ಮಥುರಾದ ಶಾಹಿ ಈದ್ಗಾ ಮಸೀದಿಯನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ ವ್ಯಕ್ತಿ

ಮಥುರಾದ ಶಾಹಿ ಈದ್ಗಾ ಮಸೀದಿಯನ್ನು ಬಾಂಬ್‌ನಿಂದ ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿದೆ. ಆರೋಪಿ ಶಾಹಿ ಈದ್ಗಾ ಪ್ರವೇಶ ದ್ವಾರದಲ್ಲಿ ಭದ್ರತಾ ಸಿಬ್ಬಂದಿಗೆ ಸಿಕ್ಕಿಬಿದ್ದಿದ್ದಾನೆ. ಆತನನ್ನು ವಿಚಾರಣೆ ನಡೆಸಲಾಗುತ್ತಿದೆ.

ಮಥುರಾದ ಶಾಹಿ ಈದ್ಗಾ ಮಸೀದಿಯನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ ವ್ಯಕ್ತಿ
ಮಸೀದಿ
Image Credit source: Jagaranjosh.com

Updated on: Sep 02, 2024 | 9:27 AM

ವ್ಯಕ್ತಿಯೊಬ್ಬ ಕಾರಿನಲ್ಲಿ ಮಸೀದಿಗೆ ನುಗ್ಗಿದ್ದಲ್ಲದೆ ಮಥುರಾದ ಶಾಹಿ ಈದ್ಗಾ ಮಸೀದಿಯನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿರುವ ಮಾಹಿತಿ ತಿಳಿದುಬಂದಿದೆ. ಕಾರನ್ನು ಲಾಕ್​ ಮಾಡಿ ಯುವಕ ಮೊದಲು ಪೆಟ್ರೋಲ್ ಸುರಿದುಕೊಂಡಿದ್ದಾನೆ, ಪೊಲೀಸರು ಗಾಜು ಒಡೆದು ಹೊರಗೆ ಕರೆದೊಯ್ದರು ಮತ್ತು ಶಾಹಿ ಈದ್ಗಾ ಮಸೀದಿಯನ್ನು ಸ್ಫೋಟಿಸಲು ಬಂದಿದ್ದೇನೆ ಎಂದು ಹೇಳಿದ್ದಾನೆ.

ಗುಪ್ತಚರ ಸಂಸ್ಥೆಗಳಿಂದ ಹಿಡಿದು ಜಿಲ್ಲಾ ಪೊಲೀಸರವರೆಗೂ ಒಮ್ಮೆ ಗಾಬರಿಗೊಂಡಿದ್ದರು. ಪೊಲೀಸರು ಸಂಪೂರ್ಣ ತನಿಖೆ ನಡೆಸಿದಾಗ ಯುವಕನ ನಾಲ್ವರು ಪುತ್ರರು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಇದರಿಂದಾಗಿ ಅವರು ಮಾನಸಿಕವಾಗಿ ಚೆನ್ನಾಗಿಲ್ಲ. ಅವರ ಕುಟುಂಬದವರೂ ಬಂದಿದ್ದರು. ಸಂಜೆಯವರೆಗೂ ಪೊಲೀಸರು ಆತನನ್ನು ಕಸ್ಟಡಿಯಲ್ಲಿಟ್ಟಿದ್ದರು.

ವ್ಯಕ್ತಿಯನ್ನು ಜಮುನಾಪರ್ ಮೀರಾ ವಿಹಾರ್ ಕಾಲೋನಿ ನಿವಾಸಿ ಪುಷ್ಪೇಂದ್ರ ಚೌಧರಿ ಎಂದು ಗುರುತಿಸಲಾಗಿದೆ. ಸಾಲ ಮಾಡಿ ಕಾರು ತೆಗೆದುಕೊಂಡಿದ್ದು, ಟ್ಯಾಕ್ಸಿಯಾಗಿ ಓಡಿಸುತ್ತಿದ್ದಾರೆ. ಅವರ ಪತ್ನಿ ಪ್ರವೇಶ್ ಮೂರು ತಿಂಗಳ ಹಿಂದೆ ಹೆರಿಗೆಯಾಗಿದ್ದು, ಅದರಲ್ಲಿ ಮಗು ಮೃತಪಟ್ಟಿದೆ. ಇದಕ್ಕೂ ಮುನ್ನ ಅವರ ಮೂವರು ಪುತ್ರರು ಮೃತಪಟ್ಟಿದ್ದರು.

ಮತ್ತಷ್ಟು ಓದಿ:Balochistan Bomb Blast:ಬಲೂಚಿಸ್ತಾನದ ಮಸೀದಿ ಬಳಿ ಬಾಂಬ್ ಸ್ಫೋಟ, 20ಕ್ಕೂ ಅಧಿಕ ಮಂದಿ ಸಾವು, ಹಲವರಿಗೆ ಗಾಯ 

ವ್ಯಕ್ತಿಯ ಪತ್ನಿಯೂ ಅಸ್ವಸ್ಥರಾಗಿದ್ದಾರೆ, ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮೂರು ತಿಂಗಳು ಮನೆಯಿಂದ ಹೊರಗಿದ್ದರು. ಭಾನುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಶಾಹಿ ಈದ್ಗಾ ಮಸೀದಿ ಬಳಿಯ ಮಿಲನ್ ತಿರಹಾದಲ್ಲಿ ಕಾರಿನಲ್ಲಿ ಕುಳಿತಿದ್ದರು. ಆಗ ಟ್ರಾಫಿಕ್ ಪೊಲೀಸರು ಆತನನ್ನು ತಡೆದು ಚಲನ್ ನೀಡಿದ್ದರು.

ಆಗ ಕೋಪಗೊಂಡ ಆತ ಶಾಹಿ ಈದ್ಗಾ ಮಸೀದಿಗೆ ನುಗ್ಗಿ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಆತನಿಗೆ ಯಾವುದೇ ದೇಶ ವಿರೋಧಿ ಸಂಘಟನೆ ಜತೆ ಸಂಪರ್ಕವಿರುವ ಕುರಿತು ಮಾಹಿತಿ ಲಭ್ಯವಾಗಿಲ್ಲ. ಈ ಘಟನೆಯ ನಂತರ ಪೊಲೀಸರು ಮತ್ತು ಭದ್ರತಾ ಸಂಸ್ಥೆಗಳು ಯಾವುದೇ ರೀತಿಯ ನಿರ್ಲಕ್ಷ್ಯ ಮನೋಭಾವನೆ ತೋರಿಲ್ಲ ಎನ್ನುವ ವರದಿಯನ್ನು ಉನ್ನತ ಅಧಿಕಾರಿಗಳಿಗೆ ನೀಡಲಾಗಿದೆ. ಶಾಹಿ ಈದ್ಗಾ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us