AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾಲೆಗೆ ಹೋಗಲು 24 ಕಿ.ಮೀ ಸೈಕಲ್ ಓಡಿಸುತ್ತಿದ್ದ ಹುಡುಗಿ, 8ನೇ ರ್ಯಾಂಕ್.. ಎಲ್ಲಿ?

ಮಧ್ಯಪ್ರದೇಶ: ಸಾಧಿಸುವ ಛಲ ಇದ್ದರೆ ಏನು ಬೇಕಾದ್ರು ಮಾಡಬಹುದು ಎಂಬುವುದಕ್ಕೆ ಉತ್ತಮ ಉದಾಹರಣೆಯಂತೆ ಬಿಂಡ್ ಜಿಲ್ಲೆಯ ಅಜ್ನಾಲ್ ಗ್ರಾಮದ 15 ವರ್ಷದ ರೋಶ್ನಿ ಭಡೌರಿಯಾ ಮಾಡಿ ತೂರಿಸಿದ್ದಾಳೆ. ಈಕೆ ಮಧ್ಯಪ್ರದೇಶ ರಾಜ್ಯ ಮಂಡಳಿ ನಡೆಸಿದ 10 ನೇ ತರಗತಿ ಪರೀಕ್ಷೆಯಲ್ಲಿ ಶೇ 98.5 ಅಂಕಗಳನ್ನು ಗಳಿಸಿ ಎಂಟನೇ ರ್ಯಾಂಕ್ ಪಡೆದಿದ್ದಾಳೆ. ರೋಶ್ನಿ ಶಾಲೆಗೆ ಹಾಜರಾಗಲು ಪ್ರತಿದಿನ 24 ಕಿಲೋಮೀಟರ್ ಸೈಕಲ್ ಓಡಿಸುತ್ತಿದ್ದಳು. ಸರ್ಕಾರ ನೀಡಿದ ಸೈಕಲ್​ನ ನಾನು ಚೆನ್ನಾಗಿ ಬಳಸಿಕೊಂಡಿದ್ದೇನೆ. ನಾನು ಪ್ರತಿದಿನ ನಾಲ್ಕರಿಂದ ನಾಲ್ಕೂವರೆ ಗಂಟೆಗಳ […]

ಶಾಲೆಗೆ ಹೋಗಲು 24 ಕಿ.ಮೀ ಸೈಕಲ್ ಓಡಿಸುತ್ತಿದ್ದ ಹುಡುಗಿ, 8ನೇ ರ್ಯಾಂಕ್.. ಎಲ್ಲಿ?
ಆಯೇಷಾ ಬಾನು
|

Updated on:Jul 06, 2020 | 9:42 AM

Share

ಮಧ್ಯಪ್ರದೇಶ: ಸಾಧಿಸುವ ಛಲ ಇದ್ದರೆ ಏನು ಬೇಕಾದ್ರು ಮಾಡಬಹುದು ಎಂಬುವುದಕ್ಕೆ ಉತ್ತಮ ಉದಾಹರಣೆಯಂತೆ ಬಿಂಡ್ ಜಿಲ್ಲೆಯ ಅಜ್ನಾಲ್ ಗ್ರಾಮದ 15 ವರ್ಷದ ರೋಶ್ನಿ ಭಡೌರಿಯಾ ಮಾಡಿ ತೂರಿಸಿದ್ದಾಳೆ. ಈಕೆ ಮಧ್ಯಪ್ರದೇಶ ರಾಜ್ಯ ಮಂಡಳಿ ನಡೆಸಿದ 10 ನೇ ತರಗತಿ ಪರೀಕ್ಷೆಯಲ್ಲಿ ಶೇ 98.5 ಅಂಕಗಳನ್ನು ಗಳಿಸಿ ಎಂಟನೇ ರ್ಯಾಂಕ್ ಪಡೆದಿದ್ದಾಳೆ.

