AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆ್ಯಪ್​ ಮೂಲಕ ನೀಡುತ್ತಿದ್ದ ಸಾಲಕ್ಕೆ ಶೇ 35 ಬಡ್ಡಿ! ರೈಡ್​ ವೇಳೆ ಹೊರಬಿತ್ತು ಭಯಾನಕ ಸತ್ಯ

ವಂಚನೆಗೆ ಬಳಕೆಯಾದ 75 ಬ್ಯಾಂಕ್​ ಖಾತೆ ವಹಿವಾಟಿಗೆ ನಿರ್ಬಂಧ ಹೇರಲಾಗಿದೆ. ಈ 75 ಖಾತೆಗಳಲ್ಲಿ ಸುಮಾರು 423 ಕೋಟಿ ರೂಪಾಯಿ ಇತ್ತು ಎನ್ನಲಾಗಿದೆ. ಈ ರೀತಿ ವಂಚನೆಗೆ 30 ಆ್ಯಪ್​ಗಳು ಬಳಕೆ ಆಗಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

ಆ್ಯಪ್​ ಮೂಲಕ ನೀಡುತ್ತಿದ್ದ ಸಾಲಕ್ಕೆ ಶೇ 35 ಬಡ್ಡಿ! ರೈಡ್​ ವೇಳೆ ಹೊರಬಿತ್ತು ಭಯಾನಕ ಸತ್ಯ
ಸಾಂದರ್ಭಿಕ ಚಿತ್ರ
ರಾಜೇಶ್ ದುಗ್ಗುಮನೆ
| Edited By: |

Updated on:Dec 24, 2020 | 11:18 AM

Share

ಹೈದರಾಬಾದ್: ಆ್ಯಪ್​ ಮೂಲಕ ಸಾಲ ನೀಡಿ ಅದಕ್ಕೆ ಶೇ 35ರವರೆಗೆ ಬಡ್ಡಿ ವಿಧಿಸುತ್ತಿದ್ದ ಪ್ರಕರಣ ಗುರುಗ್ರಾಮ ಹಾಗೂ ಹೈದರಾಬಾದ್​ನಲ್ಲಿ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಅನೇಕರನ್ನು ಬಂಧಿಸಲಾಗಿದೆ. ವಂಚನೆಗೆ ಬಳಕೆಯಾದ 75 ಬ್ಯಾಂಕ್​ ಖಾತೆ ವಹಿವಾಟಿಗೆ ನಿರ್ಬಂಧ ಹೇರಲಾಗಿದೆ. ಈ 75 ಖಾತೆಗಳಲ್ಲಿ ಸುಮಾರು 423 ಕೋಟಿ ರೂಪಾಯಿ ಇತ್ತು ಎನ್ನಲಾಗಿದೆ. ಈ ರೀತಿ ವಂಚನೆಗೆ 30 ಆ್ಯಪ್​ಗಳು ಬಳಕೆ ಆಗಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

ಸಾಲ ನೀಡಿದವರು ಕಿರುಕುಳ ನೀಡಿದ ಪ್ರಕರಣದಲ್ಲಿ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿತ್ತು. ಹೀಗಾಗಿ, ಪೊಲೀಸರು ಹೈದರಾಬಾದ್​, ಗುರುಗ್ರಾಮ ಹಾಗೂ ಹರಿಯಾಣದಲ್ಲಿ ವಿವಿಧ ಕಡೆಗಳಲ್ಲಿ ದಾಳಿ ನಡೆಸಿದ್ದರು. ಈ ವೇಳೆ 16 ಜನರನ್ನು ಬಂಧಿಸಿದ್ದರು. ಈ ವೇಳೆ ನಿಜವಾದ ವಿಚಾರ ಹೊರ ಬಿದ್ದಿದೆ.

ಶರತ್​ ಚಂದ್ರ ಎಂಬಾತ ಆನಿಯನ್ ಕ್ರೆಡಿಟ್​ ಪ್ರೈವೇಟ್​ ಲಿಮಿಟೆಡ್​ ಮತ್ತು ಕ್ರೆಡ್​ ಫೋಕ್ಸ್ ಟೆಕ್ನಾಲಜಿ ಕಂಪೆನಿ ಸ್ಥಾಪನೆ ಮಾಡಿದ್ದ. ಈ ಸಂಸ್ಥೆ ಹೆಸರಲ್ಲಿ ಶರತ್​​ ಆ್ಯಪ್​ ಮೂಲಕ ಸಾಲ ನೀಡುತ್ತಿದ್ದ. ಬೆಂಗಳೂರಿನಲ್ಲಿ ಈ ಎರಡು ಕಂಪೆನಿಗಳು ನೋಂದಣಿ ಆಗಿದ್ದವು. ಗುರುಗ್ರಾಮ ಹಾಗೂ ಹೈದರಾಬಾದ್​ನಲ್ಲಿ ಕಾಲ್​ಸೆಂಟರ್​ಗಳನ್ನು ಇವನು ತೆರೆದಿದ್ದ. ಈ ಕಾಲ್​ ಸೆಂಟರ್​ ಮೂಲಕ ಸಾಲ ಪಡೆದವರಿಗೆ ಕಿರುಕುಳ ನೀಡುವ ಕೆಲಸ ನಡೆಯುತ್ತಿತ್ತು. ಈ ರೀತಿ ಕೆಲಸಕ್ಕಾಗಿಯೇ ಸಾವಿರಕ್ಕೂ ಅಧಿಕ ಜನರನ್ನು ನೇಮಕ ಮಾಡಿಕೊಳ್ಳಲಾಗಿತ್ತು.

