆ.

ಗುನಾ ಜಿಲ್ಲೆಯ ಸಾಗೈ ಮತ್ತು ಬಾನ್ಸ್ ಖೇಡಿ ಗ್ರಾಮದ ನಡುವೆ ಇರುವ ಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿದ್ದು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಸಂತ್ರಸ್ತ ಮಹಿಳೆಯ ದೂರು ಪ್ರಕಾರ ಆಕೆ ಪತಿಗೆ ವಿವಾಹ ವಿಚ್ಛೇದನ ನೀಡಿದ್ದರು. ಇಬ್ಬರ ಸಮ್ಮತಿಯಿಂದಲೇ ವೈವಾಹಿಕ ಸಂಬಂಧದಿಂದ ಹೊರಬಂದಿದ್ದು ಆನಂತರ ಬೇರೆ ವ್ಯಕ್ತಿಯೊಂದಿಗೆ ಈಕೆ ಸಂಬಂಧ ಹೊಂದಿದ್ದರು. ಕಳೆದ ವಾರ ಮಾಜಿ ಪತಿಯ ಕುಟುಂಬದವರು ಮತ್ತು ಗ್ರಾಮದ ಕೆಲವು ಜನರು ಬಂದು ಆಕೆಯನ್ನು ಮನೆಯಿಂದ ಅಪಹರಿಸಿ ಕಿರುಕುಳ ನೀಡಿದ್ದಾರೆ.

ಇದನ್ನೂ ಓದಿ: ‘ಮಹಿಳೆಯರನ್ನ ರಕ್ಷಿಸ್ತೀವಿ ಅಂತಾ ಪ್ರಮಾಣ ಮಾಡಿದವ್ರು.. ಆಕೆಗೆ ಮುಟ್ಟಬಾರ್ದ ಜಾಗದಲ್ಲಿ ಕಿರುಕುಳ ನೀಡಿದ್ರು’

ಮಧ್ಯಪ್ರದೇಶದಲ್ಲಿ ಈ ರೀತಿಯ ಘಟನೆ ನಡೆದಿರುವುದು ಇದೇ ಮೊದಲ ಬಾರಿ ಅಲ್ಲ. ಕಳೆದ ವರ್ಷ ಜುಲೈ ತಿಂಗಳಲ್ಲಿ ಅನ್ಯ ಪುರುಷನೊಂದಿಗೆ ಸಂಬಂಧ ಹೊಂದಿದ ಆರೋಪದಲ್ಲಿ ಮಹಿಳೆಯೊಬ್ಬರ ಮೇಲೆ ಇದೇ ರೀತಿಯ ದೌರ್ಜನ್ಯ ನಡೆದಿತ್ತು.2019 ಏಪ್ರಿಲ್ ತಿಂಗಳಲ್ಲಿ ಬುಡಕಟ್ಟು ಸಮುದಾಯದವರಿರುವ ಝಭುವಾ ಜಿಲ್ಲೆಯಲ್ಲಿ ಪ್ರಿಯಕರನ ಜತೆ ಓಡಿ ಹೋದ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಗ್ರಾಮಸ್ಥರು, ಆಕೆಯ ಗಂಡನನ್ನು ಹೆಗಲಲ್ಲಿ ಹೊತ್ತು ನಡೆಯುುವ ಶಿಕ್ಷೆ ನೀಡಲಾಗಿತ್ತು.

Published On - 11:51 am, Tue, 16 February 21

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!