AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪ್ಪನ ಗೊರಕೆಗೆ ಬೇಸತ್ತ ಮಗನಿಂದ ತಂದೆಯ ಘೋರ ಹತ್ಯೆ, ಎಲ್ಲಿ?

ಲಕ್ನೋ: ತಂದೆಯ ಗೊರಕೆ ಕಾಟಕ್ಕೆ ಬೇಸತ್ತ ಮಗ ತನ್ನ ಅಪ್ಪನನ್ನೇ ಬರ್ಬರವಾಗಿ ಕೊಂದಿರುವ ಘಟನೆ ಉತ್ತರ ಪ್ರದೇಶದ ಪಿಲಿಬಿತ್ ಜಿಲ್ಲೆಯ ಸೌಧ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. 65 ವರ್ಷದ ರಾಮ್​ಸ್ವರೂಪ್​ ಮಗನಿಂದ ಹತನಾದ ದುರ್ದೈವಿ. ಸೌಧ ಗ್ರಾಮದ ನಿವಾಸಿಯಾದ ರಾಮ್​ಸ್ವರೂಪ್ ತನ್ನ ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳಾದ ನವೀನ್​ ಮತ್ತು ಮುಕೇಶ್​ ಜೊತೆ ವಾಸವಿದ್ದನು. ಈ ಹಿಂದೆ ಹಲವಾರು ಬಾರಿ ರಾಮ್ ​ಸ್ವರೂಪ್​ ಗೊರಕೆ ಹೊಡೆಯುವ ವಿಚಾರವಾಗಿ ಆತನ ದೊಡ್ಡ ಮಗ ನವೀನ್​ನೊಟ್ಟಿಗೆ ಗಲಾಟೆಗಳಾಗಿತ್ತು ಎಂದು […]

ಅಪ್ಪನ ಗೊರಕೆಗೆ ಬೇಸತ್ತ ಮಗನಿಂದ ತಂದೆಯ ಘೋರ ಹತ್ಯೆ, ಎಲ್ಲಿ?
KUSHAL V
| Edited By: ಸಾಧು ಶ್ರೀನಾಥ್​|

Updated on:Aug 13, 2020 | 4:09 PM

Share

ಲಕ್ನೋ: ತಂದೆಯ ಗೊರಕೆ ಕಾಟಕ್ಕೆ ಬೇಸತ್ತ ಮಗ ತನ್ನ ಅಪ್ಪನನ್ನೇ ಬರ್ಬರವಾಗಿ ಕೊಂದಿರುವ ಘಟನೆ ಉತ್ತರ ಪ್ರದೇಶದ ಪಿಲಿಬಿತ್ ಜಿಲ್ಲೆಯ ಸೌಧ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. 65 ವರ್ಷದ ರಾಮ್​ಸ್ವರೂಪ್​ ಮಗನಿಂದ ಹತನಾದ ದುರ್ದೈವಿ.

ಸೌಧ ಗ್ರಾಮದ ನಿವಾಸಿಯಾದ ರಾಮ್​ಸ್ವರೂಪ್ ತನ್ನ ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳಾದ ನವೀನ್​ ಮತ್ತು ಮುಕೇಶ್​ ಜೊತೆ ವಾಸವಿದ್ದನು. ಈ ಹಿಂದೆ ಹಲವಾರು ಬಾರಿ ರಾಮ್ ​ಸ್ವರೂಪ್​ ಗೊರಕೆ ಹೊಡೆಯುವ ವಿಚಾರವಾಗಿ ಆತನ ದೊಡ್ಡ ಮಗ ನವೀನ್​ನೊಟ್ಟಿಗೆ ಗಲಾಟೆಗಳಾಗಿತ್ತು ಎಂದು ತಿಳಿದುಬಂದಿದೆ.

ಕಳೆದ ಕೆಲವು ದಿನಗಳ ಹಿಂದೆ, ರಾಮ್​ಸ್ವರೂಪ್​ ಪತ್ನಿ ಹಾಗೂ ಕಿರಿಯ ಮಗ ಮುಕೇಶ್​ ತಮ್ಮ ನೆಂಟರ ಮನೆಗೆ ಹೋಗಿದ್ದರಂತೆ. ಈ ವೇಳೆ, ಕಳೆದ ಮಂಗಳವಾರ ರಾತ್ರಿಯಂದು ನವೀನ್​ ತನ್ನ ತಂದೆಯ ಜೊತೆ ಗೊರಕೆ ವಿಚಾರವಾಗಿ ಮತ್ತೊಮ್ಮೆ ತಗಾದೆ ತೆಗೆದಿದ್ದನಂತೆ. ಇಬ್ಬರ ನಡುವೆ ತೀವ್ರ ವಾಗ್ವಾದ ಸಂಭವಿಸಿದೆ. ಕೊನೆಗೆ, ನವೀನ್​ ಕೋಪದ ಕೈಗೆ ಬುದ್ಧಿ ಕೊಟ್ಟು ರಾಮ್ ​ಸ್ವರೂಪ್​ಗೆ ದೊಣ್ಣೆಯಿಂದ ಸಿಕ್ಕಾಪಟ್ಟೆ ಹೊಡೆದಿದ್ದಾನೆ.

