AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಹಳ್ಳಿಯಲ್ಲಿ ಹನುಮಂತ ದೇವರನ್ನು ಪೂಜಿಸುವುದಿಲ್ಲ, ಮಾರುತಿ ಕಾರನ್ನೂ ಕೊಳ್ಳುವುದಿಲ್ಲ; ರಾಕ್ಷಸನ ಆರಾಧನೆ ಮಾಡಲು ಇದೆ ಒಂದು ಕಾರಣ !

ಅಂದಿನ ದಂಡಕಾರಣ್ಯ ಇರುವ ಜಾಗದಲ್ಲಿಯೇ ನಮ್ಮ ಹಳ್ಳಿಯಿದೆ. ಇಲ್ಲಿ ಒಂದೇ ಒಂದು ಆಂಜನೇಯನ ಗುಡಿಯಿಲ್ಲ. ಇಲ್ಯಾರೂ ಹನುಮನನ್ನು ಪೂಜಿಸುವುದೂ ಇಲ್ಲ. ಹನುಮಾನ್ ಚಾಲೀಸಾ ಪಠಿಸುವುದಿಲ್ಲ ಎಂದು ಅಂಕುಶ್​ ವಾಘ್ ಎಂಬುವರು ತಿಳಿಸಿದ್ದಾರೆ.

ಈ ಹಳ್ಳಿಯಲ್ಲಿ ಹನುಮಂತ ದೇವರನ್ನು ಪೂಜಿಸುವುದಿಲ್ಲ, ಮಾರುತಿ ಕಾರನ್ನೂ ಕೊಳ್ಳುವುದಿಲ್ಲ; ರಾಕ್ಷಸನ ಆರಾಧನೆ ಮಾಡಲು ಇದೆ ಒಂದು ಕಾರಣ !
ಹನುಮಂತನ ವಿಗ್ರಹ
TV9 Web
| Edited By: |

Updated on: Apr 17, 2022 | 9:44 AM

Share

ಮಹಾರಾಷ್ಟ್ರದಲ್ಲೊಂದು ಕುಗ್ರಾಮವಿದೆ. ಅದು ತುಂಬ ಪುಟ್ಟ ಹಳ್ಳಿ. ಆದರೆ ಇಲ್ಲಿನ ಆಚರಣೆಗಳು ತುಂಬ ವಿಚಿತ್ರ. ಇವರು ಆಂಜನೇಯ ದೇವರನ್ನು ಪೂಜಿಸುವುದಿಲ್ಲ. ಹನುಮನಂತನ ಹೆಸರನ್ನು ಮಕ್ಕಳಿಗೆ ಇಡುವುದಿಲ್ಲ..ಅಷ್ಟೇ ಏಕೆ, ಮಾರುತಿ ಕಾರನ್ನೂ ಕೂಡ ಖರೀದಿಸುವುದಿಲ್ಲ. ಈ ಕಾರು ಖರೀದಿ ಮಾಡಿದರೆ ಅವರು ಯಾವುದಾದರೂ ದುರಂತಕ್ಕೀಡಾಗುತ್ತಾರೆ ಎಂಬುದು ಇಲ್ಲಿನ ಜನರ ನಂಬಿಕೆ. ನಿನ್ನೆ ಇಡೀ ದೇಶಾದ್ಯಂತ ಹಿಂದುಗಳು ಹನುಮಾನ್​ ಜಯಂತಿ ಆಚರಣೆ ನಡೆಸಿದ್ದಾರೆ. ಆದರೆ ಈ ಹಳ್ಳಿಯಲ್ಲಿ ಆಚರಣೆ ಇರಲಿಲ್ಲ. ಒಟ್ಟಾರೆ ಹೇಳಬೇಕು ಎಂದರೆ ಹನುಮಾನ್​ ದೇವರಿಗೆ ಸಂಬಂಧಪಟ್ಟ ಯಾವುದೇ ಆಚರಣೆಯನ್ನೂ ಮಾಡುವುದಿಲ್ಲ. ಆಂಜನೇಯನನ್ನು ನಂಬುವುದೂ ಇಲ್ಲ.  

