AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

April Fool’s Day: ಮೂರ್ಖರ ದಿನವಾದ ಇಂದು ಟ್ವಿಟರ್​ನಲ್ಲಿ ಟ್ರೆಂಡ್ ಆಗುತ್ತಿದೆ ನ್ಯಾಷನಲ್ ಜುಮ್ಲಾ ಡೇ ಹ್ಯಾಷ್​ಟ್ಯಾಗ್​; ಪ್ರಧಾನಿ ಮೋದಿ, ಬಿಜೆಪಿ ವಿರುದ್ಧ ವ್ಯಂಗ್ಯ

ಅಚ್ಛೆ ದಿನ್​, ಜಿಡಿಪಿ ಬೆಳವಣಿಗೆ, ನೀರಾವರಿ, ರೈತರ ಆದಾಯ ದ್ವಿಗುಣ, ಮಹಿಳಾ ಸುರಕ್ಷತೆ, ಭ್ರಷ್ಟಾಚಾರ ಮುಕ್ತ ದೇಶ.. ಇವೆಲ್ಲವೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಜುಮ್ಲಾಗಳು. ಬನ್ನಿ ನಾವಿವತ್ತು ಅಂದರೆ ಏಪ್ರಿಲ್​ 1ನ್ನು ರಾಷ್ಟ್ರೀಯ ಜುಮ್ಲಾದಿನವನ್ನಾಗಿ ಆಚರಿಸೋಣ ಎಂದು ಕಿಸಾನ್​ ಏಕ್ತಾ ಮೋರ್ಚಾ ಟ್ವೀಟ್ ಮಾಡಿದೆ.

April Fool's Day: ಮೂರ್ಖರ ದಿನವಾದ ಇಂದು ಟ್ವಿಟರ್​ನಲ್ಲಿ ಟ್ರೆಂಡ್ ಆಗುತ್ತಿದೆ ನ್ಯಾಷನಲ್ ಜುಮ್ಲಾ ಡೇ ಹ್ಯಾಷ್​ಟ್ಯಾಗ್​; ಪ್ರಧಾನಿ ಮೋದಿ, ಬಿಜೆಪಿ ವಿರುದ್ಧ ವ್ಯಂಗ್ಯ
ಟ್ವಿಟರ್​​ನಲ್ಲಿ ವೈರಲ್ ಆಗುತ್ತಿರುವ ಮೀಮ್ಸ್​ಗಳು
Lakshmi Hegde
|

Updated on:Apr 01, 2021 | 3:00 PM

Share

ಏಪ್ರಿಲ್​ 1ನೇ ತಾರೀಖೆಂದರೆ ಮೂರ್ಖರ ದಿನ. ಈ ದಿನ ಒಬ್ಬರು ಇನ್ನೊಬ್ಬರನ್ನು ಆರೋಗ್ಯಕರವಾಗಿ ಪ್ರ್ಯಾಂಕ್ ಮಾಡುತ್ತಾರೆ. ಕಾಲೆಳೆದು ಮಜಾ ತೆಗೆದುಕೊಳ್ಳುತ್ತಾರೆ. ಆದರೆ ಕಾಂಗ್ರೆಸ್​ ಮಾತ್ರ ಪ್ರಧಾನಿ ನರೇಂದ್ರ ಮೋದಿಯವರನ್ನು, ಕೇಂದ್ರ ಸರ್ಕಾರವನ್ನು ವ್ಯಂಗ್ಯ ಮಾಡಲು ಈ ದಿನವನ್ನು ಬಳಸಿಕೊಳ್ಳುತ್ತಿದೆ. 2019ರ ಏಪ್ರಿಲ್​ 1ರಂದು ಕಾಂಗ್ರೆಸ್, ಫೇಕು ದಿವಸ್​, ಮೋದಿ ಮತ್ ಬನಾವೋ ಎಂಬ ಹ್ಯಾಷ್​ಟ್ಯಾಗ್​​ನಡಿ ಮೋದಿಯವರನ್ನು ಟೀಕೆ ಮಾಡಿತ್ತು. ಅದಕ್ಕೆ ಪ್ರತಿಯಾಗಿ ಬಿಜೆಪಿ, ಪಪ್ಪು ದಿವಸ್​ ಎಂಬ ಹ್ಯಾಷ್​ಟ್ಯಾಗ್​ನಡಿ ರಾಹುಲ್ ಗಾಂಧಿಯವರನ್ನು ವ್ಯಂಗ್ಯ ಮಾಡಿತ್ತು. ಹಾಗೇ, ಈ ಬಾರಿ ಇಂದು ನ್ಯಾಷನಲ್ ಜುಮ್ಲಾ ಡೇ ಎಂಬ ಹ್ಯಾಷ್​ಟ್ಯಾಗ್​ ಟ್ವಿಟರ್​​ನಲ್ಲಿ ಟ್ರೆಂಡ್ ಆಗುತ್ತಿದೆ. ಜುಮ್ಲಾ ಎಂದರೆ ಸುಳ್ಳು ಆಶ್ವಾಸನೆಗಳು ಎಂದರ್ಥ.

