AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಧ್ಯಪ್ರದೇಶದಲ್ಲಿ ಐಸಿಸ್ ಘಟಕ ಭೇದಿಸಿದ ಎನ್ಐಎ, ಮೂವರ ಬಂಧನ

ಮೇ 24 ರಂದು, ಎನ್‌ಐಎ ಕಳೆದ ವರ್ಷ ಆಗಸ್ಟ್‌ನಲ್ಲಿ ಮೊಹಮ್ಮದ್ ಆದಿಲ್ ಖಾನ್‌ನ ಐಸಿಸ್ ಚಟುವಟಿಕೆಗಳ ಕುರಿತು ತನಿಖೆಯ ಸಂದರ್ಭದಲ್ಲಿ ಎನ್ಐಎ ಪ್ರಕರಣವನ್ನು ದಾಖಲಿಸಿತ್ತು

ಮಧ್ಯಪ್ರದೇಶದಲ್ಲಿ ಐಸಿಸ್ ಘಟಕ ಭೇದಿಸಿದ ಎನ್ಐಎ, ಮೂವರ ಬಂಧನ
ಎನ್ಐಎ (ಸಂಗ್ರಹ ಚಿತ್ರ)
Follow us
ರಶ್ಮಿ ಕಲ್ಲಕಟ್ಟ
|

Updated on: May 27, 2023 | 4:10 PM

ರಾಷ್ಟ್ರೀಯ ತನಿಖಾ ಸಂಸ್ಥೆ (NIA), ಶನಿವಾರ ಮಧ್ಯಪ್ರದೇಶ (Madhya Pradesh) ಪೊಲೀಸ್‌ನ ಭಯೋತ್ಪಾದನಾ ನಿಗ್ರಹ ದಳ (ATS) ನೊಂದಿಗೆ  ನಡೆಸಿದ  ಜಂಟಿ ಕಾರ್ಯಾಚರಣೆಯಲ್ಲಿ ಐಸಿಸ್-ಸಂಬಂಧಿತ ಭಯೋತ್ಪಾದಕ ಘಟಕವನ್ನು ಭೇದಿಸಿದ್ದು, ಜಬಲ್‌ಪುರದಿಂದ ಮೂವರನ್ನು ಬಂಧಿಸಿದೆ. ಮೇ 26 ಮತ್ತು 27 ರಂದು ಜಬಲ್‌ಪುರದ (Jabalpur)13 ಸ್ಥಳಗಳಲ್ಲಿ ಎನ್‌ಐಎ ನಡೆಸಿದ ರಾತ್ರೋರಾತ್ರಿ ದಾಳಿಯಲ್ಲಿ ಈ ಬಂಧನಗಳು ನಡೆದಿವೆ. ಬಂಧಿತರಾದ ಸೈಯದ್ ಮಮೂರ್ ಅಲಿ, ಮೊಹಮ್ಮದ್ ಆದಿಲ್ ಖಾನ್ ಮತ್ತು ಮೊಹಮ್ಮದ್ ಶಾಹಿದ್ ಅವರನ್ನು ಭೋಪಾಲ್‌ನ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಹರಿತವಾದ ಆಯುಧಗಳು, ಮದ್ದುಗುಂಡುಗಳು (ನಿಷೇಧಿತ ಬೋರ್ ಸೇರಿದಂತೆ), ದೋಷಾರೋಪಣೆಯ ದಾಖಲೆಗಳು ಮತ್ತು ಡಿಜಿಟಲ್ ಸಾಧನಗಳನ್ನು ಎನ್ಐಎ ವಶಪಡಿಸಿಕೊಂಡಿದೆ.

ಮೇ 24 ರಂದು, ಎನ್‌ಐಎ ಕಳೆದ ವರ್ಷ ಆಗಸ್ಟ್‌ನಲ್ಲಿ ಮೊಹಮ್ಮದ್ ಆದಿಲ್ ಖಾನ್‌ನ ಐಸಿಸ್ ಚಟುವಟಿಕೆಗಳ ಕುರಿತು ತನಿಖೆಯ ಸಂದರ್ಭದಲ್ಲಿ ಎನ್ಐಎ ಪ್ರಕರಣವನ್ನು ದಾಖಲಿಸಿತ್ತು. ಖಾನ್ ಮತ್ತು ಅವರ ಸಹಚರರು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ಮೂಲಕ ಮತ್ತು ಆನ್-ಗ್ರೌಂಡ್ ‘ದವಾ’ ಕಾರ್ಯಕ್ರಮಗಳ ಮೂಲಕ ಐಸಿಸ್ ಪ್ರಚಾರವನ್ನು ಪ್ರಸಾರ ಮಾಡುವಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಐಸಿಸ್‌ಗಾಗಿ ಭಾರತದಲ್ಲಿ ಹಿಂಸಾತ್ಮಕ ಭಯೋತ್ಪಾದಕ ದಾಳಿ ಉದ್ದೇಶದಿಂದ ಈ ಚಟುವಟಿಕೆಗಳನ್ನು ನಡೆಸಲಾಯಿತು. ಮಾಡ್ಯೂಲ್ ಸ್ಥಳೀಯ ಮಸೀದಿಗಳು ಮತ್ತು ಮನೆಗಳಲ್ಲಿ ಸಭೆಗಳು/ದಾರ್‌ಗಳನ್ನು ನಡೆಸುತ್ತಿದೆ ಮತ್ತು ದೇಶದಲ್ಲಿ ಭಯೋತ್ಪಾದನೆಯನ್ನು ಹರಡಲು ಯೋಜನೆಗಳು ಮತ್ತು ಪಿತೂರಿಗಳನ್ನು ರೂಪಿಸುತ್ತಿದೆ ಎಂದು ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

