ಹಾಸ್ಟೆಲ್​​ನಲ್ಲಿ 9 ಬಾಲಕರಿಗೆ ಲೈಂಗಿಕ ಕಿರುಕುಳ, ಸರ್ಕಾರಿ ಎಂಜಿನಿಯರ್ ಅರೆಸ್ಟ್​

ಒಡಿಶಾದ ಮಯೂರ್‌ಭಂಜ್ ಜಿಲ್ಲೆಯ ಶಾಲಾ ಹಾಸ್ಟೆಲ್‌ನಲ್ಲಿ ಒಂಬತ್ತು ಅಪ್ರಾಪ್ತ ಬಾಲಕರಿಗೆ ಲೈಂಗಿಕ ಕಿರುಕುಳ(Sexual Assault) ನೀಡಿದ ಆರೋಪದ ಮೇಲೆ ಒಡಿಶಾದ ವ್ಯಕ್ತಿಯನ್ನು ಬಂಧಿಸಲಾಗಿದೆ. ಮಕ್ಕಳು ತಮ್ಮ ಮುಖ್ಯೋಪಾಧ್ಯಾಯರಿಗೆ ದೌರ್ಜನ್ಯದ ಬಗ್ಗೆ ತಿಳಿಸಿದ ನಂತರ ಆರೋಪಿಯನ್ನು ಬ್ಲಾಕ್ ಸಹಾಯಕ ಎಂಜಿನಿಯರ್ ಪ್ರಶಾಂತ್ ಸೇನಾಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಹಾಸ್ಟೆಲ್​​ನಲ್ಲಿ 9 ಬಾಲಕರಿಗೆ ಲೈಂಗಿಕ ಕಿರುಕುಳ, ಸರ್ಕಾರಿ ಎಂಜಿನಿಯರ್ ಅರೆಸ್ಟ್​
ಬಾಲಕ
Image Credit source: Google

Updated on: Nov 06, 2025 | 12:06 PM

ಒಡಿಶಾ, ನವೆಂಬರ್ 6: ಒಡಿಶಾದ ಮಯೂರ್‌ಭಂಜ್ ಜಿಲ್ಲೆಯ ಶಾಲಾ ಹಾಸ್ಟೆಲ್‌ನಲ್ಲಿ ಒಂಬತ್ತು ಅಪ್ರಾಪ್ತ ಬಾಲಕರಿಗೆ ಲೈಂಗಿಕ ಕಿರುಕುಳ(Sexual Assault) ನೀಡಿದ ಆರೋಪದ ಮೇಲೆ ಒಡಿಶಾದ ವ್ಯಕ್ತಿಯನ್ನು ಬಂಧಿಸಲಾಗಿದೆ. ಮಕ್ಕಳು ತಮ್ಮ ಮುಖ್ಯೋಪಾಧ್ಯಾಯರಿಗೆ ದೌರ್ಜನ್ಯದ ಬಗ್ಗೆ ತಿಳಿಸಿದ ನಂತರ ಆರೋಪಿಯನ್ನು ಬ್ಲಾಕ್ ಸಹಾಯಕ ಎಂಜಿನಿಯರ್ ಪ್ರಶಾಂತ್ ಸೇನಾಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬೆಳಗ್ಗೆ 9 ಗಂಟೆ ಸುಮಾರಿಗೆ ಸೇನಾಪತಿ ಭಂಜಭೂಮಿ ಸಂಸ್ಕೃತ ವಿದ್ಯಾಲಯ ನಿರ್ಮಾಣ ಕಾಮಗಾರಿಗಳನ್ನು ಪರಿಶೀಲಿಸಲು ಭೇಟಿ ನೀಡಿದ್ದರು ಮತ್ತು ಹಾಸ್ಟೆಲ್ ವಿದ್ಯಾರ್ಥಿಗಳನ್ನು ಒಬ್ಬೊಬ್ಬರಾಗಿ ನಿರ್ಮಾಣ ಹಂತದಲ್ಲಿರುವ ಕಟ್ಟಡಕ್ಕೆ ಕರೆಸಿ ಪ್ರಶ್ನಿಸುವ ನೆಪದಲ್ಲಿ ಹಲ್ಲೆ ನಡೆಸಿದ್ದರು ಎಂದು ವರದಿಯಾಗಿದೆ.

ಆ ಸಂಜೆ ನಂತರ, ರಾತ್ರಿ 7 ರಿಂದ 8 ಗಂಟೆಯ ನಡುವೆ, ಅವನು ಹಿಂತಿರುಗಿ ಅದೇ ಹುಡುಗರನ್ನು ಅಪೂರ್ಣವಾಗಿದ್ದ ಶೌಚಾಲಯ ಬ್ಲಾಕ್‌ಗೆ ಕರೆದೊಯ್ದಿದ್ದರು. ಅಲ್ಲಿ ಅವರು ಮಕ್ಕಳನ್ನು ಅನುಚಿತವಾಗಿ ಮುಟ್ಟಿದನು ಮತ್ತು ಮೌನವಾಗಿರಲು ಬೆದರಿಕೆ ಹಾಕಿದ್ದ ಎಂದು ಆರೋಪಿಸಲಾಗಿದೆ.

ಮತ್ತಷ್ಟು ಓದಿ:  ಕರ್ನಾಟಕದಲ್ಲಿ ಮತ್ತೊಂದು ಅಮಾನವೀಯ ಕೃತ್ಯ: ಮಾತು ಬಾರದ ವಿದ್ಯಾರ್ಥಿನಿಗೆ ಶಿಕ್ಷಕನಿಂದ ಲೈಂಗಿಕ ಕಿರುಕುಳ

ಮರುದಿನ ಬೆಳಗ್ಗೆ, ಒಂಬತ್ತು ಹುಡುಗರು ತಮ್ಮ ಮುಖ್ಯೋಪಾಧ್ಯಾಯಿನಿ ಸೆಬಾತಿ ಮೊಹಂತಾ ಅವರಿಗೆ ಮಾಹಿತಿ ನೀಡಿದರು, ಅವರು ತಕ್ಷಣ ಎಫ್‌ಐಆರ್ ದಾಖಲಿಸಿದರು. ಹಾಸ್ಟೆಲ್‌ಗೆ ಬಂದು ಹುಡುಗರಿಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದರು, ಸಂಜೆ, ಅವರನ್ನು ಕತ್ತಲೆಯ ಸ್ಥಳಕ್ಕೆ ಕರೆದು ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ನಾವು ದೂರು ದಾಖಲಿಸಿದ್ದೇವೆ ಮತ್ತು ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇವೆ ಎಂದು ಮೊಹಂತ ಹೇಳಿದರು.

ವಿಚಾರಣೆಯ ನಂತರ ಸೇನಾಪತಿಯನ್ನು ಬಂಧಿಸಲಾಗಿದೆ ಮತ್ತು ನಂತರ ಸ್ಥಳೀಯ ನ್ಯಾಯಾಲಯವು ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಪೊಲೀಸರು ತನಿಖೆ ಮುಂದುವರಿಸಿರುವಾಗ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us