70 ಸಾವಿರ ರೂ. ಕೊಟ್ಟು ಅಪ್ರಾಪ್ತೆಯನ್ನು ಖರೀದಿಸಿ ಮದುವೆಯಾಗಿದ್ದ 55 ವರ್ಷದ ವ್ಯಕ್ತಿಗೆ 10 ವರ್ಷಗಳ ಜೈಲು ಶಿಕ್ಷೆ

2021ರಲ್ಲಿ ಬಾದಲ್‌ಪುರದಿಂದ ಅಪಹರಣಕ್ಕೊಳಗಾಗಿದ್ದ ಅಪ್ರಾಪ್ತ ಬಾಲಕಿಯನ್ನು 70 ಸಾವಿರ ರೂ.ಗೆ ಖರೀದಿಸಿ ಹರಿಯಾಣದ ಸೋನಿಪತ್‌ನಲ್ಲಿ ವಿವಾಹವಾಗಿದ್ದ ಜಸ್ವೀರ್ ಸೇರಿದಂತೆ ಎಂಟು ಮಂದಿ ಆರೋಪಿಗಳಿಗೆ ಜಿಲ್ಲಾ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಸಂತ್ರಸ್ತೆಯನ್ನು ಬಲವಂತವಾಗಿ ಮದುವೆಯಾಗುವ ಮೂಲಕ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ತಪ್ಪಿತಸ್ಥನಾಗಿದ್ದ ಸೋನಿಪತ್‌ನ ಮಹಾರಾ ಗ್ರಾಮದ ಜಸ್ವೀರ್ (55) ಎಂಬುವವರಿಗೆ ಹೆಚ್ಚುವರಿ ಸೆಷನ್ಸ್ ವಿಶೇಷ ನ್ಯಾಯಾಧೀಶ ಪೋಕ್ಸೊ ಕಾಯ್ದೆಯಡಿಯಲ್ಲಿ ಶಿಕ್ಷೆ ವಿಧಿಸಿದೆ.

70 ಸಾವಿರ ರೂ. ಕೊಟ್ಟು ಅಪ್ರಾಪ್ತೆಯನ್ನು ಖರೀದಿಸಿ  ಮದುವೆಯಾಗಿದ್ದ 55 ವರ್ಷದ ವ್ಯಕ್ತಿಗೆ 10 ವರ್ಷಗಳ ಜೈಲು ಶಿಕ್ಷೆ
ಜೈಲು
Image Credit source: Prison Fellowship

Updated on: Dec 10, 2023 | 9:25 AM

ನೋಯ್ಡಾ, ಡಿಸೆಂಬರ್ 10:   2021ರಲ್ಲಿ ಬಾದಲ್‌ಪುರದಿಂದ ಅಪಹರಣಕ್ಕೊಳಗಾಗಿದ್ದ ಅಪ್ರಾಪ್ತ ಬಾಲಕಿಯನ್ನು 70 ಸಾವಿರ ರೂ.ಗೆ ಖರೀದಿಸಿ ಹರಿಯಾಣದ ಸೋನಿಪತ್‌ನಲ್ಲಿ ವಿವಾಹವಾಗಿದ್ದ ಜಸ್ವೀರ್ ಸೇರಿದಂತೆ ಎಂಟು ಮಂದಿ ಆರೋಪಿಗಳಿಗೆ ಜಿಲ್ಲಾ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಸಂತ್ರಸ್ತೆಯನ್ನು ಬಲವಂತವಾಗಿ ಮದುವೆಯಾಗುವ ಮೂಲಕ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ತಪ್ಪಿತಸ್ಥನಾಗಿದ್ದ ಸೋನಿಪತ್‌ನ ಮಹಾರಾ ಗ್ರಾಮದ ಜಸ್ವೀರ್ (55) ಎಂಬುವವರಿಗೆ ಹೆಚ್ಚುವರಿ ಸೆಷನ್ಸ್ ವಿಶೇಷ ನ್ಯಾಯಾಧೀಶ ಪೋಕ್ಸೊ ಕಾಯ್ದೆಯಡಿಯಲ್ಲಿ ಶಿಕ್ಷೆ ವಿಧಿಸಿದೆ.

ಸಂತ್ರಸ್ತೆಗೆ ಆಮಿಷವೊಡ್ಡುವ, ಅಪಹರಿಸಿ ಮಾರಾಟ ಮಾಡುವ ಸಂಚಿನಲ್ಲಿ ಭಾಗಿಯಾಗಿದ್ದ ಇತರ ಏಳು ಆರೋಪಿಗಳಿಗೆ ಹತ್ತು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಎಲ್ಲ ತಪ್ಪಿತಸ್ಥರಿಗೆ ದಂಡ ವಿಧಿಸಲಾಗಿದೆ.

ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಚವಾನ್ ಭಾಟಿ ಅವರು ಡಿಸೆಂಬರ್ 26, 2021 ರಂದು ಬಾದಲ್‌ಪುರ ಪ್ರದೇಶದ ಹಳ್ಳಿಯೊಂದರಲ್ಲಿ ವಾಸಿಸುತ್ತಿದ್ದ ಅಪ್ರಾಪ್ತ ಬಾಲಕಿ ಮನೆಯ ಹೊರಗೆ ಆಟವಾಡುತ್ತಿದ್ದಳು. ಈ ಸಂದರ್ಭದಲ್ಲಿ ಪಕ್ಕದ ಮನೆಯಲ್ಲಿ ವಾಸವಿದ್ದ ಹಾಪುರ ನಿವಾಸಿ ನೌಶಾದ್‌ನ ಪತ್ನಿ ಗುಡಿಯಾ ಅಲಿಯಾಸ್ ನಜ್ರೀನ್ ಎಂಬಾಕೆ ಬಂದು ಮೊದಲು ಗಾಜಿಯಾಬಾದ್‌ಗೆ ಮತ್ತು ನಂತರ ಹರಿಯಾಣದ ಸೋನಿಪತ್‌ಗೆ ಆಕೆಯನ್ನು ಕರೆದೊಯ್ದಿದ್ದಾರೆ.

ಮತ್ತಷ್ಟು ಓದಿ: ರಾಂಚಿ: ಅಪ್ರಾಪ್ತ ಬಾಲಕಿ ಮೇಲೆ ವರ್ಷಗಳ ಕಾಲ ಅತ್ಯಾಚಾರವೆಸಗಿದ್ದ ಪೊಲೀಸ್​ ಅಧಿಕಾರಿಯ ಬಂಧನ

ಈ ವಿಷಯವನ್ನು ಬಹಿರಂಗಪಡಿಸಿದ ಪೊಲೀಸರು, ನಜ್ರೀನ್ ತನ್ನ ಗ್ಯಾಂಗ್‌ನೊಂದಿಗೆ ಹೆಣ್ಣುಮಕ್ಕಳ ಮಾರಾಟದ ಅಕ್ರಮ ದಂಧೆ ನಡೆಸುತ್ತಿದ್ದಾಳೆ ಎಂದು ಮಾಹಿತಿ ನೀಡಿದ್ದರು. ಇತರ ಆರೋಪಿಗಳ ಸಹಾಯದಿಂದ ಸಂತ್ರಸ್ತೆಯನ್ನು ಮಹಿಳೆ ಸೋನಿಪತ್‌ಗೆ ಕರೆದೊಯ್ದು ಜಸ್ವೀರ್‌ಗೆ 70 ಸಾವಿರ ರೂ.ಗೆ ಮಾರಾಟ ಮಾಡಿದ್ದಾಳೆ. ಈ ವೇಳೆ ಪೊಲೀಸರು ಸಂತ್ರಸ್ತೆಯನ್ನು ಬಿಡುಗಡೆಗೊಳಿಸಿ ಘಟನೆಯನ್ನು ಬಹಿರಂಗಪಡಿಸಿದ್ದಾರೆ.

ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆ ಹಾಗೂ ಹೇಳಿಕೆಯಿಂದ ಇಡೀ ಪ್ರಕರಣ ಬಯಲಾಗಿದೆ. ಈ ಪ್ರಕರಣದಲ್ಲಿ ಸಂಭಾಲ್‌ನ ಗುನ್ನೌರ್‌ ನಿವಾಸಿ ಪೂಜಾ, ಆಕೆಯ ಪತಿ ರೂಪ್‌ ಕಿಶೋರ್‌, ಗೊಹಾನಾ, ಸೋನಿಪತ್‌ನ ಕಿರಣ್‌, ಮತನ್‌ ಗ್ರಾಮದ ಸುನೀಲ್‌, ಹರಿಯಾಣದ ರೋಹ್‌ಟಕ್‌ನ ಲಖನ್‌ ಮಜ್ರಾ, ಧರಂರಾಜ್‌, ಕಾಬೂಲ್‌ನ ಖಿದ್ವಾಲಿ, ರೋಹ್ಟಕ್‌ನ ಭೂಪೇಂದ್ರ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸರು ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಿ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಪ್ರಕರಣದಲ್ಲಿ ಎಂಟು ಸಾಕ್ಷಿಗಳು ನ್ಯಾಯಾಲಯದಲ್ಲಿ ತಮ್ಮ ಹೇಳಿಕೆಗಳನ್ನು ದಾಖಲಿಸಿದ್ದಾರೆ.

ಪ್ರಕರಣದ ವಿಚಾರಣೆ ನಡೆಯುತ್ತಿರುವಾಗಲೇ ಆರೋಪಿ ಭೂಪೇಂದ್ರ ಮೃತಪಟ್ಟಿದ್ದಾನೆ. ಉಳಿದ ಎಂಟು ಅಪರಾಧಿಗಳಿಗೆ ನ್ಯಾಯಾಲಯವು ಅವರ ಅಪರಾಧದ ನಂತರ ನಾಲ್ಕು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.

ಜಸ್ವಿರ್‌ಗೆ 35 ಸಾವಿರ ದಂಡ ಹಾಗೂ ಇತರ ಅಪರಾಧಿಗಳಿಗೆ ತಲಾ 5 ಸಾವಿರ ದಂಡ ವಿಧಿಸಲಾಗಿದೆ. ದಂಡವನ್ನು ಠೇವಣಿ ಮಾಡಲು ವಿಫಲವಾದರೆ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಎಚ್ಚರಿಕೆ ನೀಡಲಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Loading...
Unable to load recommendations.
Follow Us