ಈ ಘಟನೆ ಬೆನ್ನಲ್ಲೇ ಆರ್​ಬಿಐ ಕಠಿಣ ಸಂದೇಶವೊಂದನ್ನು ರವಾನೆ ಮಾಡಿದೆ. ಆ್ಯಪ್​ ಮೂಲಕ ಲೋನ್​ ನೀಡುವುದಾಗಿ ನಂಬಿಸಿ ಮೋಸ ಮಾಡುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿವೆ. ಅಲ್ಲದೆ, ಈ ರೀತಿ ಆ್ಯಪ್​ಗಳನ್ನು ಬಳಕೆ ಮಾಡಿ ಮೋಸ ಹೋಗಬೇಡಿ ಎನ್ನುವ ಕಿವಿಮಾತನ್ನೂ ಹೇಳಿದೆ.

ಈ ಮಾಜಿ ಸಂಸದನ ಮನೆಯಲ್ಲಿರುವ ಕೆಲಸಗಾರರ ಹೆಸರಲ್ಲಿದೆ ಒಂಬತ್ತು ಕಂಪೆನಿ!

Published On - 9:53 pm, Wed, 23 December 20

ರಾಜಶೇಖರ್​​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ: ಸಚಿವ ಜಮೀರ್ ವಿರುದ್ಧ ದೂರು
ರಾಜಶೇಖರ್​​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ: ಸಚಿವ ಜಮೀರ್ ವಿರುದ್ಧ ದೂರು
ಸ್ಪಂದನಾ ಫ್ಯಾಮಿಲಿಗೆ ಗಿಲ್ಲಿ ಇಷ್ಟ ಆಗಿದ್ದೇ ಈ ಕಾರಣಕ್ಕೆ; ವಿವರಿಸಿದ ನಟಿ
ಸ್ಪಂದನಾ ಫ್ಯಾಮಿಲಿಗೆ ಗಿಲ್ಲಿ ಇಷ್ಟ ಆಗಿದ್ದೇ ಈ ಕಾರಣಕ್ಕೆ; ವಿವರಿಸಿದ ನಟಿ
ಗುಡ್ ಲಕ್; ಸಿದ್ದರಾಮಯ್ಯಗೆ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ
ಗುಡ್ ಲಕ್; ಸಿದ್ದರಾಮಯ್ಯಗೆ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ
ಅರ್ಧಶತಕ ಬಾರಿಸಿಯೂ ತಂಡವನ್ನು ಗೆಲ್ಲಿಸದ ವಾರ್ನರ್
ಅರ್ಧಶತಕ ಬಾರಿಸಿಯೂ ತಂಡವನ್ನು ಗೆಲ್ಲಿಸದ ವಾರ್ನರ್
ಸಾಕ್ಷಿ ನಾಶ ಹಿನ್ನೆಲೆ ರಾಜಶೇಖರ್​ ಶವ ಸುಟ್ಟು ಹಾಕಿದ್ದಾರೆ ಎಂದ ಶ್ರೀರಾಮುಲು
ಸಾಕ್ಷಿ ನಾಶ ಹಿನ್ನೆಲೆ ರಾಜಶೇಖರ್​ ಶವ ಸುಟ್ಟು ಹಾಕಿದ್ದಾರೆ ಎಂದ ಶ್ರೀರಾಮುಲು
ಕೊಡಗು ಜಿಲ್ಲೆಯ ನಂಬರ್ ಒನ್ ಟ್ಯಾಕ್ಸ್ ಪೇಯರ್ ರಶ್ಮಿಕಾ ಮಂದಣ್ಣ
ಕೊಡಗು ಜಿಲ್ಲೆಯ ನಂಬರ್ ಒನ್ ಟ್ಯಾಕ್ಸ್ ಪೇಯರ್ ರಶ್ಮಿಕಾ ಮಂದಣ್ಣ
ರಕ್ಷಿತಾ ಬೆಂಬಲಕ್ಕೆ ಬಂದ ಗಿಲ್ಲಿ, ರಾಶಿಕಾ ಜೊತೆ ಜಗಳ: ವಿಡಿಯೋ
ರಕ್ಷಿತಾ ಬೆಂಬಲಕ್ಕೆ ಬಂದ ಗಿಲ್ಲಿ, ರಾಶಿಕಾ ಜೊತೆ ಜಗಳ: ವಿಡಿಯೋ
ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇಲ್ಲ: ರಾಜಣ್ಣ ಖಡಕ್​​ ಮಾತು
ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇಲ್ಲ: ರಾಜಣ್ಣ ಖಡಕ್​​ ಮಾತು
ರಾಜಶೇಖರ್​ ತಾಯಿಗೆ ಡಿಕೆ ಶಿವಕುಮಾರ್​ ಸಾಂತ್ವನ: ಸರ್ಕಾರದಿಂದ ನೆರವು ಭರವಸೆ
ರಾಜಶೇಖರ್​ ತಾಯಿಗೆ ಡಿಕೆ ಶಿವಕುಮಾರ್​ ಸಾಂತ್ವನ: ಸರ್ಕಾರದಿಂದ ನೆರವು ಭರವಸೆ
ಸನ್​ರೂಫ್ ಬಳಿ ನಿಂತು ಕೈ ಬೀಸುತ್ತಿದ್ದಾಗ ಬ್ರೇಕ್ ಹಾಕಿದ ಕಾರು
ಸನ್​ರೂಫ್ ಬಳಿ ನಿಂತು ಕೈ ಬೀಸುತ್ತಿದ್ದಾಗ ಬ್ರೇಕ್ ಹಾಕಿದ ಕಾರು