AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಹುತೇಕ ಸೇನಾ ಸಿಬ್ಬಂದಿ ಅತಿಯಾದ ಒತ್ತಡ ಎದುರಿಸುತ್ತಿದ್ದಾರೆ.. ಭಾರತೀಯ ಸೇನೆ ಹೇಳೋದೇನು?

ಅರ್ಧಕ್ಕಿಂತ ಹೆಚ್ಚು ಪ್ರಮಾಣದ ಸೇನಾ ಸಿಬ್ಬಂದಿಗಳು ಅತಿಯಾದ ಒತ್ತಡದಲ್ಲಿ ಇರುವ ಬಗ್ಗೆ ಯುನೈಟೆಡ್ ಸರ್ವೀಸಸ್ ಎಂಬ ಭಾರತೀಯ ಸಂಸ್ಥೆ (USI) ಅಧ್ಯಯನ ವರದಿ ಮಾಡಿದೆ.

ಬಹುತೇಕ ಸೇನಾ ಸಿಬ್ಬಂದಿ ಅತಿಯಾದ ಒತ್ತಡ ಎದುರಿಸುತ್ತಿದ್ದಾರೆ.. ಭಾರತೀಯ ಸೇನೆ ಹೇಳೋದೇನು?
ಭಾರತೀಯ ಸೈನಿಕರು (ಪ್ರಾತಿನಿಧಿಕ ಚಿತ್ರ)
TV9 Web
| Updated By: ganapathi bhat|

Updated on:Apr 06, 2022 | 10:54 PM

Share

ದೆಹಲಿ: ಅರ್ಧಕ್ಕಿಂತ ಹೆಚ್ಚು ಪ್ರಮಾಣದ ಸೇನಾ ಸಿಬ್ಬಂದಿ ಅತಿಯಾದ ಒತ್ತಡದಲ್ಲಿ ಇರುವ ಬಗ್ಗೆ ಅಧ್ಯಯನವೊಂದು ವರದಿ ಮಾಡಿದೆ. ಪ್ರತಿ ವರ್ಷ ಆತ್ಮಹತ್ಯೆ, ಕೊಲೆ ಹಾಗೂ ಅಹಿತಕರ ಘಟನೆಗಳಿಂದಾಗಿ ಹೆಚ್ಚಿನ ಯೋಧರನ್ನು ಕಳೆದುಕೊಳ್ಳುತ್ತಿರುವ ಕಾರಣದಿಂದ ಸೇನಾ ಸಿಬ್ಬಂದಿ ಹೆಚ್ಚು ಒತ್ತಡಕ್ಕೆ ಒಳಗಾಗಿರುವ ಬಗ್ಗೆ ಅಧ್ಯಯನ ಮಾಹಿತಿ ನೀಡಿದೆ.

ಗಡಿಗಳಲ್ಲಿ ವಿರೋಧಿಗಳ ದಾಳಿ, ಒಳನಾಡುಗಳಲ್ಲಿ ಭಯೋತ್ಪಾದಕ ದಾಳಿಗಿಂತ ಹೆಚ್ಚಾಗಿ ಆತ್ಮಹತ್ಯೆ, ಕೊಲೆ ಇನ್ನಿತರ ಅಹಿತಕರ ಘಟನೆಗಳು ಯೋಧರನ್ನು ಮತ್ತಷ್ಟು ಒತ್ತಡಕ್ಕೊಳಗಾಗುವಂತೆ ಮಾಡುತ್ತದೆ ಎಂದು ಭಾರತೀಯ ಯುನೈಟೆಡ್ ಸರ್ವೀಸಸ್  ಸಂಸ್ಥೆ (USI) ತಿಳಿಸಿದೆ.

