AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುಡುಗು ಸಹಿತ ಗಾಳಿ ಮಳೆ; ದೆಹಲಿ ವಿಮಾನ ನಿಲ್ದಾಣದಿಂದ 22 ವಿಮಾನಗಳ ಮಾರ್ಗ ಬದಲಾವಣೆ

Delhi Rain: ಸತತ ಎರಡನೇ ದಿನವೂ ಗುಡುಗು ಸಹಿತ ಮಳೆ, ಬಲವಾದ ಗಾಳಿ ಬೀಸಿದ್ದು, ಶುಕ್ರವಾರ ಕೂಡ ಇದೇ ರೀತಿಯ ಹವಾಮಾನವನ್ನು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ

ಗುಡುಗು ಸಹಿತ ಗಾಳಿ ಮಳೆ; ದೆಹಲಿ ವಿಮಾನ ನಿಲ್ದಾಣದಿಂದ 22 ವಿಮಾನಗಳ ಮಾರ್ಗ ಬದಲಾವಣೆ
ದೆಹಲಿ ಮಳೆ
Follow us
ರಶ್ಮಿ ಕಲ್ಲಕಟ್ಟ
|

Updated on:Mar 30, 2023 | 10:13 PM

ದೆಹಲಿ: ದೆಹಲಿಯಲ್ಲಿ ಗುರುವಾರ ಸಂಜೆ ಭಾರೀ ಮಳೆಯಿಂದಾಗಿ ದೆಹಲಿ ವಿಮಾನ ನಿಲ್ದಾಣದಿಂದ (Delhi Airport) 22 ವಿಮಾನಗಳ ಮಾರ್ಗವನ್ನು ಬದಲಿಸಲಾಗಿದೆ. ಈ ವಿಮಾನಗಳನ್ನು ಲಕ್ನೋ, ಜೈಪುರ, ಅಹಮದಾಬಾದ್, ಚಂಡೀಗಢ ಮತ್ತು ಡೆಹ್ರಾಡೂನ್‌ಗೆ ತಿರುಗಿಸಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದೆಹಲಿಯ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಮಳೆ(Delhi Rain) ಸುರಿದಿದೆ. 11 ವಿಮಾನಗಳನ್ನು ಲಕ್ನೋಗೆ, 8 ಜೈಪುರಕ್ಕೆ ಮತ್ತು ತಲಾ 1 ವಿಮಾನಗಳನ್ನು ಅಹಮದಾಬಾದ್, ಚಂಡೀಗಢ ಮತ್ತು ಡೆಹ್ರಾಡೂನ್‌ಗೆ ತಿರುಗಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಸತತ ಎರಡನೇ ದಿನವೂ ಗುಡುಗು ಸಹಿತ ಮಳೆ, ಬಲವಾದ ಗಾಳಿ ಬೀಸಿದ್ದು, ಶುಕ್ರವಾರ ಕೂಡ ಇದೇ ರೀತಿಯ ಹವಾಮಾನವನ್ನು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದೆಹಲಿಯ ಅಧಿಕೃತ ಮಾರ್ಕರ್ ಎಂದು ಪರಿಗಣಿಸಲಾದ ಸಫ್ದರ್‌ಜಂಗ್ ವೀಕ್ಷಣಾಲಯವು 8.30 ರಿಂದ ರಾತ್ರಿ 8.30 ರ ನಡುವೆ 5.8 ಮಿಮೀ ಮಳೆಯನ್ನು ಪಡೆದಿದೆ.ಪಾಲಂ ವೀಕ್ಷಣಾಲಯವು 1.1 ಮಿಮೀ ಮಳೆಯನ್ನು ಪಡೆದರೆ ಲೋಧಿ ರಸ್ತೆ, ರಿಡ್ಜ್ ಮತ್ತು ಅಯಾನಗರದಲ್ಲಿ ಕ್ರಮವಾಗಿ 7.6 ಮಿಮೀ, 4.5 ಮಿಮೀ ಮಳೆಯಾಗಿದೆ. ಪೂರ್ವ ದೆಹಲಿಯಲ್ಲೂ ಆಲಿಕಲ್ಲು ಮಳೆಯಾಗಿದೆ ಎಂದು ವರದಿಯಾಗಿದೆ.

