ನಿಮ್ಮ ಜಿಲ್ಲೆ ಯಾವ ಕೆಟಗರಿಯಲ್ಲಿದೆ ಅನ್ನೋದರ ಮೇಲೆ ಲಾಕ್​ಡೌನ್ ಭವಿಷ್ಯ ನಿರ್ಧಾರ!

ದೆಹಲಿ: ನೆರೆಯ ಚೀನಾ ಹುಟ್ಟುಹಾಕಿರುವ ಡ್ರ್ಯಾಗನ್ ವೈರಸ್​ ಇಡೀ ಜಗತ್ತಿನಲ್ಲೇ ಅಲ್ಲೋಲಕಲ್ಲೋಲ ಸೃಷ್ಟಿಸಿದೆ. ಭಾರತವೂ ಇದರಿಂದ ಹೊರತಾಗಿಲ್ಲ. ಆದ್ರೆ ಪ್ರಮಾಣ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ. ಇದಕ್ಕೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಲಾಕ್​ಡೌನ್​​ ಮಾರ್ಗಸೂಚಿಗಳು ಇತರೆ ದೇಶಗಳಿಗೂ ದಾರಿದೀಪವಾಗಿ ಗೋಚರಿಸಿದೆ. ಹಾಗಾಗಿ ಲಾಕ್​ಡೌ​ನ್ ಹೆಚ್ಚು ಮಹತ್ವ ಪಡೆದುಕೊಂಡಿದೆ. ಈ ಮಧ್ಯೆ, ಲಾಕ್​ಡೌನ್​ನಿಂದ ತಕ್ಷಣಕ್ಕೆ ಜನಜೀವನ ಏರುಪೇರಾಗಿದೆ. ಜನಕ್ಕೂ ಈ ಲಾಕ್​ಡೌನ್​ ಸಾಕಪ್ಪಾ ಅನಿಸಿದೆ. ಆದ್ರೆ ನಿಮ್ಮ ಜಿಲ್ಲೆ ಯಾವ ಕೆಟಗರಿಯಲ್ಲಿದೆ ಅನ್ನೋದರ ಮೇಲೆ ಲಾಕ್​ಡೌನ್ ಭವಿಷ್ಯ […]

ನಿಮ್ಮ ಜಿಲ್ಲೆ ಯಾವ ಕೆಟಗರಿಯಲ್ಲಿದೆ ಅನ್ನೋದರ ಮೇಲೆ ಲಾಕ್​ಡೌನ್ ಭವಿಷ್ಯ ನಿರ್ಧಾರ!
ಸಾಧು ಶ್ರೀನಾಥ್​

Updated on: Apr 27, 2020 | 1:53 PM

ದೆಹಲಿ: ನೆರೆಯ ಚೀನಾ ಹುಟ್ಟುಹಾಕಿರುವ ಡ್ರ್ಯಾಗನ್ ವೈರಸ್​ ಇಡೀ ಜಗತ್ತಿನಲ್ಲೇ ಅಲ್ಲೋಲಕಲ್ಲೋಲ ಸೃಷ್ಟಿಸಿದೆ. ಭಾರತವೂ ಇದರಿಂದ ಹೊರತಾಗಿಲ್ಲ. ಆದ್ರೆ ಪ್ರಮಾಣ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ. ಇದಕ್ಕೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಲಾಕ್​ಡೌನ್​​ ಮಾರ್ಗಸೂಚಿಗಳು ಇತರೆ ದೇಶಗಳಿಗೂ ದಾರಿದೀಪವಾಗಿ ಗೋಚರಿಸಿದೆ.

ಹಾಗಾಗಿ ಲಾಕ್​ಡೌ​ನ್ ಹೆಚ್ಚು ಮಹತ್ವ ಪಡೆದುಕೊಂಡಿದೆ. ಈ ಮಧ್ಯೆ, ಲಾಕ್​ಡೌನ್​ನಿಂದ ತಕ್ಷಣಕ್ಕೆ ಜನಜೀವನ ಏರುಪೇರಾಗಿದೆ. ಜನಕ್ಕೂ ಈ ಲಾಕ್​ಡೌನ್​ ಸಾಕಪ್ಪಾ ಅನಿಸಿದೆ. ಆದ್ರೆ ನಿಮ್ಮ ಜಿಲ್ಲೆ ಯಾವ ಕೆಟಗರಿಯಲ್ಲಿದೆ ಅನ್ನೋದರ ಮೇಲೆ ಲಾಕ್​ಡೌನ್ ಭವಿಷ್ಯ ನಿರ್ಧಾರವಾಗಲಿದೆ.

ಈ ಬಗ್ಗೆ ಇಂದು ನಡೆದ ಪ್ರಧಾನಿ ಮೋದಿ ವಿಡಿಯೋ ಸಂವಾದ ಸುಳಿವು ನೀಡಿದೆ. ದೇಶದಲ್ಲಿ 300 ಜಿಲ್ಲೆ ಕೊರೊನಾ ಮುಕ್ತವಾಗಿವೆ‌. ಹಾಗಾಗಿ 300 ಜಿಲ್ಲೆಗಳಿಗೆ ಲಾಕ್​ಡೌನ್​ನಿಂದ ವಿನಾಯಿತಿ ಸಿಗಲಿದೆ. ಇನ್ನು, 127 ಜಿಲ್ಲೆಗಳು ರೆಡ್ ಜೋನ್​ನಲ್ಲಿವೆ‌. 127 ಜಿಲ್ಲೆಗಳಿಗೆ ಲಾಕ್​ಡೌನ್​ನಿಂದ ವಿನಾಯಿತಿ ಸಿಗಲ್ಲ‌. 297 ಜಿಲ್ಲೆಗಳಲ್ಲಿ ಐದಕ್ಕಿಂತ ಹೆಚ್ಚಿನ ಕೊರೊನಾ ಪಾಸಿಟಿವ್ ಪ್ರಕರಣಗಳಿವೆ‌. ಅಲ್ಲಿ ಬಿಲ್ಕುಲ್ ಲಾಕ್​ಡೌನ್​ಗೆ ವಿನಾಯ್ತಿ ಇಲ್ಲವೇ ಇಲ್ಲ.

ಆಯಾ ರಾಜ್ಯಗಳು ತಮ್ಮ ರಾಜ್ಯದಲ್ಲಿನ ಕೊರೊನಾ ಸ್ಥಿತಿಗೆ ಅನುಗುಣವಾಗಿ ಲಾಕ್ ಡೌನ್ ವಿನಾಯಿತಿ ಬಗ್ಗೆ ತೀರ್ಮಾನ ತೆಗೆದುಕೊಳ್ಳಬಹುದು . ಹೀಗಾಗಿ ಕೊರೊನಾ ಪಾಸಿಟಿವ್ ಪ್ರಕರಣ ಕಡಿಮೆ ಇರುವ ಜಿಲ್ಲೆಯಲ್ಲಿ ಲಾಕ್ ಡೌನ್ ವಿನಾಯಿತಿ ನೀಡುವುದು ರಾಜ್ಯದ ವಿವೇಚನೆಗೆ ಬಿಟ್ಟ ವಿಚಾರ ಎಂದು ತಿಳಿದುಬಂದಿದೆ.

Published On - 1:45 pm, Mon, 27 April 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us