AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆ್ಯಂಟಿಬಾಡಿ ಱಪಿಡ್ ಟೆಸ್ಟ್ ಕಿಟ್​ಗಳ ಆಮದು, ಮಾರಾಟದಲ್ಲಿ ಭಾರಿ ಗೋಲ್ ಮಾಲ್

ನವದೆಹಲಿ: ಭಾರತಕ್ಕೆ ಚೀನಾದಿಂದ ಆಮದು ಆದ ಆ್ಯಂಟಿಬಾಡಿ ಱಪಿಡ್ ಟೆಸ್ಟ್ ಕಿಟ್​ಗಳಿಂದ ಭಾರಿ ಗೋಲ್‌ಮಾಲ್ ಆಗಿದೆ. ದೆಹಲಿ ಹೈಕೋರ್ಟ್ ಆದೇಶದಲ್ಲಿ ಗೋಲ್‌ಮಾಲ್ ಬಯಲಾಗಿದೆ. ಚೀನಾದಿಂದ 5 ಲಕ್ಷ ಱಪಿಡ್ ಕಿಟ್​ಗಳ ಆಮದಾಗಿದ್ದು, ಖಾಸಗಿ ಕಂಪನಿಗಳು ತಮಗೆ ಇಷ್ಟವಾದ ಬೆಲೆಗೆ ಮಾರಾಟ ಮಾಡಿ ಭಾರಿ ಗೋಲ್‌ಮಾಲ್ ಮಾಡಿವೆ. ಕೆಲ ಖಾಸಗಿ ಕಂಪನಿ ಚೀನಾದಿಂದ ಆ್ಯಂಟಿಬಾಡಿ ಱಪಿಡ್ ಟೆಸ್ಟ್ ಕಿಟ್​ಗಳನ್ನು ಆಮದು ಮಾಡಿಕೊಂಡು ಬೇರೆ ಬೇರೆ ಕಂಪನಿಗಳಿಗೆ ಬೇರೆ ಬೇರೆ ಮೌಲ್ಯದಲ್ಲಿ ಕಿಟ್​ಗಳನ್ನು ಮಾರಾಟ ಮಾಡಿದೆ. ಹಣ ನೀಡದ ಹಿನ್ನೆಲೆಯಲ್ಲಿ […]

ಆ್ಯಂಟಿಬಾಡಿ ಱಪಿಡ್ ಟೆಸ್ಟ್ ಕಿಟ್​ಗಳ ಆಮದು, ಮಾರಾಟದಲ್ಲಿ ಭಾರಿ ಗೋಲ್ ಮಾಲ್
ಸಾಧು ಶ್ರೀನಾಥ್​
|

Updated on:Apr 27, 2020 | 11:29 AM

Share

ನವದೆಹಲಿ: ಭಾರತಕ್ಕೆ ಚೀನಾದಿಂದ ಆಮದು ಆದ ಆ್ಯಂಟಿಬಾಡಿ ಱಪಿಡ್ ಟೆಸ್ಟ್ ಕಿಟ್​ಗಳಿಂದ ಭಾರಿ ಗೋಲ್‌ಮಾಲ್ ಆಗಿದೆ. ದೆಹಲಿ ಹೈಕೋರ್ಟ್ ಆದೇಶದಲ್ಲಿ ಗೋಲ್‌ಮಾಲ್ ಬಯಲಾಗಿದೆ. ಚೀನಾದಿಂದ 5 ಲಕ್ಷ ಱಪಿಡ್ ಕಿಟ್​ಗಳ ಆಮದಾಗಿದ್ದು, ಖಾಸಗಿ ಕಂಪನಿಗಳು ತಮಗೆ ಇಷ್ಟವಾದ ಬೆಲೆಗೆ ಮಾರಾಟ ಮಾಡಿ ಭಾರಿ ಗೋಲ್‌ಮಾಲ್ ಮಾಡಿವೆ.

