Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಂಬೈ: ಇಬ್ಬರು ಉದ್ಯಮಿಗಳ ಹತ್ಯೆ: ಸುಪಾರಿ ಕೊಟ್ಟವನೂ ಕೊಲೆಯಾಗಿದ್ದು ಹೇಗೆ?

ಮುಂಬೈನಲ್ಲಿ ನಡೆದಿರುವ ಇಬ್ಬರು ಉದ್ಯಮಿಗಳ ಹತ್ಯೆಗೆ ಟ್ವಿಸ್ಟ್​ ಸಿಕ್ಕಿದೆ. ಒಬ್ಬ ಉದ್ಯಮಿ ಮತ್ತೊಬ್ಬ ಉದ್ಯಮಿಯನ್ನು ಹತ್ಯೆ ಮಾಡಲು ಸುಪಾರಿ ನೀಡಿದ್ದ, ಆದರೆ ಸುಪಾರಿ ಕೊಟ್ಟಿದ್ದ ಬಿಲ್ಡರ್​ ಹಂತಕನಿಗೆ ಕೊಡುವುದಾಗಿ ಒಪ್ಪಿಕೊಂಡಿದ್ದ ಮೊತ್ತದ ಹಣವನ್ನು ಕೊಡಲು ನಿರಾಕರಿಸಿದ ಕಾರಣ ಮತ್ತೊಬ್ಬ ಉದ್ಯಮಿಯನ್ನು ಹಂತಕ ಹತ್ಯೆ ಮಾಡಿದ್ದಾನೆ.

ಮುಂಬೈ: ಇಬ್ಬರು ಉದ್ಯಮಿಗಳ ಹತ್ಯೆ: ಸುಪಾರಿ ಕೊಟ್ಟವನೂ ಕೊಲೆಯಾಗಿದ್ದು ಹೇಗೆ?
ಪೊಲೀಸ್​
Follow us
ನಯನಾ ರಾಜೀವ್
|

Updated on: Aug 30, 2024 | 10:39 AM

ಮುಂಬೈನಲ್ಲಿ ಇಬ್ಬರು ಉದ್ಯಮಿಗಳ ಹತ್ಯೆ ನಡೆದಿದೆ. ಆಗಸ್ಟ್​ 21ರಂದು ಮುಂಬೈನ ಇಬ್ಬರು ಬಿಲ್ಡರ್​ಗಳು ನಾಪತ್ತೆಯಾಗಿದ್ದರು. ಇದೀಗ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಓರ್ವ ಬಿಲ್ಡರ್​ ಸಾವನ್ನಪ್ಪಿದ್ದು ಸಹಜ ಆದರೆ ಅವರ ಕೊಲೆಗೆ ಸುಪಾರಿ ಕೊಟ್ಟವರೂ ಸತ್ತಿದ್ಹೇಗೆ ಎನ್ನುವ ವಿಚಾರ ಇಲ್ಲಿದೆ.

ಒಬ್ಬ ಉದ್ಯಮಿ ಮತ್ತೊಬ್ಬ ಉದ್ಯಮಿಯನ್ನು ಹತ್ಯೆ ಮಾಡಲು ಸುಪಾರಿ ನೀಡಿದ್ದ, ಆದರೆ ಸುಪಾರಿ ಕೊಟ್ಟಿದ್ದ ಬಿಲ್ಡರ್​ ಹಂತಕನಿಗೆ ಕೊಡುವುದಾಗಿ ಒಪ್ಪಿಕೊಂಡಿದ್ದ ಮೊತ್ತದ ಹಣವನ್ನು ಕೊಡಲು ನಿರಾಕರಿಸಿದ ಕಾರಣ ಮತ್ತೊಬ್ಬ ಉದ್ಯಮಿಯನ್ನು ಹಂತಕ ಹತ್ಯೆ ಮಾಡಿದ್ದಾನೆ.

ಸುಮಿತ್ ಜೈನ್ ಹಾಗೂ ಅಮೀರ್ ಖಂಜಾದಾ ನಡುವೆ ಜಮೀನು ವಿಚಾರದಲ್ಲಿ ವೈಷಮ್ಯ ಉಂಟಾಗಿತ್ತು, ಅವರಿಬ್ಬರೂ ಆಗಸ್ಟ್ 21ರಿಂದ ನಾಪತ್ತೆಯಾಗಿದ್ದರು. ಮರುದಿನ ಖಲಾಪುರ್​ನ ಮುಂಬೈ-ಪುಣೆ ಎಕ್ಸ್​ಪ್ರೆಸ್​ವೇನಲ್ಲಿ ಅಮೀರ್ ಖಾಂಜಾದಾ ಮೃತದೇಹ ಅವರ ಕಾರಿನಲ್ಲಿ ಪತ್ತೆಯಾಗಿತ್ತು. ಕಾರಿನಲ್ಲಿ ಗುಂಡೇಟಿನ ಗುರುತುಗಳಿದ್ದವು. ಎರಡು ಗುಂಡುಗಳು, ಚಪ್ಪಲಿ ಹಾಗೂ ಕ್ಯಾಪ್​ ಪತ್ತೆಯಾಗಿತ್ತು.