ರೋಶ್ನಿ ಶಾಲೆಗೆ ಹಾಜರಾಗಲು ಪ್ರತಿದಿನ 24 ಕಿಲೋಮೀಟರ್ ಸೈಕಲ್ ಓಡಿಸುತ್ತಿದ್ದಳು. ಸರ್ಕಾರ ನೀಡಿದ ಸೈಕಲ್​ನ ನಾನು ಚೆನ್ನಾಗಿ ಬಳಸಿಕೊಂಡಿದ್ದೇನೆ. ನಾನು ಪ್ರತಿದಿನ ನಾಲ್ಕರಿಂದ ನಾಲ್ಕೂವರೆ ಗಂಟೆಗಳ ಕಾಲ ಅಧ್ಯಯನ ಮಾಡುತ್ತಿದ್ದೆ. ನಾಣು ಭವಿಷ್ಯದಲ್ಲಿ ಐಎಎಸ್​ ಆಗಲು ತಯಾರಿ ನಡೆಸಲು ಬಯಸುತ್ತೇನೆ” ಎಂದು ರೋಶ್ನಿ ತನ್ನ ಆಸೆ ಬಿಚ್ಚಿಟ್ಟಿದ್ದಾಳೆ.

ರೋಶ್ನಿ ತಾನು ಇಂತಹ ಉತ್ತಮ ಶ್ರೇಣಿಯನ್ನು ಪಡೆದು ರ್ಯಾಂಕ್ ಬರ್ತೀನಿ ಎಂಬ ನಿರೀಕ್ಷೆ ಇರಲಿಲ್ಲ. ಆದರೆ ಪರೀಕ್ಷೆಗಳನ್ನು ಎದುರಿಸಲು ಶ್ರದ್ಧೆಯಿಂದ ಓದುತ್ತಿದ್ದೆ. ನನ್ನ ತಂದೆಯ ನಿರಂತರ ಬೆಂಬಲದಿಂದಾಗಿ ತನ್ನ ಅಧ್ಯಯನದ ಬಗ್ಗೆ ಸಂಪೂರ್ಣ ಗಮನ ಹರಿಸಲು ಸಾಧ್ಯವಾಯಿತು ಎಂದು ಅವಳು ಹೇಳಿದಳು.

ನನ್ನ ಮಗಳು ನಿಜಕ್ಕೂ ತುಂಬಾ ಶ್ರಮವಹಿಸಿದ್ದಾಳೆ. ಇದು ಕುಟುಂಬದ ಎಲ್ಲರಿಗೂ ಹೆಮ್ಮೆ ತಂದಿದೆ ಎಂದು ರೈತರಾಗಿರುವ ರೋಶ್ನಿಯ ತಂದೆ ಪುರ್ಷೋತ್ತಂ ಭಡೋರಿಯಾ ಹೇಳಿದ್ರು. ಜೊತೆಗೆ ನನ್ನ ಮಗಳು ಎತ್ತರಕ್ಕೆ ಬೆಳೆದು ಅವಳು ಐಎಎಸ್ ಅಧಿಕಾರಿಯಾಗುವ ಕನಸುಗಳನ್ನು ಸಾಧಿಸಲು ಬಯಸುತ್ತೇನೆ ಎಂದು ತಾಯಿ ಸರಿತಾ ಭಡೋರಿಯಾ ಹೇಳಿದ್ದಾರೆ. ಒಟ್ಟಿನಲ್ಲಿ ಕೊರೊನಾ ನಡುವೆ ಶನಿವಾರ ಎಂಪಿ ಬೋರ್ಡ್ ಪ್ರಕಟಿಸಿದ 10 ನೇ ತರಗತಿ ಪರೀಕ್ಷೆಯ ಫಲಿತಾಂಶ ಈ ಕುಟುಂಬಕ್ಕೆ ಸಂತೋಷ ತಂದಿದೆ. ಕನಸು ಕಾಣುತ್ತಿದ್ದ ರೋಶ್ನಿಗೆ ತನ್ನ ಕನಸು ನನಸು ಮಾಡುವ ಛಲ ತುಂಬಿದೆ.

Published On - 9:41 am, Mon, 6 July 20

ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