AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪ್ಪನ ಗೊರಕೆಗೆ ಬೇಸತ್ತ ಮಗನಿಂದ ತಂದೆಯ ಘೋರ ಹತ್ಯೆ, ಎಲ್ಲಿ?

ಲಕ್ನೋ: ತಂದೆಯ ಗೊರಕೆ ಕಾಟಕ್ಕೆ ಬೇಸತ್ತ ಮಗ ತನ್ನ ಅಪ್ಪನನ್ನೇ ಬರ್ಬರವಾಗಿ ಕೊಂದಿರುವ ಘಟನೆ ಉತ್ತರ ಪ್ರದೇಶದ ಪಿಲಿಬಿತ್ ಜಿಲ್ಲೆಯ ಸೌಧ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. 65 ವರ್ಷದ ರಾಮ್​ಸ್ವರೂಪ್​ ಮಗನಿಂದ ಹತನಾದ ದುರ್ದೈವಿ. ಸೌಧ ಗ್ರಾಮದ ನಿವಾಸಿಯಾದ ರಾಮ್​ಸ್ವರೂಪ್ ತನ್ನ ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳಾದ ನವೀನ್​ ಮತ್ತು ಮುಕೇಶ್​ ಜೊತೆ ವಾಸವಿದ್ದನು. ಈ ಹಿಂದೆ ಹಲವಾರು ಬಾರಿ ರಾಮ್ ​ಸ್ವರೂಪ್​ ಗೊರಕೆ ಹೊಡೆಯುವ ವಿಚಾರವಾಗಿ ಆತನ ದೊಡ್ಡ ಮಗ ನವೀನ್​ನೊಟ್ಟಿಗೆ ಗಲಾಟೆಗಳಾಗಿತ್ತು ಎಂದು […]

ಅಪ್ಪನ ಗೊರಕೆಗೆ ಬೇಸತ್ತ ಮಗನಿಂದ ತಂದೆಯ ಘೋರ ಹತ್ಯೆ, ಎಲ್ಲಿ?
KUSHAL V
| Edited By: |

Updated on:Aug 13, 2020 | 4:09 PM

Share

ಲಕ್ನೋ: ತಂದೆಯ ಗೊರಕೆ ಕಾಟಕ್ಕೆ ಬೇಸತ್ತ ಮಗ ತನ್ನ ಅಪ್ಪನನ್ನೇ ಬರ್ಬರವಾಗಿ ಕೊಂದಿರುವ ಘಟನೆ ಉತ್ತರ ಪ್ರದೇಶದ ಪಿಲಿಬಿತ್ ಜಿಲ್ಲೆಯ ಸೌಧ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. 65 ವರ್ಷದ ರಾಮ್​ಸ್ವರೂಪ್​ ಮಗನಿಂದ ಹತನಾದ ದುರ್ದೈವಿ.

ಸೌಧ ಗ್ರಾಮದ ನಿವಾಸಿಯಾದ ರಾಮ್​ಸ್ವರೂಪ್ ತನ್ನ ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳಾದ ನವೀನ್​ ಮತ್ತು ಮುಕೇಶ್​ ಜೊತೆ ವಾಸವಿದ್ದನು. ಈ ಹಿಂದೆ ಹಲವಾರು ಬಾರಿ ರಾಮ್ ​ಸ್ವರೂಪ್​ ಗೊರಕೆ ಹೊಡೆಯುವ ವಿಚಾರವಾಗಿ ಆತನ ದೊಡ್ಡ ಮಗ ನವೀನ್​ನೊಟ್ಟಿಗೆ ಗಲಾಟೆಗಳಾಗಿತ್ತು ಎಂದು ತಿಳಿದುಬಂದಿದೆ.

ಕಳೆದ ಕೆಲವು ದಿನಗಳ ಹಿಂದೆ, ರಾಮ್​ಸ್ವರೂಪ್​ ಪತ್ನಿ ಹಾಗೂ ಕಿರಿಯ ಮಗ ಮುಕೇಶ್​ ತಮ್ಮ ನೆಂಟರ ಮನೆಗೆ ಹೋಗಿದ್ದರಂತೆ. ಈ ವೇಳೆ, ಕಳೆದ ಮಂಗಳವಾರ ರಾತ್ರಿಯಂದು ನವೀನ್​ ತನ್ನ ತಂದೆಯ ಜೊತೆ ಗೊರಕೆ ವಿಚಾರವಾಗಿ ಮತ್ತೊಮ್ಮೆ ತಗಾದೆ ತೆಗೆದಿದ್ದನಂತೆ. ಇಬ್ಬರ ನಡುವೆ ತೀವ್ರ ವಾಗ್ವಾದ ಸಂಭವಿಸಿದೆ. ಕೊನೆಗೆ, ನವೀನ್​ ಕೋಪದ ಕೈಗೆ ಬುದ್ಧಿ ಕೊಟ್ಟು ರಾಮ್ ​ಸ್ವರೂಪ್​ಗೆ ದೊಣ್ಣೆಯಿಂದ ಸಿಕ್ಕಾಪಟ್ಟೆ ಹೊಡೆದಿದ್ದಾನೆ.

ದೊಣ್ಣೆಯ ಏಟಿನಿಂದ ಕುಸಿದುಬಿದ್ದ ರಾಮ್ ​ಸ್ವರೂಪ್​ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಆಗ ನವೀನ್​ ಕೂಡಲೇ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಇನ್ನು ಕಿರಿಯ ಮಗ ಮುಕೇಶ್​ ಮನೆಗೆ ಹಿಂದಿರುಗಿದ ವೇಳೆ ಘಟನೆ ಬೆಳಕಿಗೆ ಬಂದಿದೆ. ಇದೀಗ, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದೂರು ದಾಖಲಿಸಿಕೊಂಡು ಪರಾರಿಯಾದ ಮುಕೇಶ್​ನ ಪತ್ತೆಹಚ್ಚಲು ಮುಂದಾಗಿದ್ದಾರೆ.

Published On - 3:04 pm, Thu, 13 August 20

ಅಕ್ರಮ ಗಣಿಗಾರಿಕೆ ನಿಲ್ಲಿಸದ್ದಕ್ಕೆ ರಣಚಂಡಿಯಾದ ಮಹಿಳಾ ಅಧಿಕಾರಿ
ಅಕ್ರಮ ಗಣಿಗಾರಿಕೆ ನಿಲ್ಲಿಸದ್ದಕ್ಕೆ ರಣಚಂಡಿಯಾದ ಮಹಿಳಾ ಅಧಿಕಾರಿ
ಅಕ್ರಮ ಸಂಬಂಧ ಬಯಲಿಗೆಳೆದಿದ್ದಕ್ಕೆ, ಮಾವನಿಗೆ ಬೆಂಕಿ ಹಚ್ಚಿದ ಸೊಸೆ
ಅಕ್ರಮ ಸಂಬಂಧ ಬಯಲಿಗೆಳೆದಿದ್ದಕ್ಕೆ, ಮಾವನಿಗೆ ಬೆಂಕಿ ಹಚ್ಚಿದ ಸೊಸೆ
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು