AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಾರಾಷ್ಟ್ರ ಮುಖ್ಯಮಂತ್ರಿ ಪುತ್ರ, ಸಚಿವ ಆದಿತ್ಯ ಠಾಕ್ರೆಗೆ ಕೊರೊನಾ ಸೋಂಕು..

Coronavirus: ನಾಗ್ಪುರದಲ್ಲಿ ಈಗಾಗಲೇ ಲಾಕ್​ಡೌನ್ ಹೇರಲಾಗಿದ್ದು, ನಾಳೆ ಅವಧಿ ಮುಕ್ತಾಯವಾಗುವುದಿತ್ತು. ಆದರೆ ಅದನ್ನೀಗ ವಿಸ್ತರಿಸಲಾಗಿದೆ. ಅಗತ್ಯ ವಸ್ತುಗಳು ಮಾತ್ರ ದೊರೆಯಲಿವೆ ಎಂದು ಸ್ಥಳೀಯ ಆಡಳಿತ ತಿಳಿಸಿದೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಪುತ್ರ, ಸಚಿವ ಆದಿತ್ಯ ಠಾಕ್ರೆಗೆ ಕೊರೊನಾ ಸೋಂಕು..
ಆದಿತ್ಯ ಠಾಕ್ರೆ
Lakshmi Hegde
|

Updated on: Mar 20, 2021 | 7:28 PM

Share

ಮಹಾರಾಷ್ಟ್ರದ ಪ್ರವಾಸೋದ್ಯಮ ಮತ್ತು ಪರಿಸರ ಖಾತೆ ಸಚಿವ ಆದಿತ್ಯ ಠಾಕ್ರೆ ಅವರಿಗೆ ಕೊರೊನಾ ಸೋಂಕು ತಗುಲಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಆದಿತ್ಯ ಠಾಕ್ರೆ, ನನಗೆ ಕೊವಿಡ್​ 19 ಲಕ್ಷಣ ಸಣ್ಣ ಪ್ರಮಾಣದಲ್ಲಿ ಕಾಣಿಸಿಕೊಂಡಿತ್ತು. ಹಾಗಾಗಿ ತಪಾಸಣೆ ಮಾಡಿಸಿದ್ದೆ. ವರದಿ ಪಾಸಿಟಿವ್​ ಬಂದಿದೆ. ಕಳೆದ ಕೆಲ ದಿನಗಳಿಂದ ನನ್ನ ಸಂಪರ್ಕಕ್ಕೆ ಬಂದ ಎಲ್ಲರೂ ಕೊವಿಡ್​-19 ತಪಾಸಣೆ ಮಾಡಿಸಿಕೊಳ್ಳಿ. ಕೊವಿಡ್​ ಸೋಂಕು ಮತ್ತೆ ಹೆಚ್ಚಿನ ಪ್ರಮಾಣದಲ್ಲಿ ಪ್ರಸರಣ ಆಗುತ್ತಿದೆ. ಪ್ರತಿಯೊಬ್ಬರೂ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಿ, ಎಚ್ಚರದಿಂದ ಇರಿ ಎಂದು ಹೇಳಿದ್ದಾರೆ.

ಆದಿತ್ಯ ಠಾಕ್ರೆಯವರು ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಪುತ್ರ. ಇಂದು ಸಂಜೆ 6.26ರ ಹೊತ್ತಿಗೆ ಟ್ವೀಟ್​ ಮಾಡಿ ತಮಗೆ ಕೊವಿಡ್​ ಸೋಂಕು ತಗುಲಿದ್ದನ್ನು ಸ್ಪಷ್ಟಪಡಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಕೊವಿಡ್​-19 ಎರಡನೇ ಅಲೆ ಸಿಕ್ಕಾಪಟೆ ಹೆಚ್ಚಾಗಿದೆ. ಶುಕ್ರವಾರ ಒಂದೇ ದಿನ 13,601 ಕೊರೊನಾ ಕೇಸ್​ಗಳು ದಾಖಲಾಗಿವೆ. ಹಾಗೇ 58 ಮಂದಿ ಮೃತಪಟ್ಟಿದ್ದಾರೆ. ಈ ರಾಜ್ಯದಲ್ಲಿ ಒಟ್ಟು ಸಕ್ರಿಯ ಸೋಂಕಿತರ ಸಂಖ್ಯೆ 1,676,37ಕ್ಕೆ ಏರಿಕೆಯಾಗಿದೆ. ಅದರಲ್ಲೂ ಐದು ಜಿಲ್ಲೆಗಳಾದ ಪುಣೆ (37,384), ನಾಗ್ಪುರ (25,861), ಮುಂಬೈ (18,850), ಥಾಣೆ(16,735) ಮತ್ತು ನಾಸಿಕ್​ಗಳು (11,867) ಮುಂಚೂಣಿಯಲ್ಲಿವೆ.

ನಾಗ್ಪುರದಲ್ಲಿ ಈಗಾಗಲೇ ಲಾಕ್​ಡೌನ್ ಹೇರಲಾಗಿದ್ದು, ನಾಳೆ ಅವಧಿ ಮುಕ್ತಾಯವಾಗುವುದಿತ್ತು. ಆದರೆ ಅದನ್ನೀಗ ವಿಸ್ತರಿಸಲಾಗಿದೆ. ಅಗತ್ಯ ವಸ್ತುಗಳು ಮಾತ್ರ ದೊರೆಯಲಿವೆ ಎಂದು ಸ್ಥಳೀಯ ಆಡಳಿತ ತಿಳಿಸಿದೆ. ಇನ್ನು ಅಮರಾವತಿ, ಯವತ್ಮಾಲ್, ಲಾತೂರ್​ಗಳಲ್ಲೂ ನಿರ್ಬಂಧ ಹೇರಲಾಗಿದ್ದು, ಔರಂಗಾಬಾದ್​ ಕಂಪ್ಲೀಟ್ ಲಾಕ್​ ಆಗಿದೆ.