AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಹಳ್ಳಿಯಲ್ಲಿ ಹನುಮಂತ ದೇವರನ್ನು ಪೂಜಿಸುವುದಿಲ್ಲ, ಮಾರುತಿ ಕಾರನ್ನೂ ಕೊಳ್ಳುವುದಿಲ್ಲ; ರಾಕ್ಷಸನ ಆರಾಧನೆ ಮಾಡಲು ಇದೆ ಒಂದು ಕಾರಣ !

ಅಂದಿನ ದಂಡಕಾರಣ್ಯ ಇರುವ ಜಾಗದಲ್ಲಿಯೇ ನಮ್ಮ ಹಳ್ಳಿಯಿದೆ. ಇಲ್ಲಿ ಒಂದೇ ಒಂದು ಆಂಜನೇಯನ ಗುಡಿಯಿಲ್ಲ. ಇಲ್ಯಾರೂ ಹನುಮನನ್ನು ಪೂಜಿಸುವುದೂ ಇಲ್ಲ. ಹನುಮಾನ್ ಚಾಲೀಸಾ ಪಠಿಸುವುದಿಲ್ಲ ಎಂದು ಅಂಕುಶ್​ ವಾಘ್ ಎಂಬುವರು ತಿಳಿಸಿದ್ದಾರೆ.

ಈ ಹಳ್ಳಿಯಲ್ಲಿ ಹನುಮಂತ ದೇವರನ್ನು ಪೂಜಿಸುವುದಿಲ್ಲ, ಮಾರುತಿ ಕಾರನ್ನೂ ಕೊಳ್ಳುವುದಿಲ್ಲ; ರಾಕ್ಷಸನ ಆರಾಧನೆ ಮಾಡಲು ಇದೆ ಒಂದು ಕಾರಣ !
ಹನುಮಂತನ ವಿಗ್ರಹ
TV9 Web
| Updated By: Lakshmi Hegde|

Updated on: Apr 17, 2022 | 9:44 AM

Share

ಮಹಾರಾಷ್ಟ್ರದಲ್ಲೊಂದು ಕುಗ್ರಾಮವಿದೆ. ಅದು ತುಂಬ ಪುಟ್ಟ ಹಳ್ಳಿ. ಆದರೆ ಇಲ್ಲಿನ ಆಚರಣೆಗಳು ತುಂಬ ವಿಚಿತ್ರ. ಇವರು ಆಂಜನೇಯ ದೇವರನ್ನು ಪೂಜಿಸುವುದಿಲ್ಲ. ಹನುಮನಂತನ ಹೆಸರನ್ನು ಮಕ್ಕಳಿಗೆ ಇಡುವುದಿಲ್ಲ..ಅಷ್ಟೇ ಏಕೆ, ಮಾರುತಿ ಕಾರನ್ನೂ ಕೂಡ ಖರೀದಿಸುವುದಿಲ್ಲ. ಈ ಕಾರು ಖರೀದಿ ಮಾಡಿದರೆ ಅವರು ಯಾವುದಾದರೂ ದುರಂತಕ್ಕೀಡಾಗುತ್ತಾರೆ ಎಂಬುದು ಇಲ್ಲಿನ ಜನರ ನಂಬಿಕೆ. ನಿನ್ನೆ ಇಡೀ ದೇಶಾದ್ಯಂತ ಹಿಂದುಗಳು ಹನುಮಾನ್​ ಜಯಂತಿ ಆಚರಣೆ ನಡೆಸಿದ್ದಾರೆ. ಆದರೆ ಈ ಹಳ್ಳಿಯಲ್ಲಿ ಆಚರಣೆ ಇರಲಿಲ್ಲ. ಒಟ್ಟಾರೆ ಹೇಳಬೇಕು ಎಂದರೆ ಹನುಮಾನ್​ ದೇವರಿಗೆ ಸಂಬಂಧಪಟ್ಟ ಯಾವುದೇ ಆಚರಣೆಯನ್ನೂ ಮಾಡುವುದಿಲ್ಲ. ಆಂಜನೇಯನನ್ನು ನಂಬುವುದೂ ಇಲ್ಲ.  

