ಕೇರಳದಲ್ಲಿ ಒಂದೂವರೆ ವರ್ಷದ ನಂತರ ಇಂದು ಶಾಲೆ ಪುನಾರಂಭ

Kerala School Reopen ಈ ತಿಂಗಳ ಆರಂಭದಲ್ಲಿ ಶಾಲೆಗಳು ಪುನರಾರಂಭಗೊಂಡ ನಂತರ ಮಕ್ಕಳನ್ನು ಸೋಂಕಿಗೆ ಒಳಗಾಗದಂತೆ ರಕ್ಷಿಸಲು ರಾಜ್ಯ ಸರ್ಕಾರವು ಮಾಡಿದ ಸಿದ್ಧತೆಗಳ ವಿವರಗಳನ್ನು ನೀಡಿತ್ತು. ಸಿದ್ಧತೆಗಳಲ್ಲಿ ಮಕ್ಕಳು ಸೇರುವ ಸ್ಥಳಗಳನ್ನು ಸ್ವಚ್ಛಗೊಳಿಸುವುದು, ಸೋಂಕುರಹಿತಗೊಳಿಸುವುದು ಮತ್ತು ಬಯೋ-ಬಬಲ್ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವುದು ಸೇರಿದೆ.

ಕೇರಳದಲ್ಲಿ ಒಂದೂವರೆ ವರ್ಷದ ನಂತರ ಇಂದು ಶಾಲೆ ಪುನಾರಂಭ
ಶಾಲೆಗೆ ಹೋಗಲು ತಯಾರಾಗಿ ನಿಂತ ಪುಟಾಣಿಗಳು
Edited By: ರಶ್ಮಿ ಕಲ್ಲಕಟ್ಟ

Updated on: Nov 01, 2021 | 10:48 AM

ತಿರುವನಂತಪುರಂ: ಕೊರೊನಾವೈರಸ್ ಸಾಂಕ್ರಾಮಿಕದ ಮಧ್ಯೆ ಒಂದೂವರೆ ವರ್ಷಕ್ಕೂ ಹೆಚ್ಚು ವಿರಾಮದ ನಂತರ, ಕೇರಳದಲ್ಲಿ ಶಾಲೆಗಳು ಇಂದು ಪುನಾರಂಭವಾಗಿದೆ. ಕೊವಿಡ್ ಪ್ರೊಟೋಕಾಲ್​​ನೊಂದಿಗೆ ಇಂದು (ನವೆಂಬರ್ 1) 1 ರಿಂದ 7, 10 ಮತ್ತು 12 ನೇ ತರಗತಿಗಳಿಂದ ಪ್ರಾರಂಭವಾಗಿವೆ. 18 ವರ್ಷಕ್ಕಿಂತ ಮೇಲ್ಪಟ್ಟ ಜನಸಂಖ್ಯೆಯ ಶೇಕಡಾ 95 ರಷ್ಟು ಜನರು ಕನಿಷ್ಠ ಮೊದಲ ಡೋಸ್‌ನೊಂದಿಗೆ ಲಸಿಕೆಯನ್ನು ಪಡೆಯುತ್ತಿದ್ದಾರೆ ಮತ್ತು ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಕಡಿತ ಮತ್ತು ಕೊವಿಡ್ -19 ಚಿಕಿತ್ಸೆಗೆ ಒಳಗಾಗುವ ಜನರೊಂದಿಗೆ ರಾಜ್ಯವು ಸಾಮಾಜಿಕ ನಿರ್ಬಂಧಗಳನ್ನು ಸಡಿಲಿಸಲು ಸಮರ್ಥವಾಗಿದೆ  ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅತ್ಯಂತ ಜಾಗರೂಕತೆಯಿಂದ ಶಾಲೆಗಳನ್ನು ತೆರೆಯಲು ನಿರ್ಧರಿಸಿದೆ ಎಂದು ಸಿಎಂ ಪಿಣರಾಯಿ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಶಾಲೆಗಳು ಸುರಕ್ಷಿತ ರೀತಿಯಲ್ಲಿ ಕಾರ್ಯನಿರ್ವಹಿಸಲು ಆರೋಗ್ಯ ಮತ್ತು ಶಿಕ್ಷಣ ಇಲಾಖೆಗಳು ಸಿದ್ಧಪಡಿಸಿದ ಮಾರ್ಗಸೂಚಿಗಳನ್ನು ಶಾಲೆಗಳು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ಅವರು ಹೇಳಿದರು. ಶಾಲೆಗಳು ದಟ್ಟಣೆಯನ್ನು ನಿಯಂತ್ರಿಸಲು, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಮತ್ತು ತರಗತಿ ಕೊಠಡಿಗಳು ಮತ್ತು ಸುತ್ತಮುತ್ತಲಿನ ಸ್ವಚ್ಛತೆಯನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ಜಾರಿಗೊಳಿಸಬೇಕಾಗಿದೆ ಎಂದು ಅವರು ಹೇಳಿದರು.