ಗುರುವಾರ ಸಂಜೆ ಪಟೇಲ್ ನಗರ, ಬುದ್ಧ ಜಯಂತಿ ಪಾರ್ಕ್, ರಾಷ್ಟ್ರಪತಿ ಭವನ, ರಾಜೀವ್ ಚೌಕ್, ದೆಹಲಿ ಕಂಟೋನ್ಮೆಂಟ್, ಇಂಡಿಯಾ ಗೇಟ್, ಸಫ್ದರ್‌ಜಂಗ್ ಮತ್ತು ಲೋಡಿ ರಸ್ತೆಯಲ್ಲಿ ಮಳೆ ಸುರಿದಿದೆ.

ಇದನ್ನೂ ಓದಿ: ಬಿಜೆಪಿ ಊಳಿಗಮಾನ್ಯ ವ್ಯವಸ್ಥೆಯ ಜಮೀನುದಾರನಂತೆ ವರ್ತಿಸುತ್ತಿದೆ: ಕೇಂದ್ರ ವಿರುದ್ಧ ಮಮತಾ ವಾಗ್ದಾಳಿ

ಮಾರ್ಚ್ 30 ಮತ್ತು ಏಪ್ರಿಲ್ 5 ರ ನಡುವೆ ವಾರದ ಹೆಚ್ಚಿನ ದಿನಗಳಲ್ಲಿ ದೆಹಲಿ ಮತ್ತು ಪಂಜಾಬ್, ಚಂಡೀಗಢ, ಹರಿಯಾಣ, ಉತ್ತರ ಪ್ರದೇಶ ಮತ್ತು ರಾಜಸ್ಥಾನದಂತಹ ಪಕ್ಕದ ಪ್ರದೇಶಗಳಲ್ಲಿ ಗುಡುಗು ಸಹಿತ ಲಘು-ಸಾಧಾರಣ ಮಳೆಯಾಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:10 pm, Thu, 30 March 23

VIDEO: ಇಲ್ಲಿ ಏನ್ ನಡೀತಿದೆ... ಗೊಂದಲದಲ್ಲೇ ಕೂತ RCB ಆಟಗಾರ
VIDEO: ಇಲ್ಲಿ ಏನ್ ನಡೀತಿದೆ... ಗೊಂದಲದಲ್ಲೇ ಕೂತ RCB ಆಟಗಾರ
ಷಷ್ಠಿಪೂರ್ತಿ ಯಾಕೆ ಆಚರಿಸಬೇಕು ಹಾಗೂ ಇದರ ಮಹತ್ವವೇನು?
ಷಷ್ಠಿಪೂರ್ತಿ ಯಾಕೆ ಆಚರಿಸಬೇಕು ಹಾಗೂ ಇದರ ಮಹತ್ವವೇನು?
ಈ ರಾಶಿಯವರಿಗೆ ಏಳು ಗ್ರಹಗಳ ಅನುಗ್ರಹ, ವ್ಯಾಪಾರದಲ್ಲಿ ಅಧಿಕ ಲಾಭ
ಈ ರಾಶಿಯವರಿಗೆ ಏಳು ಗ್ರಹಗಳ ಅನುಗ್ರಹ, ವ್ಯಾಪಾರದಲ್ಲಿ ಅಧಿಕ ಲಾಭ
ಬೆಂಗಳೂರಿನ ದೊಡ್ಡಕಲ್ಲಸಂದ್ರ ರಸ್ತೆಯ ದುಸ್ಥಿತಿ: ವಿಡಿಯೋ ಮಾಡಿ ತೋರಿಸಿದ ನಟ
ಬೆಂಗಳೂರಿನ ದೊಡ್ಡಕಲ್ಲಸಂದ್ರ ರಸ್ತೆಯ ದುಸ್ಥಿತಿ: ವಿಡಿಯೋ ಮಾಡಿ ತೋರಿಸಿದ ನಟ
ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