ಅಂದಹಾಗೇ, ಈ ಹಳ್ಳಿಯ ಹೆಸರು ದೈತ್ಯಾನಂದಪುರ. ಮಹಾರಾಷ್ಟ್ರದ ಅಹ್ಮದಾಬಾದ್​ನಿಂದ 70ಕಿಮೀ ದೂರದಲ್ಲಿದೆ. ಹಳ್ಳಿಯ ಹೆಸರೇ ಹೇಳುವಂತೆ ಇವರೆಲ್ಲ ದೈತ್ಯನ ಅಂದರೆ ರಾಕ್ಷಸರ ಆರಾಧಕರು. ಹನುಮಂತನ ಬದಲಿಗೆ ನಿಂಬಾ ದೈತ್ಯ ಎಂಬ ರಾಕ್ಷಸನನ್ನು ಪೂಜಿಸುತ್ತಾರೆ.  ಅದಕ್ಕೊಂದು ಕಾರಣವಿದೆ. ಹನುಮಂತ ರಾಮನ ಪರಮ ಭಕ್ತ. ಸೀತಾಮಾತೆಯನ್ನು ಹುಡುಕುತ್ತ ದಂಡಕಾರಣ್ಯವನ್ನು ಪ್ರವೇಶಿಸುತ್ತಾನೆ. ಆಗ ಈ ನಿಂಬಾ ದೈತ್ಯ ಎದುರಾಗಿ, ಇಬ್ಬರೂ ಹೊಡೆದಾಡುತ್ತಾರೆ. ಯಾರೂ ಸೋಲುವುದಿಲ್ಲ. ಬದಲಿಗೆ ಒಂದು ಹಂತದಲ್ಲಿ ಸುಸ್ತಾಗಿ ವಿಶ್ರಮಿಸುತ್ತಾರೆ. ಹಾಗೇ, ವಿಶ್ರಮಿಸುವ ಹೊತ್ತಲ್ಲಿ ಇವರಿಬ್ಬರ ಬಾಯಿಂದಲೂ ಶ್ರೀರಾಮ ಎಂಬ ಶಬ್ದ ಹೊರಬೀಳುತ್ತದೆ. ನಿಂಬಾ ರಾಕ್ಷಸನಾದರೂ ಶ್ರೀರಾಮನ ಭಕ್ತ ಎಂದು ತಿಳಿದ ಹನುಮಂತ ಸಂತೋಷಗೊಂಡು ಅವನಿಗೆ ಒಂದ ವರ ಕೊಡುತ್ತಾನೆ. ಆಗಿನಿಂದಲೂ ದಂಡಕಾರಣ್ಯದಲ್ಲಿ ನಿಂಬ ದೈತ್ಯನನ್ನೇ ಪೂಜಿಸಲಾಗುತ್ತಿದೆ. ಈ ಹಳ್ಳಿ ಅದೇ ಭಾಗದಲ್ಲಿ ಬರುವುದರಿಂದ ಇಂದಿಗೂ ಅಲ್ಲಿನ ಜನ ನಿಂಬಾ ರಾಕ್ಷಸನನ್ನು ಪೂಜಿಸುತ್ತಾರೆ.

ಅಂದಿನ ದಂಡಕಾರಣ್ಯ ಇರುವ ಜಾಗದಲ್ಲಿಯೇ ನಮ್ಮ ಹಳ್ಳಿಯಿದೆ. ಇಲ್ಲಿ ಒಂದೇ ಒಂದು ಆಂಜನೇಯನ ಗುಡಿಯಿಲ್ಲ. ಇಲ್ಯಾರೂ ಹನುಮನನ್ನು ಪೂಜಿಸುವುದೂ ಇಲ್ಲ. ಹನುಮಾನ್ ಚಾಲೀಸಾ ಪಠಿಸುವುದಿಲ್ಲ. ಹನುಮಂತನಿಗೆ ಸಂಬಂಧಪಟ್ಟ ಯಾವುದೇ ಪೂಜೆ, ಆಚರಣೆಯೂ ನಮ್ಮಲ್ಲಿಲ್ಲ ಎಂದು ದೈತ್ಯಾನಂದಪುರ ಗ್ರಾಮದ ಅಂಕುಶ್ ವಾಘ್ ಎಂಬುವರು ಹೇಳಿದ್ದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.

ಇದನ್ನೂ ಓದಿ: ಕಿರುತೆರೆ ನಟನ ಜತೆ ನಿಶ್ಚಿತಾರ್ಥ ಮಾಡಿಕೊಂಡ ಖ್ಯಾತ ಆ್ಯಂಕರ್; ವೈರಲ್ ಆಯ್ತು ಫೋಟೋ

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್