Maharashtra Politics: ಮಹಾರಾಷ್ಟ್ರ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ: ಶಿಂದೆ ಸರ್ಕಾರ ಸೇರಲಿದ್ದಾರೆ ಅಜಿತ್ ಪವರ್: 29 ಶಾಸಕರ ಬೆಂಬಲ

ಮಹಾರಾಷ್ಟ್ರದ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಮೂಲಗಳ ಪ್ರಕಾರ, ಎನ್‌ಸಿಪಿ ನಾಯಕ ಅಜಿತ್ ಪವಾರ್ ಏಕನಾಥ್ ಶಿಂದೆ ಸರ್ಕಾರಕ್ಕೆ ಸೇರಬಹುದು

Maharashtra Politics: ಮಹಾರಾಷ್ಟ್ರ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ: ಶಿಂದೆ ಸರ್ಕಾರ ಸೇರಲಿದ್ದಾರೆ ಅಜಿತ್ ಪವರ್: 29 ಶಾಸಕರ ಬೆಂಬಲ
ಅಜಿತ್ ಪವಾರ್
Follow us
|

Updated on:Jul 02, 2023 | 2:52 PM

ಮಹಾರಾಷ್ಟ್ರದ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಮೂಲಗಳ ಪ್ರಕಾರ, ಎನ್‌ಸಿಪಿ ನಾಯಕ ಅಜಿತ್ ಪವಾರ್(Ajit Pwar) ಏಕನಾಥ್ ಶಿಂದೆ(Eknath Shinde) ಸರ್ಕಾರಕ್ಕೆ ಸೇರಬಹುದು. ಅವರು ಇಂದೇ ಪ್ರಮಾಣ ವಚನ ಸ್ವೀಕರಿಸಬಹುದು ಎಂದು ಹೇಳಲಾಗುತ್ತಿದೆ. ಎನ್‌ಸಿಪಿಯ 53 ಶಾಸಕರ ಪೈಕಿ 29 ಶಾಸಕರ ಬೆಂಬಲ ಅಜಿತ್ ಪವಾರ್‌ಗೆ ಇದೆ ಎಂದು ಹೇಳಲಾಗುತ್ತಿದೆ. ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಅಜಿತ್ ಪವಾರ್ ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಮೂಲಗಳ ಪ್ರಕಾರ ಅಜಿತ್ ಪವಾರ್ ಉಪ ಮುಖ್ಯಮಂತ್ರಿಯಾಗಬಹುದು ಎನ್ನಲಾಗುತ್ತಿದೆ. ಇದರೊಂದಿಗೆ ಛಗನ್ ಭುಜಬಲ್ ಅವರನ್ನೂ ಸಚಿವರನ್ನಾಗಿ ಮಾಡಬಹುದು ಎಂಬ ಸುದ್ದಿ ಬರುತ್ತಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ ಕೂಡ ರಾಜಭವನ ತಲುಪಿದ್ದಾರೆ. ಮಹಾರಾಷ್ಟ್ರದ ವಿರೋಧ ಪಕ್ಷದ ನಾಯಕ ಅಜಿತ್ ಪವಾರ್ ಅವರ ನಿವಾಸದಲ್ಲಿ ಪಕ್ಷದ ನಾಯಕರ ಮಹತ್ವದ ಸಭೆ ನಡೆಯಿತು. ಈ ಸಭೆಯಲ್ಲಿ ಪಕ್ಷದ ಕಾರ್ಯಾಧ್ಯಕ್ಷರಾದ ಸುಪ್ರಿಯಾ ಸುಳೆ ಮತ್ತು ಪ್ರಫುಲ್ ಪಟೇಲ್ ಕೂಡ ಉಪಸ್ಥಿತರಿದ್ದರು.

ದಿಲೀಪ್ ವಾಲ್ಸೆ ಪಾಟೀಲ್, ಹಸನ್ ಮುಶ್ರೀಫ್, ಧನಂಜಯ್ ಮುಂಡೆ, ದೌಲತ್ ದೊರಡಾ ಮುಂತಾದ ನಾಯಕರು ತಲುಪಿದ್ದಾರೆ. ಸಭೆ ಮುಗಿದ ನಂತರ ಅಜಿತ್ ಪವಾರ್ ನೇರವಾಗಿ ಮನೆಯಿಂದ ರಾಜಭವನಕ್ಕೆ ತೆರಳಿದರು.

ಮಹಾರಾಷ್ಟ್ರದ ರಾಜಭವನಕ್ಕೆ ಅಜಿತ್ ಪವಾರ್ ಆಗಮನದೊಂದಿಗೆ ಕೋಲಾಹಲ ಶುರುವಾಗಿದೆ. ಅಜಿತ್ ಪವಾರ್ ಜೊತೆಗೆ ಅವರ ಬೆಂಬಲಿಗ ಶಾಸಕರು ಕೂಡ ರಾಜಭವನದಲ್ಲಿ ಜಮಾಯಿಸಿದ್ದಾರೆ. ಮೂಲಗಳ ಪ್ರಕಾರ ಅಜಿತ್ ಪವಾರ್ ಅವರ ಆಪ್ತ ಶಾಸಕರೂ ಸಚಿವರಾಗಬಹುದು. ರಾಜಭವನದಲ್ಲಿ ಗದ್ದಲದ ಜತೆಗೆ ಉಪ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ನಿವಾಸದಲ್ಲಿ ಬಿಜೆಪಿ ನಾಯಕರ ಬೃಹತ್ ಸಭೆ ನಡೆಯುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:07 pm, Sun, 2 July 23