ಈ ಜುಮ್ಲಾ ಎಂಬ ಪದವನ್ನು ಫೇಮಸ್​ ಮಾಡಿದ್ದೇ ಕಾಂಗ್ರೆಸ್ ಸಂಸದ ರಾಹುಲ್​ ಗಾಂಧಿ. 2018ರಲ್ಲಿ ಲೋಕಸಭೆಯಲ್ಲಿ ಮೋದಿ ವಿರುದ್ಧ ಮಾತನಾಡುತ್ತ ಜುಮ್ಲಾ ಶಬ್ದವನ್ನು ಬಳಸಿದ್ದರು. ಇಂದು ಏಪ್ರಿಲ್​ 1ರ ಮೂರ್ಖರ ದಿನದಂದು ಮತ್ತೆ ನ್ಯಾಷನಲ್ ಜುಮ್ಲಾ ಡೇ ಎಂಬ ಹ್ಯಾಷ್​ಟ್ಯಾಗ್​ ಮೂಲಕ ಜನಸಾಮಾನ್ಯರೂ ಸಹ ಬಿಜೆಪಿ ಸರ್ಕಾರವನ್ನು ಹಾಸ್ಯ ಮಾಡುತ್ತಿದ್ದಾರೆ. ಬಿಜೆಪಿ, ಮೋದಿ, ಅಮಿತ್​ ಶಾ ಸೇರಿ ಹಲವು ನಾಯಕರನ್ನು ವ್ಯಂಗ್ಯ ಮಾಡುವ ಸಾವಿರಾರು ಮೀಮ್ಸ್​ಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿವೆ. ವಿದೇಶದಲ್ಲಿ ಭಾರತದ ಕೆಲವರು ಕೂಡಿಟ್ಟಿರುವ ಕಪ್ಪುಹಣವನ್ನು ವಾಪಸ್ ತಂದು, ಪ್ರತಿಯೊಬ್ಬರ ಖಾತೆಗೆ ಹಾಕುತ್ತೇವೆ ಎಂಬ ಮೋದಿಯವರ ಹೇಳಿಕೆಯಿಂದ ಹಿಡಿದು, ಮಹಿಳಾ ಸುರಕ್ಷತೆ, ಖಾಸಗೀಕರಣ..ದಂತಹ ಹತ್ತುಹಲವು ವಿಷಯಗಳನ್ನು ಇಂದು ನೆಟ್ಟಿಗರು ಟ್ವಿಟರ್​ನಲ್ಲಿ ಚರ್ಚೆ ಮಾಡುತ್ತಿದ್ದಾರೆ.

ಅಚ್ಛೆ ದಿನ್​, ಜಿಡಿಪಿ ಬೆಳವಣಿಗೆ, ನೀರಾವರಿ, ರೈತರ ಆದಾಯ ದ್ವಿಗುಣ, ಮಹಿಳಾ ಸುರಕ್ಷತೆ, ಭ್ರಷ್ಟಾಚಾರ ಮುಕ್ತ ದೇಶ.. ಇವೆಲ್ಲವೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಜುಮ್ಲಾಗಳು. ಬನ್ನಿ ನಾವಿವತ್ತು ಅಂದರೆ ಏಪ್ರಿಲ್​ 1ನ್ನು ರಾಷ್ಟ್ರೀಯ ಜುಮ್ಲಾದಿನವನ್ನಾಗಿ ಆಚರಿಸೋಣ ಎಂದು ಕಿಸಾನ್​ ಏಕ್ತಾ ಮೋರ್ಚಾ ಟ್ವೀಟ್ ಮಾಡಿದೆ. ಹಾಗೇ, ಕಾಂಗ್ರೆಸ್​ನ ರಾಷ್ಟ್ರೀಯ ಸಮನ್ವಯಾಧಿಕಾರಿ ಗೌರವ್​ ಪಾಂಡಿ, ರಾಷ್ಟ್ರೀಯ ಅಭಿಯಾನ ಉಸ್ತುವಾರಿ ಶ್ರೀವತ್ಸಾ ಕೂಡ ನ್ಯಾಷನಲ್​ ಜುಮ್ಲಾ ಡೇ ಹ್ಯಾಷ್​ಟ್ಯಾಗ್​ನಡಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​​ರನ್ನು ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್​ ಸದಾ ಒಂದಿಲ್ಲೊಂದು ಕಾರಣಕ್ಕೆ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ವ್ಯಂಗ್ಯ ಮಾಡುತ್ತಲೇ ಬಂದಿದೆ. ಈ ಹಿಂದೆ ಸೆಪ್ಟೆಂಬರ್ 17- ಪ್ರಧಾನಿ ಮೋದಿಯವರ ಜನ್ಮದಿನವನ್ನು ರಾಷ್ಟ್ರೀಯ ನಿರುದ್ಯೋಗ ದಿನ ಎಂದು ಹೇಳಿತ್ತು.

Published On - 2:59 pm, Thu, 1 April 21

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