ಅಂದಹಾಗೇ, ಈ ಹಳ್ಳಿಯ ಹೆಸರು ದೈತ್ಯಾನಂದಪುರ. ಮಹಾರಾಷ್ಟ್ರದ ಅಹ್ಮದಾಬಾದ್​ನಿಂದ 70ಕಿಮೀ ದೂರದಲ್ಲಿದೆ. ಹಳ್ಳಿಯ ಹೆಸರೇ ಹೇಳುವಂತೆ ಇವರೆಲ್ಲ ದೈತ್ಯನ ಅಂದರೆ ರಾಕ್ಷಸರ ಆರಾಧಕರು. ಹನುಮಂತನ ಬದಲಿಗೆ ನಿಂಬಾ ದೈತ್ಯ ಎಂಬ ರಾಕ್ಷಸನನ್ನು ಪೂಜಿಸುತ್ತಾರೆ.  ಅದಕ್ಕೊಂದು ಕಾರಣವಿದೆ. ಹನುಮಂತ ರಾಮನ ಪರಮ ಭಕ್ತ. ಸೀತಾಮಾತೆಯನ್ನು ಹುಡುಕುತ್ತ ದಂಡಕಾರಣ್ಯವನ್ನು ಪ್ರವೇಶಿಸುತ್ತಾನೆ. ಆಗ ಈ ನಿಂಬಾ ದೈತ್ಯ ಎದುರಾಗಿ, ಇಬ್ಬರೂ ಹೊಡೆದಾಡುತ್ತಾರೆ. ಯಾರೂ ಸೋಲುವುದಿಲ್ಲ. ಬದಲಿಗೆ ಒಂದು ಹಂತದಲ್ಲಿ ಸುಸ್ತಾಗಿ ವಿಶ್ರಮಿಸುತ್ತಾರೆ. ಹಾಗೇ, ವಿಶ್ರಮಿಸುವ ಹೊತ್ತಲ್ಲಿ ಇವರಿಬ್ಬರ ಬಾಯಿಂದಲೂ ಶ್ರೀರಾಮ ಎಂಬ ಶಬ್ದ ಹೊರಬೀಳುತ್ತದೆ. ನಿಂಬಾ ರಾಕ್ಷಸನಾದರೂ ಶ್ರೀರಾಮನ ಭಕ್ತ ಎಂದು ತಿಳಿದ ಹನುಮಂತ ಸಂತೋಷಗೊಂಡು ಅವನಿಗೆ ಒಂದ ವರ ಕೊಡುತ್ತಾನೆ. ಆಗಿನಿಂದಲೂ ದಂಡಕಾರಣ್ಯದಲ್ಲಿ ನಿಂಬ ದೈತ್ಯನನ್ನೇ ಪೂಜಿಸಲಾಗುತ್ತಿದೆ. ಈ ಹಳ್ಳಿ ಅದೇ ಭಾಗದಲ್ಲಿ ಬರುವುದರಿಂದ ಇಂದಿಗೂ ಅಲ್ಲಿನ ಜನ ನಿಂಬಾ ರಾಕ್ಷಸನನ್ನು ಪೂಜಿಸುತ್ತಾರೆ.

ಅಂದಿನ ದಂಡಕಾರಣ್ಯ ಇರುವ ಜಾಗದಲ್ಲಿಯೇ ನಮ್ಮ ಹಳ್ಳಿಯಿದೆ. ಇಲ್ಲಿ ಒಂದೇ ಒಂದು ಆಂಜನೇಯನ ಗುಡಿಯಿಲ್ಲ. ಇಲ್ಯಾರೂ ಹನುಮನನ್ನು ಪೂಜಿಸುವುದೂ ಇಲ್ಲ. ಹನುಮಾನ್ ಚಾಲೀಸಾ ಪಠಿಸುವುದಿಲ್ಲ. ಹನುಮಂತನಿಗೆ ಸಂಬಂಧಪಟ್ಟ ಯಾವುದೇ ಪೂಜೆ, ಆಚರಣೆಯೂ ನಮ್ಮಲ್ಲಿಲ್ಲ ಎಂದು ದೈತ್ಯಾನಂದಪುರ ಗ್ರಾಮದ ಅಂಕುಶ್ ವಾಘ್ ಎಂಬುವರು ಹೇಳಿದ್ದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.

ಇದನ್ನೂ ಓದಿ: ಕಿರುತೆರೆ ನಟನ ಜತೆ ನಿಶ್ಚಿತಾರ್ಥ ಮಾಡಿಕೊಂಡ ಖ್ಯಾತ ಆ್ಯಂಕರ್; ವೈರಲ್ ಆಯ್ತು ಫೋಟೋ

ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಮನೆ ಮುಂದೆ ಫೈರಿಂಗ್‌: ಶಾಕಿಂಗ್ ರಿಯಾಕ್ಷನ್
ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಮನೆ ಮುಂದೆ ಫೈರಿಂಗ್‌: ಶಾಕಿಂಗ್ ರಿಯಾಕ್ಷನ್
ಈ ತಿಂಗಳಿಂದಲೇ ಬಜೆಟ್ ಸಿದ್ಧತೆ ಆರಂಭ ಎಂದ ಸಿಎಂ ಸಿದ್ದರಾಮಯ್ಯ
ಈ ತಿಂಗಳಿಂದಲೇ ಬಜೆಟ್ ಸಿದ್ಧತೆ ಆರಂಭ ಎಂದ ಸಿಎಂ ಸಿದ್ದರಾಮಯ್ಯ
ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಟಿ20 ವಿಶ್ವಕಪ್​ಗೆ ತಂಡ ಪ್ರಕಟವಾದ ಬೆನ್ನಲ್ಲೇ ಅಬ್ಬರಿಸಿದ ಆಸೀಸ್ ನಾಯಕ
ಟಿ20 ವಿಶ್ವಕಪ್​ಗೆ ತಂಡ ಪ್ರಕಟವಾದ ಬೆನ್ನಲ್ಲೇ ಅಬ್ಬರಿಸಿದ ಆಸೀಸ್ ನಾಯಕ
ಗಿಲ್ಲಿ ಹಾಡಿಗೆ ಧ್ರುವಂತ್ ಅಪಸ್ವರ: ಉಗುರಲ್ಲೇ ಕೊಲ್ಲುವೆ ಎಂದ ಗಿಲ್ಲಿ
ಗಿಲ್ಲಿ ಹಾಡಿಗೆ ಧ್ರುವಂತ್ ಅಪಸ್ವರ: ಉಗುರಲ್ಲೇ ಕೊಲ್ಲುವೆ ಎಂದ ಗಿಲ್ಲಿ