ಕೆಲ ಖಾಸಗಿ ಕಂಪನಿ ಚೀನಾದಿಂದ ಆ್ಯಂಟಿಬಾಡಿ ಱಪಿಡ್ ಟೆಸ್ಟ್ ಕಿಟ್​ಗಳನ್ನು ಆಮದು ಮಾಡಿಕೊಂಡು ಬೇರೆ ಬೇರೆ ಕಂಪನಿಗಳಿಗೆ ಬೇರೆ ಬೇರೆ ಮೌಲ್ಯದಲ್ಲಿ ಕಿಟ್​ಗಳನ್ನು ಮಾರಾಟ ಮಾಡಿದೆ. ಹಣ ನೀಡದ ಹಿನ್ನೆಲೆಯಲ್ಲಿ ಖಾಸಗಿ ಕಂಪನಿ ಹೈಕೋರ್ಟ್ ಮೆಟ್ಟಿಲೇರಿದೆ. ಈ ವೇಳೆ ಱಪಿಡ್ ಟೆಸ್ಟ್ ಕಿಟ್‌ನ ಅಸಲಿ ಮೌಲ್ಯವೆಷ್ಟು, ಲಾಭವೆಷ್ಟು, ಕಮಿಷನ್ ಎಷ್ಟು ಎಂಬುದು ಬಹಿರಂಗವಾಗಿದೆ. ದೆಹಲಿ ಹೈಕೋರ್ಟ್ ಆದೇಶದಲ್ಲಿ ಎಲ್ಲವೂ ಉಲ್ಲೇಖ ಮಾಡಲಾಗಿದೆ.

ಮ್ಯಾಟ್ರಿಕ್ಸ್ ಲ್ಯಾಬ್ ಎನ್ನುವ ಕಂಪನಿ ₹12.25 ಕೋಟಿ ರೂಪಾಯಿಗೆ 5 ಲಕ್ಷ ಆ್ಯಂಟಿಬಾಡಿ ಱಪಿಡ್ ಟೆಸ್ಟ್ ಕಿಟ್​ಗಳನ್ನು ಚೀನಾದಿಂದ ಅಮದು ಮಾಡಿಕೊಂಡಿದೆ. ಆದರೆ ಅದೇ 5 ಲಕ್ಷ ಟೆಸ್ಟಿಂಗ್ ಕಿಟ್​ಗಳನ್ನು ₹21 ಕೋಟಿ ರೂಪಾಯಿಗೆ ರೇರ್ ಮೆಟಬಾಲಿಕ್ಸ್ ಕಂಪನಿಗೆ ಮಾರಾಟ ಮಾಡಿದೆ. ಬಳಿಕ ರೇರ್ ಮೆಟಬಾಲಿಕ್ಸ್ ಕಂಪನಿಯು ರಾಪಿಡ್ ಟೆಸ್ಟಿಂಗ್ ಕಿಟ್ ಗಳನ್ನು 30 ಕೋಟಿ ರೂಪಾಯಿಗೆ ICMR‌ಗೆ ಮಾರಾಟ ಮಾಡಿದೆ.

ಇನ್ನು ಈ ಖರೀದಿ, ಮಾರಾಟದಲ್ಲಿ 18.75 ಲಕ್ಷ ರೂಪಾಯಿಯನ್ನು ಮಧ್ಯವರ್ತಿಗೆ ನೀಡಲಾಗಿದೆ. ಈ ಬಗ್ಗೆಯೂ ಹೈಕೋರ್ಟ್‌ನ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ರೇರ್ ಮೆಟಬಾಲಿಕ್ಸ್ ಕಂಪನಿಯಿಂದ ಮ್ಯಾಟ್ರಿಕ್ಸ್ ಲ್ಯಾಬ್ ಕಂಪನಿಗೆ ಬಾಕಿ ಇರುವ 8.25 ಕೋಟಿ ರೂಪಾಯಿ ಹಣ ಪಾವತಿ ಮಾಡಲು ಕೋರ್ಟ್ ಆದೇಶ ನೀಡಿದೆ. ಈಗಾಗಲೇ ಮ್ಯಾಟ್ರಿಕ್ಸ್ ಲ್ಯಾಬ್ ಕಂಪನಿ 12.75 ಕೋಟಿ ರೂಪಾಯಿ ಹಣ ಪಡೆದಿದೆ.

Published On - 8:13 am, Mon, 27 April 20

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