ಮತ್ತಷ್ಟು ಓದಿ: ತುಮಕೂರು: ಪ್ರೀತಿ‌ ನಿರಾಕರಿಸಿದ ಮಂಗಳಮುಖಿಗೆ ಚಾಕು ಇರಿದ ಯುವಕ

ಸುಮಿತ್ ಜೈನ್ ದೇಹ ಮರುದಿನ ಪೆನ್​ ಖೋಪೋಲಿ ಹೆದ್ದಾರಿಯ ಕರ್ನಾಲಾ ಪಕ್ಷಿಧಾಮದ ಬಳಿ ಪತ್ತೆಯಾಗಿತ್ತು. ಸುಮಿತ್ ಜೈನ್ ಮೊಣಕಾಲಿನ ಮೇಲೆ ಗುಂಡು ತಗುಲಿತ್ತು ಇನ್ನೊಂದು ಕಾಲಿಗೆ ಇರಿಯಲಾಗಿತ್ತು. ಸುಮಿತ್ ಜೈನ್ ಹಾಗೂ ನಖಾಡೆ ಅಮೀರ್ ಖಾಂಜಾದಾರನ್ನು ಕೊಲ್ಲಲು ಯೋಜನೆ ರೂಪಿಸಿದ್ದರು. ಮೂರೂವರೆ ಕೋಟಿ ಮೌಲ್ಯದ ನಿವೇಶನ ಮಾರಾಟ ಪ್ರಕರಣದಲ್ಲಿ ಜೈನ್ ಮತ್ತು ಖಂಜಾದಾ ನಡುವೆ ಜಗಳ ನಡೆದಿತ್ತು.

ಈ ಜಮೀನು ಮಾರಾಟದಿಂದ ನನಗೆ 60 ಲಕ್ಷ ಕಮಿಷನ್ ಬಂದಿದೆ, ಅದರಲ್ಲಿ ನನಗೆ ಪಾಲು ಬೇಕು ಎಂದು ಖಾನಜಾದ ಒತ್ತಾಯಿಸಿದ್ದ. ಅಮೀರ್​ನನ್ನು ಕೊಲೆ ಮಾಡಿದರೆ 50 ಲಕ್ಷ ರೂ ಕೊಡುತ್ತೇನೆ ಎಂದು ಅಡ್ವಾನ್ಸ್​ ಆಗಿ 1.50 ಲಕ್ಷ ರೂ. ಕೊಟ್ಟಿದ್ದರು. ಕೆಲಸ ಪೂರ್ಣವಾದ ಮೇಲೆ ಮೂರೂವರೆ ಲಕ್ಷ ರೂ. ಕೊಟ್ಟಿದ್ದರು. ಅದಕ್ಕ ಕೋಪಗೊಂಡಿದ್ದ, 50 ಲಕ್ಷ ಕೊಡಲು ಸಾಧ್ಯವಿಲ್ಲ 25 ಲಕ್ಷ ಕೊಡುವುದಾಗಿ ಹೇಳಿದ್ದ.

ಆದರೆ ಸುಮೀತ್ ಜೈನ್ ಅವರು ಯೋಜಿಸಿದಂತೆ ಹಂತಕರಿಗೆ 50 ಲಕ್ಷ ನೀಡಲು ಸಾಧ್ಯವಿಲ್ಲ, ಬದಲಿಗೆ 25 ಲಕ್ಷ ನೀಡುವುದಾಗಿ ಹೇಳಿದ್ದಾರೆ. ಹೀಗಾಗಿ ಹಂತಕರ ಸುಮಿತ್ ಜೈನ್ ಅವರ ಇನ್ನೊಂದು ಕಾಲಿಗೆ ಗುಂಡು ಹಾರಿಸಿ ಪಕ್ಷಿಧಾಮದ ಬಳಿ ಬಿಟ್ಟು ಅಲ್ಲಿಂದ ಪರಾರಿಯಾಗಿದ್ದಾರೆ. ಹೆಚ್ಚುವರಿ ರಕ್ತಸ್ರಾವದಿಂದ ಸುಮಿತ್ ಜೈನ್ ಸಾವನ್ನಪ್ಪಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನವಿ ಮುಂಬೈ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ಅದರಲ್ಲಿ ಐವರು ಆರೋಪಿಗಳ ಹೆಸರನ್ನು ಉಲ್ಲೇಖಿಸಲಾಗಿದೆ. ವಿಠ್ಠಲ್ ನಖಾಡೆ (43), ಜೈಸಿಂಗ್ ಅಲಿಯಾಸ್ ರಾಜ ಮುದಲಿಯಾರ್ (38), ಆನಂದ್ ಅಲಿಯಾಸ್ ಅಂದ್ರಿ ಕುಂಜ್ (39), ವೀರೇಂದ್ರ ಅಲಿಯಾಸ್ ಗೋರಿಯಾ ಕದಮ್ (24) ಮತ್ತು ಅಂಕುಶ್ ಅಲಿಯಾಸ್ ಅಂಕಿ ಸೀತಾಪುರೆ (35) ಎಫ್‌ಐಆರ್‌ನಲ್ಲಿ ಹೆಸರಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?
ಕಣ್ಮನ ಸೆಳೆಯುತ್ತಿದೆ ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ
ಕಣ್ಮನ ಸೆಳೆಯುತ್ತಿದೆ ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