ದೊಣ್ಣೆಯ ಏಟಿನಿಂದ ಕುಸಿದುಬಿದ್ದ ರಾಮ್ ​ಸ್ವರೂಪ್​ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಆಗ ನವೀನ್​ ಕೂಡಲೇ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಇನ್ನು ಕಿರಿಯ ಮಗ ಮುಕೇಶ್​ ಮನೆಗೆ ಹಿಂದಿರುಗಿದ ವೇಳೆ ಘಟನೆ ಬೆಳಕಿಗೆ ಬಂದಿದೆ. ಇದೀಗ, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದೂರು ದಾಖಲಿಸಿಕೊಂಡು ಪರಾರಿಯಾದ ಮುಕೇಶ್​ನ ಪತ್ತೆಹಚ್ಚಲು ಮುಂದಾಗಿದ್ದಾರೆ.

Published On - 3:04 pm, Thu, 13 August 20

Follow Us
ಎಂಎನ್‌ಸಿ ಕಂಪನಿಗಳ ಹೆಸರಿನಲ್ಲಿ ಫೇಕ್ ಮೆಡಿಸಿನ್ ರಿ-ಪ್ಯಾಕಿಂಗ್
ಎಂಎನ್‌ಸಿ ಕಂಪನಿಗಳ ಹೆಸರಿನಲ್ಲಿ ಫೇಕ್ ಮೆಡಿಸಿನ್ ರಿ-ಪ್ಯಾಕಿಂಗ್
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ
ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ, ಧನ್ವೀರ್ ಗೌಡ, ವಿಜಯಲಕ್ಷ್ಮಿ
ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ, ಧನ್ವೀರ್ ಗೌಡ, ವಿಜಯಲಕ್ಷ್ಮಿ
ಯಾವುದೇ ಕೈದಿಗೆ ಜೈಲಲ್ಲಿ ವಿಐಪಿ ಸೌಲಭ್ಯ ಕೊಡಲ್ಲ: ಗೃಹ ಸಚಿವ
ಯಾವುದೇ ಕೈದಿಗೆ ಜೈಲಲ್ಲಿ ವಿಐಪಿ ಸೌಲಭ್ಯ ಕೊಡಲ್ಲ: ಗೃಹ ಸಚಿವ
ತುಮಕೂರು KSRTC ಬಸ್ ನಿಲ್ದಾಣದಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು
ತುಮಕೂರು KSRTC ಬಸ್ ನಿಲ್ದಾಣದಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು
‘ಓಣಂ’ ಸಡಗರ: ಕೇರಳಂ ಸಂಸ್ಕೃತಿ ಅನಾವರಣಗೊಳಿಸಿದ ವಿದ್ಯಾರ್ಥಿಗಳು
‘ಓಣಂ’ ಸಡಗರ: ಕೇರಳಂ ಸಂಸ್ಕೃತಿ ಅನಾವರಣಗೊಳಿಸಿದ ವಿದ್ಯಾರ್ಥಿಗಳು
ಹನೂರು ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್​ ಮಾಡಿದ ಮಹಿಮದಾಸ್
ಹನೂರು ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್​ ಮಾಡಿದ ಮಹಿಮದಾಸ್
ಕಾರ್ಕಳದ ದುರ್ಗಾ ಫಾಲ್ಸ್‌ನಲ್ಲಿ ಸ್ಥಳೀಯರ ಸಾಹಸಮಯ ಕಾರ್ಯಾಚರಣೆ
ಕಾರ್ಕಳದ ದುರ್ಗಾ ಫಾಲ್ಸ್‌ನಲ್ಲಿ ಸ್ಥಳೀಯರ ಸಾಹಸಮಯ ಕಾರ್ಯಾಚರಣೆ
ಸ್ಕ್ಯಾನ್ ಮಾಡಿ, ದೂರು ನೀಡಿ; ಕಳಪೆ ಆಹಾರ, ನಕಲಿ ಔಷಧಿಗೆ ಬ್ರೇಕ್!
ಸ್ಕ್ಯಾನ್ ಮಾಡಿ, ದೂರು ನೀಡಿ; ಕಳಪೆ ಆಹಾರ, ನಕಲಿ ಔಷಧಿಗೆ ಬ್ರೇಕ್!