ಈ ತಿಂಗಳ ಆರಂಭದಲ್ಲಿ ಶಾಲೆಗಳು ಪುನರಾಂಭಗೊಂಡ ನಂತರ ಮಕ್ಕಳನ್ನು ಸೋಂಕಿಗೆ ಒಳಗಾಗದಂತೆ ರಕ್ಷಿಸಲು ರಾಜ್ಯ ಸರ್ಕಾರವು ಮಾಡಿದ ಸಿದ್ಧತೆಗಳ ವಿವರಗಳನ್ನು ನೀಡಿತ್ತು. ಸಿದ್ಧತೆಗಳಲ್ಲಿ ಮಕ್ಕಳು ಸೇರುವ ಸ್ಥಳಗಳನ್ನು ಸ್ವಚ್ಛಗೊಳಿಸುವುದು, ಸೋಂಕುರಹಿತಗೊಳಿಸುವುದು ಮತ್ತು ಬಯೋ-ಬಬಲ್ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವುದು ಸೇರಿದೆ.


ವೈದ್ಯರ ಸೇವೆಯನ್ನು ಖಾತ್ರಿಪಡಿಸುವುದರ ಜೊತೆಗೆ ಮಕ್ಕಳಿಗೆ ಮಧ್ಯಾಹ್ನದ ಊಟವನ್ನು ತಯಾರಿಸಿ ಕೊವಿಡ್ ಪ್ರೋಟೋಕಾಲ್‌ಗೆ ಬದ್ಧವಾಗಿ ವಿತರಿಸಲು ಶಾಲಾ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

ಪ್ರತಿ ಶಾಲೆಯಲ್ಲಿ ಸಾಬೂನು ಮತ್ತು ಸ್ಯಾನಿಟೈಸರ್ ಜೊತೆಗೆ ಮಕ್ಕಳು, ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಯ ದೇಹದ ಉಷ್ಣತೆಯನ್ನು ಪರೀಕ್ಷಿಸಲು ಥರ್ಮಲ್ ಸ್ಕ್ಯಾನರ್ ಕೂಡ ವ್ಯವಸ್ಥೆ ಮಾಡಲಾಗುವುದು.
ಕೊವಿಡ್ ಹರಡುವಿಕೆಯನ್ನು ಗಮನದಲ್ಲಿಟ್ಟುಕೊಂಡು, ರಾಜ್ಯ ಸರ್ಕಾರವು ಕಳೆದ ಎರಡು ಶೈಕ್ಷಣಿಕ ವರ್ಷಗಳಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ಆನ್‌ಲೈನ್ ಶಿಕ್ಷಣವನ್ನು ನೀಡುತ್ತಿದೆ. ಆನ್‌ಲೈನ್ ವಿಧಾನದ ಮೂಲಕ ಅಧ್ಯಯನಗಳು ಉತ್ತಮವಾಗಿ ನಡೆಯುತ್ತಿದ್ದರೂ ಮಕ್ಕಳು ತಮ್ಮ ಸ್ನೇಹಿತರೊಂದಿಗೆ ಅಧ್ಯಯನ ಮತ್ತು ಆಟವಾಡುವುದನ್ನು ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ನವೆಂಬರ್ 1 ರಿಂದ ಪರಿಸ್ಥಿತಿ ಬದಲಾಗಲಿದೆ ಎಂದು ಸಿಎಂ ಭಾನುವಾರ ಹೇಳಿದರು.

ಇದನ್ನೂ ಓದಿ: ಪುನೀತ್ ಓದಿಸುತ್ತಿದ್ದ 1800 ಮಕ್ಕಳ ವಿದ್ಯಾಭ್ಯಾಸದ ಹೊಣೆ ನನ್ನದು ಎಂದ ತಮಿಳು ನಟ ವಿಶಾಲ್; ಶಹಬ್ಬಾಸ್​ ಎಂದರು ಕನ್ನಡಿಗರು!

Published On - 10:46 am, Mon, 1 November 21

Web contact

TV9 Kannada

Read More
Follow Us