ಮೂವರು ಆರೋಪಿಗಳು ತೀವ್ರಗಾಮಿಗಳಾಗಿದ್ದು ಹಿಂಸಾತ್ಮಕ ಜಿಹಾದ್ ಚಟುವಟಿಕೆಗಳನ್ನು ನಡೆಸಲು ನಿರ್ಧರಿಸಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ಅವರು ನಿಧಿ ಸಂಗ್ರಹಿಸುವಲ್ಲಿ ನಿರತರಾಗಿದ್ದರು, ಐಸಿಸ್ ಪ್ರಚಾರ ಸಾಮಗ್ರಿಗಳನ್ನು ಪ್ರಸಾರ ಮಾಡುತ್ತಿದ್ದರು, ಯುವಕರನ್ನು ಪ್ರೇರೇಪಿಸುವುದು ಮತ್ತು ನೇಮಕ ಮಾಡಿಕೊಳ್ಳುವುದು ಮತ್ತು ಭಯೋತ್ಪಾದಕ ಕೃತ್ಯಗಳನ್ನು ನಡೆಸುವ ಉದ್ದೇಶದಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಸಂಗ್ರಹಿಸಲು ಪ್ರಯತ್ನಿಸುತ್ತಿದ್ದರು.

ಎನ್ಐಎ ಪ್ರಕಾರ, ಸೈಯದ್ ಮಮೂರ್ ಅಲಿ ‘ಫಿಸ್ಬಿಲ್ಲಾಹ್’ ಎಂಬ ಹೆಸರಿನಲ್ಲಿ ಸ್ಥಳೀಯ ಗುಂಪನ್ನು ರಚಿಸಿದ್ದರು. ಅದೇ ಹೆಸರಿನಲ್ಲಿ ವಾಟ್ಸಾಪ್ ಗ್ರೂಪ್ ಅನ್ನು ಸಹ ನಿರ್ವಹಿಸುತ್ತಿದ್ದರು. ಈತ ತನ್ನ ಸಹಚರರೊಂದಿಗೆ, ಪಿಸ್ತೂಲ್‌ಗಳನ್ನು ಪಡೆಯಲು ಪ್ರಯತ್ನಿಸುತ್ತಿದ್ದನು ಈ ಉದ್ದೇಶಕ್ಕಾಗಿ ಜಬಲ್‌ಪುರ ಮೂಲದ ಅಕ್ರಮ ಶಸ್ತ್ರಾಸ್ತ್ರ ಪೂರೈಕೆದಾರರೊಂದಿಗೆ ಸಂಪರ್ಕದಲ್ಲಿದ್ದನು ಎಂದು ಹೇಳಲಾಗಿದೆ,

ನಿಷ್ಠಾವಂತ ಐಸಿಸ್ ಅನುಯಾಯಿ ಮತ್ತು ಬೆಂಬಲಿಗ, ಆದಿಲ್ ಜಬಲ್‌ಪುರ ಮೂಲದ ಸಮಾನ ಮನಸ್ಸಿನ ತೀವ್ರಗಾಮಿ ವ್ಯಕ್ತಿಗಳ ಸಕ್ರಿಯ ಗುಂಪನ್ನು ಒಟ್ಟುಗೂಡಿಸುವಲ್ಲಿ ಯಶಸ್ವಿಯಾಗಿದ್ದ.. ಇವರಲ್ಲಿ ಕೆಲವರು ಭಾರತದಲ್ಲಿ ಹಿಂಸಾತ್ಮಕ ಜಿಹಾದ್ ನಡೆಸಲು ಸ್ಥಳೀಯ ಸಂಘಟನೆಯನ್ನು ರಚಿಸುವ ಯೋಜನೆಯನ್ನು ಹೊಂದಿದ್ದರು ಎಂದು ಎನ್ಐಎ ತಿಳಿಸಿದೆ.

ಇದನ್ನೂ ಓದಿ: ದೇವರು ನಮ್ಮನ್ನು ಪರೀಕ್ಷಿಸುತ್ತಿದ್ದಾರೆ; ಜಡಿ ಮಳೆ,ಸುಡು ಬಿಸಿಲು ಏನೇ ಬರಲಿ ನಾವು ಹಿಂದೆ ಸರಿಯುವುದಿಲ್ಲ: ಬಜರಂಗ್ ಪುನಿಯಾ

ಆದಿಲ್ ಯುವಕರನ್ನು ಐಸಿಸ್‌ಗೆ ಪ್ರೇರೇಪಿಸಲು ಮತ್ತು ನೇಮಕಾತಿ ಮಾಡಲು ಹಲವು ಯೂಟ್ಯೂಬ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್ ಚಾನೆಲ್‌ಗಳನ್ನು ನಡೆಸುತ್ತಿದ್ದ. ಭಾರತದಲ್ಲಿ ಹಿಂಸಾತ್ಮಕ ದಾಳಿಗಾಗಿ ಪಿಸ್ತೂಲ್‌ಗಳು, ಐಇಡಿಗಳು ಮತ್ತು ಗ್ರೆನೇಡ್‌ಗಳು ಸೇರಿದಂತೆ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲು ಶಾಹಿದ್ ಯೋಜಿಸಿದ್ದರು ಎಂದು ತನಿಖೆಗಳಿಂದ ತಿಳಿದುಬಂದಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