ಆದರೆ, ಭಾರತೀಯ ಭೂಸೇನೆ ಈ ವರದಿಯನ್ನು ತಿರಸ್ಕರಿಸಿದೆ. ವರದಿಗೆ ಪರಿಗಣಿಸಿರುವ ಮಾದರಿ ಪ್ರಮಾಣ ಅತಿ ಕಡಿಮೆಯಾಗಿದೆ ಹಾಗೂ ಕಡಿಮೆ ಸಂಖ್ಯೆಯ ಮಾದರಿಗಳ ಅನ್ವಯ ಇಷ್ಟು ದೊಡ್ಡ ನಿರ್ಣಯಕ್ಕೆ ಬರುವುದು ಸಾಧ್ಯವಿಲ್ಲ ಎಂದು ಭೂಸೇನೆ ಸ್ಪಷ್ಟಪಡಿಸಿದೆ.

ಈ ಅಧ್ಯಯನವನ್ನು ವೈಯಕ್ತಿಕವಾಗಿ ನಡೆಸಲಾಗಿದೆ. ಸುಮಾರು 400 ಸೈನಿಕರನ್ನು ಅಧ್ಯಯನ ಮಾದರಿಯಾಗಿ ಪರಿಗಣಿಸಿದ್ದಾರೆ. ಅಧ್ಯಯನ ವಿಧಾನದ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ, ವರದಿ ತರ್ಕಬದ್ಧವಾಗಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಪ್ರತಿವರ್ಷ ಸರಾಸರಿ 100ರಷ್ಟು ಸೈನಿಕರು ಆತ್ಮಹತ್ಯೆ ನಡೆಸುವುದು ಸಾಮಾನ್ಯ ಎಂಬಂತಾಗಿದೆ. 2010ರ ಬಳಿಕ ಇದುವರೆಗೆ ಸುಮಾರು 950 ಯೋದರನ್ನು ಭಾರತೀಯ ಸೈನ್ಯ ಕೇವಲ ಈ ಕಾರಣದಿಂದ ಕಳೆದುಕೊಂಡಿದೆ.

ಗಡಿಭಾಗದಲ್ಲಿ ಸೈನಿಕರ ಸುದೀರ್ಘ ನಿಯೋಜನೆ, ಜಮ್ಮು ಮತ್ತು ಕಾಶ್ಮೀರ ಹಾಗೂ ಈಶಾನ್ಯ ಭಾಗಗಳಲ್ಲಿ CI/CT ಕಾರ್ಯಾಚರಣೆಗೆ ಯೋಧರ ನಿಯೋಜನೆ ಇತ್ಯಾದಿಗಳು ಸೇನಾ ಸಿಬ್ಬಂದಿಗಳ ಮಾನಸಿಕ ಆರೋಗ್ಯ, ದೈಹಿಕ ಕ್ಷಮತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಅಧ್ಯಯನ ಸೂಚಿಸಿದೆ.

ಅಂಥಾ ಪ್ರದೇಶಗಳಲ್ಲಿ ನಿಯೋಜನೆಗೊಂಡ ಸೈನಿಕರು, ಮನೆಯವರ ಬಗ್ಗೆ ಕಾಳಜಿ ತೋರಲಾಗದೆ, ಮನೆಯ ಆಸ್ತಿ, ಆರ್ಥಿಕತೆ, ವೈವಾಹಿಕ ಜೀವನದ ಸಮಸ್ಯೆಗಳಿಂದಲೂ ಹೆಚ್ಚು ಒತ್ತಡಕ್ಕೆ ಒಳಗಾಗುತ್ತಿದ್ದಾರೆ ಎಂದು ಅಧ್ಯಯನ ವಿವರಣೆ ನೀಡಿದೆ.

ಪ್ಯಾಂಗೋಂಗ್​ ಸರೋವರಕ್ಕೆ ಶೀಘ್ರದಲ್ಲೇ ಇಳಿಯಲಿವೆ ಭಾರತೀಯ ಸೇನೆಯ ಅತ್ಯುತ್ತಮ 12 ಗಸ್ತು ಬೋಟ್​ಗಳು; ಚೀನಾಕ್ಕೆ ಸೆಡ್ಡು

Published On - 6:07 pm, Sat, 9 January 21

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